AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಕ್ಕೊಮ್ಮೆ ಕೋಲಾರದಲ್ಲಿ ಸೃಷ್ಟಿಯಾಗುವ ಮಂಜಿನ ಲೋಕ ಹೇಗಿರುತ್ತೆ? ಇಲ್ಲಿದೆ ಝಲಕ್

ಕೋಲಾರದಲ್ಲಿ ಈ ವರ್ಷ ಅನುಭವಿಸುತ್ತಿರುವ ಅಸಾಮಾನ್ಯ ದಟ್ಟ ಮಂಜು, ಮಲೆನಾಡಿನ ವಾತಾವರಣವನ್ನು ನೆನಪಿಸುತ್ತದೆ. ಬರಗಾಲದ ನಡುವೆ ಈ ಮಂಜು ಅದ್ಭುತ ದೃಶ್ಯಗಳನ್ನು ಸೃಷ್ಟಿಸಿದ್ದರೂ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಾಹನ ಸಂಚಾರದ ಮೇಲೂ ಇದರ ಪ್ರಭಾವಬೀರಿದೆ. ವರ್ಷಕ್ಕೊಮ್ಮೆ ಈ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Jan 19, 2025 | 4:37 PM

Share
ಅದು ಚುಮು ಚುಮು ಚಳಿಯ ಜೊತೆಗೆ ಸುಂದರ ಲೋಕವನ್ನು ಸೃಷ್ಟಿ ಮಾಡಲು ಧರೆಗಿಳಿದು ಬಂದಿದ್ದ ಇಬ್ಬನಿ, ಸದಾ ಬಯಲು ಸೀಮೆಯಲ್ಲಿ ಬರ ಹಾಗೂ ಬಿಸಿಲಿನ ತಾಪಕ್ಕೆ ಬಳಲುವ ಜನರಿಗೆ ಮಲೆನಾಡಿನ ಅನುಭವವನ್ನು ನೀಡುವ ಸಲುವಾಗಿಯೇ ಸೃಷ್ಟಿಯಾಗಿರುವ ಮಂಜಿನಲೋಕ, ಕೋಲಾರದಲ್ಲಿ ವರ್ಷಕ್ಕೊಮ್ಮೆ ಸೃಷ್ಟಿಯಾಗಿರುವ ಮಂಜಿನ ಲೋಕ ಹೇಗಿರುತ್ತೆ ಇಲ್ಲಿದೆ ನೋಡಿ.

ಅದು ಚುಮು ಚುಮು ಚಳಿಯ ಜೊತೆಗೆ ಸುಂದರ ಲೋಕವನ್ನು ಸೃಷ್ಟಿ ಮಾಡಲು ಧರೆಗಿಳಿದು ಬಂದಿದ್ದ ಇಬ್ಬನಿ, ಸದಾ ಬಯಲು ಸೀಮೆಯಲ್ಲಿ ಬರ ಹಾಗೂ ಬಿಸಿಲಿನ ತಾಪಕ್ಕೆ ಬಳಲುವ ಜನರಿಗೆ ಮಲೆನಾಡಿನ ಅನುಭವವನ್ನು ನೀಡುವ ಸಲುವಾಗಿಯೇ ಸೃಷ್ಟಿಯಾಗಿರುವ ಮಂಜಿನಲೋಕ, ಕೋಲಾರದಲ್ಲಿ ವರ್ಷಕ್ಕೊಮ್ಮೆ ಸೃಷ್ಟಿಯಾಗಿರುವ ಮಂಜಿನ ಲೋಕ ಹೇಗಿರುತ್ತೆ ಇಲ್ಲಿದೆ ನೋಡಿ.

1 / 6
ಮಳೆರಾಯನ ಶಾಪಕ್ಕೆ ಸಿಲುಕಿ ಈ ವರ್ಷ ಬರಗಾಲಕ್ಕೆ ತುತ್ತಾಗಿರುವ ಕೋಲಾರದಲ್ಲಿ ಮಳೆ ಇಲ್ಲದೆ ಕೇವಲ ಮಂಜಿನ ಮಳೆ ನೋಡಿ ಖುಷಿ ಪಡುವಂತಾಗಿದೆ. ಈ ವರ್ಷ ಕೋಲಾರದಲ್ಲಿ ಮಳೆಗಿಂತ ಹೆಚ್ಚು ಚಂಡಮಾರುತವೇ ಮಳೆಯಾಗಿತ್ತು. ಬಿಟ್ಟು ಬಿಡದೆ ಸುರಿದ ಮಳೆಯಲ್ಲೇ ಜಿಲ್ಲೆಯ ರೈತರು ಒಂದಷ್ಟು ಬೆಳೆ ಬೆಳೆದಿದ್ದನ್ನು ಬಿಟ್ಟರೆ ಕೋಲಾರಕ್ಕೆ ಈ ವರ್ಷ ಬರಗಾಲವೇ ನಿಜ.

