AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸದಿಂದ ರಸ, ನಿತಿನ್ ಗಡ್ಕರಿ ತಂತ್ರ; 50 ರೂಗೆ ತಗ್ಗಬಲ್ಲುದಾ ಪೆಟ್ರೋಲ್ ಬೆಲೆ?

ನಾಗಪುರ್, ಸೆ. 2: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಸದಿಂದ ರಸ ತೆಗೆಯುವ ಮಾತುಗಳನ್ನಾಡಿದ್ದಾರೆ. ಕಸ ನಿರುಪಯುಕ್ತ ವಸ್ತುವಲ್ಲ, ಅದೂ ಕೂಡ ಬಹಳ ಮೌಲ್ಯಯುತವಾದುದು. ಅದನ್ನು ಸರಿಯಾಗಿ ಬಳಸಿ ಪೆಟ್ರೋಲಿಯಂ ಆಗಿ ಪರಿವರ್ತಿಸಬಹುದು. ಇದರಿಂದ ಪೆಟ್ರೋಲ್ ಬೆಲೆ 50 ರೂಗೆ ಇಳಿಸಬಹುದು ಎಂದಿದ್ದಾರೆ. ಅಖಿಲ ಭಾರತೀಯ ಸ್ಥಾನಿಕ್ ಸ್ವರಾಜ್ಯ ಸಂಸ್ಥಾ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2024 | 1:21 PM

Share
ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗಪುರದಲ್ಲಿ ನಿನ್ನೆ (2024ರ ಸೆ. 1) ಅಖಿಲ ಭಾರತೀಯರ ಸ್ಥಾನಿಕ್ ಸ್ವರಾಜ್ಯ ಸಂಸ್ಥಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಸವನ್ನು ಸದ್ಬಳಕೆ ಮಾಡಿಕೊಳ್ಳುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ಕಸವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ ಅದರಿಂದ ವಿವಿಧ ರೀತಿಯಲ್ಲಿ ಲಾಭ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತನಾಡಿದರು. ಕಸ ಎಷ್ಟು ಅಮೂಲ್ಯವೆಂದರೆ ಜನರು ಆ ಕಸ ಗಿಟ್ಟಿಸಿಕೊಳ್ಳಲು ಪೈಪೋಟಿ ಮಾಡಬೇಕಾಗುತ್ತದೆ ಎಂದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗಪುರದಲ್ಲಿ ನಿನ್ನೆ (2024ರ ಸೆ. 1) ಅಖಿಲ ಭಾರತೀಯರ ಸ್ಥಾನಿಕ್ ಸ್ವರಾಜ್ಯ ಸಂಸ್ಥಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಸವನ್ನು ಸದ್ಬಳಕೆ ಮಾಡಿಕೊಳ್ಳುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ಕಸವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ ಅದರಿಂದ ವಿವಿಧ ರೀತಿಯಲ್ಲಿ ಲಾಭ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತನಾಡಿದರು. ಕಸ ಎಷ್ಟು ಅಮೂಲ್ಯವೆಂದರೆ ಜನರು ಆ ಕಸ ಗಿಟ್ಟಿಸಿಕೊಳ್ಳಲು ಪೈಪೋಟಿ ಮಾಡಬೇಕಾಗುತ್ತದೆ ಎಂದರು.

1 / 5
‘ಉತ್ತರ ಭಾರತದಲ್ಲಿ ಇತ್ತೀಚೆಗೆ ಹೆದ್ದಾರಿಗಳ ನಿರ್ಮಾಣಕ್ಕಾಗಿ 80 ಲಕ್ಷ ಟನ್​ಗಳಷ್ಟು ಕಸವನ್ನು ಬಳಸಿಕೊಳ್ಳಲಾಗಿದೆ. ಈ ಕಸದಿಂದ ರಸ್ತೆ ನಿರ್ಮಾಣಕ್ಕೆ ಸಹಾಯವಾಗಿದೆ. ಜೊತೆಗೆ ಕಸದ ಸಮಸ್ಯೆಯೂ ತಗ್ಗಿಸಲು ಸಾಧ್ಯವಾಗಿದೆ’ ಎಂದು ಸಚಿವ ನಿತಿನ್ ಗಡ್ಕರಿ ಒಂದು ಉದಾಹರಣೆ ಕೊಟ್ಟಿದ್ದಾರೆ.

