AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೂ ಇತ್ಯರ್ಥವಾಗಿಲ್ಲ ಸಿಂಹಾಸನಕ್ಕಾಗಿ ಫೈಟ್; ದೇವೇಗೌಡರ ಜೊತೆ ಸೂರಜ್, ರೇವಣ್ಣ ಡೇ ಆ್ಯಂಡ್ ನೈಟ್ ಚರ್ಚೆ

ಹಾಸನ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಕಣಕ್ಕಿಳಿಯುವ ಅಭ್ಯರ್ಥಿ ಗೊಂದಲ ಇನ್ನೂ ಮುಕ್ತಾಯಗೊಂಡಿಲ್ಲ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಪುತ್ರ, ಎಂಎಲ್​ಸಿ ಸೂರಜ್ ರೇವಣ್ಣ ಪಟ್ಟು ಹಿಡಿದಿದ್ದಾರೆ. ಅದರಂತೆ ಭವಾನಿ ಪತಿ, ಮಾಜಿ ಸಚಿವ ರೇವಣ್ಣ ಮತ್ತು ಪುತ್ರ ಸೂರಜ್ ರೇವಣ್ಣ ಅವರು ಪಕ್ಷದ ವರಿಷ್ಠ ದೇವೇಗೌಡ ಅವರ ಬೆನ್ನುಬಿದ್ದಿದ್ದಾರೆ.

ಇನ್ನೂ ಇತ್ಯರ್ಥವಾಗಿಲ್ಲ ಸಿಂಹಾಸನಕ್ಕಾಗಿ ಫೈಟ್; ದೇವೇಗೌಡರ ಜೊತೆ ಸೂರಜ್, ರೇವಣ್ಣ ಡೇ ಆ್ಯಂಡ್ ನೈಟ್ ಚರ್ಚೆ
ಸೂರಜ್ ರೇವಣ್ಣ, ಹೆಚ್.ಡಿ.ದೇವೇ ಗೌಡ ಮತ್ತು ಹೆಚ್.ಡಿ.ರೇವಣ್ಣ
TV9 Web
| Edited By: |

Updated on:Feb 04, 2023 | 5:46 PM

Share

ಹಾಸನ: ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಟಿಕೆಟ್​​ಗಾಗಿ ಫೈಟ್ (Hassan JDS Ticket Fight)​ ಮುಂದುವರಿದಿದ್ದು, ಭವಾನಿಗೆ (Bhavani Revanna) ಟಿಕೆಟ್​ ನೀಡಬೇಕೆಂದು ಪತಿ, ಮಾಜಿ ಸಚಿವ ಹೆಚ್​​.ಡಿ.ರೇವಣ್ಣ (H.D.Revanna) ಮತ್ತು ಪುತ್ರ, ಎಂಎಲ್​ಸಿ ಸೂರಜ್ ರೇವಣ್ಣ (Suraj Revanna)​ ಪಟ್ಟು ಹಿಡಿದು ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ (H.D.Deve Gowda) ಅವರ ಬೆನ್ನುಬಿದ್ದಿದ್ದಾರೆ. ನಿನ್ನೆ (ಫೆಬ್ರವರಿ 03) ಬೆಳಗ್ಗೆ ದೇವೇಗೌಡರನ್ನು ಭೇಟಿ ಮಾಡಿದ್ದ ಸೂರಜ್​ ರೇವಣ್ಣ ಮಾತುಕತೆ ನಡೆಸಿದ್ದರು. ರಾತ್ರಿ ವೇಳೆ ದೇವೇಗೌಡರ ಜೊತೆ ರೇವಣ್ಣ ಅವರು ಸುದೀರ್ಘ ಮಾತುಕತೆ ನಡೆಸಿ ಹಾಸನ ಕ್ಷೇತ್ರದ ಸ್ಥಿತಿಗತಿ ಬಗ್ಗೆ ವಿವರಿಸಿದ್ದಾರೆ.

