ಕಾಡು ಪ್ರಾಣಿ ಹಾಗೂ ಬಾನಾಡಿಗಳಿಗೆ ಮನೆಯಿಂದ ನೀರು ಪೂರೈಸುತ್ತಿರುವ ಗ್ರಾಮಸ್ಥರು
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಕುಡಿಯಲು ನೀರು ಇಲ್ಲಿದೆ ಪ್ರಾಣಿ, ಪಕ್ಷಿ ಮತ್ತು ಮನುಷ್ಯರು ಪರದಾಡುತ್ತಿದ್ದಾರೆ. ನೀರು ಸಿಗದೆ ಪ್ರಾಣಿಗಳು ಜೀವ ಬಿಡುತ್ತಿವೆ. ಈ ನಡುವೆಯೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ್ ಹಾಗೂ ಹನಮಂತಪುರ ಗ್ರಾಮಸ್ಥರ ವಿನೂತನ ಪ್ರಕೃತಿ ಸೇವೆ ಮೆಚ್ಚುಗೆಗೆ ಕಾರಣವಾಗಿದೆ.
Updated on:Apr 14, 2024 | 11:58 AM

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಕುಡಿಯಲು ನೀರು ಇಲ್ಲಿದೆ ಪ್ರಾಣಿ, ಪಕ್ಷಿ ಮತ್ತು ಮನುಷ್ಯರು ಪರದಾಡುತ್ತಿದ್ದಾರೆ. ನೀರು ಸಿಗದೆ ಪ್ರಾಣಿಗಳು ಜೀವ ಬಿಡುತ್ತಿವೆ.

ಈ ನಡುವೆಯೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ್ ಹಾಗೂ ಹನಮಂತಪುರ ಗ್ರಾಮಸ್ಥರ ವಿನೂತನ ಪ್ರಕೃತಿ ಸೇವೆ ಮೆಚ್ಚುಗೆಗೆ ಕಾರಣವಾಗಿದೆ.

ಜೋಳದಾಳ್ ಹಾಗೂ ಹನಮಂತಪುರ ಗ್ರಾಮಸ್ಥರು ಕಾಡು ಪ್ರಾಣಿ ಹಾಗೂ ಬಾನಾಡಿಗಳಿಗೆ ಮನೆಯಿಂದ ನೀರು ಪೂರೈಸುತ್ತಿದ್ದಾರೆ.

ಈ ಎರಡೂ ಗ್ರಾಮದ ಹತ್ತಾರು ಜನ ಬಿಂದಿಗೆಯಲ್ಲಿ ನೀರು ತುಂಬಿಕೊಂಡು, ಕಾಡಿನೊಳಗೆ ಹೋಗಿ, ಪ್ರಾಣಿಗಳ ಬಾಯಾರಿಕೆ ನೀಗಿಸುತ್ತಿದ್ದಾರೆ.

ಜೋಳದಾಳ್ ಹಾಗೂ ಹನುಮಂತನಗರ ಗ್ರಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದ ಒಳಗೆ ಹೋಗಿ, ತಾವು ತೆಗೆದುಕೊಂಡು ಹೋಗಿದ್ದ ನೀರನ್ನು ಗ್ರಾಮಸ್ಥರು ಪ್ರಾಣಿಗಳು ನೀರು ಕುಡಿಯುವ ಹೊಂಡದಲ್ಲಿ ಹಾಕುತ್ತಾರೆ.

ವನ್ಯ ಜೀವಿಗಳಿಗೆ ನೀರು ಪೂರೈಕೆ ಮಾಡುತ್ತಿರುವುದಕ್ಕೆ, ಎರಡೂ ಗ್ರಾಮದ ಗ್ರಾಮಸ್ಥರಿಗೆ ಸಾರ್ವಜನನಿಕರು ಭೇಷ್ ಎದಿದದ್ದಾರೆ.
Published On - 11:46 am, Sun, 14 April 24



















