AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ ಬಾಂಗ್ಲಾ ಟಿ20​ ತಂಡದ ನಾಯಕ ಮಹಮ್ಮದುಲ್ಲಾ

Mahmudullah: ಬಾಂಗ್ಲಾದೇಶ ಟಿ20 ನಾಯಕ ಮಹಮ್ಮದುಲ್ಲಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಹಮ್ಮದುಲ್ಲಾ ಅವರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಬುಧವಾರ ತಮ್ಮ ನಿರ್ಧಾರವನ್ನು ತಿಳಿಸಿದರು.

TV9 Web
| Edited By: |

Updated on: Nov 25, 2021 | 1:11 PM

Share
ಬಾಂಗ್ಲಾದೇಶ ಟಿ20 ನಾಯಕ ಮಹಮ್ಮದುಲ್ಲಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಹಮ್ಮದುಲ್ಲಾ ಅವರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಬುಧವಾರ ತಮ್ಮ ನಿರ್ಧಾರವನ್ನು ತಿಳಿಸಿದರು. ನವೆಂಬರ್ 26 ರಿಂದ ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ ಮತ್ತು ಅದಕ್ಕೂ ಮೊದಲು ಮಹಮ್ಮದುಲ್ಲಾ ಅವರು ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದ್ದಾರೆ.

ಬಾಂಗ್ಲಾದೇಶ ಟಿ20 ನಾಯಕ ಮಹಮ್ಮದುಲ್ಲಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಹಮ್ಮದುಲ್ಲಾ ಅವರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಬುಧವಾರ ತಮ್ಮ ನಿರ್ಧಾರವನ್ನು ತಿಳಿಸಿದರು. ನವೆಂಬರ್ 26 ರಿಂದ ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ ಮತ್ತು ಅದಕ್ಕೂ ಮೊದಲು ಮಹಮ್ಮದುಲ್ಲಾ ಅವರು ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದ್ದಾರೆ.

1 / 5
ಮಹ್ಮುದುಲ್ಲಾ 2021 ರಲ್ಲಿಯೇ ಟೆಸ್ಟ್ ತಂಡಕ್ಕೆ ಮರಳಿದರು. ಅವರ ವಾಪಸಾತಿಯೊಂದಿಗೆ ಅವರು ಜಿಂಬಾಬ್ವೆ ವಿರುದ್ಧ ಅಜೇಯ 150 ರನ್ ಗಳಿಸಿದರು ಮತ್ತು ಬಾಂಗ್ಲಾದೇಶ ಕೂಡ 220 ರನ್‌ಗಳ ದೊಡ್ಡ ವಿಜಯವನ್ನು ಪಡೆಯಿತು. ಮಹಮ್ಮದುಲ್ಲಾ ಈಗ ಟೆಸ್ಟ್ ಮಾದರಿಯನ್ನು ತೊರೆಯುವುದಾಗಿ ಘೋಷಿಸಿದ್ದಾರೆ, ಆದರೂ ಅವರು ODI ಮತ್ತು T20 ಮಾದರಿಗಳಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.

ಮಹ್ಮುದುಲ್ಲಾ 2021 ರಲ್ಲಿಯೇ ಟೆಸ್ಟ್ ತಂಡಕ್ಕೆ ಮರಳಿದರು. ಅವರ ವಾಪಸಾತಿಯೊಂದಿಗೆ ಅವರು ಜಿಂಬಾಬ್ವೆ ವಿರುದ್ಧ ಅಜೇಯ 150 ರನ್ ಗಳಿಸಿದರು ಮತ್ತು ಬಾಂಗ್ಲಾದೇಶ ಕೂಡ 220 ರನ್‌ಗಳ ದೊಡ್ಡ ವಿಜಯವನ್ನು ಪಡೆಯಿತು. ಮಹಮ್ಮದುಲ್ಲಾ ಈಗ ಟೆಸ್ಟ್ ಮಾದರಿಯನ್ನು ತೊರೆಯುವುದಾಗಿ ಘೋಷಿಸಿದ್ದಾರೆ, ಆದರೂ ಅವರು ODI ಮತ್ತು T20 ಮಾದರಿಗಳಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.

