AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿಯ ಐದನೇ ದಿನ ಸ್ಕಂದಮಾತಾ ಆರಾಧನೆ ಹೇಗೆ ಮಾಡಬೇಕು?

ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ. ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ […]

ನವರಾತ್ರಿಯ ಐದನೇ ದಿನ ಸ್ಕಂದಮಾತಾ ಆರಾಧನೆ ಹೇಗೆ ಮಾಡಬೇಕು?
ಸಾಧು ಶ್ರೀನಾಥ್​
| Edited By: |

Updated on:Oct 21, 2020 | 8:29 AM

Share

ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ.

ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ.

ನಾಲ್ಕು ಭುಜಗಳನ್ನು ಹೊಂದಿದ್ದು, ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದಿರುತ್ತಾಳೆ. ಇನ್ನು ತಾಯಿಯ ಬಲ ತೊಡೆಯ ಮೇಲೆ ತಾನು ಜನ್ಮ ನೀಡಿದ ಸ್ಕಂದನನ್ನು ಕೂರಿಸಿಕೊಂಡಿರ್ತಾಳೆ. ಸ್ಕಂದಮಾತೆಯದ್ದು ಕರುಣೆ ತುಂಬಿದ ತಾಯಿಯ ರೂಪವಾಗಿದೆ. ಮಾತೃ ಹೃದಯಿ ಆಗಿರುವ ಸ್ಕಂದಮಾತೆಯನ್ನು ಆರಾಧಿಸಲು ವಿಶೇಷ ಮಂತ್ರವಿದೆ. ಈ ಮಂತ್ರವನ್ನು ಜಪಿಸಿದ್ರೆ ಶೀಘ್ರ ಫಲಗಳನ್ನು ಪಡೆಯಬಹುದು ಅನ್ನೋ ನಂಬಿಕೆ ಇದೆ.

ಸ್ಕಂದಮಾತಾ ಮಂತ್ರ

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

ನವರಾತ್ರಿಯ ಐದನೇ ದಿನ ಪುರಾಣದ ಪ್ರಕಾರ ಅತ್ಯಂತ ಮಹತ್ವದ್ದು ಎಂದು ಉಲ್ಲೇಖವಿದೆ. ಈ ದಿನ ವಿಶೇಷವಾಗಿ ಸ್ಕಂದಮಾತೆಯನ್ನು ಪೂಜಿಸಿದ್ರೆ ಆದಿಶಕ್ತಿಯ ಸಂಪೂರ್ಣ ಆಶೀರ್ವಾದ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸ್ಕಂದಮಾತೆಯ ಆರಾಧನೆಯಿಂದ ಏನೆಲ್ಲ ಫಲಗಳು ಪ್ರಾಪ್ತಿಯಾಗುತ್ವೆ.

ಸ್ಕಂದಮಾತಾ ಪೂಜಾ ಫಲಗಳು ಈಕೆ ತಪ್ಪಿತಸ್ಥರ ಪಾಲಿನ ಕ್ಷಮಯಾಧರಿತ್ರಿ. ಸುಖ, ಪರಮಶಾಂತಿಯನ್ನು ನೀಡ್ತಾಳೆ. ಸ್ಕಂದಮಾತಾ ಪೂಜೆಯಿಂದ ಮೋಕ್ಷ ಪ್ರಾಪ್ತಿ. ಸ್ಕಂದಮಾತಾ ಆರಾಧನೆಯಿಂದ ಸಾತ್ವಿಕ ಕಳೆ ಬರುತ್ತೆ. ಸ್ಕಂದಮಾತಾ ಸ್ಮರಣೆಯಿಂದ ಸ್ಕಂದನನ್ನು ಪೂಜಿಸಿದ ಪುಣ್ಯಪ್ರಾಪ್ತಿ.

Published On - 1:56 pm, Thu, 3 October 19

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್