AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ: ರೈನಾ

ಯುಎಇಯಿಂದ ತಮ್ಮ ದಿಢೀರ್ ನಿರ್ಗಮನದ ಬಗ್ಗೆ ಮೌನವಾಗಿದ್ದ ಚೆನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್​ಮನ್ ಸುರೇಶ್ ರೈನಾ, ಟ್ವೀಟ್​ಗಳ ಮೂಲಕ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಆದರೆ, ತಾನು ಯಾಕೆ ವಾಪಸ್ಸು ಬಂದೆನೆನ್ನುವುದಕ್ಕೆ ಸ್ಪಷ್ಟೀಕರಣ ನೀಡಿಲ್ಲ. ಮಂಗಳವಾರವಾರದಂದು ಮಾಡಿರುವ ಟ್ವೀಟ್​ನಲ್ಲಿ ಅವರು, ಶಂಕಿತ ದರೋಡೆಕೋರರಿಂದ ಹತ್ಯೆಗೊಳಗಾದ ತಮ್ಮ ಅಂಕಲ್, ಒಬ್ಬ ಕಸಿನ್ ಹಾಗೂ ನಡೆದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಅತ್ತೆ ಮತ್ತು ಇನ್ನೊಬ್ಬ ಕಸಿನ್ ಕುರಿತು ಮಾತಾಡಿದ್ದಾರೆ. ‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು […]

‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ: ರೈನಾ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Sep 02, 2020 | 6:43 PM

Share

ಯುಎಇಯಿಂದ ತಮ್ಮ ದಿಢೀರ್ ನಿರ್ಗಮನದ ಬಗ್ಗೆ ಮೌನವಾಗಿದ್ದ ಚೆನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್​ಮನ್ ಸುರೇಶ್ ರೈನಾ, ಟ್ವೀಟ್​ಗಳ ಮೂಲಕ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಆದರೆ, ತಾನು ಯಾಕೆ ವಾಪಸ್ಸು ಬಂದೆನೆನ್ನುವುದಕ್ಕೆ ಸ್ಪಷ್ಟೀಕರಣ ನೀಡಿಲ್ಲ.

ಮಂಗಳವಾರವಾರದಂದು ಮಾಡಿರುವ ಟ್ವೀಟ್​ನಲ್ಲಿ ಅವರು, ಶಂಕಿತ ದರೋಡೆಕೋರರಿಂದ ಹತ್ಯೆಗೊಳಗಾದ ತಮ್ಮ ಅಂಕಲ್, ಒಬ್ಬ ಕಸಿನ್ ಹಾಗೂ ನಡೆದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಅತ್ತೆ ಮತ್ತು ಇನ್ನೊಬ್ಬ ಕಸಿನ್ ಕುರಿತು ಮಾತಾಡಿದ್ದಾರೆ.

‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ. ನನ್ನ ಅಂಕಲ್ ಅವರನ್ನು ಪಶುವಿನಂತೆ ಹತ್ಯೆ ಮಾಡಲಾಗಿದೆ. ನನ್ನ ಬುವಾ (ಅತ್ತೆ) ಮತ್ತು ನನ್ನಿಬ್ಬರು ಕಸಿನ್​ಗಳು ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ದುರದೃಷ್ಟವಶಾತ್, ನನ್ನ ಒಬ್ಬ ಕಸಿನ್ ಕೂಡ ನಿನ್ನೆ ರಾತ್ರಿ ಜೀವದೊಂದಿಗೆ ಹೋರಾಡುತ್ತಾ ಪ್ರಾಣಬಿಟ್ಟ. ನನ್ನ ಬುವಾಳನ್ನು ಲೈಫ್ ಸಪೋರ್ಟ್ ಮೇಲಿರಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ,’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ರೈನಾ, ಪಂಜಾಬ್ ಪೊಲೀಸ್ ಹಾಗೂ ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೂ ಮನವಿ ಸಲ್ಲಿಸಿದ್ದು, ಆದಷ್ಟ ಬೇಗ ಅಪರಾಧಿಗಳನ್ನು ಬಂಧಿಸಿದರೆ, ಕನಿಷ್ಠಪಕ್ಷ ಈ ಹೀನ ಕೃತ್ಯ ನಡೆಸಿದವಱರೆಂದು ಅಂತ ಗೊತ್ತಾಗುತ್ತದೆ ಎಂದಿದ್ದಾರೆ.

‘‘ಅಂದು ರಾತ್ರಿ ನಡೆದಿದ್ದೇನು ಅಂತ ನಮಗೆ ಇದುವರೆಗೆ ಗೊತ್ತಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಪಂಜಾಬ್ ಪೊಲೀಸ್​ಗೆ ವಿನಂತಿಸಿಕೊಳ್ಳುತ್ತೇನೆ. ಕನಿಷ್ಠಪಕ್ಷ ಇಂಥ ಭೀಕರ ಹಲ್ಲೆ ನಡೆಸಿದವಱರು ಅನ್ನೋದಾದರೂ ನಮಗೆ ಗೊತ್ತಾಗಬೇಕು. ಅವರು ಮತ್ತಷ್ಟು ಅಪರಾಧ ಕೃತ್ಯಗಳನ್ನೆಸಗದಂತೆ ತಡೆಯಬೇಕು@capt_amarinder’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್