AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್​ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಡಿ.ಕೆ.ಶಿವಕುಮಾರ್, ಭಾಷಣ ಮುಗಿಸಿ ಬಂದು ಮೌಲಾನಾಗೆ ಮುತ್ತಿಟ್ಟ ಜಮೀರ್!

ಜಮೀರ್ ಭಾಷಣ ಅಂತ್ಯದ ವೇಳೆಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖಾಜಿ ಶಂಶುದ್ದೀನ್ ಮೌಲಾನಾ ಆಗಮಿಸಿದರು. ಆ ವೇಳೆ ಭಾಷಣ ಮುಗಿಸಿ ಕೆಳಗಿಳಿದು ಬಂದ ಜಮೀರ್ ಮೌಲಾನಾಗೆ ಮುತ್ತಿಟ್ಟರು. ಜೊತೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮೌಲಾನಾ ಅವರನ್ನ ಪರಿಚಯಿಸಿದರು.

ರಮೇಶ್​ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಡಿ.ಕೆ.ಶಿವಕುಮಾರ್, ಭಾಷಣ ಮುಗಿಸಿ ಬಂದು ಮೌಲಾನಾಗೆ ಮುತ್ತಿಟ್ಟ ಜಮೀರ್!
ಡಿಕೆ ಶಿವಕುಮಾರ
TV9 Web
| Edited By: |

Updated on: Jul 22, 2022 | 6:05 PM

Share

ಹುಬ್ಬಳ್ಳಿ: ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆಂಬ ಮಾಜಿ ಸ್ಪೀಕರ್ ಕೆ ಆರ್ ರಮೇಶ್​ ಕುಮಾರ್ (KR Ramesh Kumar) ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸಮರ್ಥಿಸಿಕೊಂಡಿದ್ದಾರೆ. ರಮೇಶ್ ಕುಮಾರ್ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸೋದು ಬೇಡ. ರಮೇಶ್​ ಕುಮಾರ್ ಹೇಳಿಕೆಯನ್ನು ತಿರುಚಲಾಗಿದೆ. ಬೇಕಾದ್ರೆ ಅವರ ಭಾಷಣ ಕೇಳಿ, ಅವರು ಸರಿಯಾಗೇ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ನಮ್ಮನ್ನು ಬಲಿಷ್ಠರನ್ನಾಗಿ ಮಾಡಿದ್ದಾರೆ. ಅದನ್ನೇ ಮೂರು ತಲೆಮಾರು ಆಸ್ತಿ ಅಂತ ರಮೇಶ್​​​​ ಹೇಳಿದ್ದಾರೆ. ಆಸ್ತಿ ಅಂದ್ರೆ ಹಾಗಲ್ಲ, ಸಂವಿಧಾನ ಕೊಟ್ಟಿದ್ದಾರೆ ಎಂದು ಡಿಕೆ ಶಿ ವ್ಯಾಖ್ಯಾನಿಸಿದ್ದಾರೆ. ಉಳುವವನಿಗೆ ಭೂಮಿ ಕಾಯ್ದೆ ನೀಡಿದ್ದಾರೆ, ಅದು ಆಸ್ತಿ ಅಲ್ವಾ? ಎಂದು ರಮೇಶ್​ ಕುಮಾರ್ ಹೇಳಿಕೆ ಸಮರ್ಥನೆಗೆ ಡಿ.ಕೆ. ಶಿವಕುಮಾರ್ ಉದಾಹರಣೆಯಾಗಿ ನೀಡಿದ್ದಾರೆ. ಮನಮೋಹನ್ ಸಿಂಗ್ ಗೆ ಅಧಿಕಾರ ನೀಡಿ ತ್ಯಾಗ ಮಾಡಿದ್ದಾರೆ. ಅಲ್ಲಿ ಮನರೆಗಾ ಅಂತ ಯೋಜನೆ ನೀಡಿದ್ದಾರೆ ಅದು ಆಸ್ತಿ ಅಲ್ವಾ…? ಎಂದೂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಭಾಷಣ ಮುಗಿಸಿ ಬಂದು ಮೌಲಾನಾಗೆ ಮುತ್ತಿಟ್ಟ ಜಮೀರ್!

ದಾವಣಗೆರೆ: ಎಸ್. ರಾಮಪ್ಪ ಅವರು 2023ರಲ್ಲಿ ಮತ್ತೊಮ್ಮೆ ಗೆದ್ದು ಶಾಸಕಾರಗಲಿ. ಜನೋತ್ಸಾಹ ನೋಡಿದ್ರೆ ರಾಮಪ್ಪ ಅವರನ್ನ ಸೋಲಿಸಲು ಆಗೋಲ್ಲ ಅನ್ನಿಸುತ್ತದೆ. ಪಿವನ್ ನಂತೆ ತಿರುಗಿ ಅವರು ಕ್ಷೇತ್ರದ ಕೆಲಸ ಮಾಡುತ್ತಾರೆ. ನಾನು ಮಂತ್ರಿಯಾದಾಗ ಅನೇಕ ಸಲ ನನ್ನ ಬಳಿ ಬಂದಿದ್ದರು. ಒಬ್ಬ ಪಿವನ್ ಆಗಿ, ಜನರ ಗುಲಾಮನಾಗಿ ಅವರು ಕೆಲಸ ಮಾಡಿದ್ದಾರೆ. ಸಿದ್ಧರಾಮಯ್ಯ ಬೆಂಬಲಿಸಬೇಕೆಂದರೆ ರಾಮಪ್ಪರನ್ನ ಗೆಲ್ಲಿಸಿ ಎಂದು ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಈ ವೇಳೆ ಮುಸ್ಲಿಂ ಸಮುದಾಯದವರ ಒತ್ತಾಯದ ಮೇರೆಗೆ ಹಿಂದಿಯಲ್ಲಿ ಮಾತಾಡಿದ ಜಮೀರ್ ಅಹ್ಮದ್ ಖಾನ್ ರಾಮಪ್ಪಗೆ ಮತ ಹಾಕಿದರೆ ಸಿದ್ಧರಾಮಯ್ಯ ಮತ್ತು ನನಗೆ ಮತ ಹಾಕಿದಂತೆ. ಮುಸ್ಲಿಂ ಸಮುದಾಯದವರು ತಲೆ ಎತ್ತಿ ನಡೆಯಬೇಕು. ಎಂದರು.

ಅದಾದ ಮೇಲೆ ಜಮೀರ್ ಭಾಷಣ ಅಂತ್ಯದ ವೇಳೆಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖಾಜಿ ಶಂಶುದ್ದೀನ್ ಮೌಲಾನಾ ಆಗಮಿಸಿದರು. ಆ ವೇಳೆ ಭಾಷಣ ಮುಗಿಸಿ ಕೆಳಗಿಳಿದು ಬಂದ ಜಮೀರ್ ಮೌಲಾನಾಗೆ ಮುತ್ತಿಟ್ಟರು. ಜೊತೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮೌಲಾನಾ ಅವರನ್ನ ಪರಿಚಯಿಸಿದರು.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