AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜೆಯ ವೇಳೆ ಮಲಗಬಾರದು ಎಂದು ಹೇಳೋದೇಕೆ?

ಸಂಧ್ಯಾಕಾಲವನ್ನು ನಿರ್ಮಲ, ಪ್ರಶಾಂತ, ವಿಕಾರ ರಹಿತ, ವಿಶ್ರಾಂತಿಮಯ ಹಾಗೂ ಸೂಕ್ಷ್ಮ ಕಾಲ ಎನ್ನಲಾಗುತ್ತೆ. ಈ ಸಮಯದಲ್ಲಿ ಮನುಷ್ಯ ವಿಕಾರಗಳಿಂದ ನಿವೃತ್ತಿ ಹೊಂದಿದ ಮನಸ್ಸನ್ನು ಪಡೆಯಲು ಸಾಧ್ಯವಾಗುತ್ತೆ.

ಸಂಜೆಯ ವೇಳೆ ಮಲಗಬಾರದು ಎಂದು ಹೇಳೋದೇಕೆ?
ಸೌಜನ್ಯ : ಅಂತರ್ಜಾಲ
ಆಯೇಷಾ ಬಾನು
ಆಯೇಷಾ ಬಾನು|

Updated on: May 03, 2021 | 6:38 AM

Share

ಹಿಂದೂ ಸಂಪ್ರದಾಯದ ಪ್ರಕಾರ ಇತ್ತ ಹಗಲೂ ಅಲ್ಲದ, ಅತ್ತ ಇರುಳೂ ಅಲ್ಲದ ಸಮಯವನ್ನು ಮುಸ್ಸಂಜೆ ಅಥವಾ ಸಂಧ್ಯಾಕಾಲ ಎನ್ನಲಾಗುತ್ತೆ. ಸಂಧ್ಯಾಕಾಲ ಬೆಳಗಿನ ಧಾವಂತ ಹಾಗೂ ರಾತ್ರಿಯ ವಿಕಾರ ಎರಡನ್ನೂ ಹೊಂದಿರುವುದಿಲ್ಲ ಅಂತಲೂ ಹೇಳಲಾಗುತ್ತೆ. ಕೆಲ ಪುರಾಣಗಳ ಪ್ರಕಾರ, ಸಂಧ್ಯಾ ತತ್ವವನ್ನು ಪರಬ್ರಹ್ಮ ತತ್ವ ಎನ್ನಲಾಗುತ್ತೆ. ಭಗವಂತನು ಪ್ರಪಂಚಕ್ಕೆ ಅಂಟಿಕೊಂಡಿರುವುದಿಲ್ಲ. ಆದ್ರೆ ಅಂಟಿಕೊಂಡವನಂತೆ ಪ್ರಪಂಚವನ್ನು ಪ್ರೀತಿಯಿಂದ ಪರಿಪಾಲಿಸುತ್ತಿದ್ದಾನೆ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಸಂಧ್ಯಾಕಾಲವನ್ನು ನಿರ್ಮಲ, ಪ್ರಶಾಂತ, ವಿಕಾರ ರಹಿತ, ವಿಶ್ರಾಂತಿಮಯ ಹಾಗೂ ಸೂಕ್ಷ್ಮ ಕಾಲ ಎನ್ನಲಾಗುತ್ತೆ. ಈ ಸಮಯದಲ್ಲಿ ಮನುಷ್ಯ ವಿಕಾರಗಳಿಂದ ನಿವೃತ್ತಿ ಹೊಂದಿದ ಮನಸ್ಸನ್ನು ಪಡೆಯಲು ಸಾಧ್ಯವಾಗುತ್ತೆ. ಆದ್ದರಿಂದಲೇ ಸಂಧ್ಯಾಕಾಲವನ್ನು ಸಾಧನೆಗೆ ಬಹಳ ಪ್ರಶಸ್ತವಾದ ಸಮಯ ಎನ್ನಲಾಗುತ್ತೆ. ಕೆಲ ಗ್ರಂಥಗಳ ಪ್ರಕಾರ, ಸಾಧನೆಗೆ ಕಾಲವು ಬಹಳ ಮುಖ್ಯ ಅಂತಾ ಹೇಳಲಾಗುತ್ತೆ. ಇದೇ ಕಾರಣಕ್ಕೆ ಸಾಧನೆಗೆ ಸೂಕ್ತವಾದ ಸಂಧ್ಯಾಕಾಲವನ್ನು ಅತ್ಯಂತ ಶ್ರೇಷ್ಠ ಎನ್ನಲಾಗುತ್ತೆ. ಪುರಾಣಗಳ ಪ್ರಕಾರ, ಸೂರ್ಯ ತೇಜೋಮಂಡಲ ಹಾಗೂ ಜ್ಯೋತಿರ್ಮಂಡಲ. ಇದೇ ಕಾರಣಕ್ಕೆ ಸೂರ್ಯನ ಹೆಸರನ್ನು ಭರ್ಗವಾ ಅಂತಾ ಕೂಡ ಕರೆಯಲಾಗುತ್ತೆ. ಸೂರ್ಯಮಂಡಲದಲ್ಲಿ ಅಂತರ್ಗತವಾದ ಭರ್ಗ ಅತ್ಯಂತ ಶ್ರೇಷ್ಠವಾದ ತೇಜಸ್ಸು ಎನ್ನಲಾಗುತ್ತೆ. ಆ ತೇಜಸ್ಸು ಸಂಧ್ಯಾ ಸಮಯದಲ್ಲಿ ಭೂಮಿಗಿಳಿದು ಬರುತ್ತೆ ಹಾಗೂ ಪ್ರಾಣಶಕ್ತಿ ಪ್ರಸರಣಕ್ಕೆ ಬೇಕಾದ ಚೈತನ್ಯವನ್ನು ಕೊಡುತ್ತೆ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಸಮಯದಲ್ಲಿ ಮಲಗುವುದು, ನಿದ್ದೆ ಮಾಡುವುದು, ಊಟ-ತಿಂಡಿಗಳನ್ನು ಮಾಡುವುದು ನಿಷಿದ್ಧ ಅಂತಾ ಶಾಸ್ತ್ರಗಳು ಹೇಳುತ್ತವೆ.

