Sanju Samson: ಐ ಡೋಂಟ್ ನೋ: ಪಂದ್ಯದ ಬಳಿಕ ಮಾತನಾಡಲೂ ಕಷ್ಟಪಟ್ಟ ಸಂಜು ಸ್ಯಾಮ್ಸನ್

RR vs SRH, IPL 2023: ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಆಡಿದ ಮಾತುಗಳೇನು ಕೇಳಿ.

|

Updated on: May 08, 2023 | 10:11 AM

ಐಪಿಎಲ್ 2023 ರಲ್ಲಿ ಭಾನುವಾರ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಕೊನೆಯ ಎಸೆತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. 20ನೇ ಓವರ್​ನ 6ನೇ ಎಸೆತದ ನೋ ಬಾಲ್ ಇಡೀ ಪಂದ್ಯದ ಚಿತ್ರಣವನ್ನು ಬದಲಾಯಿಸಿ ಎಸ್​ಆರ್​ಹೆಚ್ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಐಪಿಎಲ್ 2023 ರಲ್ಲಿ ಭಾನುವಾರ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಕೊನೆಯ ಎಸೆತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. 20ನೇ ಓವರ್​ನ 6ನೇ ಎಸೆತದ ನೋ ಬಾಲ್ ಇಡೀ ಪಂದ್ಯದ ಚಿತ್ರಣವನ್ನು ಬದಲಾಯಿಸಿ ಎಸ್​ಆರ್​ಹೆಚ್ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

1 / 8
ರಾಜಸ್ಥಾನ್ 20 ಓವರ್​ಗಳಲ್ಲಿ 214 ರನ್ ಕಲೆಹಾಕಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಕಾಮೆಂಟೇಟರ್ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಷ್ಟಪಟ್ಟರು.

ರಾಜಸ್ಥಾನ್ 20 ಓವರ್​ಗಳಲ್ಲಿ 214 ರನ್ ಕಲೆಹಾಕಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಕಾಮೆಂಟೇಟರ್ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಷ್ಟಪಟ್ಟರು.

2 / 8
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಕಾಮೆಂಟೇಟರ್ ಸ್ಯಾಮ್ಸನ್ ಅವರಿಗೆ 'ನೀವು ಇನ್ನೂ ಹೆಚ್ಚು ರನ್ ಕಲೆಹಾಕಬೇಕಿತ್ತಾ?', ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ಸಾಧ್ಯವಾಗದೆ ಸ್ಯಾಮ್ಸನ್ ಅವರು, ಇದು ಅದ್ಭುತ ಪ್ರಶ್ನೆ, ಆದರೆ ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಕಾಮೆಂಟೇಟರ್ ಸ್ಯಾಮ್ಸನ್ ಅವರಿಗೆ 'ನೀವು ಇನ್ನೂ ಹೆಚ್ಚು ರನ್ ಕಲೆಹಾಕಬೇಕಿತ್ತಾ?', ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ಸಾಧ್ಯವಾಗದೆ ಸ್ಯಾಮ್ಸನ್ ಅವರು, ಇದು ಅದ್ಭುತ ಪ್ರಶ್ನೆ, ಆದರೆ ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

3 / 8
ಐಪಿಎಲ್ ನಮಗೆ ಈರೀತಿಯ ಪಂದ್ಯಗಳನ್ನು ಕೊಡುತ್ತದೆ. ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಗೆದ್ದೆವು ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಬ್ಯಾಟಿಂಗ್ ಬಲಿಷ್ಠವಾಗಿದ್ದರೆ ಯಾವುದೇ ತಂಡ ಗೆಲುವು ಸಾಧಿಸಬಹುದಿತ್ತು. ಆದರೆ, ನನಗೆ ಕೊನೆಯ ಓವರ್​ನಲ್ಲಿ ಸಂದೀಪ್ ಮೇಲೆ ನಂಬಿಕೆಯಿತ್ತು. ಹಿಂದಿನ ಪಂದ್ಯದಲ್ಲೂ ಸಿಎಸ್​ಕೆ ವಿರುದ್ಧ ಈರೀತಿಯ ಸಂದರ್ಭದಲ್ಲಿ ಅವರು ಗೆಲುವು ತಂದುಕೊಟ್ಟಿದ್ದರು. ಈ ಬಾರಿ ಕೂಡ ನಮಗೆ ಅವರು ಯಶಸ್ಸು ತಂದುಕೊಟ್ಟರು. ಆದರೆ, ಅದು ನೋ ಬಾಲ್ ಆಯಿತು - ಸಂಜು ಸ್ಯಾಮ್ಸನ್.

