AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Chocolate Day 2021 : ದಿಶಾಳ ‘ಪೆಟ್ಟಿಗೆ ಅಂಗಡಿ’ ನೀತೂಳ ‘ಔಷಧಿ ಬಾಟಲಿ‘

Chocolate Lovers : ಪಟಪಟಪಟ ಅಂತ ಮಾತನಾಡೋ ‘ಗಾಳಿಪಟ‘ದ ಹುಡುಗಿ ನೀತು ಶೆಟ್ಟಿ ಔಷಧಕ್ಕೂ ಚಾಕೋಲೇಟ್ ಮಿಕ್ಸ್ ಮಾಡಿ ಗುಳುಂ! ರಂಗಕಲಾವಿದೆ ದಿಶಾ ರಮೇಶ್​ಗೆ ಈಗಲೂ ಪೆಟ್ಟಿಗೆಯಂಗಡಿಯ ಗಾಜಿನ ಬಾಟಲಿಗಳೊಳಗಿನ ಚಾಕೋಲೇಟಂದ್ರೆ ಪ್ರಾಣ!

World Chocolate Day 2021 : ದಿಶಾಳ ‘ಪೆಟ್ಟಿಗೆ ಅಂಗಡಿ’ ನೀತೂಳ ‘ಔಷಧಿ ಬಾಟಲಿ‘
ರಂಗಕಲಾವಿದೆ ದಿಶಾ ರಮೇಶ ಮತ್ತು ಸಿನೆಮಾ ನಟಿ ನೀತು ಶೆಟ್ಟಿ
ಶ್ರೀದೇವಿ ಕಳಸದ
|

Updated on:Jul 07, 2021 | 11:50 AM

Share

ಒಮ್ಮೆ ನಿಮ್ಮ ಹಳೆಯ ಪುಸ್ತಕ ತೆಗೆದು ನೋಡಿ. ಪುಟಗಳ ನಡುವೆ ನಿಮ್ಮ ಪ್ರಿಯರು ಕೊಟ್ಟ ಚಾಕೋಲೇಟಿನ ರ್ಯಾಪರ್​ಗಳು ಈಗಲೂ ಸಿಕ್ಕರೂ ಸಿಗಬಹುದು. ಹಾಗೆಯೇ ಅದರೊಂದಿಗಿನ ನೆನಪುಗಳೂ, ಹುಚ್ಚುತನಗಳೂ, ಜಗಳಗಳೂ, ಹಟಗಳೂ, ಕೋಪದುಂಡೆಗಳು, ಸಿಹಿಕನಸುಗಳೂ… ಹೀಗೆ ಏನೇನೆಲ್ಲ  ನೆನಪುಗಳು ನಿಮ್ಮ ಮನಸ್ಸಿನಲ್ಲಿ ಗುಡ್ಡೆ ಹಾಕಿಕೊಳ್ಳಬಹುದು. ಚಾಕೋಲೇಟ್! ಆ ಶಬ್ದದ ಮೋಡಿಯೇ ಅಂಥದ್ದು. ಅದರ ನೆನಪು ಜಾರೋದು ನೇರ ಬಾಲ್ಯಕ್ಕೇ. ಈವತ್ತು ‘ವಿಶ್ವ ಚಾಕೋಲೇಟ್ ದಿನ- World Chocolate Day 2021’ ನಮ್ಮ ಕನ್ನಡ ಸಿನೆಮಾ ನಟಿ ನೀತು ಶೆಟ್ಟಿ ಮತ್ತು ರಂಗಕಲಾವಿದೆ ದಿಶಾ ರಮೇಶ ಅವರಿಗೆ ಚಾಕೋಲೇಟ್ ಎಂದಾಕ್ಷಣ ಈ ಕ್ಷಣಕ್ಕೆ ಏನು ನೆನಪಾಗುತ್ತಿದೆ ಎಂದು ಕೇಳಿದಾಗ ಒಂದೆರಡು ಎಳೆಗಳನ್ನವರು ಬಿಡಿಸಿಕೊಂಡು ಇಲ್ಲಿಗೆ ಕಳಿಸಿದರು. ನೀತುಗೆ ಈಗಲೂ ಕಿಟ್ ಕ್ಯಾಟ್ ಇಷ್ಟ. ದಿಶಾಗೆ ಪೆಟ್ಟಿಗೆಯಂಗಡಿಯ ಐವತ್ತು ಪೈಸೆ ಚಾಕೋಲೇಟೇ ಇಷ್ಟ. ಹಾಗಿದ್ದರೆ ನಿಮಗೆ ಯಾವ ಯಾವ ಚಾಕೋಲೇಟ್ ಇಷ್ಟ? ಈ ದಿನ ಒಂದು ತುಣುಕಾದರೂ ತಿಂದು ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ಮನಸ್ಸನ್ನು ಫ್ರೆಷ್ ಮಾಡಿಕೊಳ್ಳಿ, ಜೀವನದಲ್ಲಿ ಜಂಜಾಟಗಳು ಮುಗಿಯುವಂಥವೆ? 

