AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀಟಗಳು ಕಿವಿಯೊಳಗೆ ಹೊಕ್ಕರೆ ಹೀಗೆ ಮಾಡಿ

  ಕೆಲವೊಮ್ಮೆ ಕೀಟಗಳು ಕಿವಿಯ ತೂತಿನೊಳಗೆ ತೂರಿಕೊಂಡು ಆಳಕ್ಕೆ ಇಳಿದುಬಿಡುತ್ತವೆ. ಇದು ಒಳಭಾಗದಲ್ಲಿ ನಡೆದಾಡಿದಂತೆಲ್ಲಾ ಕಿವಿಯ ಸೂಕ್ಷ್ಮ ಅಂಗಗಳಿಗೆ ಕಚಗುಳಿಯಾಗುವಂತಾಗುವುದು, ಕೆಲವೊಮ್ಮೆ ಕೀಟಗಳ ಕಾಲಿನ ಮುಳ್ಳುಗಳು ಚುಚ್ಚುವುದು ಅಥವಾ ಕೀಟ ಕಚ್ಚುವ ಮೂಲಕ ಒಳಭಾಗದಲ್ಲಿ ಭಾರೀ ಉರಿಯಾಗುವುದು ಅಥವಾ ನೋವು ಕಾಣಿಸಿಕೊಳ್ಳುವ ಸಂಭವವೂ ಇದೆ. ವಿಶೇಷವಾಗಿ ಮಕ್ಕಳು ಹೊರಗೆ ಆಟವಾಡುವ ಸಮಯದಲ್ಲಿ ಈ ತೊಂದರೆಗೆ ಒಳಗಾಗುತ್ತಾರೆ. ಪ್ರತಿಯೊಬ್ಬರೂ ಜೀವಮಾನದಲ್ಲಿ ಕನಿಷ್ಠ ಒಮ್ಮೆಯಾದರೂ ಈ ಅನುಭವವನ್ನು ಪಡೆದೇ ಇರುತ್ತಾರೆ. ಕಿವಿಯ ಒಳ ಅಂಗಗಳು ಅತಿ ಸೂಕ್ಷ್ಮವಾಗಿದ್ದು ಅತ್ಯಂತ ದುರ್ಬಲವೂ […]

ಕೀಟಗಳು ಕಿವಿಯೊಳಗೆ ಹೊಕ್ಕರೆ ಹೀಗೆ ಮಾಡಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 29, 2019 | 6:57 PM

Share

ಕೆಲವೊಮ್ಮೆ ಕೀಟಗಳು ಕಿವಿಯ ತೂತಿನೊಳಗೆ ತೂರಿಕೊಂಡು ಆಳಕ್ಕೆ ಇಳಿದುಬಿಡುತ್ತವೆ. ಇದು ಒಳಭಾಗದಲ್ಲಿ ನಡೆದಾಡಿದಂತೆಲ್ಲಾ ಕಿವಿಯ ಸೂಕ್ಷ್ಮ ಅಂಗಗಳಿಗೆ ಕಚಗುಳಿಯಾಗುವಂತಾಗುವುದು, ಕೆಲವೊಮ್ಮೆ ಕೀಟಗಳ ಕಾಲಿನ ಮುಳ್ಳುಗಳು ಚುಚ್ಚುವುದು ಅಥವಾ ಕೀಟ ಕಚ್ಚುವ ಮೂಲಕ ಒಳಭಾಗದಲ್ಲಿ ಭಾರೀ ಉರಿಯಾಗುವುದು ಅಥವಾ ನೋವು ಕಾಣಿಸಿಕೊಳ್ಳುವ ಸಂಭವವೂ ಇದೆ. ವಿಶೇಷವಾಗಿ ಮಕ್ಕಳು ಹೊರಗೆ ಆಟವಾಡುವ ಸಮಯದಲ್ಲಿ ಈ ತೊಂದರೆಗೆ ಒಳಗಾಗುತ್ತಾರೆ. ಪ್ರತಿಯೊಬ್ಬರೂ ಜೀವಮಾನದಲ್ಲಿ ಕನಿಷ್ಠ ಒಮ್ಮೆಯಾದರೂ ಈ ಅನುಭವವನ್ನು ಪಡೆದೇ ಇರುತ್ತಾರೆ. ಕಿವಿಯ ಒಳ ಅಂಗಗಳು ಅತಿ ಸೂಕ್ಷ್ಮವಾಗಿದ್ದು ಅತ್ಯಂತ ದುರ್ಬಲವೂ ಆಗಿವೆ. ಆದ್ದರಿಂದ ಕಿವಿಯೊಳಗೆ ಕಡ್ಡಿಹಾಕಿ ಕೀಟವನ್ನು ಹೊರತೆಗೆಯುವ ಪ್ರಯತ್ನದಲ್ಲಿ ಈ ಸೂಕ್ಷ್ಮ ಅಂಗಗಳಿಗೆ ಘಾಸಿಯಾಗಬಹುದು.