2 / 5
ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ ಮಹಮ್ಮದುಲ್ಲಾ, 'ನಾನು ಟೆಸ್ಟ್ ಕ್ರಿಕೆಟ್ ತೊರೆಯಲು ಇದು ಸರಿಯಾದ ಸಮಯ. ನಾನು ಟೆಸ್ಟ್ ತಂಡಕ್ಕೆ ಮರಳಲು ಸಹಾಯ ಮಾಡಿದ ಮತ್ತು ನನ್ನ ಪ್ರತಿಭೆಯನ್ನು ನಂಬಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುತ್ತೇನೆ ಮತ್ತು ದೇಶಕ್ಕಾಗಿ ನನ್ನ ಕೈಲಾದಷ್ಟು ಮಾಡುತ್ತೇನೆ ಎಂದಿದ್ದಾರೆ.

ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ ಮಹಮ್ಮದುಲ್ಲಾ, 'ನಾನು ಟೆಸ್ಟ್ ಕ್ರಿಕೆಟ್ ತೊರೆಯಲು ಇದು ಸರಿಯಾದ ಸಮಯ. ನಾನು ಟೆಸ್ಟ್ ತಂಡಕ್ಕೆ ಮರಳಲು ಸಹಾಯ ಮಾಡಿದ ಮತ್ತು ನನ್ನ ಪ್ರತಿಭೆಯನ್ನು ನಂಬಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುತ್ತೇನೆ ಮತ್ತು ದೇಶಕ್ಕಾಗಿ ನನ್ನ ಕೈಲಾದಷ್ಟು ಮಾಡುತ್ತೇನೆ ಎಂದಿದ್ದಾರೆ.

3 / 5
ಮಹಮುದುಲ್ಲಾ ಅವರು ಬಾಂಗ್ಲಾದೇಶಕ್ಕಾಗಿ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರ ಬ್ಯಾಟ್‌ನಿಂದ 2914 ರನ್ ಗಳಿಸಿದ್ದಾರೆ. ಮಹಮ್ಮದುಲ್ಲಾ ಅವರು 5 ಟೆಸ್ಟ್ ಶತಕಗಳನ್ನು ಹೊಂದಿದ್ದಾರೆ ಮತ್ತು ಅವರು 16 ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 43 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮಹಮುದುಲ್ಲಾ ಅವರು ಬಾಂಗ್ಲಾದೇಶಕ್ಕಾಗಿ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರ ಬ್ಯಾಟ್‌ನಿಂದ 2914 ರನ್ ಗಳಿಸಿದ್ದಾರೆ. ಮಹಮ್ಮದುಲ್ಲಾ ಅವರು 5 ಟೆಸ್ಟ್ ಶತಕಗಳನ್ನು ಹೊಂದಿದ್ದಾರೆ ಮತ್ತು ಅವರು 16 ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 43 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

4 / 5
ಮಹಮ್ಮದುಲ್ಲಾ ಅವರ ಜೀವನದಲ್ಲಿ ಧೋನಿ ದೊಡ್ಡ ಪ್ರಭಾವ ಬೀರಿದ್ದಾರೆ ಎಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅವರು ಧೋನಿಯನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತಾರೆ. ಮಹಮ್ಮದುಲ್ಲಾ ಅವರನ್ನು ಬಾಂಗ್ಲಾದೇಶದ ಧೋನಿ ಎಂದು ಕರೆಯುತ್ತಾರೆ. ಬಾಂಗ್ಲಾದೇಶ ತಂಡವು ಅವರನ್ನು ಮಹಿ ಎಂಬ ಹೆಸರಿನಿಂದ ಕರೆಯುತ್ತದೆ.

ಮಹಮ್ಮದುಲ್ಲಾ ಅವರ ಜೀವನದಲ್ಲಿ ಧೋನಿ ದೊಡ್ಡ ಪ್ರಭಾವ ಬೀರಿದ್ದಾರೆ ಎಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅವರು ಧೋನಿಯನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತಾರೆ. ಮಹಮ್ಮದುಲ್ಲಾ ಅವರನ್ನು ಬಾಂಗ್ಲಾದೇಶದ ಧೋನಿ ಎಂದು ಕರೆಯುತ್ತಾರೆ. ಬಾಂಗ್ಲಾದೇಶ ತಂಡವು ಅವರನ್ನು ಮಹಿ ಎಂಬ ಹೆಸರಿನಿಂದ ಕರೆಯುತ್ತದೆ.

5 / 5
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!