AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಬ್ಬಿ ವೀರಣ್ಣ ಹುಟ್ಟಿರುವ ಕ್ಷೇತ್ರ ನಮ್ಮದು, ಕುಮಾರಸ್ವಾಮಿ ನಾಟಕ ತುಂಬಾ ನೋಡಿದೀವಿ- ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಟಾಂಗ್

ನಾನು ದೇವರಲ್ಲಿ ಕೇಳಿಕೊಳ್ತೀನಿ. ನಾನು ಏನಾದರೂ ತಪ್ಪು ಮಾಡಿದ್ದರೇ ನಮ್ಮ‌ ಮನೆ ಹಾಳಾಗಿ ಹೋಗಲಿ. ಕುಮಾರಸ್ವಾಮಿ ಸುಳ್ಳು ಹೇಳಿದ್ದರೇ ಅವರ ಮನೆ ಹಾಳಾಗಲಿ, ಅವರ ವಂಶ ಹಾಳಾಗಿ ಹೋಗಲಿ. ಯಾಕೆ ಜನರಿಗೆ ಸುಳ್ಳು ಹೇಳಬೇಕು ಎಂದು ತುಮಕೂರಿನಲ್ಲಿ ಎಸ್ ಆರ್ ಶ್ರೀನಿವಾಸ್ ಹೇಳಿದರು.

ಗುಬ್ಬಿ ವೀರಣ್ಣ ಹುಟ್ಟಿರುವ ಕ್ಷೇತ್ರ ನಮ್ಮದು, ಕುಮಾರಸ್ವಾಮಿ ನಾಟಕ ತುಂಬಾ ನೋಡಿದೀವಿ- ಗುಬ್ಬಿ ಜೆಡಿಎಸ್ ಶಾಸಕ  ಶ್ರೀನಿವಾಸ್ ಟಾಂಗ್
ಗುಬ್ಬಿ ವೀರಣ್ಣ ಹುಟ್ಟಿರುವ ಕ್ಷೇತ್ರ ನಮ್ಮದು, ಕುಮಾರಸ್ವಾಮಿ ನಾಟಕ ತುಂಬಾ ನೋಡಿದೀವಿ- ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಟಾಂಗ್
TV9 Web
| Edited By: ಸಾಧು ಶ್ರೀನಾಥ್​|

Updated on:Oct 26, 2021 | 1:17 PM

Share

ತುಮಕೂರು: ಗುಬ್ಬಿ ಸಮಾವೇಶಕ್ಕೆ ಹಣ ನೀಡಿ ಜನ ಕರೆದುಕೊಂಡು ಬಂದಿದ್ದರು. ನಾನು ಯಾರನ್ನೂ ಹೋಗಬೇಡಿ ಅಂತಾ ಹೇಳಿರಲಿಲ್ಲ, ಡಂಗೂರ ಹೊಡೆಸಿಲ್ಲ. ನನಗೆ ಅಂತಾ ದರ್ದ್ ಇಲ್ಲ. ಕಾರ್ಯಕರ್ತರು ನನ್ನ ಕೇಳಿದರೂ ನಾನು ಹೋಗಲ್ಲ, ಬೇಕಿದ್ದರೆ ನೀವು ಹೋಗಿ ಎಂದೆ. ನಾಗರಾಜ್ ರನ್ನ ಪಕ್ಷಕ್ಕೆ ಸೇರಿಸಿಕೊಂಡು ಶ್ರೀನಿವಾಸ್ ಗೆ ಬಲ ತುಂಬುತೀವಿ ಅನ್ನೋ ಕುಮಾರಸ್ವಾಮಿ ಹೇಳಿಕೆಗೆ ಶ್ರೀನಿವಾಸ್ ಹೀಗೆ ಟಾಂಗ್ ಕೊಟ್ಟಿದ್ದಾರೆ.

