Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾ ಪರ ಕಣಕ್ಕಿಳಿದು ಐಪಿಎಲ್ ಸಂಬಳ ಹೆಚ್ಚಿಸಿಕೊಂಡ ಆರ್​ಸಿಬಿ ಆಟಗಾರ..!

Rajat Patidar: ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಸೂಚನೆ ಪಡೆದಿರುವ ರಜತ್, ಏಕೈಕ ಅಂತಾರಾಷ್ಟ್ರೀಯ ಪಂದ್ಯವನ್ನಾಡುವುದರೊಂದಿಗೆ ತಮ್ಮ ಐಪಿಎಲ್ ಸಂಬಳವನ್ನು ಸಹ ಬರೋಬ್ಬರಿ 30 ಲಕ್ಷ ಏರಿಸಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: Dec 22, 2023 | 10:30 PM

ಭಾರತದ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಮೊದಲ ಪಂದ್ಯವನ್ನು ಆಡಿದರು.

ಭಾರತದ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಮೊದಲ ಪಂದ್ಯವನ್ನು ಆಡಿದರು.

1 / 9
ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರ ನಾಯಕತ್ವದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಜತ್ ಪಾಟಿದಾರ್ ಆರಂಭಿಕರಾಗಿ ಕಣಕ್ಕಿಳಿದು 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 22 ರನ್ ಚಚ್ಚಿದರು.

ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರ ನಾಯಕತ್ವದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಜತ್ ಪಾಟಿದಾರ್ ಆರಂಭಿಕರಾಗಿ ಕಣಕ್ಕಿಳಿದು 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 22 ರನ್ ಚಚ್ಚಿದರು.

2 / 9
ಈ ಪಂದ್ಯದಲ್ಲಿ ರಜತ್ ಕೆಲವೇ ಹೊತ್ತು ಮೈದಾನದಲ್ಲಿದ್ದರೂ ತಮ್ಮ ನಿರ್ಭೀತಿಯ ಬ್ಯಾಟಿಂಗ್​ನಿಂದ ಕ್ರಿಕೆಟ್ ಪಂಡಿತರ ಮನಗೆದ್ದರು. ರಜತ್ ಅವರ ಆಟ ನೋಡಿದ ಹಲವರು, ಇವರು ಮುಂದಿನ ಟೀಂ ಇಂಡಿಯಾದ ಸೂಪರ್ ಸ್ಟಾರ್ ಎಂದು ಹೊಗಳಿಕೆಯ ಮಾತನ್ನು ಆಡಿದರು.

ಈ ಪಂದ್ಯದಲ್ಲಿ ರಜತ್ ಕೆಲವೇ ಹೊತ್ತು ಮೈದಾನದಲ್ಲಿದ್ದರೂ ತಮ್ಮ ನಿರ್ಭೀತಿಯ ಬ್ಯಾಟಿಂಗ್​ನಿಂದ ಕ್ರಿಕೆಟ್ ಪಂಡಿತರ ಮನಗೆದ್ದರು. ರಜತ್ ಅವರ ಆಟ ನೋಡಿದ ಹಲವರು, ಇವರು ಮುಂದಿನ ಟೀಂ ಇಂಡಿಯಾದ ಸೂಪರ್ ಸ್ಟಾರ್ ಎಂದು ಹೊಗಳಿಕೆಯ ಮಾತನ್ನು ಆಡಿದರು.

3 / 9
ಈ ಮೂಲಕ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಸೂಚನೆ ಪಡೆದಿರುವ ರಜತ್, ಏಕೈಕ ಅಂತಾರಾಷ್ಟ್ರೀಯ ಪಂದ್ಯವನ್ನಾಡುವುದರೊಂದಿಗೆ ತಮ್ಮ ಐಪಿಎಲ್ ಸಂಬಳವನ್ನು ಸಹ ಬರೋಬ್ಬರಿ 30 ಲಕ್ಷ ಏರಿಸಿಕೊಂಡಿದ್ದಾರೆ.

ಈ ಮೂಲಕ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಸೂಚನೆ ಪಡೆದಿರುವ ರಜತ್, ಏಕೈಕ ಅಂತಾರಾಷ್ಟ್ರೀಯ ಪಂದ್ಯವನ್ನಾಡುವುದರೊಂದಿಗೆ ತಮ್ಮ ಐಪಿಎಲ್ ಸಂಬಳವನ್ನು ಸಹ ಬರೋಬ್ಬರಿ 30 ಲಕ್ಷ ಏರಿಸಿಕೊಂಡಿದ್ದಾರೆ.

4 / 9
ವಾಸ್ತವವಾಗಿ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡುತ್ತಿರುವ ರಜತ್​ಗೆ ಅವರ ಮೂಲ ಬೆಲೆ 20 ಲಕ್ಷ ರೂಗಳನ್ನು ಒಂದು ಸೀಸನ್​ಗೆ ವೇತನವನ್ನಾಗಿ ನೀಡಲಾಗುತ್ತಿದೆ. ಆದರೆ ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ರಜತ್​ ಅವರ ಐಪಿಎಲ್ ಸಂಬಳ 30 ಲಕ್ಷ ಹೆಚ್ಚಾಗಿದೆ.

