AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ವರ್ಷ ಕಳೆದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ 10 ಆಟಗಾರರ ಪಟ್ಟಿ ಇಲ್ಲಿದೆ

ODI World Cup: 2011 ರ ವಿಶ್ವಕಪ್​ನಲ್ಲಿ ಕಣಕ್ಕಿಳಿದ 10 ಆಟಗಾರರು ಈ ಬಾರಿಯ ವಿಶ್ವಕಪ್​ ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗೆ ಕಳೆದೊಂದು ದಶಕದಿಂದ ತಂಡದ ಪ್ರಮುಖ ಅಂಗವಾಗಿ, ಈ ಬಾರಿಯ ವರ್ಲ್ಡ್​ಕಪ್​ ಟೀಮ್​ನಲ್ಲಿ ಸ್ಥಾನ ಪಡೆದ ಆಟಗಾರರ ಕಿರುಪರಿಚಯ ಇಲ್ಲಿದೆ.

TV9 Web
| Edited By: |

Updated on: Oct 01, 2023 | 11:07 PM

Share
ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದು ಬರೋಬ್ಬರಿ 12 ವರ್ಷಗಳೇ ಕಳೆದಿವೆ. ಇದಾಗ್ಯೂ ಅಂದು ವರ್ಲ್ಡ್​ಕಪ್ ಆಡಿದ್ದ 10 ಆಟಗಾರರು ಈ ಬಾರಿ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದು ಬರೋಬ್ಬರಿ 12 ವರ್ಷಗಳೇ ಕಳೆದಿವೆ. ಇದಾಗ್ಯೂ ಅಂದು ವರ್ಲ್ಡ್​ಕಪ್ ಆಡಿದ್ದ 10 ಆಟಗಾರರು ಈ ಬಾರಿ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

1 / 13
ಅಂದರೆ 2011 ರ ವಿಶ್ವಕಪ್​ನಲ್ಲಿ ಕಣಕ್ಕಿಳಿದ 10 ಆಟಗಾರರು ಈ ಬಾರಿಯ ವಿಶ್ವಕಪ್​ ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗೆ ಕಳೆದೊಂದು ದಶಕದಿಂದ ತಂಡದ ಪ್ರಮುಖ ಅಂಗವಾಗಿ, ಈ ಬಾರಿಯ ವರ್ಲ್ಡ್​ಕಪ್​ ಟೀಮ್​ನಲ್ಲಿ ಸ್ಥಾನ ಪಡೆದ ಆಟಗಾರರ ಕಿರುಪರಿಚಯ ಇಲ್ಲಿದೆ...

ಅಂದರೆ 2011 ರ ವಿಶ್ವಕಪ್​ನಲ್ಲಿ ಕಣಕ್ಕಿಳಿದ 10 ಆಟಗಾರರು ಈ ಬಾರಿಯ ವಿಶ್ವಕಪ್​ ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗೆ ಕಳೆದೊಂದು ದಶಕದಿಂದ ತಂಡದ ಪ್ರಮುಖ ಅಂಗವಾಗಿ, ಈ ಬಾರಿಯ ವರ್ಲ್ಡ್​ಕಪ್​ ಟೀಮ್​ನಲ್ಲಿ ಸ್ಥಾನ ಪಡೆದ ಆಟಗಾರರ ಕಿರುಪರಿಚಯ ಇಲ್ಲಿದೆ...

2 / 13
1- ಸ್ಟೀವ್ ಸ್ಮಿತ್: 2011 ರ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವ್ ಸ್ಮಿತ್ ಸ್ಪಿನ್ ಆಲ್​ರೌಂಡರ್ ಆಗಿ ಕಾಣಿಸಿಕೊಂಡಿದ್ದರು. ಈ ಬಾರಿ ಅದೇ ಸ್ಮಿತ್ ಪ್ರಮುಖ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

1- ಸ್ಟೀವ್ ಸ್ಮಿತ್: 2011 ರ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವ್ ಸ್ಮಿತ್ ಸ್ಪಿನ್ ಆಲ್​ರೌಂಡರ್ ಆಗಿ ಕಾಣಿಸಿಕೊಂಡಿದ್ದರು. ಈ ಬಾರಿ ಅದೇ ಸ್ಮಿತ್ ಪ್ರಮುಖ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

3 / 13
2- ಆದಿಲ್ ರಶೀದ್: 2011 ರ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ಆದಿಲ್ ರಶೀದ್ ಈ ಬಾರಿ ಕೂಡ ಆಂಗ್ಲ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ.

