AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪ್ ಆದ್ಮಿ ರಾಜಕೀಯ ಅನಾಥಾಶ್ರಮ ಅಲ್ಲ: ಯುವಕರೇ ರಾಜಕೀಯಕ್ಕೆ ಬನ್ನಿ ಎಂದ ಭಾಸ್ಕರ್ ರಾವ್

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಬಗ್ಗೆ ಭಾಸ್ಕರ್ ರಾವ್ ಮಾತನಾಡಿದ್ದು, ಇದು ದುಃಖಕರ ಘಟನೆ. ದುರಾಚಾರ ಹಾಗೂ ಭ್ರಷ್ಟಾಚಾರದ ಕಾರಣ ಇಂಥ ಘಟನೆ ನಡೆದಿದೆ.

ಆಪ್ ಆದ್ಮಿ ರಾಜಕೀಯ ಅನಾಥಾಶ್ರಮ ಅಲ್ಲ: ಯುವಕರೇ ರಾಜಕೀಯಕ್ಕೆ ಬನ್ನಿ ಎಂದ ಭಾಸ್ಕರ್ ರಾವ್
ಆಪ್‌‌ ಮುಖಂಡ ಭಾಸ್ಕರ್ ರಾವ್
TV9 Web
| Edited By: |

Updated on:Apr 15, 2022 | 3:00 PM

Share

ವಿಜಯಪುರ: ಆಪ್ ಆದ್ಮಿ (Aap Admi) ರಾಜಕೀಯ ಅನಾಥಾಶ್ರಮ ಅಲ್ಲ. ಟಿಕೆಟ್ ನೀಡಬೇಕಾದರೆ ಮೂರು ಟೆಸ್ಟ್ ಆಗುತ್ತದೆ ಎಂದು ಪಕ್ಷಕ್ಕೆ ವಿವಿಧ ಮುಖಂಡರ ಹಾಗೂ ಯುವಕರ ಸೇರ್ಪಡೆ ಕಾರ್ಯಕ್ರಮ ಬಳಿಕ ವಿಜಯಪುರದಲ್ಲಿ ಆಪ್‌‌ ಮುಖಂಡ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡಲಾಗುತ್ತದೆ. ಜನ ಸಾಮಾನ್ಯರು ಜನಪ್ರತಿನಿಧಿಗಳಾಗಬೇಕು. ಒಳ್ಳೆ ವಿಚಾರವಿಟ್ಟುಕೊಂಡು ಯುವಕರು ರಾಜಕೀಯಕ್ಕೆ ಬನ್ನಿ ಎಂದು ಭಾಸ್ಕರ್ ರಾವ್ ಹೇಳಿದರು. ಸಾಮಾನ್ಯರೇ ನಮ್ಮ ಅಭ್ಯರ್ಥಿಗಳು. ಜಾತಿ ಹೆಸರು ನಮ್ಮ ಪಕ್ಷದಲ್ಲಿಲ್ಲಾ. ನೀವ್ ಮಾಡಿಲ್ವಾ ಎಂದು ಒಂದು ಪಕ್ಷವನ್ನು ಮತ್ತೊಂದು ಪಕ್ಷದವರು ಪ್ರಶ್ನೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ. ಅಭಿವೃದ್ಧಿ ಕೆಲಸ ಮಾಡಬೇಕಿದೆ. ಧರ್ಮ‌-ಜಾತಿ ಇಲ್ಲಿ ಇಲ್ಲಾ. ಆಮ್ ಆದ್ಮಿ‌ಜನ ಸಾಮನ್ಯ ಪಕ್ಷ. ರಾಜ್ಯ ಸುಮಾರು 7.5 ಲಕ್ಷ‌ ಕೋಟಿ‌ ಸಾಲ ಹೊಂದಿದೆ. ಜನರಿಗೆ ಬಜೆಟ್ ತಲಪುತ್ತಿಲ್ಲ.

