AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ

'ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅನಾಗರಿಕ ಜಗತ್ತು ಹೇಗೆ ಕ್ರೂರವಾಗಿ ವರ್ತಿಸಿ ಲೂಟಿಕೋರರಂತೆ ದೋಚುತ್ತದೆ ಎಂಬುದನ್ನು ಕಾದಂಬರಿ ಪರಿಣಾಮಕಾರಿಯಾಗಿ ನಿರೂಪಿಸಿದೆ. ಹೀಗೆ ವರ್ತಿಸಲು ಕಾರಣಗಳು ಏನಿರಬಹುದು ಎಂಬುದನ್ನು ಓದುಗನ ವಿಶ್ಲೇಷಣೆಗೆ ಕಾದಂಬರಿಕಾರರು ಬಿಡುತ್ತಾರೆ. ಇಂತಹ ಅನಾಗರಿಕ ಜಗತ್ತನ್ನು ಸೃಷ್ಟಿಸಿದ್ದು ನಾಗರಿಕ ಜಗತ್ತೇ ಎಂಬ ವಿಚಿತ್ರ ಸತ್ಯದ ಹೊಳಹೂ ಇಲ್ಲಿದೆ.‘ ಎನ್ನುತ್ತಾರೆ ನಾಗರೇಖಾ ಗಾಂವಕರ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ
ಕವಿ, ಅನುವಾದಕಿ ನಾಗರೇಖಾ ಗಾಂವಕರ
ಶ್ರೀದೇವಿ ಕಳಸದ
|

Updated on:Dec 31, 2020 | 4:07 PM

Share

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕವಿ, ಅನುವಾದಕಿ ನಾಗರೇಖಾ ಗಾಂವಕರ ಅವರ ಆಯ್ಕೆಗಳು ಇಲ್ಲಿವೆ.

ಕೃ: ಮೃಗಶಿರ (ಕಾದಂಬರಿ) ಲೇ: ಶ್ರೀಧರ ಬಳಗಾರ ಪ್ರ: ಅಭಿನವ

ಶ್ರೀಧರ ಬಳಗಾರರ ಮೃಗಶಿರ ಕಾದಂಬರಿ ಮೆಚ್ಚುಗೆ ಆದದ್ದು ಅದು ಕಟ್ಟಿಕೊಟ್ಟ ಉತ್ತರಕನ್ನಡದ ಬದುಕು, ಅಲ್ಲಿಯ ದೇಸಿ ಭಾಷಾ ಸೊಗಡು, ಆ ಪರಿಸರದ ಸಹಜ ಜೀವನ ವಿಧಾನಗಳನ್ನು ಉತ್ಪ್ರೇಕ್ಷೆಯಿಲ್ಲದಂತೆ ಕಟ್ಟಿಕೊಟ್ಟ ರೀತಿಯಿಂದ, ಹಾಗೆ  ಸತ್ಯಕ್ಕೆ ಎರವಾಗದಂತೆ, ಭಾವನಾತ್ಮಕ ಸಂವೇದನೆಗಳ ಮೂಲಕವೇ ಸಾಗುತ್ತ, ಆ  ಸಂವೇದನೆಗಳನ್ನು ಮೀರಿ ಬೆಳೆಯುವ ಪಾತ್ರಗಳ ಕಟ್ಟಿಕೊಟ್ಟ ಕಾರಣಕ್ಕಾಗಿ ಕಾದಂಬರಿ ವಿಶಿಷ್ಟವೆನಿಸುತ್ತದೆ. ಹಾಗೇ ಕಥಾ ಸಾಂದರ್ಭಿಕತೆ ಸ್ವಾತಂತ್ರ್ಯ ಹೋರಾಟ ಕಾಲವಿದ್ದು, ಅದರ ನೇರ ಪರಿಣಾಮ ಸಾಮಾನ್ಯರ ಜೀವನದಲ್ಲಿ ಉಂಟುಮಾಡಿದ ಏರಿಳಿತದ ಕಾರಣ ಜೀವನ ಸಂಗ್ರಾಮದ ಚಿತ್ರಣವಿದೆ. ಜೀವನದ ನಿಜವಾದ ಅರ್ಥ ಯಾವುದರಲ್ಲಿದೆ. ಬಂಧನದಲ್ಲೋ, ಬಿಡುಗಡೆಯಲ್ಲೋ,ಸಂಸಾರದಲ್ಲೋ, ಸಾಧನೆಯಲ್ಲೋ, ಪ್ರೀತಿ-ವಿಶ್ವಾಸದಲ್ಲೋ, ದ್ವೇಷ-ನಿಷ್ಠುರತೆಯಲ್ಲೋ, ಇವೆಲ್ಲದರ ಹೊರತಾಗಿಯೂ ಕಾಡುವ ವಿಚಿತ್ರ ವ್ಯಾಕುಲತೆ, ಎಲ್ಲವನ್ನೂ ಮೀರಬೇಕೆನ್ನುವ ತುಡಿತದಲ್ಲೋ, ಇದಕ್ಕೆಲ್ಲ ಉತ್ತರ ಸಿಕ್ಕಿಲ್ಲ. ಇಂತಹ ತಾತ್ವಿಕ ಚಿಂತನೆ ಅನ್ನುವ ಲೌಕಿಕದ ಹೊರತಾದ ಭಿನ್ನ ಆಯಾಮದತ್ತ ಲೌಕಿಕದ ಸಂಗತಿಯ ಮೂಲಕವೇ ಹೊರಳುವ ಪ್ರಯತ್ನದಂತಿದೆ ಶ್ರೀಧರ ಬಳಗಾರರ ಮೃಗಶಿರ ಕಾದಂಬರಿ.