2- ಆದಿಲ್ ರಶೀದ್: 2011 ರ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ಆದಿಲ್ ರಶೀದ್ ಈ ಬಾರಿ ಕೂಡ ಆಂಗ್ಲ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ.

4 / 13
3- ವೆಸ್ಲಿ ಬ್ಯಾರೆಸಿ: 2011 ರಲ್ಲಿ ನೆದರ್​ಲೆಂಡ್ಸ್ ತಂಡದಲ್ಲಿ ಬ್ಯಾಟ್ಸ್​ಮನ್ ಆಗಿ ಸ್ಥಾನ ಪಡೆದಿದ್ದ ವೆಸ್ಲಿ ಬ್ಯಾರೆಸಿ, ಇದೀಗ ತಮ್ಮ 39ನೇ ವಯಸ್ಸಿನಲ್ಲಿ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಆಯ್ಕೆಯಾಗಿದ್ದಾರೆ.

3- ವೆಸ್ಲಿ ಬ್ಯಾರೆಸಿ: 2011 ರಲ್ಲಿ ನೆದರ್​ಲೆಂಡ್ಸ್ ತಂಡದಲ್ಲಿ ಬ್ಯಾಟ್ಸ್​ಮನ್ ಆಗಿ ಸ್ಥಾನ ಪಡೆದಿದ್ದ ವೆಸ್ಲಿ ಬ್ಯಾರೆಸಿ, ಇದೀಗ ತಮ್ಮ 39ನೇ ವಯಸ್ಸಿನಲ್ಲಿ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಆಯ್ಕೆಯಾಗಿದ್ದಾರೆ.

5 / 13
4- ಶಕೀಬ್ ಅಲ್ ಹಸನ್: 2011 ರ ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ್ ತಂಡವನ್ನು ಮುನ್ನಡೆಸಿದ್ದ ಯುವ ನಾಯಕ ಶಕೀಬ್ ಅಲ್ ಹಸನ್ ಈ ಬಾರಿ ಕೂಡ ಬಾಂಗ್ಲಾ ಪಡೆಯ ನೇತೃತ್ವವಹಿಸಿರುವುದು ವಿಶೇಷ.

4- ಶಕೀಬ್ ಅಲ್ ಹಸನ್: 2011 ರ ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ್ ತಂಡವನ್ನು ಮುನ್ನಡೆಸಿದ್ದ ಯುವ ನಾಯಕ ಶಕೀಬ್ ಅಲ್ ಹಸನ್ ಈ ಬಾರಿ ಕೂಡ ಬಾಂಗ್ಲಾ ಪಡೆಯ ನೇತೃತ್ವವಹಿಸಿರುವುದು ವಿಶೇಷ.

6 / 13
5- ಕೇನ್ ವಿಲಿಯಮ್ಸನ್: 2011 ರ ವಿಶ್ವಕಪ್​ನಲ್ಲಿ ಕೇನ್ ವಿಲಿಯಮ್ಸನ್ ನ್ಯೂಝಿಲೆಂಡ್ ತಂಡದ ಭರವಸೆಯಾಗಿ ಯುವ ಆಟಗಾರನಾಗಿ ಆಯ್ಕೆಯಾಗಿದ್ದರು. ಇದೀಗ 2023ರ ವಿಶ್ವಕಪ್​ನಲ್ಲಿ ಕಿವೀಸ್ ಪಡೆಯನ್ನು ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ.

