AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೋಟಗಾರಿಕೆ ಮೇಳದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ; ಸುಂದರ ಹೂಗಳು ನೋಡಿ ಮನಸೋತ ಹೆಂಗಳೆಯರು

ಬಾಗಲಕೋಟೆ ತೋಟಗಾರಿಕೆ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ ಕಾಲಿಟ್ಟರೆ ಹೂಗಳ ಅದ್ಬುತ ಲೋಕವೇ ದರೆಗಿಳಿದಂತಿತ್ತು. ಹಚ್ಚಹಸಿರಿನ ವಿಧ ವಿಧದ ಹಣ್ಣುಗಳ ಸಾಲು ಕಣ್ಮನ ಸೆಳೆಯುತ್ತಿತ್ತು. ಮನಸೂರೆಗೊಳ್ಳುವ ಸುಂದರ ಹೂಗಳಲ್ಲಿ ಅನುಭವ ಮಂಟಪ ಅರಳಿ ನಿಂತಿತ್ತು. ಸಿರಿದಾನ್ಯದಲ್ಲಿ ಬಸವಣ್ಣ‌ನ ಮಂದಹಾಸ ಎಲ್ಲರನ್ನು ಸೆಳೆದಿತ್ತು. ಎಲ್ಲ ಸುಂದರ ದೃಶ್ಯದ ಮುಂದೆ‌ ಹೆಂಗಳೆಯರ ಸೆಲ್ಫಿ ಆಟ ಜೋರಾಗಿತ್ತು. ತೋಟಗಾರಿಕೆ ಮೇಳದಲ್ಲಿ ‌ಕಂಡು‌ಬಂದ ಝಲಕ್ ಇಲ್ಲಿದೆ.

ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Feb 11, 2024 | 5:13 PM

Share
 ವಿಧ ವಿಧದ ಹಣ್ಣು, ತರಕಾರಿಗಳ ಸಾಲು. ನೋಡಿದರೆ ಬರಿ ನೋಡುತ್ತಾ ನಿಲ್ಲಲಾ ಎನ್ನುವಂತಹ ಹೂಗಳ ರಾಶಿ. ಹೂಗಳಲ್ಲಿ ಅರಳಿದ ಅನುಭವ ಮಂಟಪ, ಎತ್ತಿನ ಬಂಡಿಗೆ ಹೂಗಳ ಅಲಂಕಾರ, ಹೂಗಳಲ್ಲೇ ಕರ್ನಾಟಕ ನಕ್ಷೆ. ಫಲ ಪುಷ್ಪಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳತ್ತಿರುವ ತರುಣಿಯರು ಮಹಿಳೆಯರು. ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆ ತೋಟಗಾರಿಕೆ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ.

ವಿಧ ವಿಧದ ಹಣ್ಣು, ತರಕಾರಿಗಳ ಸಾಲು. ನೋಡಿದರೆ ಬರಿ ನೋಡುತ್ತಾ ನಿಲ್ಲಲಾ ಎನ್ನುವಂತಹ ಹೂಗಳ ರಾಶಿ. ಹೂಗಳಲ್ಲಿ ಅರಳಿದ ಅನುಭವ ಮಂಟಪ, ಎತ್ತಿನ ಬಂಡಿಗೆ ಹೂಗಳ ಅಲಂಕಾರ, ಹೂಗಳಲ್ಲೇ ಕರ್ನಾಟಕ ನಕ್ಷೆ. ಫಲ ಪುಷ್ಪಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳತ್ತಿರುವ ತರುಣಿಯರು ಮಹಿಳೆಯರು. ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆ ತೋಟಗಾರಿಕೆ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ.

1 / 8
ನಿನ್ನೆಯಿಂದ ಬಾಗಲಕೋಟೆ ತೋಟಗಾರಿಕೆ ವಿವಿ ವತಿಯಿಂದ ಮೂರು ದಿನಗಳ‌ ಕಾಲ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿರೋದು ಫಲಪುಷ್ಪ ಪ್ರದರ್ಶನ. ಈ ಫಲಪುಷ್ಪ ಪ್ರದರ್ಶನವನ್ನು ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ ಉದ್ಘಾಟನೆ ಮಾಡಿದರು.

