ಕಾಂಗ್ರೆಸ್ ಪಕ್ಷದಿಂದ ಯಾರಾದರೂ ಹೊರಹೋಗುತ್ತಿದ್ದರೆ, ಹೋಗಲಿ ಆರ್​​ಎಸ್ಎಸ್​​ಗೆ ಅಂತಿದ್ದರು ರಾಹುಲ್ ಗಾಂಧಿ

ಹಿಮಂತ ಪಕ್ಷ ತೊರೆಯುತ್ತಾರೆ ಎಂದು ನಾನು ಅವರಿಗೆ ಹೇಳಿದ್ದೆ. ಜಾನೇ ದೋ ಆರ್‌ಎಸ್‌ಎಸ್ ಮೇ ಎಂದರು. ಪ್ರತಿ ಬಾರಿ ಕಾಂಗ್ರೆಸ್ ನಾಯಕರೊಬ್ಬರು ಹೊರಹೋಗುವ ಬಗ್ಗೆ ಮಾತನಾಡುವಾಗ, ಇದು ರಾಹುಲ್ ಗಾಂಧಿಯವರು ಈ ವಾಕ್ಯ ಬಳಸುತ್ತಾರೆ ಎಂದು ಗುಲಾಂ ನಬಿ ಆಜಾದ್  ಸಂದರ್ಶನದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಯಾರಾದರೂ ಹೊರಹೋಗುತ್ತಿದ್ದರೆ, ಹೋಗಲಿ ಆರ್​​ಎಸ್ಎಸ್​​ಗೆ ಅಂತಿದ್ದರು ರಾಹುಲ್ ಗಾಂಧಿ
ರಾಹುಲ್ ಗಾಂಧಿ- ಗುಲಾಂನಬಿ ಆಜಾದ್
Follow us
|

Updated on:Apr 08, 2023 | 1:30 PM

ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಶನಿವಾರ ಗುಲಾಂ ನಬಿ ಆಜಾದ್ (Ghulam Nabi Azad) ಅವರ ಸಂದರ್ಶನವನ್ನು ಹಂಚಿಕೊಂಡಿದ್ದಾರೆ, ಅಲ್ಲಿ  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಆಜಾದ್, ಹಿಮಂತ ಬಿಸ್ವಾ ಶರ್ಮಾ ಪಕ್ಷದಿಂದ ನಿರ್ಗಮಿಸುವಾಗ ಅವರು ಹೇಗೆ ಮಧ್ಯಪ್ರವೇಶಿಸಿದರು ಎಂಬುದರ ಕುರಿತು ಮಾತನಾಡಿದ್ದಾರೆ. ಗುಲಾಂ ನಬಿ ಆಜಾದ್ ಅವರ ಪ್ರಯತ್ನಗಳು ವಿಫಲವಾದವು, ಆದರೆ ನಾನು ಇನ್ನೂ 12 ತಿಂಗಳು ಪಕ್ಷದಲ್ಲಿ ಮುಂದುವರಿದೆ. ಆ 12 ತಿಂಗಳ ಕಥೆ ಸಾಕಷ್ಟು ಆಕರ್ಷಕವಾಗಿದೆ. ಅಂತಿಮವಾಗಿ ನಾನು ಆಗಸ್ಟ್ 2015 ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದೇನೆ ಎಂದು ಹಿಮಂತ ಟ್ವೀಟ್ ಮಾಡಿದ್ದಾರೆ. ಮೊಜೊಗೆ ನೀಡಿದ ಸಂದರ್ಶನದಲ್ಲಿ  40-45 ಶಾಸಕರ ಬೆಂಬಲದೊಂದಿಗೆ ಹಿಮಂತ ಬಂಡಾಯವನ್ನು ಘೋಷಿಸಿದಾಗ ಅಲ್ಲಿ ಮಧ್ಯಪ್ರವೇಶಿಸಲು ನನ್ನನ್ನು ಕರೆಯಲಾಯಿತು ಎಂದು ಗುಲಾಂ ನಬಿ ಆಜಾದ್ ಹೇಳಿದರು. ಹಿಮಂತ ನನಗೆ ಆಪ್ತರಾಗಿದ್ದರಿಂದ ಪರಿಸ್ಥಿತಿಯನ್ನು ನಿರ್ವಹಿಸುವಂತೆ ಹೇಳಲಾಗಿತ್ತು. ಅಲ್ಲದೇ ಆಗಿನ ರಾಜ್ಯಪಾಲ ಜೆ.ಬಿ.ಪಟ್ನಾಯಕ್ ಅವರಿಗೆ ಆಪ್ತರಾಗಿದ್ದರು. ಎರಡೂ ಕೆಲಸಗಳನ್ನು ನಿಷ್ಠೆಯಿಂದ ಮಾಡಿದ್ದೇನೆ ಎಂದು ಆಜಾದ್ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ಹಿಮಂತನನ್ನು ಕರೆದು ತನ್ನ ಎಲ್ಲಾ ಬೆಂಬಲಿಗರೊಂದಿಗೆ ವಿವಿಧ ವಿಮಾನಗಳಲ್ಲಿ ದೆಹಲಿಗೆ ಬರುವಂತೆ ಹೇಳಿದೆ. ಆಗಿನ ಮುಖ್ಯಮಂತ್ರಿಗಳಿಗೂ ಹಾಗೆಯೇ ಮಾಡುವಂತೆ ಹೇಳಿದ್ದರು. ನಾವು ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ. ಹಿಮಂತ ಅವರಿಗೆ ಹೆಚ್ಚಿನ ಬೆಂಬಲವಿದೆ. ಈ ಪ್ರಕ್ರಿಯೆಯಲ್ಲಿ, ನಾನು ಎಲ್ಲಾ ಬೆಳವಣಿಗೆಗಳ ಬಗ್ಗೆ ಸೋನಿಯಾ ಗಾಂಧಿಗೆ ವಿವರಿಸಿದೆ. ಆದರೆ ಅವರು ರಾಹುಲ್ ಗಾಂಧಿಯೊಂದಿಗೆ ಸಮಾಲೋಚಿಸಲು ನಮಗೆ ಹೇಳಲಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿದರು.

