ಗಂಭೀರ ಆರೋಪ ಹೊರಿಸಿ ತಂಡ ತೊರೆದ ಶಶಾಂಕ್ ಸಿಂಗ್

Updated on: Aug 03, 2026 | 10:18 PM

Shashank Singh's Big Move: ಐಪಿಎಲ್ ಸ್ಟಾರ್ ಆಲ್‌ರೌಂಡರ್ ಶಶಾಂಕ್ ಸಿಂಗ್ ಛತ್ತೀಸ್‌ಗಢ ತೊರೆದು ಪುದುಚೇರಿ ಸೇರಲು ನಿರ್ಧರಿಸಿದ್ದಾರೆ. ಗಾಯದ ಸಂದರ್ಭದಲ್ಲಿ ಬೆಂಬಲ ಸಿಗದಿರುವುದು ಮತ್ತು ಕ್ರಿಕೆಟ್ ಸಂಘದಿಂದಾದ ನಿರಾಕರಣೆ ಇದಕ್ಕೆ ಪ್ರಮುಖ ಕಾರಣ. 2026-27ರ ಸೀಸನ್‌ನಿಂದ ಪುದುಚೇರಿ ಪರ ಆಡಲಿರುವ ಶಶಾಂಕ್, ವೈಟ್-ಬಾಲ್ ಕ್ರಿಕೆಟ್ ಮತ್ತು ಬೌಲಿಂಗ್ ಸುಧಾರಣೆಯತ್ತ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಈ ನಿರ್ಧಾರ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ.

1 / 5
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ ಸ್ಟಾರ್ ಆಲ್‌ರೌಂಡರ್ ಶಶಾಂಕ್ ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿ ತಂಡವನ್ನು ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ ಛತ್ತೀಸ್‌ಗಢ ಪರ ದೇಶಿಯ ಕ್ರಿಕೆಟ್ ಆಡುತ್ತಿದ್ದ ಶಶಾಂಕ್ ಸಿಂಗ್ ಇದೀಗ ಛತ್ತೀಸ್‌ಗಢವನ್ನು ತೊರೆದು 2026-27ರ ಸೀಸನ್​ನಿಂದ ಪುದುಚೇರಿ ಪರ ಆಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದಿರುವುದಾಗಿ ಶಶಾಂಕ್ ಹೇಳಿದ್ದಾರೆ(PC-PTI).

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ ಸ್ಟಾರ್ ಆಲ್‌ರೌಂಡರ್ ಶಶಾಂಕ್ ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿ ತಂಡವನ್ನು ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ ಛತ್ತೀಸ್‌ಗಢ ಪರ ದೇಶಿಯ ಕ್ರಿಕೆಟ್ ಆಡುತ್ತಿದ್ದ ಶಶಾಂಕ್ ಸಿಂಗ್ ಇದೀಗ ಛತ್ತೀಸ್‌ಗಢವನ್ನು ತೊರೆದು 2026-27ರ ಸೀಸನ್​ನಿಂದ ಪುದುಚೇರಿ ಪರ ಆಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದಿರುವುದಾಗಿ ಶಶಾಂಕ್ ಹೇಳಿದ್ದಾರೆ(PC-PTI).

2 / 5
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಶಶಾಂಕ್, ‘ಹೌದು, ನಾನು ಛತ್ತೀಸ್‌ಗಢ ತೊರೆಯುತ್ತಿದ್ದೇನೆ. ನಾನು ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘದಿಂದ ಎನ್‌ಒಸಿ ಪಡೆದಿದ್ದೇನೆ ಮತ್ತು 2026-27ರ ಆವೃತ್ತಿಯಿಂದ ಪುದುಚೇರಿ ಪರ ಆಡುತ್ತೇನೆ. ಕಳೆದ ಆವೃತ್ತಿಯಲ್ಲಿ, ನಾನು ಗಂಭೀರ ಭುಜ ಮತ್ತು ಬೆರಳಿನ ಗಾಯಗಳಿಂದ ಬಳಲುತ್ತಿದ್ದೆ, ಆದರೆ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘವು ಆ ಕಷ್ಟದ ಸಮಯದಲ್ಲಿ ನನಗೆ ಯಾವುದೇ ಬೆಂಬಲ ನೀಡಲಿಲ್ಲ(PC-PTI).

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಶಶಾಂಕ್, ‘ಹೌದು, ನಾನು ಛತ್ತೀಸ್‌ಗಢ ತೊರೆಯುತ್ತಿದ್ದೇನೆ. ನಾನು ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘದಿಂದ ಎನ್‌ಒಸಿ ಪಡೆದಿದ್ದೇನೆ ಮತ್ತು 2026-27ರ ಆವೃತ್ತಿಯಿಂದ ಪುದುಚೇರಿ ಪರ ಆಡುತ್ತೇನೆ. ಕಳೆದ ಆವೃತ್ತಿಯಲ್ಲಿ, ನಾನು ಗಂಭೀರ ಭುಜ ಮತ್ತು ಬೆರಳಿನ ಗಾಯಗಳಿಂದ ಬಳಲುತ್ತಿದ್ದೆ, ಆದರೆ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘವು ಆ ಕಷ್ಟದ ಸಮಯದಲ್ಲಿ ನನಗೆ ಯಾವುದೇ ಬೆಂಬಲ ನೀಡಲಿಲ್ಲ(PC-PTI).