ನಿನ್ನೆಯಿಂದ ಬಾಗಲಕೋಟೆ ತೋಟಗಾರಿಕೆ ವಿವಿ ವತಿಯಿಂದ ಮೂರು ದಿನಗಳ‌ ಕಾಲ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿರೋದು ಫಲಪುಷ್ಪ ಪ್ರದರ್ಶನ. ಈ ಫಲಪುಷ್ಪ ಪ್ರದರ್ಶನವನ್ನು ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ ಉದ್ಘಾಟನೆ ಮಾಡಿದರು.

2 / 8
ಮೇಳದಲ್ಲಿ ತರಹೇವಾರಿ ಪುಷ್ಪಗಳು ಹಣ್ಣು ತರಕಾರಿ ಎಲ್ಲರ ಕಣ್ಮನ ಸೆಳೆಯುತ್ತಿದ್ದವು. ಗುಲಾಬಿ ಹೂಗಳಲ್ಲೇ ಬಸವಣ್ಣನವರ ಕಾಲದ ಅನುಭವ ಮಂಟಪ ತಯಾರಿಸಲಾಗಿತ್ತು. ಜೊತೆಗೆ ಸಿರಿದಾನ್ಯದಲ್ಲಿ ಬಸವಣ್ಣನ ವರ ಮೂರ್ತಿ,ಹೂಗಳಲ್ಲಿ ಅಲಂಕಾರ‌ಮಾಡಿದ ಎತ್ತಿನ ಬಂಡಿ ,ಗುಲಾಬಿ ಹೂನಲ್ಲೇ ಅರಳಿದ ಕರ್ನಾಟಕ ನಕ್ಷರ ಫಲಪುಷ್ಪ‌ ಪ್ರದರ್ಶನದ ಆಕರ್ಷಣೀಯ ಚಿತ್ರಗಳಾಗಿದ್ದವು.

ಮೇಳದಲ್ಲಿ ತರಹೇವಾರಿ ಪುಷ್ಪಗಳು ಹಣ್ಣು ತರಕಾರಿ ಎಲ್ಲರ ಕಣ್ಮನ ಸೆಳೆಯುತ್ತಿದ್ದವು. ಗುಲಾಬಿ ಹೂಗಳಲ್ಲೇ ಬಸವಣ್ಣನವರ ಕಾಲದ ಅನುಭವ ಮಂಟಪ ತಯಾರಿಸಲಾಗಿತ್ತು. ಜೊತೆಗೆ ಸಿರಿದಾನ್ಯದಲ್ಲಿ ಬಸವಣ್ಣನ ವರ ಮೂರ್ತಿ,ಹೂಗಳಲ್ಲಿ ಅಲಂಕಾರ‌ಮಾಡಿದ ಎತ್ತಿನ ಬಂಡಿ ,ಗುಲಾಬಿ ಹೂನಲ್ಲೇ ಅರಳಿದ ಕರ್ನಾಟಕ ನಕ್ಷರ ಫಲಪುಷ್ಪ‌ ಪ್ರದರ್ಶನದ ಆಕರ್ಷಣೀಯ ಚಿತ್ರಗಳಾಗಿದ್ದವು.

3 / 8
ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಬಾಗಲಕೋಟೆ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಹೂ ಹಣ್ಣುಗಳು, ತರಕಾರಿಗಳು, ಸಿರಿದಾನ್ಯ ಕೃಷಿ ಬಗ್ಗೆ ಜಾಗೃತಿ ಪರಿಚಯ ಉದ್ದೇಶದಿಂದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಬಾಗಲಕೋಟೆ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಹೂ ಹಣ್ಣುಗಳು, ತರಕಾರಿಗಳು, ಸಿರಿದಾನ್ಯ ಕೃಷಿ ಬಗ್ಗೆ ಜಾಗೃತಿ ಪರಿಚಯ ಉದ್ದೇಶದಿಂದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