ಕೃ: ದಿ ಸ್ಕಾರ್ಲೆಟ್ ಪ್ಲೇಗ್ (ಕಾದಂಬರಿ) ಮೂಲ :  ಜ್ಯಾಕ್ ಲಂಡನ್ ಕನ್ನಡಕ್ಕೆ : ಚೆನ್ನಪ್ಪ ಕಟ್ಟಿ ಪ್ರ: ಪಲ್ಲವ ಪ್ರಕಾಶನ

1912ರಲ್ಲಿ ಅಮೆರಿಕಾದ ಕಾದಂಬರಿಕಾರ ಜಾಕ್ ಲಂಡನ್ ಬರೆದ  “ದಿ ಸ್ಕಾರ್ಲೆಟ್ ಪ್ಲೇಗ್” ಕಾದಂಬರಿ. ಅದನ್ನು ಶ್ರೀ ಚನ್ನಪ್ಪ ಕಟ್ಟಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾದಂಬರಿ Post apocalyptic ಮಾದರಿಯಿಂದ ಇಷ್ಟವಾಯ್ತು. ಸಾಹಿತ್ಯ ಭವಿಷ್ಯದ ಚಿಂತನೆಗಳಿಗೆ ಮುಖಾಮುಖಿಯಾಗುವುದು ಮುಖ್ಯ ಎಂಬಂತೆ ಸುಮಾರು ನೂರು ವರ್ಷಗಳ ಹಿಂದೆ ಬರೆದಿದ್ದು ಇಂದಿನ ಕೋರೋನಾ ಸಂದರ್ಭದಲ್ಲಿ ಪ್ರಸ್ತುತ ಎನಿಸಿದ್ದು ಮುಖ್ಯ.

ಕಾದಂಬರಿ ನಡೆಯುವುದು  2073ರ ಸಂದರ್ಭದಲ್ಲಿ. ಇದಕ್ಕೂ ಆರವತ್ತು ವರ್ಷಗಳ ಹಿಂದೆ 2013ರಲ್ಲಿ ಕ್ಯಾಲಿಫೋರ್ನಿಯಾವನ್ನು ತನ್ನ ಮುಷ್ಟಿಯಲ್ಲಿ ಬಂಧಿಸಿದ್ದ ‘ರೆಡ್ ಡೆತ್ ಅಥವಾ ಸ್ಕಾರ್ಲೆಟ್ ಪ್ಲೇಗ್’ ಎಂಬ ಸಾಂಕ್ರಾಮಿಕ ರೋಗದ ವಿಧ್ವಂಸಕ ಮುಖವನ್ನು ವಿವರಿಸುತ್ತದೆ. ಹಾಗೇ ಕಾದಂಬರಿ ಸಾಮಾಜಿಕ ನೆಲೆಯಲ್ಲಿ ಮನುಷ್ಯತ್ವದ ವಾಖ್ಯಾನವನ್ನು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸಿದೆ. ನಾಗರಿಕ ಸಮಾಜ ತನ್ನ ಅನುಕೂಲತೆಗೆ ಬೇಕಾದಂತೆ ಅನಕ್ಷರಸ್ಥ ಸಮೂಹವನ್ನು ಬೆಳೆಸುತ್ತದೆ. ಅವರಿಂದ ಉತ್ಪಾದಿತವಾದ ಆಹಾರವನ್ನು ಐಶಾರಾಮದಿಂದ ಕೂತು ತಿನ್ನುತ್ತದೆ. ಆದರೆ ಇಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅನಾಗರಿಕ ಜಗತ್ತು ಹೇಗೆ ಕ್ರೂರವಾಗಿ ವರ್ತಿಸಿ ಲೂಟಿಕೋರರಂತೆ ದೋಚುತ್ತದೆ ಎಂಬುದನ್ನು ಕಾದಂಬರಿ ಪರಿಣಾಮಕಾರಿಯಾಗಿ ನಿರೂಪಿಸಿದೆ. ಹೀಗೆ ವರ್ತಿಸಲು ಕಾರಣಗಳು ಏನಿರಬಹುದು ಎಂಬುದನ್ನು ಓದುಗನ ವಿಶ್ಲೇಷಣೆಗೆ ಬಿಡುತ್ತಾರೆ. ಇಂತಹ ಅನಾಗರಿಕ ಜಗತ್ತನ್ನು ಸೃಷ್ಟಿಸಿದ್ದು ನಾಗರಿಕ ಜಗತ್ತೇ ಎಂಬ ವಿಚಿತ್ರ ಸತ್ಯದ ಹೊಳಹೂ ಇಲ್ಲಿದೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಸುಮಾ ಸುಧಾಕಿರಣ

Published On - 4:05 pm, Thu, 31 December 20

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