ರಾಜ್ಯದ ಬಜೆಟ್ ಗಾತ್ರ ದೊಡ್ಡದಾಗುತ್ತಿದೆ. ಎಲ್ಲಾ ಪಕ್ಷಗಳ ನಾಯಕರು ವೈಯುಕ್ತಿಕವಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ದುರಾಸೆ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ. ಜನರು ರಾಷ್ಟ್ರೀಯ ಪಕ್ಷಗಳ ಬಗ್ಗೆ ನಿರಾಸೆ ಹೊಂದಿದ್ದಾರೆ. ಪಕ್ಷ ಸಂಘಟನೆ ಜಿಲ್ಲಾ ತಾಲೂಕು ಮಟ್ಟದಲ್ಲಿ ಆಗಬೇಕಿದೆ. ಪಂಜಾಬ್ ಫಲಿತಾಂಶ ಪ್ರೇರಣೆಯೇ ಕಾರಣ. ಇದಕ್ಕೆ ದೆಹಲಿ ಪಂಜಾಬ್​ನಲ್ಲಿ ಅಧಿಕಾರ ಹಾಗೂ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಆಮ್ ಆದ್ಮಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡಲಿದೆ ಎಂದು ಹೇಳದರು.

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಬಗ್ಗೆ ಭಾಸ್ಕರ್ ರಾವ್ ಮಾತನಾಡಿದ್ದು, ಇದು ದುಃಖಕರ ಘಟನೆ. ದುರಾಚಾರ ಹಾಗೂ ಭ್ರಷ್ಟಾಚಾರದ ಕಾರಣ ಇಂಥ ಘಟನೆ ನಡೆದಿದೆ. ಆರ್ಡಿಪಿಆರ್ ಸಚಿವರು ಮೌಖಿಕವಾಗಿ ಹೇಳಿದ ಕಾರಣ ಗುತ್ತಿಗೆದಾರ ಕಾಮಗಾರಿ ಮಾಡಿದ್ದಾರೆ. ಸಚಿವರು ಹೇಳಿದ ಕಾರಣ ಅಧಿಕಾರಿಗಳು ಸಹ ಸುಮ್ಮನಾಗಿದ್ದಾರೆ. ಕಾಮಗಾರಿ ಬಳಿಕ ಹಣ ನೀಡಬೇಕಿತ್ತು. ಅದಕ್ಕಾಗಿ ಕಮೀಷನ್ ಹಣ ಕೇಳಬಾರದಿತ್ತು. ಘಟನೆ ಕಾರಣ ಸಚಿವ ಈಶ್ವರಪ್ಪ ಅರೆಸ್ಟ್ ಆಗಿಲ್ಲಾ. ಜನ ಸಾಮಾನ್ಯರಾಗಿದ್ದರೆ ಪೊಲೀಸರು ಆಗಲೇ ಬಂಧಿಸುತ್ತಿದ್ದರು. ಸರ್ಕಾರದ ಒತ್ತಡದಿಂದ ಸಚಿವ ಈಶ್ವರಪ್ಪ ಬಂಧನವಾಗಿಲ್ಲಾ. 108 ಕಾಮಗಾರಿಗಳು ಅಲ್ಲಿ ನಡೆದಿದ್ದರೂ ವರ್ಕ್ ಆರ್ಡರ್ ನೀಡಿಲ್ಲಾ. ಭ್ರಷ್ಟಾಚಾರ ಪೆಡಂಭೂತವಾಗಿ ಬೆಳೆಯಲು‌ ಕಾಂಗ್ರೆಸ್‌ ಕಾರಣವೆಂದು ಭಾಸ್ಕರ್‌ರಾವ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:

ಬಾಲಿವುಡ್ ಒಂದರಲ್ಲೇ 300 ಕೋಟಿ ರೂಪಾಯಿ ಬಾಚಲಿದೆ ‘ಕೆಜಿಎಫ್​ 2’? ಹೌದೆನ್ನುತ್ತಿದ್ದಾರೆ ಪಂಡಿತರು

Omicron XE Variant: ಹೊಸ ಒಮಿಕ್ರಾನ್ ಎಕ್ಸ್​ಇ ರೂಪಾಂತರದ ಲಕ್ಷಣ, ಪರಿಣಾಮಗಳೇನು?

Published On - 2:59 pm, Fri, 15 April 22

Follow Us
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!