AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!

Valentines Day: ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ.

Valentine's Day: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!
ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ!
guruganesh bhat
| Edited By: |

Updated on: Feb 12, 2021 | 6:56 PM

Share

ಅವರಿಬ್ಬರಿಗೆ ಪ್ರೇಮವಾಯಿತು ಎಂಬ ಒಂದು ಸಾಲು ಇಡೀ ಪ್ರೇಮಕಥೆಗಳ ಸಾರ. ಮೊದಲಾದರೆ, ಪ್ರೇಮ ಕಥೆಗಳಲ್ಲಿ ಅವನು ಅವಳು ಎಂದರೆ ಸಾಕಿತ್ತು. ಈಗ ಅವನಿಗೂ ಇವನಿಗೂ ಅಥವಾ ಅವಳಿಗೂ ಇವಳಿಗೂ ಪ್ರೇಮವುಂಟಾಯಿತು ಎಂದು ಬರೆಯುವಷ್ಟು ಕಾಲ ಬದಲಾಗಿದೆ, ಆದರೆ ಪ್ರೇಮ ಮಾತ್ರ ಅದೇ, ಸ್ಥಿರ.

ಮಾತು ಮೌನ ಎಲ್ಲದರಲ್ಲೂ ಪ್ರೇಮದ ತಾಪಮಾನದ ಹವೆ. ಅದು ಬಿಸಿಲು ಕಾಲವಿರಲಿ ಅಥವಾ ಚಳಿ ಇಲ್ಲವೇ ಸುಡು ಬಿಸಿಲು. ಕಡು ಪ್ರೇಮಕ್ಕೆ ಕಾಲದ ಪರಿವಿಲ್ಲ ಅರಿವಿಲ್ಲ. ಆಸೆ, ಇಚ್ಛೆ, ಸ್ವಪ್ನ, ಹಸಿವು, ತುರಿಕೆ, ಬಾಯಾರಿಕೆಯಷ್ಟೇ ಸಹಜ ಪ್ರೇಮ. ಅದು ನನ್ನ ಪ್ರೇಮ, ನಮ್ಮ ಪ್ರೇಮ. ಜಗಕೆ ಬಗೆಬಗೆಯ ಪ್ರೀತಿಯನ್ನು ನಮ್ಮೆದೆಯಿಂದ ಮೊಗೆಮೊಗೆದು ಕೊಟ್ಟರೆ ಅದೂ ಕ್ರಿಯೆಗೆ ತಕ್ಕುನಾಗಿಯೇ ಪ್ರತಿಕ್ರಿಯಿಸುತ್ತದೆ. ಸೋತು ಗೆಲ್ಲುವ ಗೆದ್ದು ಸೋಲುವ ಪ್ರೇಮದಾಟದಲ್ಲಿ ನಾನು ಕೊಟ್ಟ ಅಪ್ಪಿಯೇ ತಿರುಗಿ ನನ್ನ ಕೆನ್ನೆಗಪ್ಪಳಿಸುತ್ತದೆ.

ಪ್ರೇಮ ಒಂದು ಅನರ್ಥಕೋಶ

ಪ್ರೇಮಕ್ಕೆ ಔಷಧಿಯನ್ನು ಆಯಾ ಕಾಲ, ಆಯಾ ಋತು ಆಯಾ ಮನಸ್ಸಿಗೆ ತಕ್ಕಂತೆ ಆಯಾ ಪ್ರೇಮಿಗಳೇ ಅರೆಯಬೇಕು. ಪ್ರೇಮವಾವುದು, ಆಕರ್ಷಣೆಯಾವುದು, ಯಾವುದು ಯಾವುದೋ ದುಸ್ವಪ್ನದಿಂದ ಆಚೆ ಎಳೆಯುವ ಮಾಯಕದ ಭಾವ ಎಂಬುದು ನಮನಮಗೇ ಅರ್ಥವಾಗಬೇಕು. ಪ್ರೇಮದ ನಮ್ಮದೇ ಶಬ್ದಕೋಶದಲ್ಲಿ ಪದಗಳುಂಟೆ? ಪದಗಳಿಗೆ ಅರ್ಥವುಂಟೇ? ಪ್ರೇಮ ಒಂದು ಅನರ್ಥಕೋಶ, ಶಿಸ್ತಿಲ್ಲದೆ ಹರಡಿದ ಬಸಳೆ ಚಪ್ಪರ. ರುಚಿರುಚಿ ಮೇಲೋಗರದಡುಗೆ.

ಎರಡು ಮಾತು ಬಂದರೆ ಅದರ ಹಿಂದೆ ಪ್ರೀತಿಯಿದೆ. ಹಾಗೆಂದು ಎರಡು ಲತ್ತೆ ಬಿಗಿದುದರ ಹಿಂದೆಯೂ ಪ್ರೇಮವೇ ಅಡಕವಾಗಿದೆ ಎಂದು ತಿಳಿಯುವವರು ಇದ್ದಾರೆ ಎಂಬುದು ಜಗದ ಸತ್ಯ. ಒಂದು ಕ್ಷಣದಲ್ಲಿ ಅಚಾನಕ್ಕಾಗಿ ಆ ಕ್ಷಣಕ್ಕೆ ದಕ್ಕುವ ಅಪರಿಚಿತ ಪ್ರೇಮ ಇಡೀ ದಿನದ ದುಮ್ಮಾನಗಳನ್ನು ಇಲ್ಲವಾಗಿಸಬಹುದು. ನಮ್ಮನ್ನು ಬಂಧಿಸುವ; ಸ್ವತಂತ್ರದ ರೆಕ್ಕೆ ಉಡಿಸುವ; ವಿಮುಕ್ತಿ ಕೊಡಿಸುವ; ಇದ್ದರೂ ಇಲ್ಲದ ಇರದೆಯೂ ತುಳುಕುವ ಪ್ರೇಮ ನಮಗೆ ಶೀಘ್ರವೇ ಮದುವೆ ಮಾಡಿಸಲಿ.

ಇದನ್ನೂ ಓದಿ: Valentines Day: ಹೆಣ್ಣಿಗೆ ತುಸು ಹೆಚ್ಚೇ ನಾಚಿಕೆ ಕಣೋ.. ಸತಾಯಿಸದೇ ಕಣ್ಮುಂದೆ ಬಂದು ಬಿಡು

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