ಮಳೆರಾಯನ ಶಾಪಕ್ಕೆ ಸಿಲುಕಿ ಈ ವರ್ಷ ಬರಗಾಲಕ್ಕೆ ತುತ್ತಾಗಿರುವ ಕೋಲಾರದಲ್ಲಿ ಮಳೆ ಇಲ್ಲದೆ ಕೇವಲ ಮಂಜಿನ ಮಳೆ ನೋಡಿ ಖುಷಿ ಪಡುವಂತಾಗಿದೆ. ಈ ವರ್ಷ ಕೋಲಾರದಲ್ಲಿ ಮಳೆಗಿಂತ ಹೆಚ್ಚು ಚಂಡಮಾರುತವೇ ಮಳೆಯಾಗಿತ್ತು. ಬಿಟ್ಟು ಬಿಡದೆ ಸುರಿದ ಮಳೆಯಲ್ಲೇ ಜಿಲ್ಲೆಯ ರೈತರು ಒಂದಷ್ಟು ಬೆಳೆ ಬೆಳೆದಿದ್ದನ್ನು ಬಿಟ್ಟರೆ ಕೋಲಾರಕ್ಕೆ ಈ ವರ್ಷ ಬರಗಾಲವೇ ನಿಜ.

2 / 6
ಈ ನಡುವೆ ಕೋಲಾರದಲ್ಲಿ ನಿತ್ಯ ದಟ್ಟವಾದ ಇಬ್ಬನಿ ಕವಿದಿರುತ್ತದೆ. ಈ ಭಾಗದ ಗಿರಿಶಿಖರಗಳನ್ನ ಆವರಿಸಿ, ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಊಟಿಯ ವಾತಾವರಣದಂಥ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿವೆ. ಇಂತಹ ಇಬ್ಬನಿಯಿಂದ ಆವೃತವಾಗಿರುವ ಇಲ್ಲಿನ ಬೆಟ್ಟಗಳನ್ನ ನೊಡೋದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದಾಗಿದೆ. ಬಿಸಿಲಿನ ವಾತಾವರಣ ನೋಡಿ ನೋಡಿ ಸಾಕಾಗಿದ್ದ ಜನರಿಗೆ ಕೋಲಾರದಲ್ಲಿನ ಈ ಮಂಜಿನಾಟ ಮಲೆನಾಡಿನ ಅನುಭವ ನೀಡುತ್ತಿದೆ. 

ಈ ನಡುವೆ ಕೋಲಾರದಲ್ಲಿ ನಿತ್ಯ ದಟ್ಟವಾದ ಇಬ್ಬನಿ ಕವಿದಿರುತ್ತದೆ. ಈ ಭಾಗದ ಗಿರಿಶಿಖರಗಳನ್ನ ಆವರಿಸಿ, ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಊಟಿಯ ವಾತಾವರಣದಂಥ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿವೆ. ಇಂತಹ ಇಬ್ಬನಿಯಿಂದ ಆವೃತವಾಗಿರುವ ಇಲ್ಲಿನ ಬೆಟ್ಟಗಳನ್ನ ನೊಡೋದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದಾಗಿದೆ. ಬಿಸಿಲಿನ ವಾತಾವರಣ ನೋಡಿ ನೋಡಿ ಸಾಕಾಗಿದ್ದ ಜನರಿಗೆ ಕೋಲಾರದಲ್ಲಿನ ಈ ಮಂಜಿನಾಟ ಮಲೆನಾಡಿನ ಅನುಭವ ನೀಡುತ್ತಿದೆ. 

3 / 6
ಮುಂಗಾರು ಮಳೆ ಹಾಗೂ ಹಿಂಗಾರು ಎರಡು ಮಳೆಗಳು ರೈತರ ನೀರೀಕ್ಷೆಯನ್ನು ಹುಸಿ ಮಾಡಿದ್ದವು. ಈ ನಡುವೆ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸುತ್ತಿದೆ. ಪರಿಣಾಮ ಗಿಡ-ಮರ ಎಲೆಗಳಿಂದ ಇಬ್ಬನಿ ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ. ದಟ್ಟವಾದ ಹಿಮ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರು ಪರದಾಡುವ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿರುತ್ತಿದೆ.