ಬದಲಾಗಿ ಸಂಧ್ಯಾ ಸಮಯದಲ್ಲಿ ಸೂರ್ಯನನ್ನು ಆರಾಧಿಸಿದ್ರೆ ಸೂರ್ಯನ ಶಕ್ತಿ ಹಾಗೂ ತೇಜಸ್ಸು ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ. ಯಾಕಂದ್ರೆ ಸಂಧ್ಯಾಕಾಲದ ಆರಾಧ್ಯದೇವತೆ ಸಂಧ್ಯಾ. ಆದಿತ್ಯನಲ್ಲಿರುವ ಚೈತನ್ಯ ಶಕ್ತಿಯೇ ಸಂಧ್ಯಾರೂಪಳಾದ ಸಂಧ್ಯಾದೇವಿ ಎನ್ನಲಾಗುತ್ತೆ. ಸಂಧ್ಯಾ ಸಮಯ ಎಂತಹ ಪ್ರಶಸ್ತವಾದ ಸಮಯವೆಂದರೆ, ಈ ಸಮಯದಲ್ಲಿ ಸಂಧ್ಯಾದೇವಿ ಜೊತೆಗೆ ಇತರೆ ದೇವತೆಗಳನ್ನೂ ಆರಾಧಿಸಿದ್ರೆ ಆ ದೈವಗಳ ಕೃಪೆ ನಮ್ಮ ಮೇಲಾಗುತ್ತೆ ಅಂತಾ ಪುರಾಣಗಳು ಹೇಳುತ್ತವೆ. ಸಂಧ್ಯಾ ಸಮಯದಲ್ಲಿ ಯಾವುದೇ ದಿವ್ಯ ಮಂತ್ರವನ್ನು ಉಚ್ಚರಿಸಿದರೆ ಆ ಮಂತ್ರದೇವತೆಯ ಅನುಗ್ರಹ ಪ್ರಾಪ್ತಿಯಾಗುತ್ತೆ. ಇದಿಷ್ಟೇ ಅಲ್ಲದೇ, ಸಂಧ್ಯಾಕಾಲದಲ್ಲಿ ಉಪಾಸನೆ ಮಾಡುವುದರಿಂದ ನಮ್ಮ ಅಸಲಿ ಸ್ವರೂಪವೇನು ಅನ್ನೋದು ತಿಳಿಯುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗೇ ಸಂಧ್ಯಾ ಸಮಯದಲ್ಲಿ ಊಟ-ತಿಂಡಿ, ನಿದ್ರೆ ವಿಷಯವನ್ನು ಮರೆತು, ಧ್ಯಾನದಲ್ಲಿ ತಲ್ಲೀನರಾಗಬೇಕು. ನಂತರ ಆ ಸಮಯದಲ್ಲಿ ಸಂಧ್ಯಾದೇವಿಯನ್ನೋ ಅಥವಾ ತಮ್ಮ ಇಷ್ಟದೈವವನ್ನೋ ಆರಾಧಿಸಬೇಕು ಎನ್ನಲಾಗುತ್ತೆ. ಸಕಾಲದಲ್ಲಿ ಬಿತ್ತಿದ ಬೀಜ ಫಲ ಕೊಡುವಂತೆ ಸಂಧ್ಯೋಪಾಸನೆ ಬಹು ಫಲಪ್ರದವಾದದ್ದು ಅಂತಾ ನಮ್ಮ ಧರ್ಮಶಾಸ್ತ್ರ ಹೇಳುತ್ತೆ.

ಇದನ್ನೂ ಓದಿ: ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!