AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indus River: ಸಿಂಧೂ ನದಿಯ ಹುಟ್ಟು ಎಲ್ಲಿ? ಇದರ ಉದ್ದ ಎಷ್ಟು ಗೊತ್ತೇ? ಇಲ್ಲಿದೆ ಮಾಹಿತಿ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಪ್ರವಾಸಿಗರ ಮೇಲಿನ ಪಾಕ್‌ ಮೂಲದ ಉಗ್ರರ ದಾಳಿಯ ಪ್ರತಿಯಾಗಿ ಭಾರತವು 1960 ರ ಸಿಂಧು ಜಲ ಒಪ್ಪಂದವನ್ನು ತಡೆಹಿಡಿದು, ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಹರಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಮತ್ತು ಪಾಕಿಸ್ತಾನದ ಮೂಲಕ ಹರಿದು ಹೋಗಿ ಅರಬ್ಬಿ ಸಮುದ್ರವನ್ನು ಸೇರುವ ಸಿಂಧೂ ನದಿಯನ್ನು ದಕ್ಷಿಣ ಏಷ್ಯಾದ ಜೀವನಾಡಿ ಎಂದೇ ಪರಿಗಣಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಈ ನದಿಯ ಹುಟ್ಟು ಎಲ್ಲಿ? ಈ ನದಿ ಎಷ್ಟು ಉದ್ದ ಇದೆ ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾಲಾಶ್ರೀ ಅಂಚನ್​
|

Updated on: Apr 26, 2025 | 4:41 PM

Share
ಇಂಡಸ್‌ ರಿವರ್‌ ಅಂತಾನೂ ಕರೆಯುವ ಸಿಂಧೂ ನದಿಯ ಮೂಲವನ್ನು ನೋಡುವುದಾದರೆ, ಟಿಬೆಟ್‌ನ ಮಾನಸ ಸರೋವರದ ಬಳಿಯ ಸಿನ್-ಕಾ-ಬಾಬ್ ಹೊಳೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 5,182 ಮೀಟರ್‌  ಎತ್ತರದಲ್ಲಿ ಹುಟ್ಟುವ ಸಿಂಧೂ ನದಿ ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಹರಿದು ಹೋಗಿ ಪಾಕಿಸ್ತಾನದ ಕರಾಚಿ ನದಿ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಇಂಡಸ್‌ ರಿವರ್‌ ಅಂತಾನೂ ಕರೆಯುವ ಸಿಂಧೂ ನದಿಯ ಮೂಲವನ್ನು ನೋಡುವುದಾದರೆ, ಟಿಬೆಟ್‌ನ ಮಾನಸ ಸರೋವರದ ಬಳಿಯ ಸಿನ್-ಕಾ-ಬಾಬ್ ಹೊಳೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 5,182 ಮೀಟರ್‌ ಎತ್ತರದಲ್ಲಿ ಹುಟ್ಟುವ ಸಿಂಧೂ ನದಿ ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಹರಿದು ಹೋಗಿ ಪಾಕಿಸ್ತಾನದ ಕರಾಚಿ ನದಿ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

1 / 6
ಏಷ್ಯಾದ ಅತಿ ಉದ್ದದ ನದಿಗಳಲ್ಲಿ ಒಂದಾದ ಸಿಂಧೂ ನದಿ ಪ್ರದೇಶವು ಚೀನಾ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನಗಳೊಂದಿಗೆ ಹಂಚಿಹೋಗಿದೆ. ಅದರಲ್ಲೂ ಶೇ. 60% ರಷ್ಟು ಈ ನದಿ ಪ್ರದೇಶ ಪಾಕಿಸ್ತಾನದಲ್ಲಿಯೇ ಇದ್ದು, ಇಲ್ಲಿನ ಹಲವು ಪ್ರಾಂತ್ಯಗಳ ಕೃಷಿ, ಕೈಗಾರಿಕೆ ಆರ್ಥಿಕ ಚಟುವಟಿಕೆಗಳಿಗೆ ಸಿಂಧೂ ನದಿಯೇ ಮೂಲವಾಗಿದೆ. ಪಾಕಿಸ್ತಾನದ ಆರ್ಥಿಕತೆಗೆ ಆಧಾರವಾಗಿರುವ ಏಕೈಕ ನದಿಯಾಗಿರುವ ಇದನ್ನು ಪಾಕಿಸ್ತಾನದ ಜೀವನಾಡಿ ಎಂದೇ ಕರೆಯಲಾಗುತ್ತದೆ.

