AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spain Volcano: ಸ್ಪೇನ್​ನ​ ಲಾ ಪಲ್ಮಾದಲ್ಲಿ ಜ್ವಾಲಾಮುಖಿ; ಹರಿದು ಸಾಗರ ಸೇರಿದ ಲಾವಾರಸ!

Spain Volcano Eruption 2021: ಲಾವಾ ರಸವು ಲಾ ಪಲ್ಮಾ ಐಲ್ಯಾಂಡ್​ನಿಂದ ಅಟ್ಲಾಂಟಿಕ್ ಸಾಗರಕ್ಕೂ ಹರಿದಿದೆ. ಯುರೋಪಿಯನ್ ಯೂನಿಯನ್​ನ ಮಾನಿಟರಿಂಗ್ ಗ್ರೂಪ್ ಹೇಳುವಂತೆ ಲಾವಾ ರಸವು ಲಾ ಪಲ್ಮಾದ ಸುಮಾರು 400 ಕಟ್ಟಡಗಳನ್ನು ಹಾಗೂ ಹಲವು ಮನೆಗಳನ್ನು ನಾಶಮಾಡಿದೆ.

TV9 Web
| Updated By: ganapathi bhat

Updated on: Sep 29, 2021 | 9:57 PM

ಸ್ಪೈನ್ ದೇಶದ ಕ್ಯಾನರಿ ಐಲ್ಯಾಂಡ್​ನಲ್ಲಿ ಜ್ವಾಲಾಮುಖಿ ಉಂಟಾಗಿ ವಿಕೋಪಕ್ಕೀಡಾಗಿದ್ದ ಪರಿಸ್ಥಿತಿ ಇನ್ನೂ ತಿಳಿಗೊಂಡಿಲ್ಲ. ಜ್ವಾಲಾಮುಖಿ ಉಂಟಾಗಿ ಹತ್ತು ದಿನಗಳು ಕಳೆಯುತ್ತಾ ಬಂದಿದೆ. ಆದರೆ, ಈಗಲೂ ಜ್ವಾಲಾಮುಖಿ ಉಕ್ಕುತ್ತಿದೆ ಮತ್ತು ಲಾವಾ ಹರಿಯುತ್ತಿದೆ. ಈ ಕಾರಣದಿಂದ ಆ ಭಾಗದಲ್ಲಿ ವಾಸ ಮಾಡುತ್ತಿರುವ ಜನರು ಆತಂಕಕ್ಕೆ ಈಡಾಗಿದ್ದಾರೆ.

Spain Volcano Eruption Lava reaches Sea after 10 days of Volcano eruption See pictures photos

1 / 6
ಲಾವಾ ರಸವು ಲಾ ಪಲ್ಮಾ ಐಲ್ಯಾಂಡ್​ನಿಂದ ಅಟ್ಲಾಂಟಿಕ್ ಸಾಗರಕ್ಕೂ ಹರಿದಿದೆ. ಯುರೋಪಿಯನ್ ಯೂನಿಯನ್​ನ ಮಾನಿಟರಿಂಗ್ ಗ್ರೂಪ್ ಹೇಳುವಂತೆ ಲಾವಾ ರಸವು ಲಾ ಪಲ್ಮಾದ ಸುಮಾರು 400 ಕಟ್ಟಡಗಳನ್ನು ಹಾಗೂ ಹಲವು ಮನೆಗಳನ್ನು ನಾಶಮಾಡಿದೆ. ಐಲ್ಯಾಂಡ್​ನ ಪಶ್ಚಿಮ ಭಾಗದಲ್ಲಿ ಈ ವಿಕೋಪ ಉಂಟಾಗಿದೆ. ಅಲ್ಲಿ ಸುಮಾರು 85,000 ಜನರು ವಾಸಮಾಡುತ್ತಿದ್ದಾರೆ.

ಲಾವಾ ರಸವು ಲಾ ಪಲ್ಮಾ ಐಲ್ಯಾಂಡ್​ನಿಂದ ಅಟ್ಲಾಂಟಿಕ್ ಸಾಗರಕ್ಕೂ ಹರಿದಿದೆ. ಯುರೋಪಿಯನ್ ಯೂನಿಯನ್​ನ ಮಾನಿಟರಿಂಗ್ ಗ್ರೂಪ್ ಹೇಳುವಂತೆ ಲಾವಾ ರಸವು ಲಾ ಪಲ್ಮಾದ ಸುಮಾರು 400 ಕಟ್ಟಡಗಳನ್ನು ಹಾಗೂ ಹಲವು ಮನೆಗಳನ್ನು ನಾಶಮಾಡಿದೆ. ಐಲ್ಯಾಂಡ್​ನ ಪಶ್ಚಿಮ ಭಾಗದಲ್ಲಿ ಈ ವಿಕೋಪ ಉಂಟಾಗಿದೆ. ಅಲ್ಲಿ ಸುಮಾರು 85,000 ಜನರು ವಾಸಮಾಡುತ್ತಿದ್ದಾರೆ.

