Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಭಾಷಣದಲ್ಲಿ ಭಾರತಮಾತೆಯನ್ನು ಅವಮಾನಿಸಿದರೇ ರಾಹುಲ್ ಗಾಂಧಿ? ವೈರಲ್ ವಿಡಿಯೊದ ಫ್ಯಾಕ್ಟ್​​​ ಚೆಕ್

Fact Check: ಭಾರತ ಮಾತೆ ಯಾರು, ಆಕೆ ಏನು ಎಂದು ಜಾರ್ಜ್ ಸೊರೊಸ್‌ನ ಕೈಗೊಂಬೆ ಕೇಳುತ್ತಾನೆ. ನಾಚಿಕೆಗೇಡು ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿಯವರ ಭಾಷಣದ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನಿಜವಾಗಿಯೂ ರಾಹುಲ್ ಗಾಂಧಿ ಆ ರೀತಿ ಹೇಳಿದ್ದಾರೆಯೇ? ಇಲ್ಲಿದೆ ವೈರಲ್ ವಿಡಿಯೊದ ಫ್ಯಾಕ್ಟ್​​​ಚೆಕ್.

ತಮ್ಮ ಭಾಷಣದಲ್ಲಿ ಭಾರತಮಾತೆಯನ್ನು ಅವಮಾನಿಸಿದರೇ ರಾಹುಲ್ ಗಾಂಧಿ? ವೈರಲ್ ವಿಡಿಯೊದ ಫ್ಯಾಕ್ಟ್​​​ ಚೆಕ್
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Nov 27, 2023 | 4:29 PM

ದೆಹಲಿ ನವೆಂಬರ್ 27: ನರೇಂದ್ರ ಮೋದಿ (Narendra Modi) ಮೇಲಿನ ರಾಹುಲ್ ಗಾಂಧಿಯವರ ದ್ವೇಷ ಈಗ ಭಾರತದ ಮೇಲಿನ ದ್ವೇಷವಾಗಿ ಬದಲಾಗಿದೆ ಎಂಬ ಬರಹದೊಂದಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಭಾರತ ಮಾತೆಯ (Bharat Mata) ಅರ್ಥ ಏನು ಎಂದು ಜನರಲ್ಲಿ ಕೇಳುತ್ತಿರುವುದು ಈ ವಿಡಿಯೊದಲ್ಲಿದೆ. 18 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ರಾಹುಲ್‌ ಗಾಂಧಿ, ಎಲ್ಲರೂ ಈ ಘೋಷಣೆಯನ್ನು ಎತ್ತುತ್ತಾರೆ. ‘ಭಾರತ್ ಮಾತಾ ಕೀ ಜೈ’ ಎಂದು ನಾವು ಹೇಳುತ್ತೇವೆ, ಆದರೆ ಈ ಭಾರತ ಮಾತೆ ಯಾರು, ಇದೇನು? ಎಂದು ಕೇಳುತ್ತಾರೆ.

ಆಂಧ್ರಪ್ರದೇಶದ ಬಿಜೆಪಿ ನಾಯಕ ರಮೇಶ್ ನಾಯ್ಡು ಅವರ X ಖಾತೆ ಮತ್ತು ಬಿಜೆಪಿ ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿಯೂ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಫೇಸ್​​ಬುಕ್​​​ನಲ್ಲಿಯೂ ಹಲವರು ಇದೇ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೊ ಬಗ್ಗೆ ನ್ಯೂಸ್ ಚೆಕರ್ ಫ್ಯಾಕ್ಟ್ ಚೆಕ್ ಮಾಡಿ ವರದಿ ಪ್ರಕಟಿಸಿದೆ.ಬಿಜೆಪಿಯ ಅಧಿಕೃತ X ಹ್ಯಾಂಡಲ್‌ನ ಟ್ವೀಟ್‌ನ ಕಾಮೆಂಟ್ ವಿಭಾಗದಲ್ಲಿ ನವೆಂಬರ್ 20 ರಂದು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಸೆಲ್‌ನ ಅಧ್ಯಕ್ಷೆ ಸುಪ್ರಿಯಾ ಶ್ರೀನಾಥೆ ಒಂದು ವಿಡಿಯೊ ಶೇರ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು, ಚಂದನಾಜೀ ಅವರು ಈಗಷ್ಟೇ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದರು. ನಾವು ಎಲ್ಲರೂ ಇದೇ ಘೋಷಣೆ ಕೂಗಿದರೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೇಳಬಹುದು. ಆದರೆ ಭಾರತ ಮಾತೆ ಯಾರು? ಇದು ಏನು? ? ಪ್ರಶ್ನೆಯೆಂದರೆ… ನಾವೆಲ್ಲರೂ ಗೆದ್ದರೆ ಎಲ್ಲರೂ ಅದನ್ನು ಮಾಡುತ್ತಾರೆ, ನಾನು ಮಾಡುತ್ತೇನೆ, ನೀವು ಮಾಡುತ್ತೀರಿ, ಹಾಗಾದರೆ ಈ ಭಾರತ ಮಾತೆ ಯಾರು?

