AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!

ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್​ ದಿಗ್ಗಜ ತನ್ನ ಹಳೆಯ ಕ್ಲಾಸಿಕ್​ ಲುಕ್​ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್​ಗೆ ಒಗ್ಗದವರಿಗೆ ತನ್ನ […]

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!
KUSHAL V
| Edited By: ಆಯೇಷಾ ಬಾನು|

Updated on:Nov 23, 2020 | 12:08 PM

Share

ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ.

ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್​ ದಿಗ್ಗಜ ತನ್ನ ಹಳೆಯ ಕ್ಲಾಸಿಕ್​ ಲುಕ್​ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್​ಗೆ ಒಗ್ಗದವರಿಗೆ ತನ್ನ ಹಳೆಯ ರೂಪವನ್ನು ಸಹ ಆಯ್ಕೆ ಮಾಡಿ ಬಳಸುವ ಅವಕಾಶ ನೀಡಿತ್ತು.

ಆದರೆ, ಸೆಪ್ಟೆಂಬರ್ 1ರಿಂದ Facebook ಈ ಆಯ್ಕೆಯನ್ನು ಹಿಂಪಡೆಯಲಿದ್ದು ತನ್ನ ಬಳಕೆದಾರರಿಗೆ ಮತ್ತಷ್ಟು ಆಕರ್ಷಕ ಹಾಗೂ ಉಪಯೋಗಿಸಲು ಸುಲಭವಾಗುವಂಥ ಬಳಕೆದಾರರ ಅಂತರಸಂಪರ್ಕ (user interface) ನೀಡಲಿದೆ. ಇದೀಗ, Facebook ಹೊಸ ಅವತಾರವನ್ನು ಬಳಸಲು ಸಾಕಷ್ಟು ಜನ ಉತ್ಸುಕರಾಗಿದ್ದಾರೆ.

Facebook ನ ನೂತನ ಬಳಕೆದಾರರ ಅಂತರಸಂಪರ್ಕದಲ್ಲಿ ಹೊಸತೇನಿದೆ? 1. Facebookನ ಹಳೆಯ ನೀಲಾಕಾಶ ಬಣ್ಣದ ಯೂಸರ್​ ಇಂಟರ್​ಫೇಸ್​ ಇನ್ಮುಂದೆ ಸಿಗುವುದಿಲ್ಲ 2.  ಕೆಳಕಂಡ ಕಡುಕಪ್ಪು ಹಿನ್ನೆಲೆಯುಳ್ಳ ಡಾರ್ಕ್​ ಮೋಡ್​ನಲ್ಲಿ Facebook ಕಾಣಿಸಲಿದ್ದು ಇದರಿಂದ ಬಳಕೆದಾರರ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬರುವುದಿಲ್ಲ 3. ಇದಲ್ಲದೆ, ಗ್ರೂಪ್ಸ್​ ಟ್ಯಾಬ್​ನಲ್ಲೂ ಸಹ ಪರಿವರ್ತನೆ ತರಲಾಗಿದ್ದು ಇದು ಮತ್ತಷ್ಟು ಬಳಕೆದಾರ ಸ್ನೇಹಿಯಾಗಲಿದೆ

Published On - 3:20 pm, Mon, 24 August 20

Follow Us
KUSHAL V
KUSHAL V
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!