Sheezan Khan: ತುನಿಶಾ ಶರ್ಮಾ ಸಾವಿನ ಕೇಸ್​: 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶೀಜಾನ್​ ಖಾನ್​

Updated on: Mar 05, 2023 | 5:34 PM

Tunisha Sharma | Sheezan Khan: ತುನಿಶಾ ಶರ್ಮಾ ಕುಟುಂಬದವರ ಆರೋಪದ ಮೇರೆಗೆ ಶೀಜಾನ್ ಖಾನ್​ ಅವರನ್ನು ಬಂಧಿಸಲಾಗಿತ್ತು. 70 ದಿನ ಜೈಲಿನಲ್ಲಿದ್ದ ಅವರಿಗೆ ಈಗ ಜಾಮೀನು ಸಿಕ್ಕಿದೆ.

1 / 5
‘ಅಲಿಬಾಬಾ’ ಧಾರಾವಾಹಿ ಖ್ಯಾತಿಯ ನಟಿ ತುನಿಶಾ ಶರ್ಮಾ ಅವರ ಸಾವಿನ ಕೇಸ್​ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟ ಶೀಜಾನ್​ ಖಾನ್​ ಅವರಿಗೆ ಜಾಮೀನು ಸಿಕ್ಕಿದೆ. ಸದ್ಯಕ್ಕೆ ಅವರು ನಿಟ್ಟುಸಿರು ಬಿಡುವಂತಾಗಿದೆ.

‘ಅಲಿಬಾಬಾ’ ಧಾರಾವಾಹಿ ಖ್ಯಾತಿಯ ನಟಿ ತುನಿಶಾ ಶರ್ಮಾ ಅವರ ಸಾವಿನ ಕೇಸ್​ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟ ಶೀಜಾನ್​ ಖಾನ್​ ಅವರಿಗೆ ಜಾಮೀನು ಸಿಕ್ಕಿದೆ. ಸದ್ಯಕ್ಕೆ ಅವರು ನಿಟ್ಟುಸಿರು ಬಿಡುವಂತಾಗಿದೆ.

2 / 5
2022ರ ಡಿಸೆಂಬರ್​ನಲ್ಲಿ ಶೀಜಾನ್​ ಖಾನ್​ ಅವರನ್ನು ಬಂಧಿಸಲಾಗಿತ್ತು. 70 ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ಜಾಮೀನು ಪಡೆದು ಹೊರಬಂದ ಅವರನ್ನು ಕುಟುಂಬದವರು ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್​ ಆಗಿವೆ.

2022ರ ಡಿಸೆಂಬರ್​ನಲ್ಲಿ ಶೀಜಾನ್​ ಖಾನ್​ ಅವರನ್ನು ಬಂಧಿಸಲಾಗಿತ್ತು. 70 ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ಜಾಮೀನು ಪಡೆದು ಹೊರಬಂದ ಅವರನ್ನು ಕುಟುಂಬದವರು ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್​ ಆಗಿವೆ.

3 / 5
ಶೀಜಾನ್​ ಖಾನ್​ ಅವರಿಗೆ ಶನಿವಾರ (ಮಾರ್ಚ್​ 4) ಜಾಮೀನು ಸಿಕ್ಕಿತು. ಜೈಲಿನ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಅವರು ಭಾನುವಾರ (ಮಾ.5) ಹೊರಬಂದಿದ್ದಾರೆ. ತಮ್ಮ ಪಾಸ್​ಪೋರ್ಟ್​ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಶೀಜಾನ್​ ಖಾನ್​ ಅವರಿಗೆ ಶನಿವಾರ (ಮಾರ್ಚ್​ 4) ಜಾಮೀನು ಸಿಕ್ಕಿತು. ಜೈಲಿನ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಅವರು ಭಾನುವಾರ (ಮಾ.5) ಹೊರಬಂದಿದ್ದಾರೆ. ತಮ್ಮ ಪಾಸ್​ಪೋರ್ಟ್​ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

4 / 5
ತುನಿಶಾ ಶರ್ಮಾ ಮತ್ತು ಶೀಜಾನ್​ ಖಾನ್​ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ನಡುವೆ ವೈಮನಸ್ಸು ಮೂಡಿತ್ತು. ಬ್ರೇಕಪ್​ ಮಾಡಿಕೊಂಡ ಕೆಲವೇ ದಿನಗಳಲ್ಲಿ ತುನಿಶಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು.

ತುನಿಶಾ ಶರ್ಮಾ ಮತ್ತು ಶೀಜಾನ್​ ಖಾನ್​ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ನಡುವೆ ವೈಮನಸ್ಸು ಮೂಡಿತ್ತು. ಬ್ರೇಕಪ್​ ಮಾಡಿಕೊಂಡ ಕೆಲವೇ ದಿನಗಳಲ್ಲಿ ತುನಿಶಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು.

5 / 5
ತುನಿಶಾ ಶರ್ಮಾ ಅವರ ಕುಟುಂಬದವರ ಆರೋಪದ ಮೇರೆಗೆ ಶೀಜಾನ್ ಖಾನ್​ ಅವರನ್ನು ಬಂಧಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು 524 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಶೀಜಾನ್ ಅವರಿಗೆ ಕೊಂಚ ರಿಲೀಫ್​ ಸಿಕ್ಕಿದೆ.

ತುನಿಶಾ ಶರ್ಮಾ ಅವರ ಕುಟುಂಬದವರ ಆರೋಪದ ಮೇರೆಗೆ ಶೀಜಾನ್ ಖಾನ್​ ಅವರನ್ನು ಬಂಧಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು 524 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಶೀಜಾನ್ ಅವರಿಗೆ ಕೊಂಚ ರಿಲೀಫ್​ ಸಿಕ್ಕಿದೆ.

Published On - 5:34 pm, Sun, 5 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us