ಐಪಿಎಲ್ ನಮಗೆ ಈರೀತಿಯ ಪಂದ್ಯಗಳನ್ನು ಕೊಡುತ್ತದೆ. ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಗೆದ್ದೆವು ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಬ್ಯಾಟಿಂಗ್ ಬಲಿಷ್ಠವಾಗಿದ್ದರೆ ಯಾವುದೇ ತಂಡ ಗೆಲುವು ಸಾಧಿಸಬಹುದಿತ್ತು. ಆದರೆ, ನನಗೆ ಕೊನೆಯ ಓವರ್​ನಲ್ಲಿ ಸಂದೀಪ್ ಮೇಲೆ ನಂಬಿಕೆಯಿತ್ತು. ಹಿಂದಿನ ಪಂದ್ಯದಲ್ಲೂ ಸಿಎಸ್​ಕೆ ವಿರುದ್ಧ ಈರೀತಿಯ ಸಂದರ್ಭದಲ್ಲಿ ಅವರು ಗೆಲುವು ತಂದುಕೊಟ್ಟಿದ್ದರು. ಈ ಬಾರಿ ಕೂಡ ನಮಗೆ ಅವರು ಯಶಸ್ಸು ತಂದುಕೊಟ್ಟರು. ಆದರೆ, ಅದು ನೋ ಬಾಲ್ ಆಯಿತು - ಸಂಜು ಸ್ಯಾಮ್ಸನ್.

4 / 8
ಇಂತಹ ವಿಕೆಟ್​ನಲ್ಲಿ ನಾವು ಉತ್ತಮವಾಗಿ ಬ್ಯಾಟ್ ಮಾಡಿ ಕಠಿಣ ಟಾರ್ಗೆಟ್ ನೀಡಿದೆವು. ಆದರೆ, ಎಸ್​ಆರ್​ಹೆಚ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಅವರಿಗೆ ಕ್ರೆಡಿಟ್ ಸಲ್ಲಬೇಕು. ಟಾರ್ಗೆಟ್ ಎಷ್ಟೇ ಇದ್ದರೂ ಗೆಲುವು ಸಾಧಿಸಿದಾಗ ಮಾತ್ರ ಖುಷಿ ಆಗುತ್ತದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇಂತಹ ವಿಕೆಟ್​ನಲ್ಲಿ ನಾವು ಉತ್ತಮವಾಗಿ ಬ್ಯಾಟ್ ಮಾಡಿ ಕಠಿಣ ಟಾರ್ಗೆಟ್ ನೀಡಿದೆವು. ಆದರೆ, ಎಸ್​ಆರ್​ಹೆಚ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಅವರಿಗೆ ಕ್ರೆಡಿಟ್ ಸಲ್ಲಬೇಕು. ಟಾರ್ಗೆಟ್ ಎಷ್ಟೇ ಇದ್ದರೂ ಗೆಲುವು ಸಾಧಿಸಿದಾಗ ಮಾತ್ರ ಖುಷಿ ಆಗುತ್ತದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

5 / 8
ನಿಜ ಹೇಳಬೇಕೆಂದರೆ ಈ ಟೂರ್ನಮೆಂಟ್​ನಲ್ಲಿ ಆಡುವುದು ಸುಲಭವಲ್ಲ. ಪ್ರತಿಯೊಂದು ಪಂದ್ಯ ಕೂಡ ಮುಖ್ಯ, ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಬೇಕು. ನಾವು ಇದಕ್ಕಿಂತ ಉತ್ತಮವಾಗಿ ಕಮ್​ಬ್ಯಾಕ್ ಮಾಡಿ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದು ಸ್ಯಾಮ್ಸನ್ ಮಾತು.

