AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜೆಯ ವೇಳೆ ಮಲಗಬಾರದು ಎಂದು ಹೇಳೋದೇಕೆ?

ಸಂಧ್ಯಾಕಾಲವನ್ನು ನಿರ್ಮಲ, ಪ್ರಶಾಂತ, ವಿಕಾರ ರಹಿತ, ವಿಶ್ರಾಂತಿಮಯ ಹಾಗೂ ಸೂಕ್ಷ್ಮ ಕಾಲ ಎನ್ನಲಾಗುತ್ತೆ. ಈ ಸಮಯದಲ್ಲಿ ಮನುಷ್ಯ ವಿಕಾರಗಳಿಂದ ನಿವೃತ್ತಿ ಹೊಂದಿದ ಮನಸ್ಸನ್ನು ಪಡೆಯಲು ಸಾಧ್ಯವಾಗುತ್ತೆ.

ಸಂಜೆಯ ವೇಳೆ ಮಲಗಬಾರದು ಎಂದು ಹೇಳೋದೇಕೆ?
ಸೌಜನ್ಯ : ಅಂತರ್ಜಾಲ
Follow us
ಆಯೇಷಾ ಬಾನು
|

Updated on: May 03, 2021 | 6:38 AM

ಹಿಂದೂ ಸಂಪ್ರದಾಯದ ಪ್ರಕಾರ ಇತ್ತ ಹಗಲೂ ಅಲ್ಲದ, ಅತ್ತ ಇರುಳೂ ಅಲ್ಲದ ಸಮಯವನ್ನು ಮುಸ್ಸಂಜೆ ಅಥವಾ ಸಂಧ್ಯಾಕಾಲ ಎನ್ನಲಾಗುತ್ತೆ. ಸಂಧ್ಯಾಕಾಲ ಬೆಳಗಿನ ಧಾವಂತ ಹಾಗೂ ರಾತ್ರಿಯ ವಿಕಾರ ಎರಡನ್ನೂ ಹೊಂದಿರುವುದಿಲ್ಲ ಅಂತಲೂ ಹೇಳಲಾಗುತ್ತೆ. ಕೆಲ ಪುರಾಣಗಳ ಪ್ರಕಾರ, ಸಂಧ್ಯಾ ತತ್ವವನ್ನು ಪರಬ್ರಹ್ಮ ತತ್ವ ಎನ್ನಲಾಗುತ್ತೆ. ಭಗವಂತನು ಪ್ರಪಂಚಕ್ಕೆ ಅಂಟಿಕೊಂಡಿರುವುದಿಲ್ಲ. ಆದ್ರೆ ಅಂಟಿಕೊಂಡವನಂತೆ ಪ್ರಪಂಚವನ್ನು ಪ್ರೀತಿಯಿಂದ ಪರಿಪಾಲಿಸುತ್ತಿದ್ದಾನೆ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಸಂಧ್ಯಾಕಾಲವನ್ನು ನಿರ್ಮಲ, ಪ್ರಶಾಂತ, ವಿಕಾರ ರಹಿತ, ವಿಶ್ರಾಂತಿಮಯ ಹಾಗೂ ಸೂಕ್ಷ್ಮ ಕಾಲ ಎನ್ನಲಾಗುತ್ತೆ. ಈ ಸಮಯದಲ್ಲಿ ಮನುಷ್ಯ ವಿಕಾರಗಳಿಂದ ನಿವೃತ್ತಿ ಹೊಂದಿದ ಮನಸ್ಸನ್ನು ಪಡೆಯಲು ಸಾಧ್ಯವಾಗುತ್ತೆ. ಆದ್ದರಿಂದಲೇ ಸಂಧ್ಯಾಕಾಲವನ್ನು ಸಾಧನೆಗೆ ಬಹಳ ಪ್ರಶಸ್ತವಾದ ಸಮಯ ಎನ್ನಲಾಗುತ್ತೆ. ಕೆಲ ಗ್ರಂಥಗಳ ಪ್ರಕಾರ, ಸಾಧನೆಗೆ ಕಾಲವು ಬಹಳ ಮುಖ್ಯ ಅಂತಾ ಹೇಳಲಾಗುತ್ತೆ. ಇದೇ ಕಾರಣಕ್ಕೆ ಸಾಧನೆಗೆ ಸೂಕ್ತವಾದ ಸಂಧ್ಯಾಕಾಲವನ್ನು ಅತ್ಯಂತ ಶ್ರೇಷ್ಠ ಎನ್ನಲಾಗುತ್ತೆ. ಪುರಾಣಗಳ ಪ್ರಕಾರ, ಸೂರ್ಯ ತೇಜೋಮಂಡಲ ಹಾಗೂ ಜ್ಯೋತಿರ್ಮಂಡಲ. ಇದೇ ಕಾರಣಕ್ಕೆ ಸೂರ್ಯನ ಹೆಸರನ್ನು ಭರ್ಗವಾ ಅಂತಾ ಕೂಡ ಕರೆಯಲಾಗುತ್ತೆ. ಸೂರ್ಯಮಂಡಲದಲ್ಲಿ ಅಂತರ್ಗತವಾದ ಭರ್ಗ ಅತ್ಯಂತ ಶ್ರೇಷ್ಠವಾದ ತೇಜಸ್ಸು ಎನ್ನಲಾಗುತ್ತೆ. ಆ ತೇಜಸ್ಸು ಸಂಧ್ಯಾ ಸಮಯದಲ್ಲಿ ಭೂಮಿಗಿಳಿದು ಬರುತ್ತೆ ಹಾಗೂ ಪ್ರಾಣಶಕ್ತಿ ಪ್ರಸರಣಕ್ಕೆ ಬೇಕಾದ ಚೈತನ್ಯವನ್ನು ಕೊಡುತ್ತೆ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಸಮಯದಲ್ಲಿ ಮಲಗುವುದು, ನಿದ್ದೆ ಮಾಡುವುದು, ಊಟ-ತಿಂಡಿಗಳನ್ನು ಮಾಡುವುದು ನಿಷಿದ್ಧ ಅಂತಾ ಶಾಸ್ತ್ರಗಳು ಹೇಳುತ್ತವೆ.

