ದೇವರ ವಿಗ್ರಹ ಅಥವಾ ಫೋಟೋ ಶುಚಿಗೊಳಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಹಿಂದೂ ಸಂಪ್ರದಾಯದಲ್ಲಿ, ಪೂಜಾ ಕೊಠಡಿಯು ದೇವರನ್ನು ಪ್ರಾರ್ಥಿಸಲು ಮಾತ್ರವಲ್ಲ, ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುವ ಪವಿತ್ರ ಸ್ಥಳವೂ ಆಗಿದೆ. ಆದರೆ ದೇವರ ವಿಗ್ರಹಗಳು ಮತ್ತು ಫೋಟೋಗಳನ್ನು ಯಾವಾಗ ಬೇಕೆಂದರೆ ಆಗ ಸ್ವಚ್ಛಗೊಳಿಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಆದ್ದರಿಂದ ದೇವರ ವಿಗ್ರಹ ಅಥವಾ ಫೋಟೋ ಶುಚಿಗೊಳಿಸಲು ಶುಭ ದಿನ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದೇವರ ವಿಗ್ರಹ ಅಥವಾ ಫೋಟೋ ಶುಚಿಗೊಳಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ
Ancient Tips

Updated on: Mar 20, 2026 | 7:07 AM

ಪ್ರತಿಯೊಂದು ಮನೆಯ ಪೂಜಾ ಕೊಠಡಿಯು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಆದರೆ ದೇವರ ವಿಗ್ರಹಗಳು ಮತ್ತು ಫೋಟೋಗಳನ್ನು ಯಾವಾಗ ಬೇಕೆಂದರೆ ಆಗ ಸ್ವಚ್ಛಗೊಳಿಸಬಾರದು ಎಂದು ಶಾಸ್ತ್ರಗಳು ಮತ್ತು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ತಿಂಗಳಿಗೊಮ್ಮೆ ದೇವರ ವಿಗ್ರಹಗಳನ್ನು ಸ್ವಚ್ಛಗೊಳಿಸುವುದು ಶುಭಕರ. ಆದರೆ ಈ ಕಾರ್ಯವನ್ನು ಮಂಗಳವಾರ ಮತ್ತು ಶುಕ್ರವಾರದಂದು ಮಾಡಬಾರದು. ಅದರಂತೆ ಅಮಾವಾಸ್ಯೆ, ಏಕಾದಶಿ ಮತ್ತು ದ್ವಾದಶಿ ತಿಥಿಗಳಂದು ಕೂಡ ವಿಗ್ರಹಗಳನ್ನು ಸ್ಥಳಾಂತರಿಸುವುದು ಅಥವಾ ಶುಚಿಗೊಳಿಸುವುದು ನಿಷಿದ್ಧ. ಈ ಐದು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಪಂಚಾಂಗವನ್ನು ಗಮನಿಸಿ ಶುಚಿಗೊಳಿಸುವ ಕಾರ್ಯ ಕೈಗೊಳ್ಳುವುದು ಸೂಕ್ತ ಎಂದು ಆಧ್ಯಾತ್ಮಿಕ ವಿದ್ವಾಂಸರು ಸಲಹೆ ನೀಡುತ್ತಾರೆ.

ವಿಗ್ರಹಗಳು ಹೊಳೆಯುವಂತೆ ಮಾಡುವ ಸುಲಭ ವಿಧಾನಗಳು:

ಪೂಜಾ ಸಮಯದಲ್ಲಿ ನಿರಂತರವಾಗಿ ಧೂಪ, ದೀಪ ಮತ್ತು ಕರ್ಪೂರ ಬಳಸುವುದರಿಂದ ವಿಗ್ರಹಗಳು ಹಾಗೂ ಫೋಟೋಗಳು ಜಿಗುಟಾಗುವುದು ಸಹಜ. ಇವುಗಳನ್ನು ಮತ್ತೆ ಹೊಳೆಯುವಂತೆ ಮಾಡಲು ನೈಸರ್ಗಿಕ ವಿಧಾನಗಳು ಅತ್ಯುತ್ತಮ. ಹುಣಸೆಹಣ್ಣಿನ ತಿರುಳು ಅಥವಾ ಹುಣಸೆಹಣ್ಣಿಗೆ ಸ್ವಲ್ಪ ಉಪ್ಪು ಸೇರಿಸಿ ವಿಗ್ರಹಗಳನ್ನು ಉಜ್ಜುವುದರಿಂದ ಅವು ಹೊಸದರಂತೆ ಕಂಗೊಳಿಸುತ್ತವೆ. ಹಿಂದೆ ಸುಟ್ಟ ಹುಲ್ಲಿನ ಬೂದಿಯನ್ನು ಕೂಡ ಬಳಸಲಾಗುತ್ತಿತ್ತು. ದೇವರ ಫೋಟೋಗಳನ್ನು ಮೊದಲು ಒದ್ದೆ ಬಟ್ಟೆಯಿಂದ ಒರೆಸಿ, ನಂತರ ಒಣಗಿದ ಮೇಲೆ ಸ್ವಲ್ಪ ಶ್ರೀಗಂಧದ ಪುಡಿಯನ್ನು ಉಜ್ಜಿದರೆ ಅವುಗಳಿಗೆ ವಿಶೇಷ ಕಳೆ ಬರುತ್ತದೆ. ಇನ್ನು ಅರಿಶಿನ-ಕುಂಕುಮ ಉದುರಿ ಹೋಗದಂತೆ ಇರಲು, ಅದಕ್ಕೆ ಸ್ವಲ್ಪ ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬೆರೆಸಿ ಹಚ್ಚುವುದು ಒಂದು ಉತ್ತಮ ತಂತ್ರವಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪೂಜೆಗೆ ಬಳಸಿದ ಹೂವುಗಳನ್ನು ಏನು ಮಾಡಬೇಕು?

ಪೂಜೆಗೆ ಬಳಸಿದ ಹೂವುಗಳನ್ನು ಏನು ಮಾಡಬೇಕು ಎಂಬ ಗೊಂದಲ ಅನೇಕರಲ್ಲಿ ಇರುತ್ತದೆ. ಹೂವುಗಳು ಬಾಡದಿದ್ದರೂ ಸಹ, ನಿನ್ನೆಯ ಹೂವುಗಳನ್ನು ಇಂದಿನ ಪೂಜೆಗೆ ಬಳಸಬಾರದು. ಬಳಸಿದ ಹೂವುಗಳು ಮತ್ತು ಮಾವಿನ ಎಲೆಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಅಥವಾ ಕಾಲು ಬೀಳುವ ಜಾಗದಲ್ಲಿ ಹಾಕುವುದು ತಪ್ಪು. ಇವುಗಳನ್ನು ಗಿಡಗಳ ಬುಡದಲ್ಲಿ ಅಥವಾ ಅಂಗಳದ ಒಂದು ಮೂಲೆಯಲ್ಲಿ ಮಣ್ಣಿನಡಿ ಹೂತು ಹಾಕಬೇಕು. ಇದು ಕಾಲಕ್ರಮೇಣ ಅತ್ಯುತ್ತಮ ಸಾವಯವ ಗೊಬ್ಬರವಾಗಿ ಬದಲಾಗುತ್ತದೆ, ಜೊತೆಗೆ ಪರಿಸರಕ್ಕೂ ಪೂರಕವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us