Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಕ್ಕೊಮ್ಮೆ ಕೋಲಾರದಲ್ಲಿ ಸೃಷ್ಟಿಯಾಗುವ ಮಂಜಿನ ಲೋಕ ಹೇಗಿರುತ್ತೆ? ಇಲ್ಲಿದೆ ಝಲಕ್

ಕೋಲಾರದಲ್ಲಿ ಈ ವರ್ಷ ಅನುಭವಿಸುತ್ತಿರುವ ಅಸಾಮಾನ್ಯ ದಟ್ಟ ಮಂಜು, ಮಲೆನಾಡಿನ ವಾತಾವರಣವನ್ನು ನೆನಪಿಸುತ್ತದೆ. ಬರಗಾಲದ ನಡುವೆ ಈ ಮಂಜು ಅದ್ಭುತ ದೃಶ್ಯಗಳನ್ನು ಸೃಷ್ಟಿಸಿದ್ದರೂ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಾಹನ ಸಂಚಾರದ ಮೇಲೂ ಇದರ ಪ್ರಭಾವಬೀರಿದೆ. ವರ್ಷಕ್ಕೊಮ್ಮೆ ಈ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 19, 2025 | 4:37 PM

ಅದು ಚುಮು ಚುಮು ಚಳಿಯ ಜೊತೆಗೆ ಸುಂದರ ಲೋಕವನ್ನು ಸೃಷ್ಟಿ ಮಾಡಲು ಧರೆಗಿಳಿದು ಬಂದಿದ್ದ ಇಬ್ಬನಿ, ಸದಾ ಬಯಲು ಸೀಮೆಯಲ್ಲಿ ಬರ ಹಾಗೂ ಬಿಸಿಲಿನ ತಾಪಕ್ಕೆ ಬಳಲುವ ಜನರಿಗೆ ಮಲೆನಾಡಿನ ಅನುಭವವನ್ನು ನೀಡುವ ಸಲುವಾಗಿಯೇ ಸೃಷ್ಟಿಯಾಗಿರುವ ಮಂಜಿನಲೋಕ, ಕೋಲಾರದಲ್ಲಿ ವರ್ಷಕ್ಕೊಮ್ಮೆ ಸೃಷ್ಟಿಯಾಗಿರುವ ಮಂಜಿನ ಲೋಕ ಹೇಗಿರುತ್ತೆ ಇಲ್ಲಿದೆ ನೋಡಿ.

ಅದು ಚುಮು ಚುಮು ಚಳಿಯ ಜೊತೆಗೆ ಸುಂದರ ಲೋಕವನ್ನು ಸೃಷ್ಟಿ ಮಾಡಲು ಧರೆಗಿಳಿದು ಬಂದಿದ್ದ ಇಬ್ಬನಿ, ಸದಾ ಬಯಲು ಸೀಮೆಯಲ್ಲಿ ಬರ ಹಾಗೂ ಬಿಸಿಲಿನ ತಾಪಕ್ಕೆ ಬಳಲುವ ಜನರಿಗೆ ಮಲೆನಾಡಿನ ಅನುಭವವನ್ನು ನೀಡುವ ಸಲುವಾಗಿಯೇ ಸೃಷ್ಟಿಯಾಗಿರುವ ಮಂಜಿನಲೋಕ, ಕೋಲಾರದಲ್ಲಿ ವರ್ಷಕ್ಕೊಮ್ಮೆ ಸೃಷ್ಟಿಯಾಗಿರುವ ಮಂಜಿನ ಲೋಕ ಹೇಗಿರುತ್ತೆ ಇಲ್ಲಿದೆ ನೋಡಿ.

1 / 6
ಮಳೆರಾಯನ ಶಾಪಕ್ಕೆ ಸಿಲುಕಿ ಈ ವರ್ಷ ಬರಗಾಲಕ್ಕೆ ತುತ್ತಾಗಿರುವ ಕೋಲಾರದಲ್ಲಿ ಮಳೆ ಇಲ್ಲದೆ ಕೇವಲ ಮಂಜಿನ ಮಳೆ ನೋಡಿ ಖುಷಿ ಪಡುವಂತಾಗಿದೆ. ಈ ವರ್ಷ ಕೋಲಾರದಲ್ಲಿ ಮಳೆಗಿಂತ ಹೆಚ್ಚು ಚಂಡಮಾರುತವೇ ಮಳೆಯಾಗಿತ್ತು. ಬಿಟ್ಟು ಬಿಡದೆ ಸುರಿದ ಮಳೆಯಲ್ಲೇ ಜಿಲ್ಲೆಯ ರೈತರು ಒಂದಷ್ಟು ಬೆಳೆ ಬೆಳೆದಿದ್ದನ್ನು ಬಿಟ್ಟರೆ ಕೋಲಾರಕ್ಕೆ ಈ ವರ್ಷ ಬರಗಾಲವೇ ನಿಜ.