ಭವಾನಿಗೆ ಹಾಸನ ಕ್ಷೇತ್ರದ ಟಿಕೆಟ್ ಕೊಟ್ಟರೆ ಸೂಕ್ತ, ಇಲ್ಲದಿದ್ರೆ ಹಾಸನದಲ್ಲಿ ಬಿಜೆಪಿ ಬೆಳೆಯಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ವರಿಷ್ಠರ ಮುಂದೆ ರೇವಣ್ಣ ಅಭಿಪ್ರಾಯ ತಿಳಿಸಿದ್ದಾರೆ. ಚುನಾವಣೆಯಲ್ಲಿ ಮತ್ತೆ ಪ್ರೀತಮ್ ಗೌಡ ಗೆದ್ದರೆ ಜೆಡಿಎಸ್​ಗೆ ಮತ್ತಷ್ಟು ಹೊಡೆತ ಬೀಳಲಿದೆ. ಪ್ರೀತಮ್ ಓಟಕ್ಕೆ ಬ್ರೇಕ್​ ಹಾಕಲು ಸ್ವರೂಪ್​ಗಿಂತ ಭವಾನಿ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಭವಾನಿಗೆ ಟಿಕೆಟ್​ ಕೊಟ್ಟರೆ ಮುಸ್ಲಿಮರು ಜೆಡಿಎಸ್​ಗೆ ಬೆಂಬಲ ನೀಡುತ್ತಾರೆ. ಇನ್ನೂ ಸಮಯವಿದೆ ಯೋಚಿಸಿ ನಿರ್ಧಾರಮಾಡಿ ಎಂದು ರೇವಣ್ಣ ಅವರು ಹೇಳಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಸಿಂ‘ಹಾಸನ’ಕ್ಕೆ ಟಿಕೆಟ್ ಫೈಟ್: ಭವಾನಿ ರೇವಣ್ಣ ಕಿತ್ತಾಟದ ಮಧ್ಯೆ ಹೆಚ್.ಪಿ. ಸ್ವರೂಪ್ ಫುಲ್ ಆ್ಯಕ್ಟಿವ್! ಹೆಚ್​ಡಿಕೆ ತಥಾಸ್ತು ಅಂದ್ರಾ?​

ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ಭವಾನಿ ಮತ್ತು ಪುತ್ರ ಸೂರಜ್ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುವ ವೇಳೆ ಕುಮಾರಸ್ವಾಮಿ ಅವರು, ಭವಾನಿ ಅವರಿಗೆ ಹಾಸನ ಸುರಕ್ಷಿತ ಕ್ಷೇತ್ರವಲ್ಲ ಎಂದಿದ್ದರು. ಇನ್ನು ಇದರಿಂದ ಅಸಮಾಧಾನಗೊಂಡಿದ್ದ ಸೂರಜ್, ದೇವೇಗೌಡರು ಟಿಕೆಟ್ ಫೈನಲ್ ಮಾಡುತ್ತಾರೆ ಎಂದು ಟಾಂಗ್ ಕೊಟ್ಟಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಭಾವುಕರಾದ ಕುಮಾರಸ್ವಾಮಿ, ಹಾಸನ ಟಿಕೆಟ್‌ ವಿಚಾರದಲ್ಲಿ ಶಕುನಿಗಳ ಕೈವಾಡವಿದ್ದು, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುತ್ತೇನೆ ಎಂದಿದ್ದರು.

ಇನ್ನು, ಕುಮಾರಸ್ವಾಮಿ ಭಾವುಕರಾದ ಬೆನ್ನಲ್ಲೇ ಮೌನಮುರಿದು ಸುದ್ದಿಗೋಷ್ಠಿ ನಡೆಸಿದ್ದ ರೇವಣ್ಣ, ಕ್ಷೇತ್ರದ ಜೆಡಿಎಸ್​ ಟಿಕೆಟ್​ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಹಂಚಿಕೆ​ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ನಿರ್ಧಾರವೇ ಅಂತಿಮ. ನಾನಾಗಲಿ, ನನ್ನ ಮಕ್ಕಳಾಗಲಿ ಟಿಕೆಟ್​ ಫೈನಲ್​ ಮಾಡಲು ಆಗಲ್ಲ ಎಂದಿದ್ದರು. ಅದಾಗ್ಯೂ, ತಂದೆ ಮಗ ದೇವೇಗೌಡರನ್ನು ಭೇಟಿಯಾಗುತ್ತಲೇ ಇರುವುದನ್ನು ನೋಡಿದಾಗ ಹಾಸನ ಕ್ಷೇತ್ರದಿಂದ ಭವಾನಿ ಅವರಿಗೆ ಟಿಕೆಟ್ ಕೊಡಿಸಿಯೇ ಕೊಡುತ್ತೇವೆ ಎಂದು ಪಟ್ಟು ಬಿದ್ದಿರುವಂತಿದೆ.

ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Sat, 4 February 23

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