AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿಯ ಐದನೇ ದಿನ ಸ್ಕಂದಮಾತಾ ಆರಾಧನೆ ಹೇಗೆ ಮಾಡಬೇಕು?

ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ. ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ […]

ನವರಾತ್ರಿಯ ಐದನೇ ದಿನ ಸ್ಕಂದಮಾತಾ ಆರಾಧನೆ ಹೇಗೆ ಮಾಡಬೇಕು?
ಸಾಧು ಶ್ರೀನಾಥ್​
| Edited By: |

Updated on:Oct 21, 2020 | 8:29 AM

Share

ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ.

ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ.

ನಾಲ್ಕು ಭುಜಗಳನ್ನು ಹೊಂದಿದ್ದು, ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದಿರುತ್ತಾಳೆ. ಇನ್ನು ತಾಯಿಯ ಬಲ ತೊಡೆಯ ಮೇಲೆ ತಾನು ಜನ್ಮ ನೀಡಿದ ಸ್ಕಂದನನ್ನು ಕೂರಿಸಿಕೊಂಡಿರ್ತಾಳೆ. ಸ್ಕಂದಮಾತೆಯದ್ದು ಕರುಣೆ ತುಂಬಿದ ತಾಯಿಯ ರೂಪವಾಗಿದೆ. ಮಾತೃ ಹೃದಯಿ ಆಗಿರುವ ಸ್ಕಂದಮಾತೆಯನ್ನು ಆರಾಧಿಸಲು ವಿಶೇಷ ಮಂತ್ರವಿದೆ. ಈ ಮಂತ್ರವನ್ನು ಜಪಿಸಿದ್ರೆ ಶೀಘ್ರ ಫಲಗಳನ್ನು ಪಡೆಯಬಹುದು ಅನ್ನೋ ನಂಬಿಕೆ ಇದೆ.

ಸ್ಕಂದಮಾತಾ ಮಂತ್ರ

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

ನವರಾತ್ರಿಯ ಐದನೇ ದಿನ ಪುರಾಣದ ಪ್ರಕಾರ ಅತ್ಯಂತ ಮಹತ್ವದ್ದು ಎಂದು ಉಲ್ಲೇಖವಿದೆ. ಈ ದಿನ ವಿಶೇಷವಾಗಿ ಸ್ಕಂದಮಾತೆಯನ್ನು ಪೂಜಿಸಿದ್ರೆ ಆದಿಶಕ್ತಿಯ ಸಂಪೂರ್ಣ ಆಶೀರ್ವಾದ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸ್ಕಂದಮಾತೆಯ ಆರಾಧನೆಯಿಂದ ಏನೆಲ್ಲ ಫಲಗಳು ಪ್ರಾಪ್ತಿಯಾಗುತ್ವೆ.

ಸ್ಕಂದಮಾತಾ ಪೂಜಾ ಫಲಗಳು ಈಕೆ ತಪ್ಪಿತಸ್ಥರ ಪಾಲಿನ ಕ್ಷಮಯಾಧರಿತ್ರಿ. ಸುಖ, ಪರಮಶಾಂತಿಯನ್ನು ನೀಡ್ತಾಳೆ. ಸ್ಕಂದಮಾತಾ ಪೂಜೆಯಿಂದ ಮೋಕ್ಷ ಪ್ರಾಪ್ತಿ. ಸ್ಕಂದಮಾತಾ ಆರಾಧನೆಯಿಂದ ಸಾತ್ವಿಕ ಕಳೆ ಬರುತ್ತೆ. ಸ್ಕಂದಮಾತಾ ಸ್ಮರಣೆಯಿಂದ ಸ್ಕಂದನನ್ನು ಪೂಜಿಸಿದ ಪುಣ್ಯಪ್ರಾಪ್ತಿ.

Published On - 1:56 pm, Thu, 3 October 19

ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