ಮಳೆರಾಯನ ಶಾಪಕ್ಕೆ ಸಿಲುಕಿ ಈ ವರ್ಷ ಬರಗಾಲಕ್ಕೆ ತುತ್ತಾಗಿರುವ ಕೋಲಾರದಲ್ಲಿ ಮಳೆ ಇಲ್ಲದೆ ಕೇವಲ ಮಂಜಿನ ಮಳೆ ನೋಡಿ ಖುಷಿ ಪಡುವಂತಾಗಿದೆ. ಈ ವರ್ಷ ಕೋಲಾರದಲ್ಲಿ ಮಳೆಗಿಂತ ಹೆಚ್ಚು ಚಂಡಮಾರುತವೇ ಮಳೆಯಾಗಿತ್ತು. ಬಿಟ್ಟು ಬಿಡದೆ ಸುರಿದ ಮಳೆಯಲ್ಲೇ ಜಿಲ್ಲೆಯ ರೈತರು ಒಂದಷ್ಟು ಬೆಳೆ ಬೆಳೆದಿದ್ದನ್ನು ಬಿಟ್ಟರೆ ಕೋಲಾರಕ್ಕೆ ಈ ವರ್ಷ ಬರಗಾಲವೇ ನಿಜ.

2 / 6
ಈ ನಡುವೆ ಕೋಲಾರದಲ್ಲಿ ನಿತ್ಯ ದಟ್ಟವಾದ ಇಬ್ಬನಿ ಕವಿದಿರುತ್ತದೆ. ಈ ಭಾಗದ ಗಿರಿಶಿಖರಗಳನ್ನ ಆವರಿಸಿ, ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಊಟಿಯ ವಾತಾವರಣದಂಥ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿವೆ. ಇಂತಹ ಇಬ್ಬನಿಯಿಂದ ಆವೃತವಾಗಿರುವ ಇಲ್ಲಿನ ಬೆಟ್ಟಗಳನ್ನ ನೊಡೋದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದಾಗಿದೆ. ಬಿಸಿಲಿನ ವಾತಾವರಣ ನೋಡಿ ನೋಡಿ ಸಾಕಾಗಿದ್ದ ಜನರಿಗೆ ಕೋಲಾರದಲ್ಲಿನ ಈ ಮಂಜಿನಾಟ ಮಲೆನಾಡಿನ ಅನುಭವ ನೀಡುತ್ತಿದೆ. 

ಈ ನಡುವೆ ಕೋಲಾರದಲ್ಲಿ ನಿತ್ಯ ದಟ್ಟವಾದ ಇಬ್ಬನಿ ಕವಿದಿರುತ್ತದೆ. ಈ ಭಾಗದ ಗಿರಿಶಿಖರಗಳನ್ನ ಆವರಿಸಿ, ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಊಟಿಯ ವಾತಾವರಣದಂಥ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿವೆ. ಇಂತಹ ಇಬ್ಬನಿಯಿಂದ ಆವೃತವಾಗಿರುವ ಇಲ್ಲಿನ ಬೆಟ್ಟಗಳನ್ನ ನೊಡೋದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದಾಗಿದೆ. ಬಿಸಿಲಿನ ವಾತಾವರಣ ನೋಡಿ ನೋಡಿ ಸಾಕಾಗಿದ್ದ ಜನರಿಗೆ ಕೋಲಾರದಲ್ಲಿನ ಈ ಮಂಜಿನಾಟ ಮಲೆನಾಡಿನ ಅನುಭವ ನೀಡುತ್ತಿದೆ. 

3 / 6
ಮುಂಗಾರು ಮಳೆ ಹಾಗೂ ಹಿಂಗಾರು ಎರಡು ಮಳೆಗಳು ರೈತರ ನೀರೀಕ್ಷೆಯನ್ನು ಹುಸಿ ಮಾಡಿದ್ದವು. ಈ ನಡುವೆ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸುತ್ತಿದೆ. ಪರಿಣಾಮ ಗಿಡ-ಮರ ಎಲೆಗಳಿಂದ ಇಬ್ಬನಿ ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ. ದಟ್ಟವಾದ ಹಿಮ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರು ಪರದಾಡುವ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿರುತ್ತಿದೆ.

