AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಮಹಿಳೆಯೇ ಆಗಲಿ ಪುರುಷರೇ ಆಗಲಿ ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಅನ್ನುತ್ತದೆ ಗರುಡ ಪುರಾಣ! ಏನವು?

ಧರ್ಮಶಾಸ್ತ್ರಗಳಲ್ಲಿ ಜೀವನವನ್ನು ಸುಧಾರಿಸುವ, ಸಮೃದ್ಧಗೊಳಿಸುವ ಹಿತ ವಚನಗಳನ್ನು ಹೇಳಲಾಗಿದೆ. ಜೀವನದ ರೀತಿ ನೀತಿ, ಸದಾಚಾರ, ಭಕ್ತಿ ಭಾವ, ವೈರಾಗ್ಯ, ಯಕ್ಷ, ಯಜ್ಞ, ತಪ ಮುಂತಾದ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಬಿಡಿಸಿ ಹೇಳಲಾಗಿದೆ. ಇಂದು ಪುರುಷ ಅಥವಾ ಮಹಿಳೆ ತನ್ನ ಜೀವನದಲ್ಲಿ ಮಾಡಬಾರದು ನಾಲ್ಕು ತಪ್ಪುಗಳ ಬಗ್ಗೆ ಬಿಡಿಸಿ ಹೇಳಲಾಗಿದೆ.

Garuda Purana: ಮಹಿಳೆಯೇ ಆಗಲಿ ಪುರುಷರೇ ಆಗಲಿ ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಅನ್ನುತ್ತದೆ ಗರುಡ ಪುರಾಣ! ಏನವು?
ಸುಖೀ ಜೀವನ ಬಯಸುವ ಹಾಗಿದ್ದರೆ ಗರುಡ ಪುರಾಣದ ಈ ಸೂತ್ರಗಳನ್ನು ಪಾಲಿಸಿ
TV9 Web
| Updated By: ಸಾಧು ಶ್ರೀನಾಥ್​|

Updated on:Oct 01, 2021 | 10:53 AM

Share

ಹಿಂದೂ ಪುರಾಣದಲ್ಲಿ ಗರುಡ ಪುರಾಣವನ್ನು ಮಹಾಪುರಾಣ ಎಂದು ಕರೆಯುತ್ತಾರೆ. ಇದರಲ್ಲಿ ಜೀವನ ಮತ್ತು ಮೃತ್ಯು ಬಗ್ಗೆ ಭಗವಾನ್ ವಿಷ್ಣು ತನ್ನ ವಾಹನವಾದ ಪಕ್ಷಿರಾಜ ಗರುಡನಿಗೆ ಎದುರಾಗಿದ್ದ ಎಲ್ಲ ಜಿಜ್ಞಾಸೆಗಳನ್ನು ಪರಿಹರಿಸುತ್ತಾ ಲೋಕ ಕಲ್ಯಾಣಕ್ಕಾಗಿ ಅನೇಕ ಮಾರ್ಗದರ್ಶಿ ಸೂತ್ರಗಳನ್ನು ಹೇಳಿದ್ದಾರೆ.

ಧರ್ಮಶಾಸ್ತ್ರಗಳಲ್ಲಿ ಜೀವನವನ್ನು ಸುಧಾರಿಸುವ, ಸಮೃದ್ಧಗೊಳಿಸುವ ಹಿತ ವಚನಗಳನ್ನು ಹೇಳಲಾಗಿದೆ. ಜೀವನದ ರೀತಿ ನೀತಿ, ಸದಾಚಾರ, ಭಕ್ತಿ ಭಾವ, ವೈರಾಗ್ಯ, ಯಕ್ಷ, ಯಜ್ಞ, ತಪ ಮುಂತಾದ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಬಿಡಿಸಿ ಹೇಳಲಾಗಿದೆ. ಇಂದು ಪುರುಷ ಅಥವಾ ಮಹಿಳೆ ತನ್ನ ಜೀವನದಲ್ಲಿ ಮಾಡಬಾರದು ನಾಲ್ಕು ತಪ್ಪುಗಳ ಬಗ್ಗೆ ಬಿಡಿಸಿ ಹೇಳಲಾಗಿದೆ.

