Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!

Valentines Day: ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ.

Valentine's Day: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!
ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ!
Follow us
guruganesh bhat
| Updated By: ರಶ್ಮಿ ಕಲ್ಲಕಟ್ಟ

Updated on: Feb 12, 2021 | 6:56 PM

ಅವರಿಬ್ಬರಿಗೆ ಪ್ರೇಮವಾಯಿತು ಎಂಬ ಒಂದು ಸಾಲು ಇಡೀ ಪ್ರೇಮಕಥೆಗಳ ಸಾರ. ಮೊದಲಾದರೆ, ಪ್ರೇಮ ಕಥೆಗಳಲ್ಲಿ ಅವನು ಅವಳು ಎಂದರೆ ಸಾಕಿತ್ತು. ಈಗ ಅವನಿಗೂ ಇವನಿಗೂ ಅಥವಾ ಅವಳಿಗೂ ಇವಳಿಗೂ ಪ್ರೇಮವುಂಟಾಯಿತು ಎಂದು ಬರೆಯುವಷ್ಟು ಕಾಲ ಬದಲಾಗಿದೆ, ಆದರೆ ಪ್ರೇಮ ಮಾತ್ರ ಅದೇ, ಸ್ಥಿರ.

ಮಾತು ಮೌನ ಎಲ್ಲದರಲ್ಲೂ ಪ್ರೇಮದ ತಾಪಮಾನದ ಹವೆ. ಅದು ಬಿಸಿಲು ಕಾಲವಿರಲಿ ಅಥವಾ ಚಳಿ ಇಲ್ಲವೇ ಸುಡು ಬಿಸಿಲು. ಕಡು ಪ್ರೇಮಕ್ಕೆ ಕಾಲದ ಪರಿವಿಲ್ಲ ಅರಿವಿಲ್ಲ. ಆಸೆ, ಇಚ್ಛೆ, ಸ್ವಪ್ನ, ಹಸಿವು, ತುರಿಕೆ, ಬಾಯಾರಿಕೆಯಷ್ಟೇ ಸಹಜ ಪ್ರೇಮ. ಅದು ನನ್ನ ಪ್ರೇಮ, ನಮ್ಮ ಪ್ರೇಮ. ಜಗಕೆ ಬಗೆಬಗೆಯ ಪ್ರೀತಿಯನ್ನು ನಮ್ಮೆದೆಯಿಂದ ಮೊಗೆಮೊಗೆದು ಕೊಟ್ಟರೆ ಅದೂ ಕ್ರಿಯೆಗೆ ತಕ್ಕುನಾಗಿಯೇ ಪ್ರತಿಕ್ರಿಯಿಸುತ್ತದೆ. ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ.

ಪ್ರೇಮ ಒಂದು ಅನರ್ಥಕೋಶ

ಪ್ರೇಮಕ್ಕೆ ಔಷಧಿಯನ್ನು ಆಯಾ ಕಾಲ, ಆಯಾ ಋತು ಆಯಾ ಮನಸ್ಸಿಗೆ ತಕ್ಕಂತೆ ಆಯಾ ಪ್ರೇಮಿಗಳೇ ಅರೆಯಬೇಕು. ಪ್ರೇಮವಾವುದು, ಆಕರ್ಷಣೆಯಾವುದು, ಯಾವುದು ಯಾವುದೋ ದುಸ್ವಪ್ನದಿಂದ ಆಚೆ ಎಳೆಯುವ ಮಾಯಕದ ಭಾವ ಎಂಬುದು ನಮನಮಗೇ ಅರ್ಥವಾಗಬೇಕು. ಪ್ರೇಮದ ನಮ್ಮದೇ ಶಬ್ದಕೋಶದಲ್ಲಿ ಪದಗಳುಂಟೆ? ಪದಗಳಿಗೆ ಅರ್ಥವುಂಟೇ? ಪ್ರೇಮ ಒಂದು ಅನರ್ಥಕೋಶ, ಶಿಸ್ತಿಲ್ಲದೆ ಹರಡಿದ ಬಸಳೆ ಚಪ್ಪರ. ರುಚಿರುಚಿ ಮೇಲೋಗರದಡುಗೆ.

ಎರಡು ಮಾತು ಬಂದರೆ ಅದರ ಹಿಂದೆ ಪ್ರೀತಿಯಿದೆ. ಹಾಗೆಂದು ಎರಡು ಲತ್ತೆ ಬಿಗಿದುದರ ಹಿಂದೆಯೂ ಪ್ರೇಮವೇ ಅಡಕವಾಗಿದೆ ಎಂದು ತಿಳಿಯುವವರು ಇದ್ದಾರೆ ಎಂಬುದು ಜಗದ ಸತ್ಯ. ಒಂದು ಕ್ಷಣದಲ್ಲಿ ಅಚಾನಕ್ಕಾಗಿ ಆ ಕ್ಷಣಕ್ಕೆ ದಕ್ಕುವ ಅಪರಿಚಿತ ಪ್ರೇಮ ಇಡೀ ದಿನದ ದುಮ್ಮಾನಗಳನ್ನು ಇಲ್ಲವಾಗಿಸಬಹುದು. ನಮ್ಮನ್ನು ಬಂಧಿಸುವ; ಸ್ವತಂತ್ರದ ರೆಕ್ಕೆ ಉಡಿಸುವ; ವಿಮುಕ್ತಿ ಕೊಡಿಸುವ; ಇದ್ದರೂ ಇಲ್ಲದ ಇರದೆಯೂ ತುಳುಕುವ ಪ್ರೇಮ ನಮಗೆ ಶೀಘ್ರವೇ ಮದುವೆ ಮಾಡಿಸಲಿ.

ಇದನ್ನೂ ಓದಿ: Valentines Day: ಹೆಣ್ಣಿಗೆ ತುಸು ಹೆಚ್ಚೇ ನಾಚಿಕೆ ಕಣೋ.. ಸತಾಯಿಸದೇ ಕಣ್ಮುಂದೆ ಬಂದು ಬಿಡು

ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