ಮುಂಗಾರು ಮಳೆ ಹಾಗೂ ಹಿಂಗಾರು ಎರಡು ಮಳೆಗಳು ರೈತರ ನೀರೀಕ್ಷೆಯನ್ನು ಹುಸಿ ಮಾಡಿದ್ದವು. ಈ ನಡುವೆ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸುತ್ತಿದೆ. ಪರಿಣಾಮ ಗಿಡ-ಮರ ಎಲೆಗಳಿಂದ ಇಬ್ಬನಿ ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ. ದಟ್ಟವಾದ ಹಿಮ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರು ಪರದಾಡುವ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿರುತ್ತಿದೆ.

4 / 6
ಕಳೆದ ಹದಿನೈದು ದಿನದಿಂದ ದಿನಬಿಟ್ಟು ದಿನ ಕೋಲಾರ ನಗರ ಸೇರಿದಂತೆ ಎಲ್ಲೆಡೆ ದಟ್ಟವಾದ ಮಂಜು ಆವರಿಸಿರುತ್ತದೆ. ಬೆಳಗ್ಗೆ 8 ಗಂಟೆಯಾದ್ರೂ ದಟ್ಟವಾದ ಹಿಬ್ಬನಿ ನಗರವನ್ನೆಲ್ಲಾ ಆವರಿಸಿರುತ್ತದೆ. ಇನ್ನು ಪಕ್ಕದ ಬೆಟ್ಟದಿಂದ ಕೋಲಾರ ನಗರವನ್ನು ನೋಡಿದರಂತು ಇದೊಂದು ದೇವಲೋಕವೇನೋ ಎನ್ನುವಂತೆ ಭಾಸವಾಗುತ್ತದೆ.

ಕಳೆದ ಹದಿನೈದು ದಿನದಿಂದ ದಿನಬಿಟ್ಟು ದಿನ ಕೋಲಾರ ನಗರ ಸೇರಿದಂತೆ ಎಲ್ಲೆಡೆ ದಟ್ಟವಾದ ಮಂಜು ಆವರಿಸಿರುತ್ತದೆ. ಬೆಳಗ್ಗೆ 8 ಗಂಟೆಯಾದ್ರೂ ದಟ್ಟವಾದ ಹಿಬ್ಬನಿ ನಗರವನ್ನೆಲ್ಲಾ ಆವರಿಸಿರುತ್ತದೆ. ಇನ್ನು ಪಕ್ಕದ ಬೆಟ್ಟದಿಂದ ಕೋಲಾರ ನಗರವನ್ನು ನೋಡಿದರಂತು ಇದೊಂದು ದೇವಲೋಕವೇನೋ ಎನ್ನುವಂತೆ ಭಾಸವಾಗುತ್ತದೆ.

5 / 6
ಇನ್ನು ಇಂಥ ಸುಂದರ ವಾತಾವರಣ ನೋಡಲು ಎಷ್ಟು ಚೆನ್ನವೋ ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಕೆಲವರಿಗಂತು ಈ ವಾತಾವರಣ ನೆಗಡಿ, ಕೆಮ್ಮು, ಹಾಗೂ ಜ್ವರದಂತೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ವಾಯು ವಿಹಾರಿಗಳು ಕೂಡ ಕೆಲವರು ಇದನ್ನು ಎಂಜಾಯ್​ ಮಾಡಿದರೆ ಇನ್ನು ಕೆಲವರು ಇದರಿಂದ ದೂರವೇ ಉಳಿಯುತ್ತಿದ್ದಾರೆ.  

ಇನ್ನು ಇಂಥ ಸುಂದರ ವಾತಾವರಣ ನೋಡಲು ಎಷ್ಟು ಚೆನ್ನವೋ ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಕೆಲವರಿಗಂತು ಈ ವಾತಾವರಣ ನೆಗಡಿ, ಕೆಮ್ಮು, ಹಾಗೂ ಜ್ವರದಂತೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ವಾಯು ವಿಹಾರಿಗಳು ಕೂಡ ಕೆಲವರು ಇದನ್ನು ಎಂಜಾಯ್​ ಮಾಡಿದರೆ ಇನ್ನು ಕೆಲವರು ಇದರಿಂದ ದೂರವೇ ಉಳಿಯುತ್ತಿದ್ದಾರೆ.  

6 / 6
Follow us
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹ
ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