AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕರ್ತರಿಂದ ದೂರವಾಗಬೇಡಿ: ಬಿಜೆಪಿ ಶಾಸಕರಿಗೆ ಕಾರ್ಯಕಾರಿಣಿಯಲ್ಲಿ ಕಿವಿಮಾತು

Karnataka Politics: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪ್ರಬಲವಾಗಿ ಪ್ರತಿಸ್ಪರ್ಧೆ ಒಡ್ಡುವ ಜವಾಬ್ದಾರಿಯನ್ನು ಸಚಿವ ಈಶ್ವರಪ್ಪಗೆ ವಹಿಸಲಾಗಿದೆ.

ಕಾರ್ಯಕರ್ತರಿಂದ ದೂರವಾಗಬೇಡಿ: ಬಿಜೆಪಿ ಶಾಸಕರಿಗೆ ಕಾರ್ಯಕಾರಿಣಿಯಲ್ಲಿ ಕಿವಿಮಾತು
ಬಸವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್
TV9 Web
| Updated By: guruganesh bhat|

Updated on: Sep 19, 2021 | 9:36 PM

Share

ಬೆಂಗಳೂರು: ಪಕ್ಷದ ಕಾರ್ಯಕರ್ತರನ್ನು ಬಿಟ್ಟು ದೂರವಿರದಂತೆ ಕಿವಿಮಾತು ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಬಿಜೆಪಿ ಶಾಸಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿವಿಮಾತು ಹೇಳಿದ್ದಾರೆ. ಶಾಸಕರಿಗೆ ನಿಗಮ ಮಂಡಳಿ ಹಂಚಿಕೆ ಆದರೆ ಅದೇ ಅಂತಿಮ. ಪಕ್ಷ ನೀಡುವ ಜವಾಬ್ದಾರಿಯನ್ನು ಬೇಸರವಿಲ್ಲದೇ ನಿಭಾಯಿಸಿ. ನಿಮ್ಮ ಬೇಸರದಿಂದಾಗಿ ಕಾರ್ಯಕರ್ತರಿಂದ ದೂರಾಗಬೇಡಿ. ಕಾರ್ಯಕರ್ತರ ಜೊತೆಗೆ ಬೆರೆಯುವುದನ್ನು ನಿಲ್ಲಿಸಬೇಡಿ. ಅಸಮಾಧಾನ ದೂರವಿಟ್ಟು ಕೊಟ್ಟಿರುವ ಜವಾಬ್ದಾರಿ ನಿರ್ವಹಿಸಿ ಎಂದು ಬಿಜೆಪಿ ಶಾಸಕರಿಗೆ ಕಾರ್ಯಕಾರಿಣಿಯಲ್ಲಿ ನಿರ್ದೇಶನ ನೀಡಲಾಗಿದೆ.

ಹಿಂದುಳಿದ ವರ್ಗಗಳನ್ನು ಬಿಜೆಪಿಯತ್ತ ಸೆಳೆಯಲು ಮತ್ತು ಹಿಡಿದಿಟ್ಟುಕೊಂಡು ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಗ್ರಾಮೀಣಾಭಿವೃಧ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ವಹಿಸಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪ್ರಬಲವಾಗಿ ಪ್ರತಿಸ್ಪರ್ಧೆ ಒಡ್ಡುವ ಜವಾಬ್ದಾರಿಯನ್ನು ಸಚಿವ ಈಶ್ವರಪ್ಪಗೆ ವಹಿಸಲಾಗಿದೆ.

ಯಾವುದೇ ದೇಗುಲದ ತೆರವು/ ಸ್ಥಳಾಂತರ ಇಲ್ಲವೆಂದು ಸಿಎಂ ಸ್ಪಷ್ಟಪಡಿಸಿದ್ದಾರೆ: ಎನ್ ರವಿಕುಮಾರ್ ಕರ್ನಾಟಕದಲ್ಲಿ ಯಾವುದೇ ದೇಗುಲ ತೆರವುಗೊಳಿಸುವುದಿಲ್ಲ, ಅಲ್ಲದೇ ಸ್ಥಳಾಂತರ ಕೂಡ ಮಾಡುವುದಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮುಕ್ತಾಯಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಯಶಸ್ವಿಯಾಗಿದ್ದು ಕಾರ್ಯಕಾರಿಣಿಯಲ್ಲಿ 2 ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ರಾಜ್ಯಗಳಿಗೆ ಅಧಿಕಾರ ನೀಡಿದ ಕಾರಣಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ರೈತ ಮಕ್ಕಳಿಗೆ ಶಿಷ್ಯ ವೇತನ ನೀಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಯಶಸ್ವಿಯಾಗಿದೆ. ಜನಪರ ಆಡಳಿತ ಮಾಡುವುದಕ್ಕೆ ಸಂಕಲ್ಪ ಮಾಡಿದ್ದೇವೆ. ಅಧಿವೇಶನ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಬೇಕು. ಆಡಳಿತಕ್ಕೆ ಮತ್ತಷ್ಟು ಚುರುಕು ಮುಟ್ಟಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: 

ತಮ್ಮ ಕುರಿತು ಹರಿದಾಡುತ್ತಿರುವ ವಿಡಿಯೊಗೆ ಸಂಸದ ಸದಾನಂದ ಗೌಡ ಸ್ಪಷ್ಟನೆ; ಶೇರ್ ಮಾಡಿದವರಿಗೆ ಶಿಕ್ಷೆಯ ಎಚ್ಚರಿಕೆ

ಯಾವುದೇ ದೇಗುಲದ ತೆರವು/ ಸ್ಥಳಾಂತರ ಇಲ್ಲವೆಂದು ಸಿಎಂ ಸ್ಪಷ್ಟಪಡಿಸಿದ್ದಾರೆ: ಎನ್ ರವಿಕುಮಾರ್

(BJP state executive meet CM Basavaraj Bommai and State President Nalin Kumar Kateel direct MLAs to have good relationship with Karyakartas)