AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!

ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್​ ದಿಗ್ಗಜ ತನ್ನ ಹಳೆಯ ಕ್ಲಾಸಿಕ್​ ಲುಕ್​ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್​ಗೆ ಒಗ್ಗದವರಿಗೆ ತನ್ನ […]

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!
KUSHAL V
| Edited By: |

Updated on:Nov 23, 2020 | 12:08 PM

Share

ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ.

ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್​ ದಿಗ್ಗಜ ತನ್ನ ಹಳೆಯ ಕ್ಲಾಸಿಕ್​ ಲುಕ್​ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್​ಗೆ ಒಗ್ಗದವರಿಗೆ ತನ್ನ ಹಳೆಯ ರೂಪವನ್ನು ಸಹ ಆಯ್ಕೆ ಮಾಡಿ ಬಳಸುವ ಅವಕಾಶ ನೀಡಿತ್ತು.

ಆದರೆ, ಸೆಪ್ಟೆಂಬರ್ 1ರಿಂದ Facebook ಈ ಆಯ್ಕೆಯನ್ನು ಹಿಂಪಡೆಯಲಿದ್ದು ತನ್ನ ಬಳಕೆದಾರರಿಗೆ ಮತ್ತಷ್ಟು ಆಕರ್ಷಕ ಹಾಗೂ ಉಪಯೋಗಿಸಲು ಸುಲಭವಾಗುವಂಥ ಬಳಕೆದಾರರ ಅಂತರಸಂಪರ್ಕ (user interface) ನೀಡಲಿದೆ. ಇದೀಗ, Facebook ಹೊಸ ಅವತಾರವನ್ನು ಬಳಸಲು ಸಾಕಷ್ಟು ಜನ ಉತ್ಸುಕರಾಗಿದ್ದಾರೆ.

Facebook ನ ನೂತನ ಬಳಕೆದಾರರ ಅಂತರಸಂಪರ್ಕದಲ್ಲಿ ಹೊಸತೇನಿದೆ? 1. Facebookನ ಹಳೆಯ ನೀಲಾಕಾಶ ಬಣ್ಣದ ಯೂಸರ್​ ಇಂಟರ್​ಫೇಸ್​ ಇನ್ಮುಂದೆ ಸಿಗುವುದಿಲ್ಲ 2.  ಕೆಳಕಂಡ ಕಡುಕಪ್ಪು ಹಿನ್ನೆಲೆಯುಳ್ಳ ಡಾರ್ಕ್​ ಮೋಡ್​ನಲ್ಲಿ Facebook ಕಾಣಿಸಲಿದ್ದು ಇದರಿಂದ ಬಳಕೆದಾರರ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬರುವುದಿಲ್ಲ 3. ಇದಲ್ಲದೆ, ಗ್ರೂಪ್ಸ್​ ಟ್ಯಾಬ್​ನಲ್ಲೂ ಸಹ ಪರಿವರ್ತನೆ ತರಲಾಗಿದ್ದು ಇದು ಮತ್ತಷ್ಟು ಬಳಕೆದಾರ ಸ್ನೇಹಿಯಾಗಲಿದೆ

Published On - 3:20 pm, Mon, 24 August 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