AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಯಾವ ದಿನ ಸಾಲ ನೀಡಬಾರದು? ಯಾವಾಗ ಸಾಲ ಪಡೆಯಬಾರದು?

ಡಾ. ಬಸವರಾಜ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಾಲ ನೀಡುವುದು ಮತ್ತು ಪಡೆಯುವ ಸೂಕ್ತವಾದ ದಿನಗಳ ಬಗ್ಗೆ ಚರ್ಚಿಸಿದ್ದಾರೆ. ಸೋಮವಾರ ಮತ್ತು ಶುಕ್ರವಾರಗಳು ಸಾಲದ ವ್ಯವಹಾರಕ್ಕೆ ಶುಭಕರ ಎಂದು ಪರಿಗಣಿಸಲ್ಪಡುತ್ತವೆ. ಮಂಗಳವಾರ, ಗುರುವಾರ ಮತ್ತು ಶನಿವಾರಗಳು ಅಶುಭಕರವಾಗಿವೆ. ಭಾನುವಾರ ಮಧ್ಯಾಹ್ನ ಮೂರು ಗಂಟೆಯ ನಂತರ ಸಾಲದ ವ್ಯವಹಾರಗಳನ್ನು ತಪ್ಪಿಸುವುದು ಉತ್ತಮ.

Daily Devotional: ಯಾವ ದಿನ ಸಾಲ ನೀಡಬಾರದು? ಯಾವಾಗ ಸಾಲ ಪಡೆಯಬಾರದು?
ಹಣ
ಅಕ್ಷತಾ ವರ್ಕಾಡಿ
|

Updated on: Jul 19, 2025 | 8:24 AM

Share

ಹಿಂದೂ ಸಂಸ್ಕೃತಿಯಲ್ಲಿ, ಸಾಲ ನೀಡುವುದು ಮತ್ತು ಪಡೆಯುವುದು ಕೇವಲ ಆರ್ಥಿಕ ವ್ಯವಹಾರವಲ್ಲ. ಇದು ಆಧ್ಯಾತ್ಮಿಕ ಮತ್ತು ಧಾರ್ಮಿಕ ಅಂಶಗಳನ್ನು ಒಳಗೊಂಡಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ. ಇದಲ್ಲದೇ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಮತ್ತು ಜಾನಪದ ನಂಬಿಕೆಗಳಲ್ಲಿ ಸಾಲದ ವ್ಯವಹಾರಕ್ಕೆ ಶುಭ ಮತ್ತು ಅಶುಭ ದಿನಗಳಿದ್ದವು, ಆ ದಿನಗಳು ಯಾವುವು ಎಂಬುದನ್ನು ಗುರೂಜಿ ವಿವರಿಸಿದ್ದಾರೆ.

ಸೋಮವಾರ:

ಪಾರ್ವತಿ ದೇವಿಯ ದಿನ. ಸಾಲ ನೀಡಲು ಮತ್ತು ಪಡೆಯಲು ಇದು ಶುಭಕರ ದಿನವೆಂದು ಪರಿಗಣಿಸಲಾಗುತ್ತದೆ. ಸೋಮವಾರದಂದು ನೀಡುವ ಮತ್ತು ಪಡೆಯುವ ಸಾಲವು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.

ಮಂಗಳವಾರ:

ಕಾರ್ತಿಕೇಯನ ದಿನ. ಮಂಗಳವಾರ ಸಾಲ ನೀಡುವುದು ಅಷ್ಟು ಶುಭಕರವಲ್ಲ. ಆದರೆ ಈ ದಿನ ಸಾಲವನ್ನು ತೀರಿಸುವುದು ಒಳ್ಳೆಯದೆಂದು ಹೇಳಲಾಗುತ್ತದೆ.

ಬುಧವಾರ:

ವಿಷ್ಣುವಿನ ದಿನ. ಬುಧವಾರ ಸಾಲವನ್ನು ಪಡೆಯುವುದು ಶುಭಕರವಾಗಿದ್ದರೂ, ವಾಪಸ್ ಕೊಡುವುದು ಅಷ್ಟು ಶುಭಕರವಲ್ಲ ಎಂದು ನಂಬಲಾಗಿದೆ.

ಗುರುವಾರ:

ಬ್ರಹ್ಮನ ದಿನ. ಗುರುವಾರ ಯಾರಿಗೂ ಸಾಲ ನೀಡಬಾರದು ಎಂದು ನಂಬಲಾಗಿದೆ. ಇದು ಒತ್ತಡ, ಕೋಪ ಮತ್ತು ಆವೇಶವನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ. ಆದರೆ ಗುರುವಾರ ಸಾಲವನ್ನು ಪಡೆಯುವುದು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಶುಕ್ರವಾರ:

ಇಂದ್ರನ ದಿನ. ಶುಕ್ರವಾರ ಸೌಮ್ಯ ಮತ್ತು ಶಾಂತಿಯುತ ದಿನವಾಗಿದೆ. ಮಹಾಲಕ್ಷ್ಮಿಯ ಆಶೀರ್ವಾದವೂ ಇರುತ್ತದೆ. ಸಾಲ ನೀಡಲು ಮತ್ತು ಪಡೆಯಲು ಇದು ಶುಭಕರ ದಿನವಾಗಿದೆ.

ಇದನ್ನೂ ಓದಿಶಿವ ದೇವಾಲಯದಲ್ಲಿ ಮೂರು ಬಾರಿ ಚಪ್ಪಾಳೆ ತಟ್ಟುವುದೇಕೆ? ಹಿಂದಿನ ಕಾರಣವನ್ನು ತಿಳಿಯಿರಿ

ಶನಿವಾರ:

ಶನಿ ದೇವರ ದಿನ. ಶನಿವಾರ ಅರ್ಧ ದಿನ ಶುಭ ಮತ್ತು ಅರ್ಧ ದಿನ ಅಶುಭವಾಗಿರುತ್ತದೆ. ಹಾಗಾಗಿ ಈ ದಿನ ಸಾಲದ ವ್ಯವಹಾರಗಳನ್ನು ತಪ್ಪಿಸುವುದು ಉತ್ತಮ.

ಭಾನುವಾರ:

ಶಿವನಿಗೆ ಅರ್ಪಿತವಾದ ದಿನ. ಮಧ್ಯಾಹ್ನ ಮೂರು ಗಂಟೆಯ ನಂತರ ಸಾಲದ ವ್ಯವಹಾರಗಳನ್ನು ತಪ್ಪಿಸುವುದು ಒಳ್ಳೆಯದು. ಮೂರು ಗಂಟೆಯ ಮೊದಲು ಸಾಲ ಪಡೆಯುವುದು ಅಥವಾ ತೀರಿಸುವುದು ಶುಭಕರ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