Bigg Boss: ಬಿಗ್ ಬಾಸ್ ಮೂವರು ಸ್ಪರ್ಧಿಗಳಿಗೆ ಭರ್ಜರಿ ಸರ್​ಪ್ರೈಸ್ ಕೊಟ್ಟ ಕಲರ್ಸ್

Updated on: Jan 25, 2025 | 7:20 PM

ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಹಂತ ತಲುಪಿದೆ. ಹೀಗಿರುವಾಗಲೇ ದೊಡ್ಮನೆಯಲ್ಲಿ ಇರುವ ಆರು ಸ್ಪರ್ಧಿಗಳ ಪೈಕಿ ಮೂವರಿಗೆ ದೊಡ್ಡ ಸರ್ ಪ್ರೈಸ್ ಒಂದು ಸಿಕ್ಕಿದೆ. ಅಷ್ಟಕ್ಕೂ ಏನು ಆ ಸರ್ ಪ್ರೈಸ್? ಮೂವರು ಸ್ಪರ್ಧಿಗಳು ಮಾತ್ರ ಹಾರ ಹಾಕಿ ನಿಂತಿದ್ದು ಏಕೆ?

1 / 6
ಕಲರ್ಸ್ ಕನ್ನಡದಲ್ಲಿ ಶೀಘ್ರವೇ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಈ ರಿಯಾಲಿಟಿ ಶೋಗೆ ಬಿಗ್ ಬಾಸ್ ಮನೆಯ ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿ ಆಯ್ಕೆ ಆದ ಸ್ಪರ್ಧಿಗಳಿಗೆ ಹಾರ ಹಾಕಲಾಗಿದೆ.

ಕಲರ್ಸ್ ಕನ್ನಡದಲ್ಲಿ ಶೀಘ್ರವೇ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಈ ರಿಯಾಲಿಟಿ ಶೋಗೆ ಬಿಗ್ ಬಾಸ್ ಮನೆಯ ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿ ಆಯ್ಕೆ ಆದ ಸ್ಪರ್ಧಿಗಳಿಗೆ ಹಾರ ಹಾಕಲಾಗಿದೆ.

2 / 6

ಮೊದಲು ರಜತ್ ಅವರಿಗೆ ಶೋಭಾ ಶೆಟ್ಟಿ ಅವರು ಹಾರ ಹಾಕಿದರು. ಈ ಮೂಲಕ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಅವರನ್ನು ಆಯ್ಕೆ ಮಾಡಿದರು. ರಜತ್​ ಅವರಿಗೆ ರಿಯಾಲಿಟಿ ಶೋ ಆಡಿದ ಅನುಭವ ಇದೆ. ಹೊಸ ಶೋಗೆ ಆಯ್ಕೆ ಆದ ವಿಚಾರ ಅವರಿಗೆ ಖುಷಿ ಕೊಟ್ಟಿದೆ.

3 / 6

ಭವ್ಯಾ ಗೌಡ ಅವರು ಕೂಡ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಆಯ್ಕೆ ಆಗಿದ್ದಾರೆ. ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಇದ್ದಾರೆ. ಅವರಿಗೆ ಈ ಆಫರ್ ಸಿಕ್ಕಿದ್ದಕ್ಕೆ ಭರ್ಜರಿ ಖುಷಿ ಇದೆ. ಅವರು ಸಂತಸ ಹೊರಹಾಕಿದ್ದಾರೆ.

4 / 6

ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟಾಸ್ಕ್ ಆಡಿದ್ದಾರೆ. ಮೂರು ಬಾರಿ ಕ್ಯಾಪ್ಟನ್ ಕೂಡ ಆದರು. ಈ ಮೂಲಕ ಸ್ಟ್ರ್ರಾಂಗ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಅವರು ಉತ್ತಮವಾಗಿ ಆಡಬಹುದು.

5 / 6

ಹನುಮಂತ ಅವರು ದೊಡ್ಮನೆಯಲ್ಲಿ ಗಮನ ಸೆಳೆದರು. ಜೀ ಕನ್ನಡದಲ್ಲಿ ರಿಯಾಲಿಟಿ ಶೋ ಮಾಡಿದ್ದ ಅವರು ಬಿಗ್ ಬಾಸ್ ಮನೆಗೆ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಈಗ ಮತ್ತೊಂದು ಆಫರ್ ಸಿಕ್ಕಿದೆ.

6 / 6

‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಹನುಮಂತ ಅವರು ಬರಲಿದ್ದಾರೆ. ಧನರಾಜ್ ಅವರು ಹನುಮಂತನಿಗೆ ಮಾಲೆ ಹಾಕಿ ಹೊಸ ರಿಯಾಲಿಟಿ ಶೋಗೆ ಸ್ವಾಗತಿಸಿದರು ಅನ್ನೋದು ವಿಶೇಷ.

Loading...
Unable to load recommendations.
Follow Us