ಕಿವಿ ಹೊಕ್ಕ ಕೀಟ ಹೊರಬರುವುದು ಹೇಗೆ? ಕೀಟ ಒಳಭಾಗದಲ್ಲಿ ನಡೆದಾಡುತ್ತಿದ್ದಂತೆಯೇ ಹೆಚ್ಚಿನವರು ತಲೆಕೆಟ್ಟಂತೆ ವರ್ತಿಸುತ್ತಾರೆ. ಆದರೆ ಕೊಂಚ ಸಾವಧಾನ ವಹಿಸಿ ಈ ಕೆಳಗಿನ ವಿಧಾನಗಳಲ್ಲೊಂದನ್ನು ಅನುಸರಿಸಿದರೆ ಉಪಾಯದಿಂದ ಕೀಟವನ್ನು ಹೊರತೆಗೆಯಬಹುದು. ಕೀಟ ಒಳಹೊಕ್ಕ ಬಳಿಕ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಕೆಲವು ತೊಟ್ಟು ಆಲಿವ್ ಎಣ್ಣೆ ಅಥವಾ ಮಗುವಿನ ಎಣ್ಣೆಯನ್ನು ಕಿವಿಯೊಳಗೆ ಒಂದೊಂದೇ ತೊಟ್ಟಾಗಿ ಬೀಳುವಂತೆ ಹಾಕಿ. ಎಣ್ಣೆಯಿಂದ ಕಿವಿಯ ತೂತು ಮುಚ್ಚಿದರೆ ಕೀಟಕ್ಕೆ ಉಸಿರಾಡಲು ಸಾಧ್ಯವಾಗದೇ ಎಣ್ಣೆಯೊಂದಿಗೇ ಹೊರಬರುತ್ತದೆ.

ಒಂದು ವೇಳೆ ಕಿವಿಯಲ್ಲಿ ಸೋಂಕು, ಸೋರುವುದು, ಕಿವಿನೋವು ಅಥವಾ ಇತರ ಯಾವುದಾದರೂ ತೊಂದರೆ ಇದ್ದರೆ ಕಿವಿಗೆ ಎಣ್ಣೆ ಬಿಡದಿರಿ. ಉಳಿದವರಿಗೆ ಎಣ್ಣೆಯನ್ನು ಕೊಂಚವೇ ಅಂದ್ರೆ ಉಗುರು ಬಿಸಿ ಮಾಡಿ ಬಿಟ್ಟರೆ ಉತ್ತಮ. ಒಂದು ಕಿವಿಸ್ವಚ್ಛಗೊಳಿಸುವ ಹತ್ತಿಸುತ್ತಿದ ಕಡ್ಡಿಯನ್ನು ಅಪ್ಪಟ ಆಲ್ಕೋಹಾಲ್ ದ್ರವದಲ್ಲಿ ಮುಳುಗಿಸಿ ಕಿವಿಯ ತೂತಿನ ಬಳಿ ಇರಿಸಿ. ಇದರ ದ್ರವ ಕಿವಿಯೊಳಗೆ ತೊಟ್ಟಿಕ್ಕುವಂತೆ ಮಾಡಿ. ಆಲ್ಕೋಹಾಲ್ ನ ಹಬೆ ಕಿವಿಯೊಳಗೆ ವ್ಯಾಪಿಸಿದಂತೆಯೇ ಕೀಟ ಅಲ್ಲಿಂದ ಹೊರಬರುತ್ತದೆ. ಅಲ್ಲದೇ ಒಳಭಾಗ ಸ್ವಚ್ಛವೂ ಆಗುತ್ತದೆ.

