AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!

Valentines Day: ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ.

Valentine's Day: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!
ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ!
guruganesh bhat
| Edited By: |

Updated on: Feb 12, 2021 | 6:56 PM

Share

ಅವರಿಬ್ಬರಿಗೆ ಪ್ರೇಮವಾಯಿತು ಎಂಬ ಒಂದು ಸಾಲು ಇಡೀ ಪ್ರೇಮಕಥೆಗಳ ಸಾರ. ಮೊದಲಾದರೆ, ಪ್ರೇಮ ಕಥೆಗಳಲ್ಲಿ ಅವನು ಅವಳು ಎಂದರೆ ಸಾಕಿತ್ತು. ಈಗ ಅವನಿಗೂ ಇವನಿಗೂ ಅಥವಾ ಅವಳಿಗೂ ಇವಳಿಗೂ ಪ್ರೇಮವುಂಟಾಯಿತು ಎಂದು ಬರೆಯುವಷ್ಟು ಕಾಲ ಬದಲಾಗಿದೆ, ಆದರೆ ಪ್ರೇಮ ಮಾತ್ರ ಅದೇ, ಸ್ಥಿರ.

ಮಾತು ಮೌನ ಎಲ್ಲದರಲ್ಲೂ ಪ್ರೇಮದ ತಾಪಮಾನದ ಹವೆ. ಅದು ಬಿಸಿಲು ಕಾಲವಿರಲಿ ಅಥವಾ ಚಳಿ ಇಲ್ಲವೇ ಸುಡು ಬಿಸಿಲು. ಕಡು ಪ್ರೇಮಕ್ಕೆ ಕಾಲದ ಪರಿವಿಲ್ಲ ಅರಿವಿಲ್ಲ. ಆಸೆ, ಇಚ್ಛೆ, ಸ್ವಪ್ನ, ಹಸಿವು, ತುರಿಕೆ, ಬಾಯಾರಿಕೆಯಷ್ಟೇ ಸಹಜ ಪ್ರೇಮ. ಅದು ನನ್ನ ಪ್ರೇಮ, ನಮ್ಮ ಪ್ರೇಮ. ಜಗಕೆ ಬಗೆಬಗೆಯ ಪ್ರೀತಿಯನ್ನು ನಮ್ಮೆದೆಯಿಂದ ಮೊಗೆಮೊಗೆದು ಕೊಟ್ಟರೆ ಅದೂ ಕ್ರಿಯೆಗೆ ತಕ್ಕುನಾಗಿಯೇ ಪ್ರತಿಕ್ರಿಯಿಸುತ್ತದೆ. ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ.

ಪ್ರೇಮ ಒಂದು ಅನರ್ಥಕೋಶ

ಪ್ರೇಮಕ್ಕೆ ಔಷಧಿಯನ್ನು ಆಯಾ ಕಾಲ, ಆಯಾ ಋತು ಆಯಾ ಮನಸ್ಸಿಗೆ ತಕ್ಕಂತೆ ಆಯಾ ಪ್ರೇಮಿಗಳೇ ಅರೆಯಬೇಕು. ಪ್ರೇಮವಾವುದು, ಆಕರ್ಷಣೆಯಾವುದು, ಯಾವುದು ಯಾವುದೋ ದುಸ್ವಪ್ನದಿಂದ ಆಚೆ ಎಳೆಯುವ ಮಾಯಕದ ಭಾವ ಎಂಬುದು ನಮನಮಗೇ ಅರ್ಥವಾಗಬೇಕು. ಪ್ರೇಮದ ನಮ್ಮದೇ ಶಬ್ದಕೋಶದಲ್ಲಿ ಪದಗಳುಂಟೆ? ಪದಗಳಿಗೆ ಅರ್ಥವುಂಟೇ? ಪ್ರೇಮ ಒಂದು ಅನರ್ಥಕೋಶ, ಶಿಸ್ತಿಲ್ಲದೆ ಹರಡಿದ ಬಸಳೆ ಚಪ್ಪರ. ರುಚಿರುಚಿ ಮೇಲೋಗರದಡುಗೆ.

ಎರಡು ಮಾತು ಬಂದರೆ ಅದರ ಹಿಂದೆ ಪ್ರೀತಿಯಿದೆ. ಹಾಗೆಂದು ಎರಡು ಲತ್ತೆ ಬಿಗಿದುದರ ಹಿಂದೆಯೂ ಪ್ರೇಮವೇ ಅಡಕವಾಗಿದೆ ಎಂದು ತಿಳಿಯುವವರು ಇದ್ದಾರೆ ಎಂಬುದು ಜಗದ ಸತ್ಯ. ಒಂದು ಕ್ಷಣದಲ್ಲಿ ಅಚಾನಕ್ಕಾಗಿ ಆ ಕ್ಷಣಕ್ಕೆ ದಕ್ಕುವ ಅಪರಿಚಿತ ಪ್ರೇಮ ಇಡೀ ದಿನದ ದುಮ್ಮಾನಗಳನ್ನು ಇಲ್ಲವಾಗಿಸಬಹುದು. ನಮ್ಮನ್ನು ಬಂಧಿಸುವ; ಸ್ವತಂತ್ರದ ರೆಕ್ಕೆ ಉಡಿಸುವ; ವಿಮುಕ್ತಿ ಕೊಡಿಸುವ; ಇದ್ದರೂ ಇಲ್ಲದ ಇರದೆಯೂ ತುಳುಕುವ ಪ್ರೇಮ ನಮಗೆ ಶೀಘ್ರವೇ ಮದುವೆ ಮಾಡಿಸಲಿ.

ಇದನ್ನೂ ಓದಿ: Valentines Day: ಹೆಣ್ಣಿಗೆ ತುಸು ಹೆಚ್ಚೇ ನಾಚಿಕೆ ಕಣೋ.. ಸತಾಯಿಸದೇ ಕಣ್ಮುಂದೆ ಬಂದು ಬಿಡು

Follow Us
guruganesh bhat
guruganesh bhat
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?