2 / 6
ಜ್ವಾಲಾಮುಖಿ ಉಕ್ಕಿರುವ ಪ್ರಾಕೃತಿಕ ವಿಕೋಪದ ಹಲವಾರು ಚಿತ್ರಗಳು ಹರಿದಾಡಿವೆ. ಅದರಂತೆ, ಆ ಪ್ರದೇಶದಲ್ಲಿ ಆಕಾಶವು ಕಪ್ಪು ಮತ್ತು ಬಿಳಿ ಹೊಗೆಯಿಂದ ಆವೃತ್ತವಾಗಿ ಇರುವುದನ್ನು ನಾವು ಕಾಣಬಹುದು. ಅದೇ ರೀತಿ ರಾತ್ರಿ ವೇಳೆಯಲ್ಲಿ ಹೊಗೆ ಮತ್ತು ಕೆಂಪು ಬೆಳಕು ಕಂಡುಬಂದಿದೆ. ಇಲ್ಲಿ ಜ್ವಾಲಾಮುಖಿ ಸ್ಫೋಟ ಮುಂದುವರಿದಿರುವ ಕಾರಣ ಮತ್ತು ಇನ್ನಷ್ಟು ಅಪಾಯ ಇರುವ ಕಾರಣ ತುರ್ತು ಸೇವಾ ಸಿಬ್ಬಂದಿ ಕೂಡ ಕಾರ್ಯ ಹಿಂದೆಗೆದುಕೊಂಡಿದ್ದಾರೆ.

ಜ್ವಾಲಾಮುಖಿ ಉಕ್ಕಿರುವ ಪ್ರಾಕೃತಿಕ ವಿಕೋಪದ ಹಲವಾರು ಚಿತ್ರಗಳು ಹರಿದಾಡಿವೆ. ಅದರಂತೆ, ಆ ಪ್ರದೇಶದಲ್ಲಿ ಆಕಾಶವು ಕಪ್ಪು ಮತ್ತು ಬಿಳಿ ಹೊಗೆಯಿಂದ ಆವೃತ್ತವಾಗಿ ಇರುವುದನ್ನು ನಾವು ಕಾಣಬಹುದು. ಅದೇ ರೀತಿ ರಾತ್ರಿ ವೇಳೆಯಲ್ಲಿ ಹೊಗೆ ಮತ್ತು ಕೆಂಪು ಬೆಳಕು ಕಂಡುಬಂದಿದೆ. ಇಲ್ಲಿ ಜ್ವಾಲಾಮುಖಿ ಸ್ಫೋಟ ಮುಂದುವರಿದಿರುವ ಕಾರಣ ಮತ್ತು ಇನ್ನಷ್ಟು ಅಪಾಯ ಇರುವ ಕಾರಣ ತುರ್ತು ಸೇವಾ ಸಿಬ್ಬಂದಿ ಕೂಡ ಕಾರ್ಯ ಹಿಂದೆಗೆದುಕೊಂಡಿದ್ದಾರೆ.

3 / 6
ಲಾವಾ ರಸವು ಮಂಗಳವಾರ ರಾತ್ರಿಯ ವೇಳೆ ಹೇಗೆ ನೀರಿನ ವರೆಗೆ ಹರಿದು ಹೋಗಿದೆ ಎಂದು ಕಾಣಬಹುದಾಗಿದೆ. ಜ್ವಾಲಾಮುಖಿ ಇನ್ನಷ್ಟು ಉಕ್ಕುವ ಮತ್ತು ಅದರಿಂದ ವಿಷಕಾರಿ ಅನಿಲ ಹರಡುವ ಬಗ್ಗೆ ಆತಂಕ ಹೆಚ್ಚಿದೆ. ಲಾವಾ ರಸವು ಪ್ಲಯಾ ನುಯೆವ ಎಂಬಲ್ಲಿ ಸಾಗರವನ್ನು ತಲುಪಿದೆ ಎಂಬ ಬಗ್ಗೆ ಕ್ಯಾನರಿ ಐಲ್ಯಾಂಡ್​ ವಾಲ್ಕೆನೊ ಇನ್​ಸ್ಟಿಟ್ಯೂಟ್ ಟ್ವೀಟ್ ಮಾಡಿದೆ.