4 / 8
ಮೇಳದಲ್ಲಿ ಜರ್ಬೆರಾ, ಅಂತೋರಿಯಮ್, ಕಾರ್ನೆಶನ್, ಚೈನಾ ಎಸ್ಟರ್ , ಬರ್ಡರ್ ಪ್ಯಾರಾಡೈಸ್, ಆರ್ಕಿಡ್ಸ್, ಚೆಂಡು ಹೂ, ಗುಲಾಬಿ ಹೀಗೆ ಹತ್ತಾರೂ ವಿಧದ ಅಲಂಕಾರಿಕ ಹೂಗಳು ಫಲಪುಷ್ಪ ಪ್ರದರ್ಶನದಲ್ಲಿ ಸಮ್ಮಿಲನಗೊಂಡಿದ್ದವು. ಮಹಿಳೆಯರು ವಿದ್ಯಾರ್ಥಿನಿಯರು, ಹೂಗಳಿಂದ ನಿರ್ಮಾಣವಾದ ಕಲಾಕೃತಿಗಳ ಮುಂದರ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು.

ಮೇಳದಲ್ಲಿ ಜರ್ಬೆರಾ, ಅಂತೋರಿಯಮ್, ಕಾರ್ನೆಶನ್, ಚೈನಾ ಎಸ್ಟರ್ , ಬರ್ಡರ್ ಪ್ಯಾರಾಡೈಸ್, ಆರ್ಕಿಡ್ಸ್, ಚೆಂಡು ಹೂ, ಗುಲಾಬಿ ಹೀಗೆ ಹತ್ತಾರೂ ವಿಧದ ಅಲಂಕಾರಿಕ ಹೂಗಳು ಫಲಪುಷ್ಪ ಪ್ರದರ್ಶನದಲ್ಲಿ ಸಮ್ಮಿಲನಗೊಂಡಿದ್ದವು. ಮಹಿಳೆಯರು ವಿದ್ಯಾರ್ಥಿನಿಯರು, ಹೂಗಳಿಂದ ನಿರ್ಮಾಣವಾದ ಕಲಾಕೃತಿಗಳ ಮುಂದರ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು.

5 / 8
ಕಲರ್ ಫುಲ್ ರಂಗು ರಂಗಿನ ಹೂಗಳು ನೋಡುಗರನ್ನು ಆಕರ್ಷಿಸಿದರೆ, ಮಹಿಳೆಯರು ಯುವತಿಯರು ಹೂಗಳ ಅಂದ ನೋಡಿ ಸಂಭ್ರಮಪಟ್ಟರು. 50 ಸಾವಿರ ಗುಲಾಬಿ ಹೂಗಳಿಂದ ಅರಳಿದ ಅನುಭವ ಮಂಟಪ, ಸಿರಿದಾನ್ಯದಲ್ಲಿ ತಯಾರಾದ ಬಸವಣ್ಣನ ಮೂರ್ತಿ‌ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ರು.

ಕಲರ್ ಫುಲ್ ರಂಗು ರಂಗಿನ ಹೂಗಳು ನೋಡುಗರನ್ನು ಆಕರ್ಷಿಸಿದರೆ, ಮಹಿಳೆಯರು ಯುವತಿಯರು ಹೂಗಳ ಅಂದ ನೋಡಿ ಸಂಭ್ರಮಪಟ್ಟರು. 50 ಸಾವಿರ ಗುಲಾಬಿ ಹೂಗಳಿಂದ ಅರಳಿದ ಅನುಭವ ಮಂಟಪ, ಸಿರಿದಾನ್ಯದಲ್ಲಿ ತಯಾರಾದ ಬಸವಣ್ಣನ ಮೂರ್ತಿ‌ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ರು.

6 / 8
 ಇದಲ್ಲದೇ ಫಲ ಪುಷ್ಪ ಪ್ರದರ್ಶನದಲ್ಲಿ, ಪಪ್ಪಾಯಿ, ಪೇರು,ಚಿಕ್ಕು,ಪೈನಾಪಲ್, ರಾಮ್ ಫಲ, ಕಲ್ಲಂಗಡಿ, ಬಾಳೆ ಹಣ್ಣು,ದ್ರಾಕ್ಷಿ ಸೇರಿ ಹಲವು ವಿಧದ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ ಹೀರೆಕಾಯಿ, ನುಗ್ಗೆ, ಮೆಣಸು,ಟಮೋಟೊ, ಸೇರಿದಂತೆ ವಿವಿಧ ತರಕಾರಿ ಬೆಳೆಗಳ ಪ್ರದರ್ಶನ, ಎಲ್ಲವನ್ನು ನೋಡೋದಕ್ಕೆ ಜನರು ,ರೈತರು, ವಿದ್ಯಾರ್ಥಿಗಳು,ಸಾರ್ವಜನಿಕರು ಬೆಳಿಗ್ಗೆಯಿಂದ ಆಗಮಿಸಿದ್ದರು.