ನಾವು ಅಸ್ಸಾಂಗೆ ಹೋಗುವ ಮೊದಲು, ನನಗೆ ರಾಹುಲ್ ಗಾಂಧಿಯಿಂದ ಕರೆ ಬಂದಿತು. ಅವರು ನನ್ನಲ್ಲಿ ಸಿಎಂನ್ನು ಬದಲಾಯಿಸಲು ಅಸ್ಸಾಂಗೆ ಹೋಗುತ್ತೀರಾ ಎಂದು ಕೇಳಿದರು. ನಾವು ಹೋಗಲು ಸಾಧ್ಯವಿಲ್ಲ ಎಂದು ಹೇಳಿ ನಮ್ಮನ್ನು ವಾಪಸ್ ಕರೆದರು, ಆ ಸಮಯದಲ್ಲಿ ಅವರು ಪಕ್ಷದ ಅಧ್ಯಕ್ಷರಾಗಿರಲಿಲ್ಲ.

ನಾನು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದಾಗ, ಅವರು ತರುಣ್ ಗೊಗೊಯ್ (ಅಂದಿನ ಅಸ್ಸಾಂ ಸಿಎಂ) ಮತ್ತು ಅವರ ಮಗ ಗೌರವ್ ಗೊಗೊಯ್ ಅವರೊಂದಿಗೆ ಚಹಾ ಸೇವಿಸುತ್ತಿರುವುದನ್ನು ನಾನು ನೋಡಿದೆ. ನಾವು ತರುಣ್ ಗೊಗೊಯ್ ಅವರನ್ನು ಕಿರಿಕಿರಿ ಮಾಡುತ್ತಿದ್ದೇವೆ ಎಂದು ಗೊತ್ತಾಯಿತು ರಾಹುಲ್ ಗಾಂಧಿ ಹೇಳಿದರು. ಆ ಕಾರ್ಯ ನನಗೆ ನೀಡಲಾಯಿತು ಎಂದು ನಾನು ಅವರಿಗೆ ಹೇಳಿದೆ ಎಂದು ಆಜಾದ್ ಹೇಳಿದರು.

ಇದನ್ನೂ ಓದಿ: Droupadi Murmu: ಸುಖೋಯ್-30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹಿಮಂತ ಪಕ್ಷ ತೊರೆಯುತ್ತಾರೆ ಎಂದು ನಾನು ಅವರಿಗೆ ಹೇಳಿದ್ದೆ. ಜಾನೇ ದೋ ಆರ್‌ಎಸ್‌ಎಸ್ ಮೇ ಎಂದರು. ಪ್ರತಿ ಬಾರಿ ಕಾಂಗ್ರೆಸ್ ನಾಯಕರೊಬ್ಬರು ಹೊರಹೋಗುವ ಬಗ್ಗೆ ಮಾತನಾಡುವಾಗ, ಇದು ರಾಹುಲ್ ಗಾಂಧಿಯವರು ಈ ವಾಕ್ಯ ಬಳಸುತ್ತಾರೆ ಎಂದು ಗುಲಾಂ ನಬಿ ಆಜಾದ್  ಸಂದರ್ಶನದಲ್ಲಿ ಹೇಳಿದ್ದಾರೆ.

ಗುಲಾಂ ನಬಿ ಆಜಾದ್ ಅವರು ತಮ್ಮ ಆತ್ಮಚರಿತ್ರೆ ‘ಆಜಾದ್’ ಬಿಡುಗಡೆಗೂ ಮುನ್ನ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು  ಟೀಕಿಸಿದರು. ಪುಸ್ತಕ ಬಿಡುಗಡೆಗೆ ಮುನ್ನ ನೀಡಿದ ಹಲವಾರು ಸಂದರ್ಶನಗಳಲ್ಲಿ, ಆಜಾದ್ ಅವರು ಪ್ರಧಾನಿ ಮೋದಿಯವರ ನಾಯಕತ್ವವನ್ನು ಹೊಗಳಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Sat, 8 April 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