AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ವೇಳೆ ಗೂಬೆ ಪೂಜೆ: ಲಕ್ಷ್ಮೀ ವಾಹನ ಎಂದು ತಿಳಿದಿದ್ದೂ ಕೊಲ್ತಾರೆ.. ಏಕೆ ಇಂತಹ ದುಷ್ಕೃತ್ಯ?

ಉತ್ತರಾಖಂಡ: ದೀಪಾವಳಿಯಲ್ಲಿ ಲಕ್ಷ್ಮೀ ದೇವಿಯ ವಾಹನವಾದ ಗೂಬೆಯನ್ನು ಪೂಜಿಸುವುದು ಹಬ್ಬದ ವೀಶೇಷತೆಗಳಲ್ಲೊಂದು. ಅದರಲ್ಲಿಯೂ ಭಾರತದಲ್ಲಿ ಲಕ್ಷ್ಮೀಯ ವಾಹನವನ್ನು ಪೂಜಿಸುವುದು ಸಾಂಪ್ರದಾಯಿಕವಾಗಿ ಬಂದ ಪದ್ಧತಿಯಾಗಿದೆ. ಭಾರತದಲ್ಲಿ ಪೂಜಿಸಲ್ಪಡುವ 24 ಕ್ಕಿಂತಲೂ ಅಧಿಕ ಜಾತಿಯ ಗೂಬೆಗಳು ಉತ್ತರಾಖಂಡದ ಕಾಡುಗಳಲ್ಲಿ ವಾಸಿಸುತ್ತಿವೆ. ದುರಾದೃಷ್ಟವಶಾತ್, ಬೇಟೆಗಾರಿಕೆಯಲ್ಲಿ ಈ ಪಕ್ಷಿಗಳನ್ನು ಗುರಿಯಾಗಿಸಿಕೊಳ್ಳುತ್ತಿರುವುದು ವಿಪರ್ಯಾಸ. ದೀಪಾವಳಿ ಹಬ್ಬ ಬರುತ್ತಿದ್ದಂತೆ, ಗೂಬೆಗಳಿಗೆ ಪ್ರಾಣ ಭೀತಿ ಉಂಟಾಗುತ್ತಿದೆ. ಗೂಬೆಯನ್ನು, ಲಕ್ಮಿ ದೇವತೆಗಾಗಿ ಬಲಿ ಕೊಡುವುದರ ಮೂಲಕ, ಸಂಪತ್ತು ಸಮೃದ್ಧಿಗೊಳ್ಳುತ್ತವೆ ಎಂಬ ಮೂಢನಂಬಿಕೆಗೆ ಮೊರೆ ಹೋಗಿ, ಗೂಬೆಗಳ ಮೂಳೆಗಳು, ಉಗುರುಗಳು […]

ದೀಪಾವಳಿ ವೇಳೆ ಗೂಬೆ ಪೂಜೆ: ಲಕ್ಷ್ಮೀ ವಾಹನ ಎಂದು ತಿಳಿದಿದ್ದೂ ಕೊಲ್ತಾರೆ.. ಏಕೆ ಇಂತಹ ದುಷ್ಕೃತ್ಯ?
ಸಾಧು ಶ್ರೀನಾಥ್​
| Edited By: |

Updated on:Nov 14, 2020 | 1:22 PM

Share

ಉತ್ತರಾಖಂಡ: ದೀಪಾವಳಿಯಲ್ಲಿ ಲಕ್ಷ್ಮೀ ದೇವಿಯ ವಾಹನವಾದ ಗೂಬೆಯನ್ನು ಪೂಜಿಸುವುದು ಹಬ್ಬದ ವೀಶೇಷತೆಗಳಲ್ಲೊಂದು. ಅದರಲ್ಲಿಯೂ ಭಾರತದಲ್ಲಿ ಲಕ್ಷ್ಮೀಯ ವಾಹನವನ್ನು ಪೂಜಿಸುವುದು ಸಾಂಪ್ರದಾಯಿಕವಾಗಿ ಬಂದ ಪದ್ಧತಿಯಾಗಿದೆ. ಭಾರತದಲ್ಲಿ ಪೂಜಿಸಲ್ಪಡುವ 24 ಕ್ಕಿಂತಲೂ ಅಧಿಕ ಜಾತಿಯ ಗೂಬೆಗಳು ಉತ್ತರಾಖಂಡದ ಕಾಡುಗಳಲ್ಲಿ ವಾಸಿಸುತ್ತಿವೆ. ದುರಾದೃಷ್ಟವಶಾತ್, ಬೇಟೆಗಾರಿಕೆಯಲ್ಲಿ ಈ ಪಕ್ಷಿಗಳನ್ನು ಗುರಿಯಾಗಿಸಿಕೊಳ್ಳುತ್ತಿರುವುದು ವಿಪರ್ಯಾಸ.

