AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!

ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್​ ದಿಗ್ಗಜ ತನ್ನ ಹಳೆಯ ಕ್ಲಾಸಿಕ್​ ಲುಕ್​ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್​ಗೆ ಒಗ್ಗದವರಿಗೆ ತನ್ನ […]

Facebook.. ಇನ್ನು ಹೊಸ ಅವತಾರದಲ್ಲಿ.. ಅತಿ ಶೀಘ್ರದಲ್ಲಿ!
KUSHAL V
| Edited By: ಆಯೇಷಾ ಬಾನು|

Updated on:Nov 23, 2020 | 12:08 PM

Share

ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ.

ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್​ ದಿಗ್ಗಜ ತನ್ನ ಹಳೆಯ ಕ್ಲಾಸಿಕ್​ ಲುಕ್​ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್​ಗೆ ಒಗ್ಗದವರಿಗೆ ತನ್ನ ಹಳೆಯ ರೂಪವನ್ನು ಸಹ ಆಯ್ಕೆ ಮಾಡಿ ಬಳಸುವ ಅವಕಾಶ ನೀಡಿತ್ತು.

ಆದರೆ, ಸೆಪ್ಟೆಂಬರ್ 1ರಿಂದ Facebook ಈ ಆಯ್ಕೆಯನ್ನು ಹಿಂಪಡೆಯಲಿದ್ದು ತನ್ನ ಬಳಕೆದಾರರಿಗೆ ಮತ್ತಷ್ಟು ಆಕರ್ಷಕ ಹಾಗೂ ಉಪಯೋಗಿಸಲು ಸುಲಭವಾಗುವಂಥ ಬಳಕೆದಾರರ ಅಂತರಸಂಪರ್ಕ (user interface) ನೀಡಲಿದೆ. ಇದೀಗ, Facebook ಹೊಸ ಅವತಾರವನ್ನು ಬಳಸಲು ಸಾಕಷ್ಟು ಜನ ಉತ್ಸುಕರಾಗಿದ್ದಾರೆ.

Facebook ನ ನೂತನ ಬಳಕೆದಾರರ ಅಂತರಸಂಪರ್ಕದಲ್ಲಿ ಹೊಸತೇನಿದೆ? 1. Facebookನ ಹಳೆಯ ನೀಲಾಕಾಶ ಬಣ್ಣದ ಯೂಸರ್​ ಇಂಟರ್​ಫೇಸ್​ ಇನ್ಮುಂದೆ ಸಿಗುವುದಿಲ್ಲ 2.  ಕೆಳಕಂಡ ಕಡುಕಪ್ಪು ಹಿನ್ನೆಲೆಯುಳ್ಳ ಡಾರ್ಕ್​ ಮೋಡ್​ನಲ್ಲಿ Facebook ಕಾಣಿಸಲಿದ್ದು ಇದರಿಂದ ಬಳಕೆದಾರರ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬರುವುದಿಲ್ಲ 3. ಇದಲ್ಲದೆ, ಗ್ರೂಪ್ಸ್​ ಟ್ಯಾಬ್​ನಲ್ಲೂ ಸಹ ಪರಿವರ್ತನೆ ತರಲಾಗಿದ್ದು ಇದು ಮತ್ತಷ್ಟು ಬಳಕೆದಾರ ಸ್ನೇಹಿಯಾಗಲಿದೆ

Published On - 3:20 pm, Mon, 24 August 20

Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