AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್​ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಡಿ.ಕೆ.ಶಿವಕುಮಾರ್, ಭಾಷಣ ಮುಗಿಸಿ ಬಂದು ಮೌಲಾನಾಗೆ ಮುತ್ತಿಟ್ಟ ಜಮೀರ್!

ಜಮೀರ್ ಭಾಷಣ ಅಂತ್ಯದ ವೇಳೆಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖಾಜಿ ಶಂಶುದ್ದೀನ್ ಮೌಲಾನಾ ಆಗಮಿಸಿದರು. ಆ ವೇಳೆ ಭಾಷಣ ಮುಗಿಸಿ ಕೆಳಗಿಳಿದು ಬಂದ ಜಮೀರ್ ಮೌಲಾನಾಗೆ ಮುತ್ತಿಟ್ಟರು. ಜೊತೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮೌಲಾನಾ ಅವರನ್ನ ಪರಿಚಯಿಸಿದರು.

ರಮೇಶ್​ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಡಿ.ಕೆ.ಶಿವಕುಮಾರ್, ಭಾಷಣ ಮುಗಿಸಿ ಬಂದು ಮೌಲಾನಾಗೆ ಮುತ್ತಿಟ್ಟ ಜಮೀರ್!
ಡಿಕೆ ಶಿವಕುಮಾರ
TV9 Web
| Updated By: ಸಾಧು ಶ್ರೀನಾಥ್​|

Updated on: Jul 22, 2022 | 6:05 PM

Share

ಹುಬ್ಬಳ್ಳಿ: ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆಂಬ ಮಾಜಿ ಸ್ಪೀಕರ್ ಕೆ ಆರ್ ರಮೇಶ್​ ಕುಮಾರ್ (KR Ramesh Kumar) ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸಮರ್ಥಿಸಿಕೊಂಡಿದ್ದಾರೆ. ರಮೇಶ್ ಕುಮಾರ್ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸೋದು ಬೇಡ. ರಮೇಶ್​ ಕುಮಾರ್ ಹೇಳಿಕೆಯನ್ನು ತಿರುಚಲಾಗಿದೆ. ಬೇಕಾದ್ರೆ ಅವರ ಭಾಷಣ ಕೇಳಿ, ಅವರು ಸರಿಯಾಗೇ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ನಮ್ಮನ್ನು ಬಲಿಷ್ಠರನ್ನಾಗಿ ಮಾಡಿದ್ದಾರೆ. ಅದನ್ನೇ ಮೂರು ತಲೆಮಾರು ಆಸ್ತಿ ಅಂತ ರಮೇಶ್​​​​ ಹೇಳಿದ್ದಾರೆ. ಆಸ್ತಿ ಅಂದ್ರೆ ಹಾಗಲ್ಲ, ಸಂವಿಧಾನ ಕೊಟ್ಟಿದ್ದಾರೆ ಎಂದು ಡಿಕೆ ಶಿ ವ್ಯಾಖ್ಯಾನಿಸಿದ್ದಾರೆ. ಉಳುವವನಿಗೆ ಭೂಮಿ ಕಾಯ್ದೆ ನೀಡಿದ್ದಾರೆ, ಅದು ಆಸ್ತಿ ಅಲ್ವಾ? ಎಂದು ರಮೇಶ್​ ಕುಮಾರ್ ಹೇಳಿಕೆ ಸಮರ್ಥನೆಗೆ ಡಿ.ಕೆ. ಶಿವಕುಮಾರ್ ಉದಾಹರಣೆಯಾಗಿ ನೀಡಿದ್ದಾರೆ. ಮನಮೋಹನ್ ಸಿಂಗ್ ಗೆ ಅಧಿಕಾರ ನೀಡಿ ತ್ಯಾಗ ಮಾಡಿದ್ದಾರೆ. ಅಲ್ಲಿ ಮನರೆಗಾ ಅಂತ ಯೋಜನೆ ನೀಡಿದ್ದಾರೆ ಅದು ಆಸ್ತಿ ಅಲ್ವಾ…? ಎಂದೂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಭಾಷಣ ಮುಗಿಸಿ ಬಂದು ಮೌಲಾನಾಗೆ ಮುತ್ತಿಟ್ಟ ಜಮೀರ್!

ದಾವಣಗೆರೆ: ಎಸ್. ರಾಮಪ್ಪ ಅವರು 2023ರಲ್ಲಿ ಮತ್ತೊಮ್ಮೆ ಗೆದ್ದು ಶಾಸಕಾರಗಲಿ. ಜನೋತ್ಸಾಹ ನೋಡಿದ್ರೆ ರಾಮಪ್ಪ ಅವರನ್ನ ಸೋಲಿಸಲು ಆಗೋಲ್ಲ ಅನ್ನಿಸುತ್ತದೆ. ಪಿವನ್ ನಂತೆ ತಿರುಗಿ ಅವರು ಕ್ಷೇತ್ರದ ಕೆಲಸ ಮಾಡುತ್ತಾರೆ. ನಾನು ಮಂತ್ರಿಯಾದಾಗ ಅನೇಕ ಸಲ ನನ್ನ ಬಳಿ ಬಂದಿದ್ದರು. ಒಬ್ಬ ಪಿವನ್ ಆಗಿ, ಜನರ ಗುಲಾಮನಾಗಿ ಅವರು ಕೆಲಸ ಮಾಡಿದ್ದಾರೆ. ಸಿದ್ಧರಾಮಯ್ಯ ಬೆಂಬಲಿಸಬೇಕೆಂದರೆ ರಾಮಪ್ಪರನ್ನ ಗೆಲ್ಲಿಸಿ ಎಂದು ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಈ ವೇಳೆ ಮುಸ್ಲಿಂ ಸಮುದಾಯದವರ ಒತ್ತಾಯದ ಮೇರೆಗೆ ಹಿಂದಿಯಲ್ಲಿ ಮಾತಾಡಿದ ಜಮೀರ್ ಅಹ್ಮದ್ ಖಾನ್ ರಾಮಪ್ಪಗೆ ಮತ ಹಾಕಿದರೆ ಸಿದ್ಧರಾಮಯ್ಯ ಮತ್ತು ನನಗೆ ಮತ ಹಾಕಿದಂತೆ. ಮುಸ್ಲಿಂ ಸಮುದಾಯದವರು ತಲೆ ಎತ್ತಿ ನಡೆಯಬೇಕು. ಎಂದರು.

ಅದಾದ ಮೇಲೆ ಜಮೀರ್ ಭಾಷಣ ಅಂತ್ಯದ ವೇಳೆಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖಾಜಿ ಶಂಶುದ್ದೀನ್ ಮೌಲಾನಾ ಆಗಮಿಸಿದರು. ಆ ವೇಳೆ ಭಾಷಣ ಮುಗಿಸಿ ಕೆಳಗಿಳಿದು ಬಂದ ಜಮೀರ್ ಮೌಲಾನಾಗೆ ಮುತ್ತಿಟ್ಟರು. ಜೊತೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮೌಲಾನಾ ಅವರನ್ನ ಪರಿಚಯಿಸಿದರು.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