ದೀಪಾವಳಿ ಹಬ್ಬ ಬರುತ್ತಿದ್ದಂತೆ, ಗೂಬೆಗಳಿಗೆ ಪ್ರಾಣ ಭೀತಿ ಉಂಟಾಗುತ್ತಿದೆ. ಗೂಬೆಯನ್ನು, ಲಕ್ಮಿ ದೇವತೆಗಾಗಿ ಬಲಿ ಕೊಡುವುದರ ಮೂಲಕ, ಸಂಪತ್ತು ಸಮೃದ್ಧಿಗೊಳ್ಳುತ್ತವೆ ಎಂಬ ಮೂಢನಂಬಿಕೆಗೆ ಮೊರೆ ಹೋಗಿ, ಗೂಬೆಗಳ ಮೂಳೆಗಳು, ಉಗುರುಗಳು ಮತ್ತು ಗರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಮತ್ತು ಬೇಟೆಗಾರರು ಅಕ್ರಮವಾಗಿ ಅವುಗಳನ್ನೆಲ್ಲ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ದೀಪಾವಳಿಯ ರಾತ್ರಿ ಬೇಟೆಗಾರರು, ಮಾಂತ್ರಿಕರು ಇಂತಹ ಆಚರಣೆಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉತ್ತರಾಖಂಡದ ಅರಣ್ಯ ಇಲಾಖೆ ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆ ಹಚ್ಚಲು ಕಾಡುಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳ್ಳ ಬೇಟೆಗಾರರನ್ನು ಸೆರೆಹಿಡಿಯಲು ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಉತ್ತರಾಖಂಡ ಅರಣ್ಯದಲ್ಲಿ ವಾಸಿಸುತ್ತಿರುವ, ವನ್ಯಜೀವಿಗಳನ್ನು ಬೇಟೆಯಾಡುವುದರ ಕುರಿತಾಗಿ, ಸಂರಕ್ಷಣಾವಾದಿಗಳು 10 ವರ್ಷಗಳಿಂದ ತಮ್ಮ ಹೋರಾಟ/ವಾದವನ್ನು ಮಂಡಿಸುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಕ್ರಮಗಳಾಗಲೀ, ಈ ರೀತಿಯ ದುಷ್ಕೃತ್ಯಗಳಿಗೆ ಕಡಿವಾಣವಾಗಲೀ ಬಿದ್ದಿಲ್ಲ. 2019 ರಲ್ಲಿ ರಾಜ್ಯದಲ್ಲಿ 47 ಬೇಟೆಯಾಡುವ ಪ್ರಕರಣಗಳು ಸೇರಿದಂತೆ ಒಟ್ಟು 138 ವನ್ಯಜೀವಿ ಅಪರಾಧ ಘಟನೆಗಳು ದಾಖಲಾಗಿವೆ. ಈ ವರ್ಷ, ಅಕ್ಟೋಬರ್ 31ರವರೆಗೆ 88 ವನ್ಯಜೀವಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 37 ಪ್ರಕರಣಗಳು ಬೇಟೆಗೆ ಸಂಬಂಧಿಸಿವೆ. ಆದರೆ ಗೂಬೆಯ ಶಿಕಾರಿಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂಬುವುದು ವಿಪರ್ಯಾಸ.

ಉತ್ತರಾಖಂಡದ ಹಲ್ಡ್ವಾನಿ ಶ್ರೇಣಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು, “ಗೂಬೆಗಳನ್ನು ಬೇಟೆಯಾಡುವ ಬಗ್ಗೆ ಯಾವುದೇ ನಿರ್ದಿಷ್ಟ ನೋಂದಾಯಿತ ಪ್ರಕರಣಗಳು ಇಲ್ಲದಿರಬಹುದು, ಆದರೆ ಬೇಟೆಯಾಡುವ ಸಾಧ್ಯತೆಗಳು ದೀಪಾವಳಿಯ ಸಮಯದಲ್ಲಿ ಖಂಡಿತವಾಗಿಯೂ ಹೆಚ್ಚಾಗುತ್ತವೆ” ಎಂದು ಹೇಳಿದ್ದಾರೆ.

ಮೂಢನಂಬಿಕೆಗಳಿಗೆ ಜನರು ಆಸ್ಪದ ಕೊಡುವುದನ್ನು ನಿಲ್ಲಿಸಬೇಕು. ಯಾವುದೇ ಪ್ರಾಣಿಯನ್ನು ಹತ್ಯೆಗೈಯ್ಯುವ ಮೂಲಕ ದೇವರಿಗೆ ಇಷ್ಟಾರ್ಥ ಪೂರೈಸಿದಂತೆ ಎಂದು ಜನರು ಏಕೆ ನಂಬುತ್ತಿದ್ದಾರೆ? ನಮ್ಮಂತೆಯೇ ಜೀವಿಗಳಿಗೆ ಜೀವವಿದೆ. ಅವರನ್ನು ಅವರ ಪಾಡಿಗೆ ಬದುಕಲು ಬಿಟ್ಟುಬಿಡಬೇಕು ಎಂದು tv9 ಡಿಜಿಟಲ್ ಬಯಸುತ್ತದೆ.

Published On - 1:20 pm, Sat, 14 November 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