ಯಡಿಯೂರಪ್ಪ ವಿರೋಧಿ ಬಣದಿಂದ ಸ್ವಾತಂತ್ರ್ಯದ ಬಾವುಟ! ಸಂದರ್ಭಕ್ಕೆ ತಕ್ಕಂತೆ ಪದ-ಪದವಿ ಪೋಣಿಸುವುದಾದರೆ ಅದು ಹೀಗಾಗಬಹುದೇ?

bs yediyurappa: ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿಗೂ ಮೊದಲೇ ಸಂಘ ಪರಿವಾರದ ನಾಯಕರಿಂದಲೂ ಮಾಹಿತಿ ಸಂಗ್ರಹಗೊಂಡಿತ್ತು. ಅರುಣ್ ಸಿಂಗ್ ಭೇಟಿ ಕಾಲಕ್ಕೆ ಇನ್ನೂ ಕೆಲ ಶಾಸಕರಿಂದಲೂ ಮಾಹಿತಿ ಪೂರೈಕೆಯಾಗಿದೆ.  ಅರುಣ್ ಸಿಂಗ್ ರಾಜ್ಯ ಭೇಟಿ ಅಭಿಪ್ರಾಯ ಸಂಗ್ರಹವೂ ನಾಯಕತ್ವದ ಬದಲಾವಣೆ ಭಾಗವೇ ಆಗಿತ್ತು ಎಂಬುದು ಕುತೂಹಲಕಾರಿಯಾಗಿದೆ.

ಯಡಿಯೂರಪ್ಪ ವಿರೋಧಿ ಬಣದಿಂದ ಸ್ವಾತಂತ್ರ್ಯದ ಬಾವುಟ! ಸಂದರ್ಭಕ್ಕೆ ತಕ್ಕಂತೆ ಪದ-ಪದವಿ ಪೋಣಿಸುವುದಾದರೆ ಅದು ಹೀಗಾಗಬಹುದೇ?
ಕೊನೆಗೂ ಯಡಿಯೂರಪ್ಪ ಕೆಳಗಿಳಿಸುವಲ್ಲಿ ಯಶಸ್ಸು ಪಡೆದ ವಿರೋಧಿ ಬಣ; ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಸಿಎಂ
Follow us
| Updated By: ಸಾಧು ಶ್ರೀನಾಥ್​

Updated on:Jul 26, 2021 | 4:03 PM

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸುವಲ್ಲಿ ವಿರೋಧಿ ಬಣ ಕೊನೆಗೂ ಯಶಸ್ಸು ಸಾಧಿಸಿದೆ. ಅದೂ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಹೊಸ ಸಿಎಂ ಇರ್ತಾರೆ ಎಂದೇ ಬಿಂಬಿಸಿಕೊಂಡು ಬಂದಿದ್ದ ವಿರೋಧಿ ಪಡೆ ಮೇಲುಗೈ ಸಾಧಿಸಿದೆ. 

ಗಮನಾರ್ಹವೆಂದ್ರೆ ಕೇವಲ ವಯೋ ಸಹಜ ಕಾರಣಗಳನ್ನು ಮಾತ್ರ ಯಡಿಯೂರಪ್ಪ ವಿರುದ್ದ ಬಳಸಲ್ಪಟ್ಟಿಲ್ಲ. ಬದಲಿಗೆ ಯಡಿಯೂರಪ್ಪ ಹೊರತುಪಡಿಸಿ, ಅವರ ಕುಟುಂಬಸ್ಥರ ದಾಖಲೆಗಳನ್ನೂ ಸಹ ಬಿಎಸ್ವೈ ವಿರೋಧಿ ಬಣ  ಹೈಕಮಾಂಡ್ ನಾಯಕರಿಗೆ ತಲುಪಿಸಿತ್ತು.

ಸಿಎಂ‌ ಪುತ್ರ ವಿಜಯೇಂದ್ರಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಹೈಕಮಾಂಡ್ ಗೆ ರವಾನೆಯಾಗಿದೆ. ಸಿಎಂ ಯಡಿಯೂರಪ್ಪ ಅವರ ದಿನಚರಿಯ ವಿವರಗಳನ್ನು ಕೂಡ ವಿರೋಧಿ ಟೀಂ ಸಂಗ್ರಹಿಸಿ, ಹೈಕಮಾಂಡ್ ಗಮನಕ್ಕೆ ತಂದಿತ್ತು.

