Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಯಾವ ದಿನ ಕೂದಲು ಕತ್ತರಿಸುವುದು ಶುಭ?

ಹಿಂದೂ ಧರ್ಮದಲ್ಲಿ ಕೂದಲು ಕತ್ತರಿಸುವುದಕ್ಕೆ ಪೌರಾಣಿಕ ನಂಬಿಕೆಗಳಿವೆ. ಸೋಮವಾರ, ಬುಧವಾರ, ಶುಕ್ರವಾರ ಶುಭ ದಿನಗಳೆಂದು ಪರಿಗಣಿಸಲಾಗಿದೆ. ಮಂಗಳವಾರ, ಶನಿವಾರ, ಭಾನುವಾರ ಮತ್ತು ಅಮವಾಸ್ಯೆ, ಹುಣ್ಣಿಮೆ, ಸೂರ್ಯಾಸ್ತದ ನಂತರ ಕೂದಲು ಕತ್ತರಿಸಬಾರದು ಎಂದು ನಂಬಲಾಗಿದೆ. ಶುಭ ದಿನಗಳಲ್ಲಿ ಕೂದಲು ಕತ್ತರಿಸುವುದರಿಂದ ಕುಟುಂಬ ಬಾಂಧವ್ಯ, ಆರ್ಥಿಕ ಸಮೃದ್ಧಿ, ವೈವಾಹಿಕ ಸೌಖ್ಯದಲ್ಲಿ ಸುಧಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.

Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಯಾವ ದಿನ ಕೂದಲು ಕತ್ತರಿಸುವುದು ಶುಭ?
Best Days to Cut Hair

Updated on: Mar 06, 2025 | 3:23 PM

ಪೌರಾಣಿಕ ನಂಬಿಕೆಗಳ ಪ್ರಕಾರ, ಹಿಂದೂ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳಿವೆ. ಅದರಲ್ಲಿ ಕೂದಲು ಕತ್ತರಿಸುವುದಕ್ಕೂ ಕೆಲವೊಂದು ಶರತ್ತುಗಳಿವೆ. ಆದ್ದರಿಂದ ವಾರದ ಯಾವ ದಿನದಂದು ಕೂದಲು ಕತ್ತರಿಸಬೇಕು ಮತ್ತು ಯಾವ ದಿನ ಕೂದಲು ಕತ್ತರಿಸಬಾರದು ಎಂಬುದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

ಸೋಮವಾರ, ಬುಧವಾರ ಮತ್ತು ಶುಕ್ರವಾರ ಕೂದಲು ಕತ್ತರಿಸಲು ಅತ್ಯಂತ ಶುಭ ದಿನ ಎಂದು ಹೇಳಲಾಗುತ್ತದೆ. ಅದರಂತೆ ಮಂಗಳವಾರ, ಶನಿವಾರ ಮತ್ತು ಭಾನುವಾರದಲ್ಲಿ ಕೂದಲು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಇವುಗಳನ್ನು ಹೊರತುಪಡಿಸಿ, ಅಮವಾಸ್ಯೆ, ಹುಣ್ಣಿಮೆ ಮತ್ತು ಸೂರ್ಯಾಸ್ತದ ನಂತರ ಕೂದಲು ಕತ್ತರಿಸಬಾರದು. ಏಕೆಂದರೆ ಅದು ವ್ಯಕ್ತಿಯ ಆರೋಗ್ಯ, ಶಕ್ತಿ ಮತ್ತು ಸಮೃದ್ಧಿಯ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಮಾನಸಿಕ ಶಾಂತಿ ಮತ್ತು ಆರೋಗ್ಯದ ಪ್ರಯೋಜನಗಳು:

ಸೋಮವಾರವನ್ನು ಭಗವಾನ್ ಚಂದ್ರನ ದಿನವೆಂದು ಹೇಳಲಾಗುತ್ತದೆ. ಈ ದಿನ ಕೂದಲು ಕತ್ತರಿಸುವುದರಿಂದ ಕುಟುಂಬ ಸಂಬಂಧಗಳು ಬಲವಾಗಿರುತ್ತವೆ, ಇದರಿಂದಾಗಿ ಸದಸ್ಯರ ನಡುವೆ ಯಾವುದೇ ಜಗಳ ಇರುವುದಿಲ್ಲ ಎಂದು ನಂಬಲಾಗಿದೆ.

ಇದನ್ನೂ ಓದಿ
ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ಸಲಹೆ ಅನುಸರಿಸಿ
ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ; ಅದೃಷ್ಟ ಖುಲಾಯಿಸಲಿದೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಈ ವಿಷ್ಯ ನೆನಪಿಟ್ಟುಕೊಳ್ಳಿ
ನರಸಿಂಹ ದ್ವಾದಶಿ ಯಾವಾಗ? ದಿನಾಂಕ, ಶುಭ ಸಮಯ ಮತ್ತು ಪೂಜಾ ವಿಧಾನ ತಿಳಿಯಿರಿ

ಇದನ್ನೂ ಓದಿ: 30 ವರ್ಷಗಳ ನಂತರ, ಶನಿ-ರಾಹು ಸಂಯೋಗದಿಂದ ಪಿಶಾಚ ಯೋಗ; ಯಾರಿಗೆ ಕಂಟಕ?

ಆರ್ಥಿಕ ಸಮೃದ್ಧಿ ಮತ್ತು ಆತ್ಮವಿಶ್ವಾಸ ಹೆಚ್ಚಳ:

ಬುಧವಾರದಂದು ಕ್ಷೌರ ಮಾಡಿಸಿಕೊಳ್ಳುವುದರಿಂದ ವ್ಯಕ್ತಿಯ ಆರ್ಥಿಕ ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಗಣೇಶನಿಗೆ ಅರ್ಪಿತವಾಗಿದ್ದು, ಈ ದಿನ ಕೂದಲು ಕತ್ತರಿಸುವುದರಿಂದ ಹಣಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ ಎಂದು ನಂಬಲಾಗಿದೆ.

ವೈವಾಹಿಕ ಜೀವನ ಮತ್ತು ವ್ಯಕ್ತಿತ್ವದಲ್ಲಿ ಸುಧಾರಣೆ:

ಶುಕ್ರವಾರವನ್ನು ಶುಕ್ರನ ದಿನ ಎಂದೂ ಕರೆಯಲಾಗುತ್ತದೆ ಮತ್ತು ಈ ದಿನದಂದು ಕ್ಷೌರ ಮಾಡಿಸಿಕೊಳ್ಳುವುದರಿಂದ, ವೈವಾಹಿಕ ಜೀವನವು ಸಂತೋಷದಿಂದ ಸಾಗುತ್ತದೆ. ಕುಟುಂಬದಲ್ಲಿ ಗೌರವ ಸಿಗುತ್ತದೆ ಮತ್ತು ಗಂಡ ಮತ್ತು ಹೆಂಡತಿ ಇಬ್ಬರ ನಡುವೆ ಪ್ರೀತಿಯ ಮಾಧುರ್ಯ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:19 pm, Thu, 6 March 25