- Kannada News Photo gallery Cricket photos jasprit bumrah in post match presentation after India won by 2 runs in DLS Method vs Ireland 1st T20I
IND vs IRE 1st T20I: ಪಂದ್ಯ ಮುಗಿದ ಬಳಿಕ ಭಾವುಕರಾದ ಜಸ್ಪ್ರಿತ್ ಬುಮ್ರಾ: ಆಡಿದ ಮಾತುಗಳೇನು ಕೇಳಿ
jasprit bumrah post match presentation: ಐರ್ಲೆಂಡ್ ವಿರುದ್ಧದ ಮೊದಲ ಟಿ20 ಮೂಲಕ ಸುಮಾರು ಒಂದು ವರ್ಷದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಜಸ್ಪ್ರಿತ್ ಬುಮ್ರಾ ತಮ್ಮ ಮಾರಕ ಬೌಲಿಂಗ್ನಿಂದ ಗಮನ ಸೆಳೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಬುಮ್ರಾ ಏನು ಹೇಳಿದ್ದಾರೆ ಕೇಳಿ.
Updated on: Aug 19, 2023 | 7:52 AM

ಐರ್ಲೆಂಡ್ ವಿರುದ್ಧದ ಪ್ರವಾಸವನ್ನು ಭಾರತ ಭರ್ಜರಿ ಆಗಿ ಆರಂಭಿಸಿದೆ. ಡಬ್ಲಿನ್ನ ದಿ ವಿಲೇಜ್ನಲ್ಲಿ ನಡೆದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೂ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಮ್ ಇಂಡಿಯಾ 2 ರನ್ಗಳಿಂದ ಗೆದ್ದು ಬೀಗಿತು. ಈ ಮೂಲಕ ನಾಯಕನಾಗಿ ಜಸ್ಪ್ರಿತ್ ಬುಮ್ರಾ ಜಯದ ಖಾತೆ ತೆರೆದಿದ್ದಾರೆ.

ಸುಮಾರು ಒಂದು ವರ್ಷದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಬುಮ್ರಾ ತಮ್ಮ ಮಾರಕ ಬೌಲಿಂಗ್ನಿಂದ ಗಮನ ಸೆಳೆದರು. 4 ಓವರ್ಗೆ 24 ರನ್ ನೀಡಿ 2 ವಿಕೆಟ್ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಬುಮ್ರಾ ಏನು ಹೇಳಿದ್ದಾರೆ ಕೇಳಿ.

ತುಂಬಾ ಖುಷಿ ಆಗುತ್ತಿದೆ. ನಾನು ಎನ್ಸಿಎ ನಲ್ಲಿ ಸಾಕಷ್ಟು ಸಮಯ ಅಭ್ಯಾಸ ನಡೆಸಿದ್ದೇನೆ. ಅಲ್ಲಿ ಅನೇಕ ಸೆಷನ್ಗಳಲ್ಲಿ ಪಾಲ್ಗೊಂಡಿದ್ದೆ. ಹೀಗಾಗಿ ನನಗೆ ಏನಾದರು ಕಳೆದುಕೊಂಡಿದ್ದೆ ಎಂಬ ಭಾವನೆ ಬರಲಿಲ್ಲ. ಜೊತೆಗೆ ಏನೋ ಹೊಸದು ಮಾಡುತ್ತಿದ್ದೇನೆ ಎಂದು ಅನಿಸುತ್ತಿಲ್ಲ. ಎಲ್ಲ ಕ್ರೆಡಿಟ್ ಸ್ಟಾಫ್ಗೆ ಸಲ್ಲಬೇಕು. ಅವರು ನನ್ನನ್ನು ತಯಾರು ಮಾಡಿದರು ಎಂಬು ಬುಮ್ರ ಭಾವುಕರಾದರು.