ಲಾವಾ ರಸವು ಮಂಗಳವಾರ ರಾತ್ರಿಯ ವೇಳೆ ಹೇಗೆ ನೀರಿನ ವರೆಗೆ ಹರಿದು ಹೋಗಿದೆ ಎಂದು ಕಾಣಬಹುದಾಗಿದೆ. ಜ್ವಾಲಾಮುಖಿ ಇನ್ನಷ್ಟು ಉಕ್ಕುವ ಮತ್ತು ಅದರಿಂದ ವಿಷಕಾರಿ ಅನಿಲ ಹರಡುವ ಬಗ್ಗೆ ಆತಂಕ ಹೆಚ್ಚಿದೆ. ಲಾವಾ ರಸವು ಪ್ಲಯಾ ನುಯೆವ ಎಂಬಲ್ಲಿ ಸಾಗರವನ್ನು ತಲುಪಿದೆ ಎಂಬ ಬಗ್ಗೆ ಕ್ಯಾನರಿ ಐಲ್ಯಾಂಡ್​ ವಾಲ್ಕೆನೊ ಇನ್​ಸ್ಟಿಟ್ಯೂಟ್ ಟ್ವೀಟ್ ಮಾಡಿದೆ.

4 / 6
ಆ ಪ್ರದೇಶದಲ್ಲಿ ವಾಸವಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ, ಆಶ್ರಯ ಪಡೆದುಕೊಳ್ಳುವಂತೆ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕ ಹ=ಸೂಚನೆ ನೀಡಿದೆ. ಲಾವಾ ರಸವು ತಾನು ಹರಿಯುವ ದಾರಿಯಲ್ಲಿ ಇರುವ ಎಲ್ಲವನ್ನೂ ನಾಶ ಮಾಡುತ್ತಾ ಸಾಗುತ್ತದೆ ಎಂದು ಹೇಳಲಾಗಿದೆ.

ಆ ಪ್ರದೇಶದಲ್ಲಿ ವಾಸವಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ, ಆಶ್ರಯ ಪಡೆದುಕೊಳ್ಳುವಂತೆ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕ ಹ=ಸೂಚನೆ ನೀಡಿದೆ. ಲಾವಾ ರಸವು ತಾನು ಹರಿಯುವ ದಾರಿಯಲ್ಲಿ ಇರುವ ಎಲ್ಲವನ್ನೂ ನಾಶ ಮಾಡುತ್ತಾ ಸಾಗುತ್ತದೆ ಎಂದು ಹೇಳಲಾಗಿದೆ.

5 / 6
ಯುರೋಪಿಯನ್ ಯೂನಿಯನ್ ಮಾನಿಟರಿಂಗ್ ಗ್ರೂಪ್​ನ ವಿವರಣೆಯಂತೆ, ಲಾವಾ ರಸವು ಈಗ ಸುಮಾರು 258 ಹೆಕ್ಟೇರ್​ನಷ್ಟು ಪ್ರದೇಶಕ್ಕೆ (637 ಎಕರೆ) ಹರಡಿದೆ. ಆದರೆ, ಇದುವರೆಗೆ ಯಾವುದೇ ಸಾವು ಸಂಭವಿಸಿರುವ ಬಗ್ಗೆ ಮಾಹಿತಿ ಲಭಿಸಿಲ್ಲ. 6,000 ಕ್ಕೂ ಹೆಚ್ಚು ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಸಮುದ್ರ ತೀರದ ಮೂರು ಹಳ್ಳಿಗಳಲ್ಲಿ ಕೂಡ ಈ ಬಗ್ಗೆ ಎಚ್ಚರಿಕೆ ಕೈಗೊಳ್ಳಲಾಗಿದೆ.

ಯುರೋಪಿಯನ್ ಯೂನಿಯನ್ ಮಾನಿಟರಿಂಗ್ ಗ್ರೂಪ್​ನ ವಿವರಣೆಯಂತೆ, ಲಾವಾ ರಸವು ಈಗ ಸುಮಾರು 258 ಹೆಕ್ಟೇರ್​ನಷ್ಟು ಪ್ರದೇಶಕ್ಕೆ (637 ಎಕರೆ) ಹರಡಿದೆ. ಆದರೆ, ಇದುವರೆಗೆ ಯಾವುದೇ ಸಾವು ಸಂಭವಿಸಿರುವ ಬಗ್ಗೆ ಮಾಹಿತಿ ಲಭಿಸಿಲ್ಲ. 6,000 ಕ್ಕೂ ಹೆಚ್ಚು ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಸಮುದ್ರ ತೀರದ ಮೂರು ಹಳ್ಳಿಗಳಲ್ಲಿ ಕೂಡ ಈ ಬಗ್ಗೆ ಎಚ್ಚರಿಕೆ ಕೈಗೊಳ್ಳಲಾಗಿದೆ.

6 / 6
Follow us
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