ಮುಂಗಾರು ಮಳೆ ಹಾಗೂ ಹಿಂಗಾರು ಎರಡು ಮಳೆಗಳು ರೈತರ ನೀರೀಕ್ಷೆಯನ್ನು ಹುಸಿ ಮಾಡಿದ್ದವು. ಈ ನಡುವೆ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸುತ್ತಿದೆ. ಪರಿಣಾಮ ಗಿಡ-ಮರ ಎಲೆಗಳಿಂದ ಇಬ್ಬನಿ ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ. ದಟ್ಟವಾದ ಹಿಮ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರು ಪರದಾಡುವ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿರುತ್ತಿದೆ.

4 / 6
ಕಳೆದ ಹದಿನೈದು ದಿನದಿಂದ ದಿನಬಿಟ್ಟು ದಿನ ಕೋಲಾರ ನಗರ ಸೇರಿದಂತೆ ಎಲ್ಲೆಡೆ ದಟ್ಟವಾದ ಮಂಜು ಆವರಿಸಿರುತ್ತದೆ. ಬೆಳಗ್ಗೆ 8 ಗಂಟೆಯಾದ್ರೂ ದಟ್ಟವಾದ ಹಿಬ್ಬನಿ ನಗರವನ್ನೆಲ್ಲಾ ಆವರಿಸಿರುತ್ತದೆ. ಇನ್ನು ಪಕ್ಕದ ಬೆಟ್ಟದಿಂದ ಕೋಲಾರ ನಗರವನ್ನು ನೋಡಿದರಂತು ಇದೊಂದು ದೇವಲೋಕವೇನೋ ಎನ್ನುವಂತೆ ಭಾಸವಾಗುತ್ತದೆ.

ಕಳೆದ ಹದಿನೈದು ದಿನದಿಂದ ದಿನಬಿಟ್ಟು ದಿನ ಕೋಲಾರ ನಗರ ಸೇರಿದಂತೆ ಎಲ್ಲೆಡೆ ದಟ್ಟವಾದ ಮಂಜು ಆವರಿಸಿರುತ್ತದೆ. ಬೆಳಗ್ಗೆ 8 ಗಂಟೆಯಾದ್ರೂ ದಟ್ಟವಾದ ಹಿಬ್ಬನಿ ನಗರವನ್ನೆಲ್ಲಾ ಆವರಿಸಿರುತ್ತದೆ. ಇನ್ನು ಪಕ್ಕದ ಬೆಟ್ಟದಿಂದ ಕೋಲಾರ ನಗರವನ್ನು ನೋಡಿದರಂತು ಇದೊಂದು ದೇವಲೋಕವೇನೋ ಎನ್ನುವಂತೆ ಭಾಸವಾಗುತ್ತದೆ.

5 / 6
ಇನ್ನು ಇಂಥ ಸುಂದರ ವಾತಾವರಣ ನೋಡಲು ಎಷ್ಟು ಚೆನ್ನವೋ ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಕೆಲವರಿಗಂತು ಈ ವಾತಾವರಣ ನೆಗಡಿ, ಕೆಮ್ಮು, ಹಾಗೂ ಜ್ವರದಂತೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ವಾಯು ವಿಹಾರಿಗಳು ಕೂಡ ಕೆಲವರು ಇದನ್ನು ಎಂಜಾಯ್​ ಮಾಡಿದರೆ ಇನ್ನು ಕೆಲವರು ಇದರಿಂದ ದೂರವೇ ಉಳಿಯುತ್ತಿದ್ದಾರೆ.  

ಇನ್ನು ಇಂಥ ಸುಂದರ ವಾತಾವರಣ ನೋಡಲು ಎಷ್ಟು ಚೆನ್ನವೋ ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಕೆಲವರಿಗಂತು ಈ ವಾತಾವರಣ ನೆಗಡಿ, ಕೆಮ್ಮು, ಹಾಗೂ ಜ್ವರದಂತೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ವಾಯು ವಿಹಾರಿಗಳು ಕೂಡ ಕೆಲವರು ಇದನ್ನು ಎಂಜಾಯ್​ ಮಾಡಿದರೆ ಇನ್ನು ಕೆಲವರು ಇದರಿಂದ ದೂರವೇ ಉಳಿಯುತ್ತಿದ್ದಾರೆ.  

6 / 6
Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