ನಾನು ಇರಬೇಕೋ, ಬೇಡ್ವೋ? ವರುಣದಲ್ಲಿ ಸಿಎಂ ಎಮೋಷನಲ್ ಕಾರ್ಡ್​ ಹಿಂದೆ ಇದೆಯಾ ಆ 9 ಸಾವಿರ ಮತಗಳ ಟೆನ್ಷನ್​​

ಸೋಮವಾರ ವರುಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೀಡ್​ ಬೇಕು, ಅಷ್ಟು ಲೀಡ್​ ಬಂದಿದ್ದೇ ಆದರೆ ಯಾರು ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ನಾನು ಇರಬೇಕೋ, ಬೇಡ್ವೋ ಎಂದು ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದರು. ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಎಮೋಷನಲ್ ಕಾರ್ಡ್ ಪ್ಲೇ ಮಾಡಿದ್ದಾರು ಯಾಕೆ? ಇಲ್ಲಿದೆ ಉತ್ತರ

ನಾನು ಇರಬೇಕೋ, ಬೇಡ್ವೋ? ವರುಣದಲ್ಲಿ ಸಿಎಂ ಎಮೋಷನಲ್ ಕಾರ್ಡ್​ ಹಿಂದೆ ಇದೆಯಾ ಆ 9 ಸಾವಿರ ಮತಗಳ ಟೆನ್ಷನ್​​
ಸಿಎಂ ಸಿದ್ದರಾಮಯ್ಯ
Edited By: ವಿವೇಕ ಬಿರಾದಾರ

Updated on: Apr 02, 2024 | 11:22 AM

ಮೈಸೂರು, ಏಪ್ರಿಲ್​ 02: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮೈಸೂರು-ಕೊಡಗು (Mysore-Kodagu) ಮತ್ತು ಚಾಮರಾಜನಗರ (Chamrajnagar) ಲೋಕಸಭಾ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನೆಡೆಸಿದ್ದಾರೆ. ಸೋಮವಾರ (ಏ.01) ರಂದು ತವರು ಕ್ಷೇತ್ರ ವರುಣದಲ್ಲಿ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್​ ಅಭ್ಯರ್ಥಿ ಸುನೀಲ್​ ಬೋಸ್​ ಅವರಿಗೆ ವರುಣದಲ್ಲಿ 60 ಸಾವಿರ ಲೀಡ್​ ಬೇಕು, ಅಷ್ಟು ಲೀಡ್​ ಬಂದಿದ್ದೇ ಆದರೆ ಯಾರು ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ನಾನು ಇರಬೇಕೋ, ಬೇಡ್ವೋ ಎಂದು ಭಾವನಾತ್ಮಕವಾಗಿ ಅಸ್ತ್ರವಾಗಿ ಮತ ಯಾಚಿಸಿದ್ದರು. ಹಾಗಿದ್ದರೆ ಸಿಎಂ ಸಿದ್ದರಾಮಯ್ಯ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದು ಯಾಕೆ? ತವರು ಕ್ಷೇತ್ರದಲ್ಲೆ ಕಡಿಮೆ ಮತಗಳು ಬರುವ ಆತಂಕ ಸಿಎಂಗೆ ಕಾಡುತ್ತಿದಿಯಾ? ಇಲ್ಲಿದೆ ವಿವರ..

ವರುಣ ಮೈಸೂರು ಜಿಲ್ಲೆಯಲ್ಲಿದ್ದರೂ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಮರಾಜನಗರಕ್ಕೆ ಸೇರುತ್ತದೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ವರುಣ, ಹೆಚ್​.ಡಿ ಕೋಟೆ, ನಂಜನಗೂಡು, ತಿ. ನರಸೀಪುರ, ಹನೂರು, ಕೊಳ್ಳೆಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬರುತ್ತವೆ.

2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಕಾಂಗ್ರೆಸ್​ನ ​ಅಭ್ಯರ್ಥಿಯಾಗಿ ಆರ್​. ಧ್ರುವನಾರಾಯಣ ಸ್ಪರ್ಧಿಸಿದ್ದರು. ಬಿಜೆಪಿಯಿಂದ ವಿ. ಶ್ರೀನಿವಾಸ್​ ಪ್ರಸಾದ್​ ಸ್ಪರ್ಧಿಸಿ ಗೆದ್ದಿದ್ದರು. ಈ ಲೋಕಸಭೆ ಚುನಾವಣೆಯಲ್ಲಿ ​ವರುಣದಲ್ಲಿ ಬಿಜೆಪಿಗಿಂತ ಕಾಂಗ್ರೆಸ್​ಗೆ ಹೆಚ್ಚಾಗಿ ಕೇವಲ 9 ಸಾವಿರ ಮತಗಳು ​ಬಂದಿದ್ದವು.

ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಸಿದ್ದರಾಮಯ್ಯ ಕಾಂಗ್ರೆಸ್ ಗೆದ್ದರೆ ಯಾರೂ ತನ್ನನ್ನು ಮುಟ್ಟಲಾಗಲ್ಲ ಅಂತ ಹೇಳಿದ್ದು ಯಾಕೆ?

ಸಿದ್ದರಾಮಯ್ಯ ಟೆನ್ಷನ್​ಗೆ ಅಸಲಿ ಕಾರಣ ಈ 9 ಸಾವಿರ ಮತ

2018ರ ವಿಧಾನಸಭೆ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ವರುಣ ಕ್ಷೇತ್ರದ ಜನ ಯತೀಂದ್ರ ಸಿದ್ದರಾಮಯ್ಯ ಅವರನ್ನು 59 ಸಾವಿರ ಲೀಡ್​ನಿಂದ ಗೆಲ್ಲಿಸಿದ್ದರು. ಆದರೆ 2019ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್​ಗೆ ಕೊಟ್ಟಿದ್ದು 9 ಸಾವಿರ ಲೀಡ್ ಮಾತ್ರ. ಲೋಕಸಭಾ ಚುನಾವಣೆಯಲ್ಲಿ ವರುಣದಲ್ಲಿ ಕಾಂಗ್ರೆಸ್​ಗೆ ಬಂದಿದ್ದು‌ 79,404 ಮತ ಮತ್ತು ಬಿಜೆಪಿಗೆ 70,402 ಸಾವಿರ ಮತಗಳು ಬಂದಿದ್ದವು. ಆದರೆ ಅಂದಿನ ಕಾಂಗ್ರೆಸ್​ ಅಭ್ಯರ್ಥಿ ಆರ್​. ಧ್ರುವನಾರಾಯಣ್ ವರುಣ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್​ ಬರುತ್ತವೆ ಎಂಬ ನೀರಿಕ್ಷೆ ಹೊಂದಿದ್ದರು, ಆದರೆ ನಿರೀಕ್ಷೆ ಮಟ್ಟದಲ್ಲಿ ಮತಗಳು ಬರಲಿಲ್ಲ. ಜೊತೆಗೆ ಈ ಲೀಡ್​ ಮುಖ್ಯಮಂತ್ರಿಗಳಿಗೂ ಕೂಡ ಆಘಾತ ಉಂಟು ಮಾಡಿತ್ತು.

ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ 49 ಸಾವಿರ ಲೀಡ್ ಕೊಟ್ಟಿರುವ ವರುಣ ಮತದಾರರು ಲೋಕಸಭೆಯಲ್ಲಿ ಕೈ ಕೊಡುತ್ತಾರೆ ಎಂಬ ಟೆನ್ಷನ್ ಮುಖ್ಯಮಂತ್ರಿಗಳಿಗೆ ಕಾಡುತ್ತಿದೆ. ಕಳೆದ ಲೋಕಸಭೆ ಚುನಾವಣೆ ಹಾಗೆ ಈ ಬಾರಿಯೂ ವರುಣ ಜನತೆ ಕಡಿಮೆ ಲೀಡ್​ ನೀಡಿದರೆ, ತಮ್ಮ ಸಿಎಂ ಕುರ್ಚಿಗೆ ಕಂಟಕ ಎದುರಾಗಲಿದೆ ಎಂಬ ಆತಂಕದಿಂದ ಸಿದ್ದರಾಮಯ್ಯ ಅವರು 60 ಸಾವಿರ ಲೀಡ್​ ನೀಡಿ ಅಂತ ಹೇಳಿದ್ರಾ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಹೀಗಾಗಿ 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ವರುಣ ಕ್ಷೇತ್ರದ ಜನರ ಎದರು ಸಿಎಂ ಎಮೋಷನಲ್ ಕಾರ್ಡ್ ಪ್ಲೇ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಮೋಷನಲ್ ಕಾರ್ಡ್ ವರ್ಕ್ ಆಗುತ್ತಾ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:12 am, Tue, 2 April 24

Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Follow Us