ನಿಜ ಹೇಳಬೇಕೆಂದರೆ ಈ ಟೂರ್ನಮೆಂಟ್​ನಲ್ಲಿ ಆಡುವುದು ಸುಲಭವಲ್ಲ. ಪ್ರತಿಯೊಂದು ಪಂದ್ಯ ಕೂಡ ಮುಖ್ಯ, ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಬೇಕು. ನಾವು ಇದಕ್ಕಿಂತ ಉತ್ತಮವಾಗಿ ಕಮ್​ಬ್ಯಾಕ್ ಮಾಡಿ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದು ಸ್ಯಾಮ್ಸನ್ ಮಾತು.

6 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ (35) ಮತ್ತು ಜೋಸ್ ಬಟ್ಲರ್ (95) ಬಿರುಸಿನ ಆರಂಭ ಒದಗಿಸಿದರು. ಬಳಿಕ ಸಂಜು ಸ್ಯಾಮ್ಸನ್ (ಅಜೇಯ 66) ಹಾಗೂ ಬಟ್ಲರ್ ಹೈದರಾಬಾದ್ ಬೌಲರ್​ಗಳ ಬೆಂಡೆತ್ತು ಅರ್ಧಶತಕ ಸಿಡಿಸಿದರು. ಆರ್​ಆರ್​ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ (35) ಮತ್ತು ಜೋಸ್ ಬಟ್ಲರ್ (95) ಬಿರುಸಿನ ಆರಂಭ ಒದಗಿಸಿದರು. ಬಳಿಕ ಸಂಜು ಸ್ಯಾಮ್ಸನ್ (ಅಜೇಯ 66) ಹಾಗೂ ಬಟ್ಲರ್ ಹೈದರಾಬಾದ್ ಬೌಲರ್​ಗಳ ಬೆಂಡೆತ್ತು ಅರ್ಧಶತಕ ಸಿಡಿಸಿದರು. ಆರ್​ಆರ್​ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

7 / 8
ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಪರ ಅನ್ಮೋಲ್​ಪ್ರೀತ್ ಸಿಂಗ್ (33), ಅಭಿಷೇಕ್ ಶರ್ಮಾ (55), ರಾಹುಲ್ ತ್ರಿಪಾಠಿ (47), ಹೆನ್ರಿಚ್ ಕ್ಲಾಸೆನ್ (26), ಗ್ಲೆನ್ ಪಿಲಿಪ್ಸ್ (25) ಹಾಗೂ ಅಬ್ದುಲ್ ಸಮದ್ (ಅಜೇಯ 17) ಅತ್ಯುತ್ತಮ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಎಸ್​ಆರ್​ಹೆಚ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಜಯ ಸಾಧಿಸಿತು.

ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಪರ ಅನ್ಮೋಲ್​ಪ್ರೀತ್ ಸಿಂಗ್ (33), ಅಭಿಷೇಕ್ ಶರ್ಮಾ (55), ರಾಹುಲ್ ತ್ರಿಪಾಠಿ (47), ಹೆನ್ರಿಚ್ ಕ್ಲಾಸೆನ್ (26), ಗ್ಲೆನ್ ಪಿಲಿಪ್ಸ್ (25) ಹಾಗೂ ಅಬ್ದುಲ್ ಸಮದ್ (ಅಜೇಯ 17) ಅತ್ಯುತ್ತಮ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಎಸ್​ಆರ್​ಹೆಚ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಜಯ ಸಾಧಿಸಿತು.

8 / 8
Follow us