*

ಔಷಧಕ್ಕೂ ಚಾಕೋಲೇಟ್!

ನಾನು ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವಳು. ನಮ್ಮ ಅತ್ತಾವರದ ಮನೆಯಲ್ಲಿ ನಾನು ಮತ್ತು ತಂಗಿ ಏನಾದರೂ ಕೆಲಸ ಮಾಡಿ ಅಮ್ಮನಿಂದ ಪ್ರಶಂಸೆ ತೆಗೆದುಕೊಂಡರೆ ಮಾತ್ರ ನಮಗಾಗ ಚಾಕೋಲೇಟ್ ಸಿಗುತ್ತಿತ್ತು. ಆಗಷ್ಟೇ ಕಿಟ್​ ಕ್ಯಾಟ್ ಬಂದಿತ್ತು. ಟಿವಿಯಲ್ಲಿ ಅದರ​ ಅಡ್ವರ್ಟೈಸ್​ಮೆಂಟ್ ನೋಡಿ ಆಸೆಯಾಗೋದು. ಆ ಕೆಂಪು ಬಣ್ಣದ ರ್ಯಾಪರ್, ಅದರೊಳಗಿನ ವೇಫರ್, ಚಾಕೋ ಲೇಯರ್… ಅಷ್ಟೊತ್ತಿಗೆಲ್ಲ ಚಿಕ್ಕಪುಟ್ಟ ಚಾಕೋಲೇಟ್ ತಿಂತಿದ್ದೆವಾದರೂ ಅದರೊಳಗೆ ಕೋಕೋ ಇರುತ್ತಿರಲಿಲ್ಲ. ಹಾಗಾಗಿ ಕಿಟ್​ ಕ್ಯಾಟ್ ಬಂದಾಗ ಸಖತ್ ಥ್ರಿಲ್ ಆಗಿತ್ತು. ಅಮ್ಮ ಆಫೀಸಿನಿಂದ ಬರುವಾಗ ಪ್ಲಾಸ್ಟಿಕ್​ ಕವರಿನಲ್ಲಿ ಹಾಕಿಕೊಂಡು ನಮಗೆ ಗೊತ್ತಿಲ್ಲದ ಹಾಗೆ ತಂದಿಡಲು ಪ್ರಯತ್ನಿಸುತ್ತಿದ್ದರು. ಆದರೆ, ಆ ರ್ಯಾಪರ್ ನೋಡ್ತಿದ್ದ ಹಾಗೆ ನಮಗೆ ಗೊತ್ತಾಗಿ ಖುಷಿ ಆಗೋದು. ಅದಕ್ಕಾದರೂ ಅಮ್ಮ ಹೇಳಿದ ಕೆಲಸ ಮಾಡಬೇಕು ಅಂತ ಮಾಡಿ ಮುಗಿಸುತ್ತಿದ್ದೆವು. ಬರ್ತಾ ಬರ್ತಾ ಎಲ್ಲದರಲ್ಲಿಯೂ ಚಾಕೋಲೇಟ್. ನಾನಂತೂ ಔಷಧಿ ಕುಡಿಯೋವಾಗ ಕಹಿಯಿಂದ ತಪ್ಪಿಸಿಕೊಳ್ಳೋದಕ್ಕೆ ಚಾಕೋಲೇಟ್ ಮಿಕ್ಸ್ ಮಾಡಿಕೊಂಡು ಕುಡಿದಿದ್ದಿದೆ! ಈಗಲೂ ತಿಂತೀನಿ. ಆದರೆ ಮೊದಲಿನಷ್ಟಲ್ಲ. ಮನಸ್ಸು ಕುಗ್ಗಿದಾಗ ಮೂಡ್​ ಸರಿ ಮಾಡಿಕೊಳ್ಳೋದಕ್ಕೆ ಒಂದೇ ಒಂದು ಸ್ಲೈಸ್ ತಿಂತೀನಿ. ನೀತು ಶೆಟ್ಟಿ, ಸಿನೆಮಾ ನಟಿ

