‘ಎಂ.ಜೆ. ಪ್ರೊಡಕ್ಷನ್’ ನಿರ್ಮಾಣ ಸಂಸ್ಥೆಗೆ ಶುಭ ಕೋರಿದ ಸಪ್ತಮಿ ಗೌಡ, ಶರಣ್​; ಏನಿದರ ವಿಶೇಷತೆ?

Updated on: Mar 14, 2023 | 9:12 PM

ನಟಿ ಸಪ್ತಮಿ ಗೌಡ ಮತ್ತು ನಟ ಶರಣ್​ ಅವರು ‘ಎಂ.ಜೆ. ಪ್ರೊಡಕ್ಷನ್’ಗೆ ಶುಭ ಕೋರಿದ್ದಾರೆ. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದು ಸಪ್ತಮಿ ಗೌಡ ಅಭಿಪ್ರಾಯಪಟ್ಟಿದ್ದಾರೆ.

1 / 5
ಜಿಗಣಿ-ಆನೇಕಲ್ ರಸ್ತೆಯಲ್ಲಿರುವ ಎಂ.ಜೆ. ಅವ್ಯಾನಾ ರೆಸಾರ್ಟ್​ನಲ್ಲಿ ಅನಿಲ್ ಕುಮಾರ್ ಅವರು ‘ಎಂ.ಜೆ. ಪ್ರೊಡಕ್ಷನ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್, ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ಮುಂತಾದವರು ಇದನ್ನು ಉದ್ಘಾಟಿಸಿದ್ದಾರೆ.

ಜಿಗಣಿ-ಆನೇಕಲ್ ರಸ್ತೆಯಲ್ಲಿರುವ ಎಂ.ಜೆ. ಅವ್ಯಾನಾ ರೆಸಾರ್ಟ್​ನಲ್ಲಿ ಅನಿಲ್ ಕುಮಾರ್ ಅವರು ‘ಎಂ.ಜೆ. ಪ್ರೊಡಕ್ಷನ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್, ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ಮುಂತಾದವರು ಇದನ್ನು ಉದ್ಘಾಟಿಸಿದ್ದಾರೆ.

2 / 5
‘ಎಂ.ಜೆ. ಪ್ರೊಡಕ್ಷನ್’ ಉದ್ಘಾಟನೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಿರ್ದೇಶಕ ಹರಿ ಸಂತು,‌ ಮುಖೇಶ್ ಕುಮಾರ್, ಸತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಕೂಡ ಭಾಗಿ ಆಗಿದ್ದರು.

‘ಎಂ.ಜೆ. ಪ್ರೊಡಕ್ಷನ್’ ಉದ್ಘಾಟನೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಿರ್ದೇಶಕ ಹರಿ ಸಂತು,‌ ಮುಖೇಶ್ ಕುಮಾರ್, ಸತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಕೂಡ ಭಾಗಿ ಆಗಿದ್ದರು.

3 / 5
ಅನಿಲ್ ಕುಮಾರ್ ಅವರು ಮೂಲತಃ ಕೇರಳದವರು. ಮಲಯಾಳಂನಲ್ಲಿ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗ ‘ಎಂ.ಜೆ. ಪ್ರೊಡಕ್ಷನ್’ ಮೂಲಕ ಕನ್ನಡದಲ್ಲೂ ಸದಭಿರುಚಿಯ ಚಿತ್ರಗಳನ್ನು ಸದ್ಯದಲ್ಲೇ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಅನಿಲ್ ಕುಮಾರ್ ಅವರು ಮೂಲತಃ ಕೇರಳದವರು. ಮಲಯಾಳಂನಲ್ಲಿ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗ ‘ಎಂ.ಜೆ. ಪ್ರೊಡಕ್ಷನ್’ ಮೂಲಕ ಕನ್ನಡದಲ್ಲೂ ಸದಭಿರುಚಿಯ ಚಿತ್ರಗಳನ್ನು ಸದ್ಯದಲ್ಲೇ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದ್ದಾರೆ.

4 / 5
‘ಎಂ.ಜೆ. ಪ್ರೊಡಕ್ಷನ್’ನಲ್ಲಿ ಒಂದು ಸಿನಿಮಾ ಶೂಟಿಂಗ್​ಗೆ ಬೇಕಾದ ಎಲ್ಲ ಅನುಕೂಲಗಳು ಇವೆ. ಸಭಾಂಗಣ, ಜಲಪಾತ, ಕ್ರಿಕೆಟ್​ ಮೈದಾನ ಮುಂತಾದ ಲೊಕೇಷನ್​ಗಳಿವೆ. ಇದನ್ನು ಕನ್ನಡ ಚಿತ್ರರಂಗ ಉಪಯೋಗಿಸಿಕೊಳ್ಳಬೇಕು ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

‘ಎಂ.ಜೆ. ಪ್ರೊಡಕ್ಷನ್’ನಲ್ಲಿ ಒಂದು ಸಿನಿಮಾ ಶೂಟಿಂಗ್​ಗೆ ಬೇಕಾದ ಎಲ್ಲ ಅನುಕೂಲಗಳು ಇವೆ. ಸಭಾಂಗಣ, ಜಲಪಾತ, ಕ್ರಿಕೆಟ್​ ಮೈದಾನ ಮುಂತಾದ ಲೊಕೇಷನ್​ಗಳಿವೆ. ಇದನ್ನು ಕನ್ನಡ ಚಿತ್ರರಂಗ ಉಪಯೋಗಿಸಿಕೊಳ್ಳಬೇಕು ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

5 / 5
ನಟಿ ಸಪ್ತಮಿ ಗೌಡ ಮತ್ತು ನಟ ಶರಣ್​ ಅವರು ‘ಎಂ.ಜೆ. ಪ್ರೊಡಕ್ಷನ್’ಗೆ ಶುಭ ಕೋರಿದ್ದಾರೆ. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದು ಸಪ್ತಮಿ ಗೌಡ ಅಭಿಪ್ರಾಯಪಟ್ಟಿದ್ದಾರೆ.

ನಟಿ ಸಪ್ತಮಿ ಗೌಡ ಮತ್ತು ನಟ ಶರಣ್​ ಅವರು ‘ಎಂ.ಜೆ. ಪ್ರೊಡಕ್ಷನ್’ಗೆ ಶುಭ ಕೋರಿದ್ದಾರೆ. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದು ಸಪ್ತಮಿ ಗೌಡ ಅಭಿಪ್ರಾಯಪಟ್ಟಿದ್ದಾರೆ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us