ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!

Chanakya Niti: ಚಾಣಕ್ಯನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಲಾದ ವಿಷಯಗಳು ಇಂದಿಗೂ ಜನರಿಗೆ ಯಶಸ್ಸಿನ ಮಾರ್ಗ ತೋರಿಸುತ್ತಿವೆ. ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿಶಾಸ್ತ್ರದಲ್ಲಿ ಮನೆ, ಕುಟುಂಬ, ಸಂಬಂಧಗಳು, ಹಣ, ಕೆಲಸ ಮತ್ತು ಕಚೇರಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಈ ನಾಲ್ಕು ರೀತಿಯಲ್ಲಿ ಹಣ ಗಳಿಸುವ ಜನರು ಎದುರಿಸುವ ಸಮಸ್ಯೆಗಳ ಬಗ್ಗೆ ತಿಳಿಯೋಣ.

ಈ ನಾಲ್ಕು  ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
Edited By:

Updated on: Aug 02, 2022 | 6:06 AM

ಆಚಾರ್ಯ ಚಾಣಕ್ಯ ಪ್ರಕಾರ, ತಪ್ಪು ಮಾರ್ಗದಲ್ಲಿ ಗಳಿಸಿದ ಹಣವು ಅಲ್ಪಾವಧಿಗೆ ಮಾತ್ರ ಸಂತೋಷವನ್ನು ತರುತ್ತದೆ. ಈ ಹಣವು ಯಾವುದೇ ವ್ಯಕ್ತಿಗೆ ಎಂದಿಗೂ ಸಂತೋಷವನ್ನು ತರುವುದಿಲ್ಲ. ಅಂತಹ ವ್ಯಕ್ತಿಯ ಸಂಪತ್ತು ಉಳಿಯುವುದಿಲ್ಲ. ಕಷ್ಟ ದುಃಖಗಳು ಬಂದೇ ಬರುತ್ತವೆ. ಆದರಿಂದಾಗಿ ಹಣಕ್ಕಾಗಿ ಎಂದಿಗೂ ತಪ್ಪು ದಾರಿಗೆ ಹೋಗಬೇಡಿ.

ಆಚಾರ್ಯ ಚಾಣಕ್ಯರ ಪ್ರಕಾರ, ಕಳ್ಳತನದಿಂದ ಗಳಿಸಿದ ಹಣವು ಎಂದಿಗೂ ಸಂತೋಷವನ್ನು ತರುವುದಿಲ್ಲ. ಬೇರೆಯವರು ತಮ್ಮ ರಕ್ತ ಮತ್ತು ಬೆವರಿನಿಂದ ಹಣ ಸಂಪಾದಿಸಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇತರರ ಹಣವನ್ನು ಕದಿಯುವುದು ಎಂದಿಗೂ ಒಳ್ಳೆಯದಲ್ಲ. ಭವಿಷ್ಯದಲ್ಲಿ ಆರ್ಥಿಕ ಸಂಕ್ಷೋಭೆ ಉಂಟಾಗಬಹುದು.

ಆಚಾರ್ಯ ಚಾಣಕ್ಯರ ಪ್ರಕಾರ, ಯಾರಿಗಾದರೂ ಮೋಸ ಮಾಡಿ ಹಣ ಸಂಪಾದಿಸುವ ವ್ಯಕ್ತಿಗೆ ಎಂದಿಗೂ ಗೌರವ ಇರುವುದಿಲ್ಲ. ಅವರ ಕುಟುಂಬದ ಸದಸ್ಯರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಯಾವುದೇ ಸ್ಥಾನಮಾನವೂ ಲಭಿಸುವುದಿಲ್ಲ.

ತಪ್ಪು ಕೆಲಸಗಳಿಂದ ಹಣ ಗಳಿಸುವವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಅನೇಕ ಜನರು ಜೂಜಾಟದಿಂದ ಹಣ ಸಂಪಾದಿಸುತ್ತಾರೆ. ಅಂತಹ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ. ಅಂತಹ ವ್ಯಕ್ತಿಯು ಆರ್ಥಿಕ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾದೀತು.

To read more in Telugu Click here