ಬೆಂಕಿಕಡ್ಡಿ, ಹೇರ್​ಪಿನ್ ಬೇಡ! ಕೆಲವೊಮ್ಮೆ ಕಿವಿಯೊಳಗಿನ ತುರಿಕೆ ತಾಳಲಾರದೇ ಕಡ್ಡಿಯನ್ನು ಕಿವಿಯೊಳಗೆ ಬಿಡುವ ತವಕವುಂಟಾಗುತ್ತದೆ. ಆದರೆ ಎಂದಿಗೂ ಕಡ್ಡಿಯನ್ನು ಅಥವಾ ಬೆಂಕಿಕಡ್ಡಿ, ಹೇರ್ ಪಿನ್ ಮೊದಲಾದ ಯಾವುದನ್ನೂ ಕಿವಿಯೊಳಗೆ ತೂರಿಸದಿರಿ. ಏಕೆಂದರೆ ಕಿವಿಯೊಳಗಿರುವ ಕೀಟಕ್ಕೆ ಈ ಕಡ್ಡಿ ಚುಚ್ಚಿದರೆ ಅದು ತನ್ನ ಪ್ರಾಣ ಉಳಿಸಿಕೊಳ್ಳಲು ಕೈಕಾಲುಗಳನ್ನು ಆಡಿಸಿ ಕಿವಿಯ ಸೂಕ್ಷ್ಮ ಅಂಗಗಳ ಮೇಲೆ ಒತ್ತುತ್ತಾ ಅಥವಾ ಕಚ್ಚಿ ಅಥವಾ ಮುಳ್ಳುಗಳನ್ನು ಚುಚ್ಚಿ ತನ್ನ ವಿಷವನ್ನು ಸ್ರವಿಸಬಹುದು. ಆದ್ದರಿಂದ ಕೀಟ ಹೊಕ್ಕಿರುವ ಕಿವಿಯೊಳಗೆ ಖಂಡಿತಾ ಏನನ್ನೂ ತೂರಿಸಕೂಡದು.

ಕೆಲವೊಮ್ಮೆ ಕೀಟದ ಮೀಸೆಯ ತುದಿ ಕಿವಿಯ ಹೊರಗೆ ಇಣುಕುತ್ತಿರುವಂತೆ ಕಾಣುತ್ತದೆ. ಇದನ್ನು ತೆಗೆಯಲು ಬೆರಳನ್ನು ತೂರಿಸಲು ಪ್ರಬಲ ಬಯಕೆಯುಂಟಾಗುತ್ತದೆ. ಆದರೆ ಇದನ್ನು ನಿವಾರಿಸಲು ಬೆರಳು ತೂರಿಸಿದರೆ ಕೀಟ ಒಳಗಿನ ಭಾಗಗಳಿಗೆ ಕಚ್ಚಬಹುದು. ಕೆಲವೊಮ್ಮೆ ಬೆಂಕಿಕಡ್ಡಿ ಅಥವಾ ಹೇರ್ ಪಿನ್ನುಗಳನ್ನು ಕಿವಿಯೊಳಗೆ ತೂರಿಸುವಾಗ ಕಿವಿಯೊಳಗಿನ ಮೇಣದ ಪದರ ಎದ್ದು ಬಂದು ಕಿವಿಯ ತೂತಿಗೆ ಅಡ್ಡಲಾಗಿ ಸಿಕ್ಕಿಕೊಳ್ಳಬಹುದು. ಇವು ಕೀಟವನ್ನು ಹೊರತೆಗೆಯಲು ಇನ್ನಷ್ಟು ಕಷ್ಟವಾಗಿಸಬಹುದು. ಅಲ್ಲದೇ ಮೇಣ ಎದ್ದುಬಂದ ಚರ್ಮದ ಭಾಗ ಈಗ ಯಾವುದೇ ರಕ್ಷಣೆಯಿಲ್ಲದೇ ಕೀಟದ ಸೂಕ್ಷ್ಮ ಮುಳ್ಳುಗಳಿಗೆ ಸುಲಭವಾಗಿ ಚುಚ್ಚಿಕೊಳ್ಳಲು ಸಾಧ್ಯವಾಗುವಂತಿದ್ದು ಇದರಿಂದ ಸೋಂಕು ಉಂಟಾಗಬಹುದು. ಇದು ಕೇಳುವ ಸಾಮರ್ಥ್ಯವನ್ನೇ ಉಡುಗಿಸಬಹುದು.

ತಕ್ಷಣ ವೈದ್ಯರನ್ನ ಭೇಟಿಯಾಗಿ: ಒಂದು ವೇಳೆ ಎಣ್ಣೆ ಬಿಟ್ಟರೂ ಕೀಟ ಹೊರಬರದೇ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಈ ಪ್ರಯತ್ನದಲ್ಲಿ ಯಾವುದೇ ತಪ್ಪಾದರೂ ಇದರ ಪರಿಣಾಮ ಕಿವಿ ಕೇಳುವ ಸಾಮರ್ಥ್ಯಕ್ಕೆ ಅಪಾಯವಾಗುವ ಕಾರಣ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು.  

Published On - 5:30 pm, Sun, 29 September 19

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