ನೋಡಿ, ಭಾರತ ಮಾತೆ ಈ ಭೂಮಿ. ಈ ಭಾರತ ಮಾತೆ ಈ ದೇಶದ ಜನ. ನಿಮ್ಮ ಸಹೋದರರು, ಸಹೋದರಿಯರು, ತಾಯಿಗಳು, ತಂದೆ, ಬಡವರು, ಶ್ರೀಮಂತರು, ವೃದ್ಧರು, ಭಾರತ ಮಾತೆಯ ಧ್ವನಿ ಪ್ರತಿಧ್ವನಿಸುವ ಎಲ್ಲಾ ಜನರು. ಇದು ಭಾರತ ಮಾತೆ (Mother India). ಹಾಗಾಗಿ ನಾನು ಸಂಸತ್ತಿನಲ್ಲಿ ಭಾಷಣ ಮಾಡಿ, ‘ನೋಡಿ, ನನಗೆ ಈ ಭಾರತ ಮಾತೆ ಯಾರು ಎಂದು ತಿಳಿಯಲು ಬಯಸುತ್ತೇನೆ, ಅಂದರೆ ಈ ಜನರು ಯಾರು? ಅವಳು ಎಷ್ಟು ಜನಸಂಖ್ಯೆಯನ್ನು ಹೊಂದಿದ್ದಾಳೆ? ಎಷ್ಟು ಆದಿವಾಸಿಗಳು, ಎಷ್ಟು ದಲಿತರು, ಎಷ್ಟು ಹಿಂದುಳಿದವರು, ಎಷ್ಟು ಬಡವರು ಮತ್ತು ಶ್ರೀಮಂತರು?. ನಾವು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರೆ ಮತ್ತು ಇದಕ್ಕಾಗಿ ನಾವು ನಮ್ಮ ಪ್ರಾಣವನ್ನು ನೀಡಲು ಸಿದ್ಧರಾಗಿದ್ದರೆ, ಭಾರತ ಮಾತಾ ಯಾರು ಎಂದು ಕಂಡುಹಿಡಿಯಬೇಕು. ಈ ದೇಶದಲ್ಲಿ ಎಷ್ಟು ಹಿಂದುಳಿದವರು, ಎಷ್ಟು ದಲಿತರು, ಎಷ್ಟು ಬಡವರು ಎಂದು ನಮಗೆ ತಿಳಿದಿಲ್ಲದಿದ್ದರೆ, ಭಾರತ್ ಮಾತಾ ಕೀ ಜೈ ಕೂಗಿದ್ದರಿಂದ ಏನು ಬಂತು? ಆದ್ದರಿಂದ, ಈ ದೇಶವು ಈಗ ಕ್ರಾಂತಿಕಾರಿ ಕೆಲಸವನ್ನು ಮಾಡಬೇಕಾಗಿದೆ. ಈ ದೇಶವು ಜನಾಂಗೀಯ ಜನಗಣತಿಯನ್ನು ನಡೆಸಬೇಕಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಅಧಿಕೃತ YouTube ಖಾತೆಯಿಂದ ನವೆಂಬರ್ 19, 2023 ರಂದು ಲೈವ್ ಮಾಡಿದ ವಿಡಿಯೊದಲ್ಲಿನ ತುಣುಕು ಇದಾಗಿದೆ.

ರಾಜಸ್ಥಾನದ ಬುಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಅವರು ನೀಡಿದ ಪೂರ್ಣ ಭಾಷಣವನ್ನು 35 ನಿಮಿಷಗಳ ವಿಡಿಯೊ ಹೊಂದಿದೆ, ಅಲ್ಲಿ ರಾಹುಲ್ ಗಾಂಧಿ ಭಾಷಣದ 01.21 ನಿಮಿಷಕ್ಕೆ ವೈರಲ್ ಹೇಳಿಕೆಯನ್ನು ಕೇಳಬಹುದು.

ರಾಜಸ್ಥಾನದ ಬುಂಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಅವರು ದೇಶದ ಆದಿವಾಸಿಗಳು, ಹಿಂದುಳಿದವರು ಮತ್ತು ದಲಿತರನ್ನು ಭಾರತ್ ಮಾತೆ ಎಂದು ಬಣ್ಣಿಸಿದ್ದಾರೆ ಆದ್ದರಿಂದ, ಅವರ ಭಾಷಣದ ಒಂದು ಭಾಗವನ್ನು ಮಾತ್ರ ಕತ್ತರಿಸಿ ವೈರಲ್ ಮಾಡಲಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Mon, 27 November 23

ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