ಕಲ್ಚರ್ ಫೆಸ್ಟ್‌ನಲ್ಲಿ ಮಿಂದೆದ್ದ ಪ್ರೆಸಿಡೆನ್ಸಿ ವಿವಿಯ ವಿದ್ಯಾರ್ಥಿಗಳು: ಇಲ್ಲಿವೆ ಫೋಟೋಸ್​

Edited By:

Updated on: Apr 11, 2026 | 9:30 PM

ಬೆಂಗಳೂರಿನ ಪ್ರೆಸಿಡೆನ್ಸಿ ವಿವಿಯಲ್ಲಿ ನಡೆದ ಎರಡು ದಿನಗಳ ಇನ್ವೆನ್ಸಿಯಾ ಕಲ್ಚರಲ್ ಫೆಸ್ಟ್ ಯುವಜನರ ಗಮನ ಸೆಳೆಯಿತು. ಮಳೆಯ ನಡುವೆಯೂ ಬಾಲಿವುಡ್ ಗಾಯಕ ಜಾವಿದ್ ಆಲಿ ಸಂಗೀತಕ್ಕೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ನಟಿ ಶ್ರೀಲೀಲಾ ಸೇರಿದಂತೆ ಹಲವು ಭಾಗವಹಿಸಿ ಯುವಜನರನ್ನು ರಂಜಿಸಿದರು. ಸಂಗೀತ, ನೃತ್ಯ, ರಂಗಭೂಮಿ ಒಳಗೊಂಡ ಈ ಉತ್ಸವವು ಕ್ಯಾಂಪಸ್‌ನಲ್ಲಿ ಉತ್ಸಾಹದ ವಾತಾವರಣ ಸೃಷ್ಟಿಸಿತು.

1 / 6
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿಯ ಪ್ರತಿಷ್ಠಿತ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 2 ದಿನಗಳ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್​​ ಆಯೋಜಿಸಲಾಗಿದ್ದು, ನಿನ್ನೆ ಮೊದಲ ದಿನ ಯುವಕ, ಯವತಿಯರು ಮಳೆ ನಡುವೆಯೂ ಮ್ಯೂಸಿಕ್​ಗೆ ಕುಣಿದು ಕುಪ್ಪಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿಯ ಪ್ರತಿಷ್ಠಿತ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 2 ದಿನಗಳ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್​​ ಆಯೋಜಿಸಲಾಗಿದ್ದು, ನಿನ್ನೆ ಮೊದಲ ದಿನ ಯುವಕ, ಯವತಿಯರು ಮಳೆ ನಡುವೆಯೂ ಮ್ಯೂಸಿಕ್​ಗೆ ಕುಣಿದು ಕುಪ್ಪಳಿಸಿದ್ದಾರೆ.

2 / 6
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ಅದ್ಧೂರಿ ವೇದಿಕೆ ಮೂಲಕ 2 ದಿನಗಳ ಕಾಲ ಮ್ಯೂಸಿಕ್ ಫೆಸ್ಟ್ ಆಯೋಜನೆ ಮಾಡಿದ್ದು, ನಿನ್ನೆ ಬಾಲಿವುಡ್​ನ ಪ್ರಸಿದ್ಧ ಗಾಯಕ ಜಾವಿದ್ ಆಲಿ ತಮ್ಮ ಗಾಯನದ ಮೂಲಕ ರಂಜಿಸಿದರು.

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ಅದ್ಧೂರಿ ವೇದಿಕೆ ಮೂಲಕ 2 ದಿನಗಳ ಕಾಲ ಮ್ಯೂಸಿಕ್ ಫೆಸ್ಟ್ ಆಯೋಜನೆ ಮಾಡಿದ್ದು, ನಿನ್ನೆ ಬಾಲಿವುಡ್​ನ ಪ್ರಸಿದ್ಧ ಗಾಯಕ ಜಾವಿದ್ ಆಲಿ ತಮ್ಮ ಗಾಯನದ ಮೂಲಕ ರಂಜಿಸಿದರು.