3 / 5
ಅಲ್ಲದೆ ದೇಶಿಯ ಸೀಸನ್ ಮುಗಿದ ನಂತರ, ಛತ್ತೀಸ್‌ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್ 2026 ರ ಆಟಗಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸಲಾಗಿಲ್ಲ. ಇದಲ್ಲದೆ, ಬೆಂಗಳೂರಿನಲ್ಲಿ ನಡೆದ ಪೂರ್ವ-ಸೀಸನ್ ಶಿಬಿರಕ್ಕೆ ಹೋದ ಛತ್ತೀಸ್‌ಗಢ ತಂಡದಲ್ಲಿ ನನ್ನ ಹೆಸರನ್ನು ಸೇರಿಸಲಾಗಿಲ್ಲ. ನನ್ನನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ನಾನು ಕೇಳಿದೆ, ಆದರೆ ಯಾವುದೇ ಉತ್ತರ ಸಿಗಲಿಲ್ಲ(PC-PTI).

ಅಲ್ಲದೆ ದೇಶಿಯ ಸೀಸನ್ ಮುಗಿದ ನಂತರ, ಛತ್ತೀಸ್‌ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್ 2026 ರ ಆಟಗಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸಲಾಗಿಲ್ಲ. ಇದಲ್ಲದೆ, ಬೆಂಗಳೂರಿನಲ್ಲಿ ನಡೆದ ಪೂರ್ವ-ಸೀಸನ್ ಶಿಬಿರಕ್ಕೆ ಹೋದ ಛತ್ತೀಸ್‌ಗಢ ತಂಡದಲ್ಲಿ ನನ್ನ ಹೆಸರನ್ನು ಸೇರಿಸಲಾಗಿಲ್ಲ. ನನ್ನನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ನಾನು ಕೇಳಿದೆ, ಆದರೆ ಯಾವುದೇ ಉತ್ತರ ಸಿಗಲಿಲ್ಲ(PC-PTI).

4 / 5
ನಾನು ಐಪಿಎಲ್‌ನಲ್ಲಿ ಮಾತ್ರ ಆಡಲು ಬಯಸುವುದಾಗಿಯೂ ಮತ್ತು ನನಗೆ ಛತ್ತೀಸ್‌ಗಢ ಪರ ದೇಶೀಯ ಕ್ರಿಕೆಟ್ ಆಡುವುದಕ್ಕೆ ಆಸಕ್ತಿ ಇಲ್ಲ ಎಂದು ನನ್ನ ಮೇಲೆ ಆರೋಪ ಹೊರಿಸಲಾಯಿತು. ಸತ್ಯವೆಂದರೆ, ಕಳೆದ ವರ್ಷವಷ್ಟೇ, ಬಿಸಿಸಿಐ, 2023-24 ದೇಶೀಯ ಸೀಮಿತ ಓವರ್‌ಗಳ ಸೀಸನ್​ನ ಅತ್ಯುತ್ತಮ ಆಲ್‌ರೌಂಡರ್ ಆಗಿ ಲಾಲಾ ಅಮರನಾಥ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು(PC-PTI).

ನಾನು ಐಪಿಎಲ್‌ನಲ್ಲಿ ಮಾತ್ರ ಆಡಲು ಬಯಸುವುದಾಗಿಯೂ ಮತ್ತು ನನಗೆ ಛತ್ತೀಸ್‌ಗಢ ಪರ ದೇಶೀಯ ಕ್ರಿಕೆಟ್ ಆಡುವುದಕ್ಕೆ ಆಸಕ್ತಿ ಇಲ್ಲ ಎಂದು ನನ್ನ ಮೇಲೆ ಆರೋಪ ಹೊರಿಸಲಾಯಿತು. ಸತ್ಯವೆಂದರೆ, ಕಳೆದ ವರ್ಷವಷ್ಟೇ, ಬಿಸಿಸಿಐ, 2023-24 ದೇಶೀಯ ಸೀಮಿತ ಓವರ್‌ಗಳ ಸೀಸನ್​ನ ಅತ್ಯುತ್ತಮ ಆಲ್‌ರೌಂಡರ್ ಆಗಿ ಲಾಲಾ ಅಮರನಾಥ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು(PC-PTI).

5 / 5
ಈ ಆವೃತ್ತಿಯಿಂದ ಪುದುಚೇರಿ ಪರ ದೇಶಿಯ ಕ್ರಿಕೆಟ್ ಆಡಲಿರುವ ಶಶಾಂಕ್ ಸಿಂಗ್ ವೈಟ್-ಬಾಲ್ ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುವುದಾಗಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಶಶಾಂಕ್ ಈ ಆವೃತ್ತಿಯಲ್ಲಿ ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡು ತಮ್ಮ ಬೌಲಿಂಗ್ ಅನ್ನು ಸುಧಾರಿಸುವುದರ ಮೇಲೆ ಕೆಲಸ ಮಾಡಲಿದ್ದಾರೆ ಎಂದು ವರದಿಯಾಗಿದೆ(PC-PTI).

ಈ ಆವೃತ್ತಿಯಿಂದ ಪುದುಚೇರಿ ಪರ ದೇಶಿಯ ಕ್ರಿಕೆಟ್ ಆಡಲಿರುವ ಶಶಾಂಕ್ ಸಿಂಗ್ ವೈಟ್-ಬಾಲ್ ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುವುದಾಗಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಶಶಾಂಕ್ ಈ ಆವೃತ್ತಿಯಲ್ಲಿ ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡು ತಮ್ಮ ಬೌಲಿಂಗ್ ಅನ್ನು ಸುಧಾರಿಸುವುದರ ಮೇಲೆ ಕೆಲಸ ಮಾಡಲಿದ್ದಾರೆ ಎಂದು ವರದಿಯಾಗಿದೆ(PC-PTI).

Loading...
Unable to load recommendations.
Follow Us