ದೆಹಲಿಯಲ್ಲಿರುವ ಭಾರತೀಯ ಸೇನಾ ಪಡೆಯ 18ನೇ ಮೈಸೂರು/ಮದ್ರಾಸ್ ರೆಜಿಮೆಂಟ್ಗೆ ಮೈಸೂರು ಅರಮನೆಯ ಅರಸ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದರು.
ಪತ್ನಿ ತ್ರಿಶಿಖಾ ಕುಮಾರಿ ಒಡೆಯರ್ ಜೊತೆ ಯದುವೀರ್ ಅವರು ಮದ್ರಾಸ್ ರೆಜಿಮೆಂಟ್ಗೆ ಭೇಟಿ ನೀಡಿದರು.
ಈ ಬಗ್ಗೆ ಒಡೆಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ.
ನನ್ನ ಪತ್ನಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರ್ ಜೊತೆಗೆ ದೆಹಲಿಯ 18 ಮದ್ರಾಸ್ (ಮೈಸೂರು) ಬೆಟಾಲಿಯನ್ಗೆ ಭೇಟಿ ನೀಡಿದ್ದು ಒಂದು ಗೌರವ ಎಂದು ಒಡೆಯರ್ ಹೇಳಿದ್ದಾರೆ.
18 ಮದ್ರಾಸ್ (ಮೈಸೂರು) ಹಿಂದಿನ ಮೈಸೂರು ಸಾಮ್ರಾಜ್ಯದ 1 ನೇ ಕಾಲಾಳುಪಡೆ ಬೆಟಾಲಿಯನ್ ಆಗಿತ್ತು.
ರಾಜಪ್ರಭುತ್ವದ ರಾಜ್ಯಗಳ ವಿಲೀನದ ನಂತರ ಬೆಟಾಲಿಯನ್ ಅನ್ನು 18 ನೇ ಮದ್ರಾಸ್ ಬೆಟಾಲಿಯನ್ ಆಗಿ ಭಾರತೀಯ ಸೇನೆಗೆ ಸೇರಿಸಲಾಯಿತು ಎಂದು ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.