3 / 6
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಕಾರ್ಯಕ್ರಮದಲ್ಲಿ ವಿವಿಯ ನೂರಾರು ಯುವಕ, ಯುವತಿಯರು ಭಾಗವಹಿಸಿದ್ದರು. ರಾತ್ರಿ 10 ಗಂಟೆವರೆಗೂ ವಿದ್ಯಾರ್ಥಿಗಳು ಜಾವಿದ್ ಆಲಿ ಗಾಯನಕ್ಕೆ ಕುಣಿದು ಕುಪ್ಪಳಿಸುವ ಮೂಲಕ ಎಂಜಾಯ್ ಮಾಡಿದರು.

ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಕಾರ್ಯಕ್ರಮದಲ್ಲಿ ವಿವಿಯ ನೂರಾರು ಯುವಕ, ಯುವತಿಯರು ಭಾಗವಹಿಸಿದ್ದರು. ರಾತ್ರಿ 10 ಗಂಟೆವರೆಗೂ ವಿದ್ಯಾರ್ಥಿಗಳು ಜಾವಿದ್ ಆಲಿ ಗಾಯನಕ್ಕೆ ಕುಣಿದು ಕುಪ್ಪಳಿಸುವ ಮೂಲಕ ಎಂಜಾಯ್ ಮಾಡಿದರು.

4 / 6
ಇನ್ನು ಇಂದು ಸಂಜೆ ಬಹುಭಾಷಾ ನಟಿ ಶ್ರೀಲೀಲಾ ಸೇರಿದಂತೆ ಸ್ಟಾರ್ ಪರ್ಫಾರ್ಮರ್ ರೆಬಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಯುವ ಜನರನ್ನ ಮತ್ತಷ್ಟು ರಂಜಿಸಿದರು. ಇನ್ನು ಇದೇ ವೇಳೆ ಆರ್​​ಸಿಬಿ, ಆರ್​​ಸಿಬಿ ಅಂತ ಯುವ ಜನತೆ ಕುಣಿದು ಕುಪ್ಪಳಿಸಿದ್ದಾರೆ.  

ಇನ್ನು ಇಂದು ಸಂಜೆ ಬಹುಭಾಷಾ ನಟಿ ಶ್ರೀಲೀಲಾ ಸೇರಿದಂತೆ ಸ್ಟಾರ್ ಪರ್ಫಾರ್ಮರ್ ರೆಬಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಯುವ ಜನರನ್ನ ಮತ್ತಷ್ಟು ರಂಜಿಸಿದರು. ಇನ್ನು ಇದೇ ವೇಳೆ ಆರ್​​ಸಿಬಿ, ಆರ್​​ಸಿಬಿ ಅಂತ ಯುವ ಜನತೆ ಕುಣಿದು ಕುಪ್ಪಳಿಸಿದ್ದಾರೆ.  

5 / 6
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜಾನುಕುಂಟೆ ಪೊಲೀಸರಿಂದ ವಿವಿಯ ಹೊರ ಹಾಗೂ ಒಳ ಭಾಗದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್​​ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳ ಹೊರತು ಪಡಿಸಿ ಉಳಿದವರಿಗೆ ನಿರ್ಬಂಧಿಸಲಾಗಿತ್ತು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜಾನುಕುಂಟೆ ಪೊಲೀಸರಿಂದ ವಿವಿಯ ಹೊರ ಹಾಗೂ ಒಳ ಭಾಗದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್​​ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳ ಹೊರತು ಪಡಿಸಿ ಉಳಿದವರಿಗೆ ನಿರ್ಬಂಧಿಸಲಾಗಿತ್ತು.

6 / 6
ಒಟ್ಟಿನಲ್ಲಿ 2 ವರ್ಷಗಳಿಗೊಮ್ಮೆ‌ ನಡೆಯುವ ಎರಡು ದಿನದ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್ ಅದ್ಧೂರಿಯಾಗಿ ನಡೆದಿದ್ದು, ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ ಫುಲ್​​ ಎಂಜಾಯ್ ಮಾಡಿದ್ದಾರೆ. 

ಒಟ್ಟಿನಲ್ಲಿ 2 ವರ್ಷಗಳಿಗೊಮ್ಮೆ‌ ನಡೆಯುವ ಎರಡು ದಿನದ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್ ಅದ್ಧೂರಿಯಾಗಿ ನಡೆದಿದ್ದು, ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ ಫುಲ್​​ ಎಂಜಾಯ್ ಮಾಡಿದ್ದಾರೆ. 

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us