‘ಉತ್ತರ ಭಾರತದಲ್ಲಿ ಇತ್ತೀಚೆಗೆ ಹೆದ್ದಾರಿಗಳ ನಿರ್ಮಾಣಕ್ಕಾಗಿ 80 ಲಕ್ಷ ಟನ್​ಗಳಷ್ಟು ಕಸವನ್ನು ಬಳಸಿಕೊಳ್ಳಲಾಗಿದೆ. ಈ ಕಸದಿಂದ ರಸ್ತೆ ನಿರ್ಮಾಣಕ್ಕೆ ಸಹಾಯವಾಗಿದೆ. ಜೊತೆಗೆ ಕಸದ ಸಮಸ್ಯೆಯೂ ತಗ್ಗಿಸಲು ಸಾಧ್ಯವಾಗಿದೆ’ ಎಂದು ಸಚಿವ ನಿತಿನ್ ಗಡ್ಕರಿ ಒಂದು ಉದಾಹರಣೆ ಕೊಟ್ಟಿದ್ದಾರೆ.

2 / 5
ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪೆಟ್ರೋಲ್ ತಯಾರಿಕೆ ಮಾಡಬಹುದು ಎಂದಿದ್ದಾರೆ. ಪ್ಲಾಸ್ಟಿಕ್ ಅನ್ನು ಕಚ್ಛಾ ಪೆಟ್ರೋಲ್ ಆಗಿ ಪರಿವರ್ತಿಸಿ, ಅದನ್ನು ಡೀಸೆಲ್​ನಲ್ಲಿ ಅರ್ಧದಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಬಹುದು. ಇದರಿಂದ ಡೀಸಲ್ ಬೆಲೆ ಲೀಟರ್​ಗೆ 50 ರೂಗೆ ಇಳಿಯಬಹುದು. ಟ್ರಾಕ್ಟರ್ ಇತ್ಯಾದಿ ವಾಹನಗಳ ಬಳಕೆಗೆ ಇದರಿಂದ ಬಹಳ ಅನುಕೂಲ ಆಗುತ್ತದೆ ಎಂದಿದ್ದಾರೆ ಗಡ್ಕರಿ.

ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪೆಟ್ರೋಲ್ ತಯಾರಿಕೆ ಮಾಡಬಹುದು ಎಂದಿದ್ದಾರೆ. ಪ್ಲಾಸ್ಟಿಕ್ ಅನ್ನು ಕಚ್ಛಾ ಪೆಟ್ರೋಲ್ ಆಗಿ ಪರಿವರ್ತಿಸಿ, ಅದನ್ನು ಡೀಸೆಲ್​ನಲ್ಲಿ ಅರ್ಧದಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಬಹುದು. ಇದರಿಂದ ಡೀಸಲ್ ಬೆಲೆ ಲೀಟರ್​ಗೆ 50 ರೂಗೆ ಇಳಿಯಬಹುದು. ಟ್ರಾಕ್ಟರ್ ಇತ್ಯಾದಿ ವಾಹನಗಳ ಬಳಕೆಗೆ ಇದರಿಂದ ಬಹಳ ಅನುಕೂಲ ಆಗುತ್ತದೆ ಎಂದಿದ್ದಾರೆ ಗಡ್ಕರಿ.

3 / 5
ಮಹಾರಾಷ್ಟ್ರದ ನಾಗಪುರದಲ್ಲಿ ಅಲ್ಲಿನ ಪೌರ ಸಂಸ್ಥೆಯು ಚರಂಡಿ ನೀರನ್ನು ಸಂಸ್ಕರಿಸಿ, ಸಮೀಪದ ಕೈಗಾರಿಕೆಗಳಿಗೆ ಸರಬರಾಜು ಮಾಡುವ ಮೂಲಕ ವರ್ಷಕ್ಕೆ 300 ಕೋಟಿ ರೂ ಆದಾಯ ಗಳಿಸುತ್ತಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಚಿವರು ನೀಡಿದರು. ಹಸಿ ಕಸವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ವಿವರ ನೀಡಿದ ಅವರು, ಬಯೋ ಡೈಜೆಸ್ಟರ್​ನಲ್ಲಿ ಸಂಸ್ಕರಿಸಿ ಮೀಥೇನ್ ತಯಾರಿಸಿ, ಆ ಮೂಲಕ ಜೈವಿಕ ಇಂಧನ ತಯಾರಿಸಬಹುದು ಎಂದರು.