ಏಷ್ಯಾದ ಅತಿ ಉದ್ದದ ನದಿಗಳಲ್ಲಿ ಒಂದಾದ ಸಿಂಧೂ ನದಿ ಪ್ರದೇಶವು ಚೀನಾ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನಗಳೊಂದಿಗೆ ಹಂಚಿಹೋಗಿದೆ. ಅದರಲ್ಲೂ ಶೇ. 60% ರಷ್ಟು ಈ ನದಿ ಪ್ರದೇಶ ಪಾಕಿಸ್ತಾನದಲ್ಲಿಯೇ ಇದ್ದು, ಇಲ್ಲಿನ ಹಲವು ಪ್ರಾಂತ್ಯಗಳ ಕೃಷಿ, ಕೈಗಾರಿಕೆ ಆರ್ಥಿಕ ಚಟುವಟಿಕೆಗಳಿಗೆ ಸಿಂಧೂ ನದಿಯೇ ಮೂಲವಾಗಿದೆ. ಪಾಕಿಸ್ತಾನದ ಆರ್ಥಿಕತೆಗೆ ಆಧಾರವಾಗಿರುವ ಏಕೈಕ ನದಿಯಾಗಿರುವ ಇದನ್ನು ಪಾಕಿಸ್ತಾನದ ಜೀವನಾಡಿ ಎಂದೇ ಕರೆಯಲಾಗುತ್ತದೆ.

2 / 6
ಸಿಂಧೂ ನದಿಯ ಉದ್ದವನ್ನು ನೋಡುವುದಾದರೆ ಈ  ನದಿಯ ವಿಸ್ತೀರ್ಣ ಸುಮಾರು 11,65,000 ಚದರ ಕಿಲೋಮೀಟರ್‌ಗಳಲ್ಲಿ ಹರಡಿದೆ. ಮತ್ತು ಈ ನದಿಯ ಒಟ್ಟು ಉದ್ದ 3,180 ಕಿ.ಮೀ. ಝೀಲಂ, ಚೀನಬ್‌, ರಾವಿ, ಬಿಯಾಸ್‌, ಸಟ್ಲೆಜ್ ಈ ಐದು ನದಿಗಳು ಸಿಂಧೂ ನದಿಯ ಪ್ರಮುಖ ಉಪನದಿಗಳಾಗಿದ್ದು, ಪಾಕಿಸ್ತಾನದ ಶೇ 92% ರಷ್ಟು ಭೂಮಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಆರ್ಥಿಕತೆಗೆ ಸಿಂಧೂ ನದಿ  ಏಕೈಕ ಆಧಾರವಾಗಿದೆ.

ಸಿಂಧೂ ನದಿಯ ಉದ್ದವನ್ನು ನೋಡುವುದಾದರೆ ಈ ನದಿಯ ವಿಸ್ತೀರ್ಣ ಸುಮಾರು 11,65,000 ಚದರ ಕಿಲೋಮೀಟರ್‌ಗಳಲ್ಲಿ ಹರಡಿದೆ. ಮತ್ತು ಈ ನದಿಯ ಒಟ್ಟು ಉದ್ದ 3,180 ಕಿ.ಮೀ. ಝೀಲಂ, ಚೀನಬ್‌, ರಾವಿ, ಬಿಯಾಸ್‌, ಸಟ್ಲೆಜ್ ಈ ಐದು ನದಿಗಳು ಸಿಂಧೂ ನದಿಯ ಪ್ರಮುಖ ಉಪನದಿಗಳಾಗಿದ್ದು, ಪಾಕಿಸ್ತಾನದ ಶೇ 92% ರಷ್ಟು ಭೂಮಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಆರ್ಥಿಕತೆಗೆ ಸಿಂಧೂ ನದಿ ಏಕೈಕ ಆಧಾರವಾಗಿದೆ.

3 / 6
ಸುಮಾರು 3,200 ಕಿಲೋಮೀಟರ್ ಸಿಂಧೂ ನದಿ, ಭಾರತದಲ್ಲಿ ಸುಮಾರು 800 ಕಿ.ಮೀ ಗಳಷ್ಟು ಮಾತ್ರ ಹರಿಯುತ್ತದೆ.  ಈ ನದಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮೂಲಕ ಹಾದುಹೋಗುತ್ತದೆ. ಆದಾಗ್ಯೂ, ವಾಸ್ತವದಲ್ಲಿ ಈ ನದಿಯ ಒಂದು ಸಣ್ಣ ಭಾಗ ಮಾತ್ರ ಭಾರತದ ನಿಯಂತ್ರಣದ್ದು, ಈ ನದಿ ಪ್ರದೇಶ ಶೇ 60% ರಷ್ಟು ಪಾಕಿಸ್ತಾನದಲ್ಲಿದೆ.

ಸುಮಾರು 3,200 ಕಿಲೋಮೀಟರ್ ಸಿಂಧೂ ನದಿ, ಭಾರತದಲ್ಲಿ ಸುಮಾರು 800 ಕಿ.ಮೀ ಗಳಷ್ಟು ಮಾತ್ರ ಹರಿಯುತ್ತದೆ. ಈ ನದಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮೂಲಕ ಹಾದುಹೋಗುತ್ತದೆ. ಆದಾಗ್ಯೂ, ವಾಸ್ತವದಲ್ಲಿ ಈ ನದಿಯ ಒಂದು ಸಣ್ಣ ಭಾಗ ಮಾತ್ರ ಭಾರತದ ನಿಯಂತ್ರಣದ್ದು, ಈ ನದಿ ಪ್ರದೇಶ ಶೇ 60% ರಷ್ಟು ಪಾಕಿಸ್ತಾನದಲ್ಲಿದೆ.