5- ಕೇನ್ ವಿಲಿಯಮ್ಸನ್: 2011 ರ ವಿಶ್ವಕಪ್​ನಲ್ಲಿ ಕೇನ್ ವಿಲಿಯಮ್ಸನ್ ನ್ಯೂಝಿಲೆಂಡ್ ತಂಡದ ಭರವಸೆಯಾಗಿ ಯುವ ಆಟಗಾರನಾಗಿ ಆಯ್ಕೆಯಾಗಿದ್ದರು. ಇದೀಗ 2023ರ ವಿಶ್ವಕಪ್​ನಲ್ಲಿ ಕಿವೀಸ್ ಪಡೆಯನ್ನು ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ.

7 / 13
6- ರವಿಚಂದ್ರನ್ ಅಶ್ವಿನ್: 2011 ರ ವಿಶ್ವಕಪ್​ನಲ್ಲಿ ನಾಯಕ ಧೋನಿಯ ಸ್ಪಿನ್ ಅಸ್ತ್ರವಾಗಿ ಬಳಕೆಯಾಗಿದ್ದ ರವಿಚಂದ್ರನ್ ಅಶ್ವಿನ್, ದಶಕಗಳ ಬಳಿಕ ಅನುಭವಿ ಆಟಗಾರನಾಗಿ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

6- ರವಿಚಂದ್ರನ್ ಅಶ್ವಿನ್: 2011 ರ ವಿಶ್ವಕಪ್​ನಲ್ಲಿ ನಾಯಕ ಧೋನಿಯ ಸ್ಪಿನ್ ಅಸ್ತ್ರವಾಗಿ ಬಳಕೆಯಾಗಿದ್ದ ರವಿಚಂದ್ರನ್ ಅಶ್ವಿನ್, ದಶಕಗಳ ಬಳಿಕ ಅನುಭವಿ ಆಟಗಾರನಾಗಿ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

8 / 13
7- ಮುಶ್ಫಿಕುರ್ ರಹೀಮ್: 2011 ರಲ್ಲಿ ಬಾಂಗ್ಲಾದೇಶ್ ತಂಡದ 2ನೇ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಮುಶ್ಪಿಕುರ್ ರಹೀಮ್ ಕಾಣಿಸಿಕೊಂಡಿದ್ದರು. ಇದೀಗ 2023 ರಲ್ಲಿ ತಂಡದ ಮುಖ್ಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

7- ಮುಶ್ಫಿಕುರ್ ರಹೀಮ್: 2011 ರಲ್ಲಿ ಬಾಂಗ್ಲಾದೇಶ್ ತಂಡದ 2ನೇ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಮುಶ್ಪಿಕುರ್ ರಹೀಮ್ ಕಾಣಿಸಿಕೊಂಡಿದ್ದರು. ಇದೀಗ 2023 ರಲ್ಲಿ ತಂಡದ ಮುಖ್ಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

9 / 13
8- ಟಿಮ್ ಸೌಥಿ: 2011 ರ ವಿಶ್ವಕಪ್​ನಲ್ಲಿ ನ್ಯೂಝಿಲೆಂಡ್ ತಂಡದ ಯುವ ವೇಗಿಯಾಗಿ ಟಿಮ್ ಸೌಥಿ ಆಯ್ಕೆಯಾಗಿದ್ದರು. ಇದೀಗ ಕಿವೀಸ್ ಬಳಗದ ಪ್ರಮುಖ ವೇಗಿಯಾಗಿ ಸೌಥಿ ಕಾಣಿಸಿಕೊಂಡಿದ್ದಾರೆ.

8- ಟಿಮ್ ಸೌಥಿ: 2011 ರ ವಿಶ್ವಕಪ್​ನಲ್ಲಿ ನ್ಯೂಝಿಲೆಂಡ್ ತಂಡದ ಯುವ ವೇಗಿಯಾಗಿ ಟಿಮ್ ಸೌಥಿ ಆಯ್ಕೆಯಾಗಿದ್ದರು. ಇದೀಗ ಕಿವೀಸ್ ಬಳಗದ ಪ್ರಮುಖ ವೇಗಿಯಾಗಿ ಸೌಥಿ ಕಾಣಿಸಿಕೊಂಡಿದ್ದಾರೆ.