ಇದಲ್ಲದೇ ಫಲ ಪುಷ್ಪ ಪ್ರದರ್ಶನದಲ್ಲಿ, ಪಪ್ಪಾಯಿ, ಪೇರು,ಚಿಕ್ಕು,ಪೈನಾಪಲ್, ರಾಮ್ ಫಲ, ಕಲ್ಲಂಗಡಿ, ಬಾಳೆ ಹಣ್ಣು,ದ್ರಾಕ್ಷಿ ಸೇರಿ ಹಲವು ವಿಧದ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ ಹೀರೆಕಾಯಿ, ನುಗ್ಗೆ, ಮೆಣಸು,ಟಮೋಟೊ, ಸೇರಿದಂತೆ ವಿವಿಧ ತರಕಾರಿ ಬೆಳೆಗಳ ಪ್ರದರ್ಶನ, ಎಲ್ಲವನ್ನು ನೋಡೋದಕ್ಕೆ ಜನರು ,ರೈತರು, ವಿದ್ಯಾರ್ಥಿಗಳು,ಸಾರ್ವಜನಿಕರು ಬೆಳಿಗ್ಗೆಯಿಂದ ಆಗಮಿಸಿದ್ದರು.

7 / 8
ವಿವಿ ಸಿಬ್ಬಂಧಿಯಿಂದ ಉಪಯುಕ್ತ ಮಾಹಿತಿ ಪಡೆದುಕೊಂಡ್ರು. ಇನ್ನು ಈ ತೋಟಗಾರಿಕೆ ಮೇಳ ಕೇವಲ ನೋಡೋದಕ್ಕೆ ಮಾತ್ರ ಸೀಮಿತವಾಗದೆ ತೋಟಗಾರಿಕೆ ಬೆಳೆ ಹಾಗೂ ಹೂ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದರಿಂದ ವಿದ್ಯಾರ್ಥಿಗಳು, ರೈತರು ಎಲ್ಲರೂ ಬಂದು ವೀಕ್ಷಿಸಿ ಎಂಜಾಯ್ ಮಾಡೋದರ ಜೊತೆಗೆ ಉಪಯುಕ್ತ ಮಾಹಿತಿ ಪಡೆದುಕೊಂಡರು. ಒಟ್ಟಿನಲ್ಲಿ ತೋಟಗಾರಿಕಾ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಎಲ್ಲರನ್ನು ಸೆಳೆಯುತ್ತಿದ್ದು ಮೇಳಕ್ಕೆ ವಿಶೇಷ ಮೆರುಗು ನೀಡಿದೆ.

ವಿವಿ ಸಿಬ್ಬಂಧಿಯಿಂದ ಉಪಯುಕ್ತ ಮಾಹಿತಿ ಪಡೆದುಕೊಂಡ್ರು. ಇನ್ನು ಈ ತೋಟಗಾರಿಕೆ ಮೇಳ ಕೇವಲ ನೋಡೋದಕ್ಕೆ ಮಾತ್ರ ಸೀಮಿತವಾಗದೆ ತೋಟಗಾರಿಕೆ ಬೆಳೆ ಹಾಗೂ ಹೂ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದರಿಂದ ವಿದ್ಯಾರ್ಥಿಗಳು, ರೈತರು ಎಲ್ಲರೂ ಬಂದು ವೀಕ್ಷಿಸಿ ಎಂಜಾಯ್ ಮಾಡೋದರ ಜೊತೆಗೆ ಉಪಯುಕ್ತ ಮಾಹಿತಿ ಪಡೆದುಕೊಂಡರು. ಒಟ್ಟಿನಲ್ಲಿ ತೋಟಗಾರಿಕಾ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಎಲ್ಲರನ್ನು ಸೆಳೆಯುತ್ತಿದ್ದು ಮೇಳಕ್ಕೆ ವಿಶೇಷ ಮೆರುಗು ನೀಡಿದೆ.

8 / 8
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