ಉತ್ತಮವಾಗಿ ಕಮ್ಬ್ಯಾಕ್ ಮಾಡಿದ್ದೇನೆ. ನರ್ವಸ್ ಆಗುತ್ತಿಲ್ಲ ಬದಲಾಗಿ ಖುಷಿ ಆಗುತ್ತಿದೆ ಎಂದು ಜಸ್ಪ್ರಿತ್ ಬುಮ್ರಾ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ. ಹೀಗೆ ತನ್ನ ಚೇತರಿಕೆಗೆ ಕಾರಣವಾದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯ ಸಿಬ್ಬಂದಿಗೆ ಬುಮ್ರಾ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಮಾತು ಮುಂದುವರೆಸಿದ ಬುಮ್ರಾ, ಪಂದ್ಯ ಆರಂಭವಾದಾಗ ಸ್ವಲ್ಪ ಸ್ವಿಂಗ್ ಇತ್ತು. ಇದನ್ನು ನಾವು ಚೆನ್ನಾಗಿ ಉಪಯೋಗಿಸಿಕೊಂಡೆವು. ಅದೃಷ್ಟವಶಾತ್, ನಾವು ಅಂದುಕೊಂಡಂತೆ ಟಾಸ್ ಗೆದ್ದೆವು. ಹವಾಮಾನದಿಂದಾಗಿ ನಮಗೆ ಸ್ವಲ್ಪ ಸಹಾಯವಾಯಿತು ಎಂಬುದು ನಿಜ. ಇದರಿಂದ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ನಾವು ಜಯ ಸಾಧಿಸಿದ್ದೇವೆ ನಿಜ. ಆದರೆ, ಇನ್ನೂ ಕೆಲವೊಂದು ವಿಭಾಗಗಳಲ್ಲಿ ಸುಧಾರಿಸಬೇಕಿದೆ. ಪ್ರತಿಯೊಬ್ಬ ಆಟಗಾರ ಆತ್ಮವಿಶ್ವಾಸದಿಂದ ಇದ್ದಾರೆ. ಅವರು ಎಲ್ಲದಕ್ಕೂ ಸಿದ್ಧವಾಗಿದ್ದಾರೆ. ನನಗನಿಸುವ ಪ್ರಕಾರ ಐಪಿಎಲ್ ಇವರಿಗೆ ತುಂಬಾ ಸಹಾಯ ಆಗಿದೆ. ಇದು ಯಾವಾಗಲೂ ಒಳ್ಳೆಯದು ಎಂಬುದು ಜಸ್ಪ್ರಿತ್ ಬುಮ್ರಾ ಮಾತಾಗಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕಿತು. ಆರಂಭದಲ್ಲಿ ಸತತ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾರಿ ಮೆಕಾರ್ಥಿ (ಅಜೇಯ 51) ಹಾಗೂ ಕರ್ಟಿಸ್ ಕ್ಯಾಂಫರ್ (39) ತಂಡಕ್ಕೆ ನೆರವಾಗಿ ಆಕರ್ಷಕ ಬ್ಯಾಟಿಂಗ್ ನಡೆಸಿದರು.

ಭಾರತ ಪರ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ರವಿ ಬಿಷ್ಟೋಯಿ ತಲಾ 2 ವಿಕೆಟ್ ಪಡೆದರು. ಟಾರ್ಗೆಟ್ ಬೆನ್ನಟ್ಟಿದ ಭಾರತ 6.5 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿದಾಗ ವರುಣ ಅಡ್ಡಿ ಪಡಿಸಿದ. ನಂತರ ಮಳೆ ನಿಲ್ಲದ ಪರಿಣಾಮ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ 2 ವಿಕೆಟ್ಗಳಿಂದ ಗೆದ್ದಿತು. ಜೈಸ್ವಾಲ್ 24 ರನ್ ಗಳಿಸಿದರೆ, ಗಾಯಕ್ವಾಡ್ ಅಜೇಯ 19ರನ್ ಚಚ್ಚಿದರು.