ಯಡಿಯೂರಪ್ಪ ತಾವೇ ಐದಕ್ಕೂ ಹೆಚ್ಚು ಪ್ರಮುಖ ಖಾತೆಗಳನ್ನು ಇಟ್ಟುಕೊಂಡಿರುವ ಬಗ್ಗೆ ಸವಿವರ ತಲುಪಿಯಾಗಿತ್ತು. ಪ್ರತಿ ಇಲಾಖೆಯಲ್ಲೂ ವಿಜಯೇಂದ್ರ ಹಸ್ತಕ್ಷೇಪ, ಟೆಂಡರ್ ಪ್ರಕ್ರಿಯೆಗಳಲ್ಲಿ ವಿಜಯೇಂದ್ರ ಮೂಗು ತೂರಿಸುವುದು, ಈ ಎಲ್ಲ ವಿಚಾರಗಳನ್ನು ದಾಖಲೆ ಸಮೇತ ಕೊಂಡೊಯ್ದು ಹೈಕಮಾಂಡ್ ನಾಯಕರಿಗೆ ಅದೇ ಟೀಂ ತಲುಪಿಸಿತ್ತು.

ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿಗೂ ಮೊದಲೇ ಸಂಘ ಪರಿವಾರದ ನಾಯಕರಿಂದಲೂ ಮಾಹಿತಿ ಸಂಗ್ರಹಗೊಂಡಿತ್ತು. ಅರುಣ್ ಸಿಂಗ್ ಭೇಟಿ ಕಾಲಕ್ಕೆ ಇನ್ನೂ ಕೆಲ ಶಾಸಕರಿಂದಲೂ ಮಾಹಿತಿ ಪೂರೈಕೆಯಾಗಿದೆ.  ಅರುಣ್ ಸಿಂಗ್ ರಾಜ್ಯ ಭೇಟಿ ಅಭಿಪ್ರಾಯ ಸಂಗ್ರಹವೂ ನಾಯಕತ್ವದ ಬದಲಾವಣೆ ಭಾಗವೇ ಆಗಿತ್ತು ಎಂಬುದು ಕುತೂಹಲಕಾರಿಯಾಗಿದೆ. ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಡಿಯೂರಪ್ಪ ವಿರೋಧಿ ಬಣ ಯಶಸ್ಸು ಕಂಡಿದೆ.

ಈ ಸಂದರ್ಭಕ್ಕೆ ತಕ್ಕಂತೆ ಪದ- ಪದವಿ ಪೋಣಿಸುವುದಾದರೆ ಅದು ಹೀಗಾಗಬಹುದೇ?  ನಾಳೆ ಯಾರ ‘ಜೋಶ್‘ ಉಳಿಯುತ್ತದೋ..? ಯಾರಿಗೆ ಸಿಗುತ್ತೋ ‘ಬೆಲ್ಲ‘ದ ಹೋಳಿಗೆ..? ಯಾರು ‘ಸೀಟಿ‘ ಹೊಡೆಯುತ್ತಾರೋ…? ಯಾರಾಗುತ್ತಾರೋ ಕರ್ನಾಟಕದ ‘ಮುರುಗೇಶ‘… ಯಾರ ಯತ್ನಾ(ಳ) ಫಲ ಕೊಡುತ್ತದೋ ಗೊತ್ತಿಲ್ಲ.. ಒಟ್ನಲ್ಲಿ ಯಾರೇ ಆದರೂ ‘ಸಂತೋಷ…’

ಬಿ.ಎಸ್. ಯಡಿಯೂರಪ್ಪ ಬಿಜೆಪಿಯ ಆಧಾರ ಸ್ತಂಭವಿದ್ದಂತೆ; ಬಿಎಸ್‌ವೈ ರಾಜೀನಾಮೆಯಿಂದ ನಮ್ಮ ಬಲ ಕುಸಿದ ಭಾವನೆ: ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ

(corruption allegations team opposite to bs yediyurappa successful in pulling him down timely)

Published On - 3:41 pm, Mon, 26 July 21

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್