AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ: ರೈನಾ

ಯುಎಇಯಿಂದ ತಮ್ಮ ದಿಢೀರ್ ನಿರ್ಗಮನದ ಬಗ್ಗೆ ಮೌನವಾಗಿದ್ದ ಚೆನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್​ಮನ್ ಸುರೇಶ್ ರೈನಾ, ಟ್ವೀಟ್​ಗಳ ಮೂಲಕ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಆದರೆ, ತಾನು ಯಾಕೆ ವಾಪಸ್ಸು ಬಂದೆನೆನ್ನುವುದಕ್ಕೆ ಸ್ಪಷ್ಟೀಕರಣ ನೀಡಿಲ್ಲ. ಮಂಗಳವಾರವಾರದಂದು ಮಾಡಿರುವ ಟ್ವೀಟ್​ನಲ್ಲಿ ಅವರು, ಶಂಕಿತ ದರೋಡೆಕೋರರಿಂದ ಹತ್ಯೆಗೊಳಗಾದ ತಮ್ಮ ಅಂಕಲ್, ಒಬ್ಬ ಕಸಿನ್ ಹಾಗೂ ನಡೆದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಅತ್ತೆ ಮತ್ತು ಇನ್ನೊಬ್ಬ ಕಸಿನ್ ಕುರಿತು ಮಾತಾಡಿದ್ದಾರೆ. ‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು […]

‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ: ರೈನಾ
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 02, 2020 | 6:43 PM

Share

ಯುಎಇಯಿಂದ ತಮ್ಮ ದಿಢೀರ್ ನಿರ್ಗಮನದ ಬಗ್ಗೆ ಮೌನವಾಗಿದ್ದ ಚೆನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್​ಮನ್ ಸುರೇಶ್ ರೈನಾ, ಟ್ವೀಟ್​ಗಳ ಮೂಲಕ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಆದರೆ, ತಾನು ಯಾಕೆ ವಾಪಸ್ಸು ಬಂದೆನೆನ್ನುವುದಕ್ಕೆ ಸ್ಪಷ್ಟೀಕರಣ ನೀಡಿಲ್ಲ.

ಮಂಗಳವಾರವಾರದಂದು ಮಾಡಿರುವ ಟ್ವೀಟ್​ನಲ್ಲಿ ಅವರು, ಶಂಕಿತ ದರೋಡೆಕೋರರಿಂದ ಹತ್ಯೆಗೊಳಗಾದ ತಮ್ಮ ಅಂಕಲ್, ಒಬ್ಬ ಕಸಿನ್ ಹಾಗೂ ನಡೆದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಅತ್ತೆ ಮತ್ತು ಇನ್ನೊಬ್ಬ ಕಸಿನ್ ಕುರಿತು ಮಾತಾಡಿದ್ದಾರೆ.

‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ. ನನ್ನ ಅಂಕಲ್ ಅವರನ್ನು ಪಶುವಿನಂತೆ ಹತ್ಯೆ ಮಾಡಲಾಗಿದೆ. ನನ್ನ ಬುವಾ (ಅತ್ತೆ) ಮತ್ತು ನನ್ನಿಬ್ಬರು ಕಸಿನ್​ಗಳು ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ದುರದೃಷ್ಟವಶಾತ್, ನನ್ನ ಒಬ್ಬ ಕಸಿನ್ ಕೂಡ ನಿನ್ನೆ ರಾತ್ರಿ ಜೀವದೊಂದಿಗೆ ಹೋರಾಡುತ್ತಾ ಪ್ರಾಣಬಿಟ್ಟ. ನನ್ನ ಬುವಾಳನ್ನು ಲೈಫ್ ಸಪೋರ್ಟ್ ಮೇಲಿರಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ,’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ರೈನಾ, ಪಂಜಾಬ್ ಪೊಲೀಸ್ ಹಾಗೂ ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೂ ಮನವಿ ಸಲ್ಲಿಸಿದ್ದು, ಆದಷ್ಟ ಬೇಗ ಅಪರಾಧಿಗಳನ್ನು ಬಂಧಿಸಿದರೆ, ಕನಿಷ್ಠಪಕ್ಷ ಈ ಹೀನ ಕೃತ್ಯ ನಡೆಸಿದವಱರೆಂದು ಅಂತ ಗೊತ್ತಾಗುತ್ತದೆ ಎಂದಿದ್ದಾರೆ.

‘‘ಅಂದು ರಾತ್ರಿ ನಡೆದಿದ್ದೇನು ಅಂತ ನಮಗೆ ಇದುವರೆಗೆ ಗೊತ್ತಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಪಂಜಾಬ್ ಪೊಲೀಸ್​ಗೆ ವಿನಂತಿಸಿಕೊಳ್ಳುತ್ತೇನೆ. ಕನಿಷ್ಠಪಕ್ಷ ಇಂಥ ಭೀಕರ ಹಲ್ಲೆ ನಡೆಸಿದವಱರು ಅನ್ನೋದಾದರೂ ನಮಗೆ ಗೊತ್ತಾಗಬೇಕು. ಅವರು ಮತ್ತಷ್ಟು ಅಪರಾಧ ಕೃತ್ಯಗಳನ್ನೆಸಗದಂತೆ ತಡೆಯಬೇಕು@capt_amarinder’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More