4 / 6
ಸಿಂಧೂ ನದಿ ಮತ್ತು ಅದರ ಉಪನದಿಗಳ ಮೇಲೆ ಹಲವಾರು  ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಿದ್ಯುತ್ ಉತ್ಪಾದಿಸುವ ಹಲವಾರು ದೊಡ್ಡ ಯೋಜನೆಗಳು ಸೇರಿವೆ. ಭಾರತದಲ್ಲಿ ಸಟ್ಲೆಜ್ ನದಿಯ ಮೇಲಿನ ಭಾಕ್ರಾ ಅಣೆಕಟ್ಟು  ಮತ್ತು ಬಿಯಾಸ್ ನದಿಯ ಮೇಲೆ ಪಾಂಡೋಹ್ ಅಣೆಕಟ್ಟು, ಚೆನಾಬ್‌ ನದಿಯ ಮೇಲೆ ಬಾಗ್ಲಿಹಾರ್ ಮತ್ತು ದುಲ್ಹಸ್ತಿ ಅಣೆಕಟ್ಟು, ಝೀಲಂ ನದಿಯ ಮೇಲೆ ಉರಿ ಮತ್ತು ಕಿಶನ್‌ಗಂಗಾ ಯೋಜನೆಯನ್ನು ನಿರ್ಮಿಸಲಾಗಿದೆ.

ಸಿಂಧೂ ನದಿ ಮತ್ತು ಅದರ ಉಪನದಿಗಳ ಮೇಲೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಿದ್ಯುತ್ ಉತ್ಪಾದಿಸುವ ಹಲವಾರು ದೊಡ್ಡ ಯೋಜನೆಗಳು ಸೇರಿವೆ. ಭಾರತದಲ್ಲಿ ಸಟ್ಲೆಜ್ ನದಿಯ ಮೇಲಿನ ಭಾಕ್ರಾ ಅಣೆಕಟ್ಟು ಮತ್ತು ಬಿಯಾಸ್ ನದಿಯ ಮೇಲೆ ಪಾಂಡೋಹ್ ಅಣೆಕಟ್ಟು, ಚೆನಾಬ್‌ ನದಿಯ ಮೇಲೆ ಬಾಗ್ಲಿಹಾರ್ ಮತ್ತು ದುಲ್ಹಸ್ತಿ ಅಣೆಕಟ್ಟು, ಝೀಲಂ ನದಿಯ ಮೇಲೆ ಉರಿ ಮತ್ತು ಕಿಶನ್‌ಗಂಗಾ ಯೋಜನೆಯನ್ನು ನಿರ್ಮಿಸಲಾಗಿದೆ.

5 / 6
ಪಾಕಿಸ್ತಾನದಲ್ಲಿ, ಸಿಂಧೂ ನದಿಯ ಮೇಲಿನ ತುರ್ಬೆಲಾ ಅಣೆಕಟ್ಟು, ಝೀಲಂ ನದಿಯಲ್ಲಿ ಮಂಗ್ಲಾ ಅಣೆಕಟ್ಟು ಮತ್ತು  ನೀಲಂ-ಝೀಲಂ ಯೋಜನೆಯನ್ನು ಸ್ಥಾಪಿಸಲಾಗಿದೆ. ಈ ಎಲ್ಲಾ ಅಣೆಕಟ್ಟುಗಳು ಭಾರತ ಮತ್ತು ಪಾಕಿಸ್ತಾನದ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇದೀಗ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಯದಂತೆ ತಡೆ ಹಿಡಿಲು ಭಾರತ ಸರಕಾರ ಮುಂದಾಗಿದೆ.

ಪಾಕಿಸ್ತಾನದಲ್ಲಿ, ಸಿಂಧೂ ನದಿಯ ಮೇಲಿನ ತುರ್ಬೆಲಾ ಅಣೆಕಟ್ಟು, ಝೀಲಂ ನದಿಯಲ್ಲಿ ಮಂಗ್ಲಾ ಅಣೆಕಟ್ಟು ಮತ್ತು ನೀಲಂ-ಝೀಲಂ ಯೋಜನೆಯನ್ನು ಸ್ಥಾಪಿಸಲಾಗಿದೆ. ಈ ಎಲ್ಲಾ ಅಣೆಕಟ್ಟುಗಳು ಭಾರತ ಮತ್ತು ಪಾಕಿಸ್ತಾನದ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇದೀಗ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಯದಂತೆ ತಡೆ ಹಿಡಿಲು ಭಾರತ ಸರಕಾರ ಮುಂದಾಗಿದೆ.

6 / 6
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