* ಈಗಲೂ ಪೆಟ್ಟಿಗೆಯಂಗಡಿ ಚಾಕೋಲೇಟ್ ಇಷ್ಟ

ಚಾಕೋಲೇಟ್ ಅನ್ನೋ ಪದಾನೇ ಖುಷಿ ಕೊಡುವಂಥದ್ದು. ಎಂಥಾ ಸಂದರ್ಭದಲ್ಲೂ ಒಂದು ಚಾಕೋಲೇಟ್ ಬಾಯಿಗೆ ಹಾಕಿಕೊಂಡ ತಕ್ಷಣ ಒಂಥರಾ ಶಕ್ತಿ ಕೊಡುತ್ತೆ. ಚಿಕ್ಕವಯಸ್ಸಿನಿಂದಲೂ ಇಪ್ಪತ್ತೈದು ಪೈಸೆ ಚಾಕೋಲೇಟ್​ನಿಂದ ಫಾರಿನ್ ಚಾಕೋಲೇಟ್​ಗಳನ್ನೆಲ್ಲಾ ತಿಂದುಕೊಂಡು ಬಂದಿದೀನಿ. ಈಗಲೂ ಚಾಕೋಲೇಟ್ ಅಂದ್ರೆ ನಮ್ಮ ಸ್ಕೂಲ್ ಹತ್ತಿರ ಪೆಟ್ಟಿಗೆ ಅಂಗಡಿಗಳಲ್ಲಿ ಸಿಗುತ್ತಿದ್ದ ಚಾಕೋಲೇಟ್​ಗಳೇ ಇಷ್ಟ. ಈಗಲೂ ಬಾಯಲ್ಲಿ ನೀರು ಬರುತ್ತೆ. ಅಪ್ಪ ಆಗಲಿ ನಾನಾಗಲೀ ಫಾರಿನ್​ಗೆ ಹೋಗಿ ಬರೋವಾಗ ಒಂದಷ್ಟು ಚಾಕೋಲೇಟ್ ತರ್ತೀವಿ, ಸ್ನೇಹಿತರಿಗೆ ಸಂಬಂಧಿಕರಿಗೆ ಕೊಡೋದಕ್ಕೆ.

ನಮ್ಮ ಅಪ್ಪ, ಅಮ್ಮ ಮತ್ತೆ ನಾನು ಬೇರೆಬೇರೆಯಾಗಿ ಚಾಕೋಲೇಟ್​ಗಳನ್ನು ತೆಗೆದಿಟ್ಟುಕೊಳ್ತೀವಿ. ಅಂದರೆ ನಮಗೆ ಬೇಕಾದವರಿಗೆ ಕೊಡೋದಕ್ಕೆ ಅಂತ. ಆದರೆ ನಾನೊಬ್ಬಳೇ ಜಾಸ್ತಿ ತೆಗೆದಿಟ್ಟುಕೊಳ್ತೀನಿ ಅನ್ಕೊಂಬಿಟ್ಟಿದ್ದೆ. ಆದರೆ ಕ್ರಮೇಣ ಗೊತ್ತಾಗ್ತಾ ಹೋಯ್ತು. ನಮ್ಮ ಅಪ್ಪನ ಪರ್ಸ್​ನಲ್ಲಿ, ಅಮ್ಮನ ಡ್ರೆಸ್ಸಿಂಗ್ ಟೇಬಲ್​ನಲ್ಲಿ ಕೂಡ ಎಕ್ಸ್ಟ್ರಾ ಚಾಕೋಲೇಟ್ ಇರ್ತಾವೆ ಅಂತ. ಇವರಿಗೂ ಇಷ್ಟು ಹುಚ್ಚು ಇದೆ ಆದರೆ ಹೇಳ್ಕೊಳ್ತಿಲ್ಲ ಅಂತ ಗೊತ್ತಾಗ್ತಾ ಹೋಯ್ತು. ಇಷ್ಟೆಲ್ಲಾ ಇದ್ದರೂ ನನಗೆ ಯಾವ ಕ್ಷಣಕ್ಕೂ ಇಷ್ಟ ಆಗೋದು ಐವತ್ತು ಪೈಸೆ ಚಾಕೋಲೇಟ್. ಒಂದುರೂಪಾಯಿಗೆ ಎರಡು ಬರೋದು. ಅದರ ಮಜಾನೇ ಬೇರೆ. ಹತ್ತು ವರ್ಷಗಳ ಹಿಂದೆ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದರು. ಬೆಳಗ್ಗೆ ಎದ್ದು ಬಾಗಿಲು ತೆಗೆದಾಗ ಐವತ್ತು ಪೈಸೆ ಚಾಕೋಲೇಟ್​ಗಳನ್ನು ಗುಡ್ಡೆ ಹಾಕಿಬಿಟ್ಟಿದ್ರು. ಬಾಗಿಲು ತೆಗೆದಾಗ ಕಣ್ಮುಂದೆ ಚೆಂದದ ಸರ್ಪ್ರೈಝ್ ಇತ್ತು. ಈಗಲೂ ಪೆಟ್ಟಿಗೆ ಅಂಗಡಿ ಹುಡುಕಿಕೊಂಡು ಹೋಗ್ತೀನಿ ಆ ಚಾಕೋಲೇಟ್​ಗಳಿಗೆ. ದಿಶಾ ರಮೇಶ, ರಂಗಕಲಾವಿದೆ

ಇದನ್ನೂ ಓದಿ : ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ತಯಾರಾಗ್ತಿದೆ ವಿಶೇಷ ಚಾಕೋಲೇಟ್!

Published On - 11:46 am, Wed, 7 July 21

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