ನಳಿನ್ ಕುಮಾರ್ ಕಟೀಲು ಬಿಜೆಪಿ ಅಧ್ಯಕ್ಷನಾಗಲು ನಾಲಾಯಕ್. ರಸ್ತೆ, ಚರಂಡಿ ಸಮಸ್ಯೆ ಬಗ್ಗೆ ಮಾತಾಡಬೇಡಿ ಎಂದು ಕಟೀಲು ಹೇಳ್ತಾರೆ. ದಯವಿಟ್ಟು ಬಿಜೆಪಿಯವರ ಮಾತಿಗೆ ಮರುಳಾಗಬೇಡಿ. ನರೇಂದ್ರ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಸಾವರ್ಕರ್ ಮಾಸಾಶನ ಪಡೆದಿದ್ದರು. ಕರಾವಳಿಯನ್ನು ಹಿಂದುತ್ವದ ಪ್ರಯೋಗಾಲಯ ಮಾಡಲು ಹೊರಟಿದ್ದಾರೆ. ನಮ್ಮ ವಿರೋಧ ಮನುವಾದಿಗಳಿಗೆ ಹೊರತು ಹಿಂದೂವಾದಿಗೆ ಅಲ್ಲ. ವಿಧಾನಸೌಧದ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತಿವೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ: ಸಿದ್ದುಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ
ಪಿಎಫ್ಐ, ಆರ್ಎಸ್ಎಸ್ ಇದ್ದ ಹಾಗೆ, SDPI, ಬಿಜೆಪಿ ಇದ್ದ ಹಾಗೆ. RSS, ಬಿಜೆಪಿಯ ಯಾರಾದರೂ ಒಬ್ಬ ಸ್ವಾತಂತ್ರ್ಯಕ್ಕಾಗಿ ಸತ್ತಿದ್ದಾರಾ ಎಂದು ಪ್ರಶ್ನಿಸಿದರು. ಮಾತೆತ್ತಿದ್ರೆ SDPI, ಪಿಎಫ್ಐನವರನ್ನು ಬಿಡುಗಡೆ ಮಾಡಿದ್ರು ಅಂತಾರೆ. ನಾನು ಜೈಲಿನಿಂದ ಬಿಡುಗಡೆ ಮಾಡಿದವರ ಪಟ್ಟಿ ಕೊಡಿ ಎಂದು ಕೇಳಿದ್ದೆ. ಈ ಬಗ್ಗೆ ಆರಗ ಜ್ಞಾನೇಂದ್ರಗೂ ಪತ್ರ ಬರೆದಿದ್ದೆ, ಪ್ರತಿಕ್ರಿಯೆ ಬಂದಿಲ್ಲ. ವಿದ್ಯಾರ್ಥಿಗಳು, ದಲಿತರು, ರೈತ ಸಂಘಟನೆಯವರ ಪಟ್ಟಿ ಕೊಟ್ಟಿದ್ದರು.
ಇದನ್ನೂ ಓದಿ: ತ್ರಿಶೂಲ ಹಿಡ್ಕೊಂಡು ಬಿಜೆಪಿ ಕಾರ್ಯಕರ್ತರು ಸಾಯ್ತವ್ರೆ, ಯಾವ ಮಂತ್ರಿ ಮಗನೂ ಬಲಿಯಾಗಲ್ಲ: ಡಿ.ಕೆ.ಶಿವಕುಮಾರ್
ಎಸ್ಡಿಪಿಐ ಜತೆ ಸಂಬಂಧ ಇಟ್ಟುಕೊಂಡಿರುವುದು ಬಿಜೆಪಿಯವರು. ಈಗ PFI ಸಂಘಟನೆಯನ್ನು ಮಾತ್ರ ರದ್ದು ಮಾಡಿದ್ದಾರೆ. ಸ್ಯಾಂಟ್ರೋ ರವಿಯನ್ನು ಪೊಲೀಸ್ ಕಸ್ಟಡಿಗೆ ಕೇಳಲೇ ಇಲ್ಲ. ರವಿಯನ್ನು ಕಸ್ಟಡಿಗೆ ಕೇಳಿದರೆ ಇವರ ಜಾತಕವೆಲ್ಲಾ ಹೊರ ಬರುತ್ತೆ. ಸ್ಯಾಂಟ್ರೋ ರವಿಯಿಂದ ಆರಗ ಜ್ಞಾನೇಂದ್ರ ಬಣ್ಣ ಬಯಲಾಗಬಹುದು. ಈ ಕಾರಣಕ್ಕೆ ಸ್ಯಾಂಟ್ರೋ ರವಿಯನ್ನು ಪೊಲೀಸ್ ಕಸ್ಟಡಿಗೆ ಕೇಳಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.