10 / 13
9- ಮಹಮದುಲ್ಲಾ: 2011 ರಲ್ಲಿ ಬಾಂಗ್ಲಾದೇಶ್ ತಂಡದ ಮಧ್ಯಮ ಕ್ರಮಾಂಕದ ಯುವ ಬ್ಯಾಟರ್ ಆಗಿದ್ದ ಮಹಮದುಲ್ಲಾ ಈ ಬಾರಿ ಅನುಭವಿ ಆಟಗಾರನ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

9- ಮಹಮದುಲ್ಲಾ: 2011 ರಲ್ಲಿ ಬಾಂಗ್ಲಾದೇಶ್ ತಂಡದ ಮಧ್ಯಮ ಕ್ರಮಾಂಕದ ಯುವ ಬ್ಯಾಟರ್ ಆಗಿದ್ದ ಮಹಮದುಲ್ಲಾ ಈ ಬಾರಿ ಅನುಭವಿ ಆಟಗಾರನ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

11 / 13
10- ವಿರಾಟ್ ಕೊಹ್ಲಿ: 2011 ರ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದರು. ಇದೀಗ 2023 ರಲ್ಲಿ ಭಾರತ ತಂಡದ ಪ್ರಮುಖ ಬ್ಯಾಟ್ಸ್​ಮನ್ ಕಾಣಿಸಿಕೊಳ್ಳಲಿದ್ದಾರೆ.

10- ವಿರಾಟ್ ಕೊಹ್ಲಿ: 2011 ರ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದರು. ಇದೀಗ 2023 ರಲ್ಲಿ ಭಾರತ ತಂಡದ ಪ್ರಮುಖ ಬ್ಯಾಟ್ಸ್​ಮನ್ ಕಾಣಿಸಿಕೊಳ್ಳಲಿದ್ದಾರೆ.

12 / 13
ವಿಶೇಷ ಎಂದರೆ 2011ರ ವಿಶ್ವಕಪ್​ ಫೈನಲ್ ಆಡಿದ್ದ ಆಟಗಾರರಲ್ಲಿ ಪ್ರಸ್ತುತ ವರ್ಲ್ಡ್​ಕಪ್ ತಂಡದಲ್ಲಿರುವುದು ವಿರಾಟ್ ಕೊಹ್ಲಿ ಮಾತ್ರ. ಅಂದು ಅಶ್ವಿನ್ ಭಾರತ ತಂಡದಲ್ಲಿದ್ದರೂ ಫೈನಲ್​ನಲ್ಲಿ ಕಣಕ್ಕಿಳಿದಿರಲಿಲ್ಲ. ಹಾಗಾಗಿ ಈ ಬಾರಿ ಭಾರತ ವಿಶ್ವಕಪ್ ಗೆದ್ದರೆ ಕಿಂಗ್ ಕೊಹ್ಲಿ ಹೆಸರಿಗೆ ವಿಶೇಷ ದಾಖಲೆ ಸೇರ್ಪಡೆಯಾಗಲಿದೆ.

ವಿಶೇಷ ಎಂದರೆ 2011ರ ವಿಶ್ವಕಪ್​ ಫೈನಲ್ ಆಡಿದ್ದ ಆಟಗಾರರಲ್ಲಿ ಪ್ರಸ್ತುತ ವರ್ಲ್ಡ್​ಕಪ್ ತಂಡದಲ್ಲಿರುವುದು ವಿರಾಟ್ ಕೊಹ್ಲಿ ಮಾತ್ರ. ಅಂದು ಅಶ್ವಿನ್ ಭಾರತ ತಂಡದಲ್ಲಿದ್ದರೂ ಫೈನಲ್​ನಲ್ಲಿ ಕಣಕ್ಕಿಳಿದಿರಲಿಲ್ಲ. ಹಾಗಾಗಿ ಈ ಬಾರಿ ಭಾರತ ವಿಶ್ವಕಪ್ ಗೆದ್ದರೆ ಕಿಂಗ್ ಕೊಹ್ಲಿ ಹೆಸರಿಗೆ ವಿಶೇಷ ದಾಖಲೆ ಸೇರ್ಪಡೆಯಾಗಲಿದೆ.

13 / 13
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್