ಮಹಾರಾಷ್ಟ್ರದ ನಾಗಪುರದಲ್ಲಿ ಅಲ್ಲಿನ ಪೌರ ಸಂಸ್ಥೆಯು ಚರಂಡಿ ನೀರನ್ನು ಸಂಸ್ಕರಿಸಿ, ಸಮೀಪದ ಕೈಗಾರಿಕೆಗಳಿಗೆ ಸರಬರಾಜು ಮಾಡುವ ಮೂಲಕ ವರ್ಷಕ್ಕೆ 300 ಕೋಟಿ ರೂ ಆದಾಯ ಗಳಿಸುತ್ತಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಚಿವರು ನೀಡಿದರು. ಹಸಿ ಕಸವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ವಿವರ ನೀಡಿದ ಅವರು, ಬಯೋ ಡೈಜೆಸ್ಟರ್​ನಲ್ಲಿ ಸಂಸ್ಕರಿಸಿ ಮೀಥೇನ್ ತಯಾರಿಸಿ, ಆ ಮೂಲಕ ಜೈವಿಕ ಇಂಧನ ತಯಾರಿಸಬಹುದು ಎಂದರು.

4 / 5
ಸಂಪತ್ತು ಸೃಷ್ಟಿಸಲು ಅಗತ್ಯ ಇರುವ ಸಂಪನ್ಮೂಲಗಳನ್ನು ಕಾಣುವುದರ ದೃಷ್ಟಿಕೋನ ಬದಲಾಗಬೇಕು. ತ್ಯಾಜ್ಯದ ಮೌಲ್ಯ ಅರಿವಾಗಬೇಕು. ಅದೆಷ್ಟು ಮೌಲ್ಯಯುತ ಎಂದರೆ ಅದನ್ನು ಗಳಿಸು ಹಕ್ಕಿಗೆ ಜನರು ತಾ ಮುಂದು, ನೀ ಮುಂದು ಎಂದು ಪೈಪೋಟಿ ಮಾಡಬೇಕು. ಯಾವುದನ್ನು ಸಮಸ್ಯೆ ಎಂದು ಪರಿಗಣಿಲಾಗುತ್ತಿದೆಯೋ ಅದನ್ನೇ ಲಾಭದಾಯಕ ಪರಿಹಾರವನ್ನಾಗಿ ಪರಿವರ್ತಿಸಬಹುದು. ಎಲ್ಲಾ ನಗರಾಡಳಿತ ಸಂಸ್ಥೆಗಳು ಈ ಬಗ್ಗೆ ಮುತುವರ್ಜಿ ತೋರಬೇಕು ಎಂದು ನಿತಿನ್ ಗಡ್ಕರಿ ಕರೆ ನೀಡಿದರು.

ಸಂಪತ್ತು ಸೃಷ್ಟಿಸಲು ಅಗತ್ಯ ಇರುವ ಸಂಪನ್ಮೂಲಗಳನ್ನು ಕಾಣುವುದರ ದೃಷ್ಟಿಕೋನ ಬದಲಾಗಬೇಕು. ತ್ಯಾಜ್ಯದ ಮೌಲ್ಯ ಅರಿವಾಗಬೇಕು. ಅದೆಷ್ಟು ಮೌಲ್ಯಯುತ ಎಂದರೆ ಅದನ್ನು ಗಳಿಸು ಹಕ್ಕಿಗೆ ಜನರು ತಾ ಮುಂದು, ನೀ ಮುಂದು ಎಂದು ಪೈಪೋಟಿ ಮಾಡಬೇಕು. ಯಾವುದನ್ನು ಸಮಸ್ಯೆ ಎಂದು ಪರಿಗಣಿಲಾಗುತ್ತಿದೆಯೋ ಅದನ್ನೇ ಲಾಭದಾಯಕ ಪರಿಹಾರವನ್ನಾಗಿ ಪರಿವರ್ತಿಸಬಹುದು. ಎಲ್ಲಾ ನಗರಾಡಳಿತ ಸಂಸ್ಥೆಗಳು ಈ ಬಗ್ಗೆ ಮುತುವರ್ಜಿ ತೋರಬೇಕು ಎಂದು ನಿತಿನ್ ಗಡ್ಕರಿ ಕರೆ ನೀಡಿದರು.

5 / 5
Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!