ವಾಸ್ತವವಾಗಿ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡುತ್ತಿರುವ ರಜತ್​ಗೆ ಅವರ ಮೂಲ ಬೆಲೆ 20 ಲಕ್ಷ ರೂಗಳನ್ನು ಒಂದು ಸೀಸನ್​ಗೆ ವೇತನವನ್ನಾಗಿ ನೀಡಲಾಗುತ್ತಿದೆ. ಆದರೆ ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ರಜತ್​ ಅವರ ಐಪಿಎಲ್ ಸಂಬಳ 30 ಲಕ್ಷ ಹೆಚ್ಚಾಗಿದೆ.

5 / 9
ಅದರಂತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ರಜತ್ 20 ಲಕ್ಷದ ಬದಲಿಗೆ 50 ಲಕ್ಷ ರೂಗಳನ್ನು ವೇತನವನ್ನಾಗಿ ಪಡೆಯಲ್ಲಿದ್ದಾರೆ.

ಅದರಂತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ರಜತ್ 20 ಲಕ್ಷದ ಬದಲಿಗೆ 50 ಲಕ್ಷ ರೂಗಳನ್ನು ವೇತನವನ್ನಾಗಿ ಪಡೆಯಲ್ಲಿದ್ದಾರೆ.

6 / 9
ಬಿಸಿಸಿಐ ನಿಯಮಗಳ ಪ್ರಕಾರ ಒಬ್ಬ ಭಾರತೀಯ ಅನ್​ಕ್ಯಾಪ್ಡ್ ಕ್ರಿಕೆಟಿಗ ಎರಡು ಐಪಿಎಲ್ ಆವೃತ್ತಿಗಳ ನಡುವೆ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿ ಚೊಚ್ಚಲ ಪಂದ್ಯವನ್ನಾಡಿದರೆ, ಆತನ ಸಂಬಳ 50 ಲಕ್ಷಕ್ಕಿಂತ ಕಡಿಮೆಯಿದ್ದರೆ, ಮುಂಬರುವ ಸೀಸನ್​ನಿಂದ ಆತನಿಗೆ ಫ್ರಾಂಚೈಸಿ ವೇತನವಾಗಿ ರೂ 50 ಲಕ್ಷವನ್ನು ಪಾವತಿಸಬೇಕಾಗುತ್ತದೆ.

ಬಿಸಿಸಿಐ ನಿಯಮಗಳ ಪ್ರಕಾರ ಒಬ್ಬ ಭಾರತೀಯ ಅನ್​ಕ್ಯಾಪ್ಡ್ ಕ್ರಿಕೆಟಿಗ ಎರಡು ಐಪಿಎಲ್ ಆವೃತ್ತಿಗಳ ನಡುವೆ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿ ಚೊಚ್ಚಲ ಪಂದ್ಯವನ್ನಾಡಿದರೆ, ಆತನ ಸಂಬಳ 50 ಲಕ್ಷಕ್ಕಿಂತ ಕಡಿಮೆಯಿದ್ದರೆ, ಮುಂಬರುವ ಸೀಸನ್​ನಿಂದ ಆತನಿಗೆ ಫ್ರಾಂಚೈಸಿ ವೇತನವಾಗಿ ರೂ 50 ಲಕ್ಷವನ್ನು ಪಾವತಿಸಬೇಕಾಗುತ್ತದೆ.

7 / 9
ಅದರಂತೆ ಈಗ ರಜತ್ ಪಾಟಿದರ್ ತಮ್ಮ ಮುಂದಿನ ಐಪಿಎಲ್ ಆವೃತ್ತಿಯಿಂದ 50 ಲಕ್ಷ ರೂಗಳನ್ನು ವೇತನವನ್ನಾಗಿ ಪಡೆಯಲ್ಲಿದ್ದಾರೆ.

ಅದರಂತೆ ಈಗ ರಜತ್ ಪಾಟಿದರ್ ತಮ್ಮ ಮುಂದಿನ ಐಪಿಎಲ್ ಆವೃತ್ತಿಯಿಂದ 50 ಲಕ್ಷ ರೂಗಳನ್ನು ವೇತನವನ್ನಾಗಿ ಪಡೆಯಲ್ಲಿದ್ದಾರೆ.

8 / 9
ದೇಶಿ ಕ್ರಿಕೆಟ್​ನಲ್ಲಿ ರಜತ್ ಪಾಟಿದಾರ್ ಅವರ ಪ್ರದರ್ಶನವನ್ನು ನೋಡುವುದಾದರೆ, ರಜತ್ 57 ಲಿಸ್ಟ್-ಎ ಪಂದ್ಯಗಳಲ್ಲಿ 36.35 ಸರಾಸರಿಯಲ್ಲಿ 98.49 ಸ್ಟ್ರೈಕ್ ರೇಟ್‌ನೊಂದಿಗೆ 1,963 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 3 ಶತಕ ಮತ್ತು 12 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

ದೇಶಿ ಕ್ರಿಕೆಟ್​ನಲ್ಲಿ ರಜತ್ ಪಾಟಿದಾರ್ ಅವರ ಪ್ರದರ್ಶನವನ್ನು ನೋಡುವುದಾದರೆ, ರಜತ್ 57 ಲಿಸ್ಟ್-ಎ ಪಂದ್ಯಗಳಲ್ಲಿ 36.35 ಸರಾಸರಿಯಲ್ಲಿ 98.49 ಸ್ಟ್ರೈಕ್ ರೇಟ್‌ನೊಂದಿಗೆ 1,963 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 3 ಶತಕ ಮತ್ತು 12 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

9 / 9
Follow us
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