ಬದಲಾಗಿ ಸಂಧ್ಯಾ ಸಮಯದಲ್ಲಿ ಸೂರ್ಯನನ್ನು ಆರಾಧಿಸಿದ್ರೆ ಸೂರ್ಯನ ಶಕ್ತಿ ಹಾಗೂ ತೇಜಸ್ಸು ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ. ಯಾಕಂದ್ರೆ ಸಂಧ್ಯಾಕಾಲದ ಆರಾಧ್ಯದೇವತೆ ಸಂಧ್ಯಾ. ಆದಿತ್ಯನಲ್ಲಿರುವ ಚೈತನ್ಯ ಶಕ್ತಿಯೇ ಸಂಧ್ಯಾರೂಪಳಾದ ಸಂಧ್ಯಾದೇವಿ ಎನ್ನಲಾಗುತ್ತೆ. ಸಂಧ್ಯಾ ಸಮಯ ಎಂತಹ ಪ್ರಶಸ್ತವಾದ ಸಮಯವೆಂದರೆ, ಈ ಸಮಯದಲ್ಲಿ ಸಂಧ್ಯಾದೇವಿ ಜೊತೆಗೆ ಇತರೆ ದೇವತೆಗಳನ್ನೂ ಆರಾಧಿಸಿದ್ರೆ ಆ ದೈವಗಳ ಕೃಪೆ ನಮ್ಮ ಮೇಲಾಗುತ್ತೆ ಅಂತಾ ಪುರಾಣಗಳು ಹೇಳುತ್ತವೆ. ಸಂಧ್ಯಾ ಸಮಯದಲ್ಲಿ ಯಾವುದೇ ದಿವ್ಯ ಮಂತ್ರವನ್ನು ಉಚ್ಚರಿಸಿದರೆ ಆ ಮಂತ್ರದೇವತೆಯ ಅನುಗ್ರಹ ಪ್ರಾಪ್ತಿಯಾಗುತ್ತೆ. ಇದಿಷ್ಟೇ ಅಲ್ಲದೇ, ಸಂಧ್ಯಾಕಾಲದಲ್ಲಿ ಉಪಾಸನೆ ಮಾಡುವುದರಿಂದ ನಮ್ಮ ಅಸಲಿ ಸ್ವರೂಪವೇನು ಅನ್ನೋದು ತಿಳಿಯುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗೇ ಸಂಧ್ಯಾ ಸಮಯದಲ್ಲಿ ಊಟ-ತಿಂಡಿ, ನಿದ್ರೆ ವಿಷಯವನ್ನು ಮರೆತು, ಧ್ಯಾನದಲ್ಲಿ ತಲ್ಲೀನರಾಗಬೇಕು. ನಂತರ ಆ ಸಮಯದಲ್ಲಿ ಸಂಧ್ಯಾದೇವಿಯನ್ನೋ ಅಥವಾ ತಮ್ಮ ಇಷ್ಟದೈವವನ್ನೋ ಆರಾಧಿಸಬೇಕು ಎನ್ನಲಾಗುತ್ತೆ. ಸಕಾಲದಲ್ಲಿ ಬಿತ್ತಿದ ಬೀಜ ಫಲ ಕೊಡುವಂತೆ ಸಂಧ್ಯೋಪಾಸನೆ ಬಹು ಫಲಪ್ರದವಾದದ್ದು ಅಂತಾ ನಮ್ಮ ಧರ್ಮಶಾಸ್ತ್ರ ಹೇಳುತ್ತೆ.

ಇದನ್ನೂ ಓದಿ: ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?

ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