1. ಪುರುಷ, ಮಹಿಳೆ ಸಂಗಾತಿಗಳಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ದೀರ್ಘ ಕಾಲ ಒಬ್ಬರನ್ನೊಬ್ಬರು ಬಿಟ್ಟು ದೀರ್ಘ ಕಾಲ ದೂರವಾಗಿ ಉಳಿಯಬಾರದು. ಹೀಗೆ ದೂರವಾದರೆ ಅದು ಅವರ ವೈವಾಹಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗೌರವಪೂರ್ಣ ವೈವಾಹಿಕ ಜೀವನ ನಡೆಸಲು ಇಬ್ಬರೂ ಪ್ರೇಮಪೂರ್ವಕವಾಗಿ ಕೂಡಿ ಜೀವನ ನಡೆಸಬೇಕು.

2. ಮನುಷ್ಯ ತನ್ನ ಚ್ಚಾರಿತ್ರ್ಯ ಕಳೆದುಕೊಂಡರೆ ಜೀವನದಲ್ಲಿ ಎಲ್ಲಾ ಕಳೆದುಕೊಂಡಂತೆ ಎನ್ನಲಾಗುತ್ತದೆ. ಹಾಗಾಗಿ ಪ್ರತಿ ಪುರುಷ ಅಥವಾ ಮಹಿಳೆ ತನ್ನ ಚರಿತ್ರೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಅಂದರೆ ಸಚ್ಚಾರಿತ್ರ್ಯ ಹೊಂದಿರಬೇಕು. ಇದೇ ವೇಳೆ ಸಚ್ಚಾರಿತ್ರ್ಯ ಹೊಂದಿರದ ವ್ಯಕ್ತಿಯ ಜೊತೆಯೂ ಸಂಬಂಧ ಹೊಂದಬಾರದು. ಇಲ್ಲವಾದಲ್ಲಿ ಅವರ ಅಧಃಪತನ ಶುರುವಾಗಿಬಿಡುತ್ತದೆ.

3. ಗರುಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಪ್ರತಿ ವ್ಯಕ್ತಿಯೂ ತನ್ನ ಸಂಗಾತಿಯನ್ನು ಗೌರವಯುತವಾಗಿ ಕಾಣಬೇಕು. ಇಂದು ನೀವು ಯಾರಿಗಾದರೂ ಅಪಮಾನ ಮಾಡಿದರೆ ಅದರಿಂದ ಭವಿಷ್ಯದಲ್ಲಿ ನೀವು ತಾಪತ್ರಯಕ್ಕೆ ಸಿಲುಕುವುದು ಖಚಿತ. ಹಾಗಾಗಿ ಸಂಗಾಥಿ ಜೊತೆ ಅನುಚಿತವಾಗಿ ನಡೆದುಕೊಳ್ಳಬೇಡಿ. ಉತ್ರಮ ಮಾತುಗಳನ್ನು ಆಡಿ, ಎಲ್ಲರನ್ನೂ ಸಮ್ಮಾನಪೂರ್ವಕವಾಗಿ ಕಾಣಿರಿ.

4. ಜೀವನದಲ್ಲಿ ಸಂಗಾತಿಯ ಜೊತೆ ಗೌರವಪೂರ್ಣ ಜೀವನ ಹೊಂದಲು ಬಯಸಿದ್ದೇ ಆದರೆ ಅಂತಹ ಸಂಗಾತಿ ತನ್ನ ಹೆತ್ತವರು, ಪೋಷಕರ ಮನೆಯಲ್ಲಿ ದೀರ್ಘಕಾಲ ಉಳಿಯಬಾರದು. ಸಂಗಾತಿಯ ಮನೆ ಬಿಟ್ಟು, ಬೇರೊಬ್ಬರ ಮನೆಯಲ್ಲಿ ಹೆಚ್ಚು ಕಾಲ ಉಳಿಯುವುದರಿಂದ ಅನಾನುಕೂಲ ಆಗುತ್ತದೆ. ಅದರಿಂದ ನಿಮ್ಮ ಮರ್ಯಾದೆಗೆ ಚ್ಯುತಿ ಬರಲಿದೆ. ಇದರಿಂದ ಮುಂದೆ ಜೀವನ ಅಸುರಕ್ಷಿತವಾಗತೊಡಗುತ್ತದೆ.

Published On - 8:19 am, Fri, 1 October 21

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್