ಈ ನಾಟಕ ತುಂಬಾ ನೋಡಿದೀವಿ, ಈ ಮಾತುಗಳನ್ನು ಯಾರಾದರೂ ಕಿವಿಗೆ ಹೂವು ಇಟ್ಟುಕೊಂಡಿರೋರಿಗೆ ಹೇಳಿದ್ರೆ ನಂಬ್ತಾರೆ. ನಾನು ಕಿವಿಯಲ್ಲಿ ಹೂವ ಇಟ್ಟುಕೊಂಡಿದೀನಾ? ನಾನು 20 ವರ್ಷ ರಾಜಕೀಯ ಮಾಡಿದೀನಿ. ನಮ್ಮ ಅಪ್ಪನ ಕಾಲದಿಂದಲೂ ರಾಜಕೀಯ ಮಾಡಿದೀನಿ. ನಮ್ಮದು ಗುಬ್ಬಿ ವೀರಣ್ಣ ಹುಟ್ಟಿರುವ ಕ್ಷೇತ್ರ, ಅವರ ನಾಟಕ ಗೊತ್ತು. ಒಬ್ಬ ವ್ಯಕ್ತಿ ಮುಗಿಸಲು ಏನೆಲ್ಲಾ ಆರೋಪ ಮಾಡ್ತಾರಂತೆ ನನಗೆ ಗೊತ್ತು. ದೇವೇಗೌಡರು ಸೋಲಿಸಿದರು ಅಂತಾರೆ, ಇವರಿಗೆ ದೇವರು ಒಳ್ಳೆಯದು ಮಾಡ್ತಾದಾ? ದೇವರು ಅವರಿಗೆ ಒಬ್ಬರಿಗೇನಾ ಇರೋದು, ನಮಗೆ ಇಲ್ವಾ.

ನಾನು ದೇವರಲ್ಲಿ ಕೇಳಿಕೊಳ್ತೀನಿ. ನಾನು ಏನಾದರೂ ತಪ್ಪು ಮಾಡಿದ್ದರೇ ನಮ್ಮ‌ ಮನೆ ಹಾಳಾಗಿ ಹೋಗಲಿ. ಅವರು ತಪ್ಪು ಮಾಡಿದ್ದರೇ ಅವರ ಮನೆ ಹಾಳಾಗಿ ಹೋಗಲಿ. ದೇವೇಗೌಡರು ಸೋಲಲು ನಾನು ಸಣ್ಣ ಕೆಲಸ ಮಾಡಿದ್ದರೆ ನಮ್ಮ ಮನೆ ಹಾಳಾಗಲಿ. ಕುಮಾರಸ್ವಾಮಿ ಸುಳ್ಳು ಹೇಳಿದ್ದರೇ ಅವರ ಮನೆ ಹಾಳಾಗಲಿ, ಅವರ ವಂಶ ಹಾಳಾಗಿ ಹೋಗಲಿ. ಯಾಕೆ ಜನರಿಗೆ ಸುಳ್ಳು ಹೇಳಬೇಕು ಎಂದು ತುಮಕೂರಿನಲ್ಲಿ ಎಸ್ ಆರ್ ಶ್ರೀನಿವಾಸ್ ಹೇಳಿದರು.

ಇದನ್ನೂ ಓದಿ: ಕುಮಾರಸ್ವಾಮಿಗೆ ಬುದ್ಧಿ ಹೇಳಿದ್ದೇ ಮುಳುವಾಯ್ತು! ನಡುರಾತ್ರಿ ಹೋಟೆಲ್​ನಲ್ಲಿ ನಡೆದಿದ್ದ ಸಭೆಯ ವಿವರ ಬಿಚ್ಚಿಟ್ಟ ಗುಬ್ಬಿ ಶಾಸಕ ಶ್ರೀನಿವಾಸ್

ಟವೆಲ್​ ಇಟ್ಕೊಂಡು ಕಣ್ಣೀರು ಹಾಕಿದ್ರೆ ಯಾರ್ ವೋಟ್​ ಹಾಕ್ತಾರೆ? |JDSMLA | Tv9kannada

(Gubbi jds mla sr srinivas verbal attack on jds leader hd kumaraswamy in tumakuru)

Published On - 1:09 pm, Tue, 26 October 21

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್