Kannada News » Spiritual » chanakya niti in kannada five mantras of getting sure success and money according to acharya chanakya
ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಚಾಣಕ್ಯ ಹೇಳಿರುವ ಈ ತತ್ವಗಳನ್ನು ಅನುಸರಿಸಿ
TV9kannada Web Team | Edited By: sadhu srinath
Updated on: Jul 09, 2022 | 6:06 AM
ಜೀವನದಲ್ಲಿ ಯಶಸ್ವಿಯಾಗಲು ಮಹತ್ತರವಾದ ಮೊದಲ ನಿಯಮವೆಂದರೆ.. ನಿಮ್ಮ ಸ್ವಂತ ಸಾಮರ್ಥ್ಯಗಳನ್ನು ನೀವು ಅರಿತುಕೊಳ್ಳಬೇಕು. ನೀವು ಏನು ಮಾಡಬಹುದು ಎಂಬುದರ ಬಗ್ಗೆ ನಿಮಗೆ ಸ್ಪಷ್ಟವಾದ ತಿಳಿವಳಿಕೆ ಇರಬೇಕು. ನೀವು ಮಾಡಬಹುದಾದ ಕೆಲಸವನ್ನು ನೀವು ಮಾಡಿಮುಗಿಸಿದರೆ ಶೀಘ್ರದಲ್ಲೇ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕಾರ್ಯದಕ್ಷತೆಯನ್ನು ಸಾಬೀತುಪಡಿಸುತ್ತೀರಿ. ಇದರಿಂದ ಯಾವುದೇ ಇತರ ಕೌಶಲ್ಯಗಳನ್ನು ಸಾಧಿಸಲು ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ.
Jul 09, 2022 | 6:06 AM
ಜೀವನದಲ್ಲಿ ಯಶಸ್ವಿಯಾಗಲು ಮಹತ್ತರವಾದ ಮೊದಲ ನಿಯಮವೆಂದರೆ.. ನಿಮ್ಮ ಸ್ವಂತ ಸಾಮರ್ಥ್ಯಗಳನ್ನು ನೀವು ಅರಿತುಕೊಳ್ಳಬೇಕು. ನೀವು ಏನು ಮಾಡಬಹುದು ಎಂಬುದರ ಬಗ್ಗೆ ನಿಮಗೆ ಸ್ಪಷ್ಟವಾದ ತಿಳಿವಳಿಕೆ ಇರಬೇಕು. ನೀವು ಮಾಡಬಹುದಾದ ಕೆಲಸವನ್ನು ನೀವು ಮಾಡಿಮುಗಿಸಿದರೆ ಶೀಘ್ರದಲ್ಲೇ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕಾರ್ಯದಕ್ಷತೆಯನ್ನು ಸಾಬೀತುಪಡಿಸುತ್ತೀರಿ. ಇದರಿಂದ ಯಾವುದೇ ಇತರ ಕೌಶಲ್ಯಗಳನ್ನು ಸಾಧಿಸಲು ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ.
1 / 5
ಪ್ರತಿ ಕ್ಷಣ ಪ್ರಸ್ತುತ ಕ್ಷಣದಲ್ಲಿ ಮಾತ್ರ ಬದುಕು ಸಾಗಿಸಿ. ಸಮಯಕ್ಕೆ ಅನುಗುಣವಾಗಿ ನಿಮಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಸದ್ಯದ ಹಾಲಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ನಿರ್ಧಾರ ತೆಗೆದುಕೊಂಡರೆ.. ಆ ನಿರ್ಧಾರಗಳು ಸರಿ ಎಂದು ಸಾಬೀತಾಗುತ್ತದೆ. ಇದಲ್ಲದೆ, ಯಶಸ್ಸಿನ ಸಾಧ್ಯತೆಗಳು ಹೆಚ್ಚು ಸುಧಾರಿಸುತ್ತವೆ.
2 / 5
ನೀವು ಯಶಸ್ವಿಯಾಗಬೇಕಾದರೆ.. ನಿಮ್ಮ ಸ್ನೇಹಿತ ಯಾರು ಮತ್ತು ನಿಮ್ಮ ಶತ್ರು ಯಾರು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದು, ನಿಮಗೆ ಮಾರ್ಗದರ್ಶನ ನೀಡುವ ಮತ್ತು ನಿಮ್ಮ ನಿಜವಾದ ಸಹಚರರು ಎಂದು ಸಾಬೀತುಪಡಿಸುವ ಜನರ ಸ್ನೇಹ ಯಾವಾಗಲೂ ಇರುತ್ತದೆ. ತಪ್ಪು ಸಹವಾಸವು ವ್ಯಕ್ತಿಯ ಜೀವನವನ್ನು ಹಾಳುಮಾಡುತ್ತದೆ.
3 / 5
ಒಬ್ಬ ವ್ಯಕ್ತಿಯು ತನ್ನ ಆದಾಯ ಮತ್ತು ವೆಚ್ಚದ ಬಗ್ಗೆ ತಿಳಿದುಕೊಳ್ಳುವುದು ಸಹ ಬಹಳ ಮುಖ್ಯ. ಇದರಿಂದ ಆತನ ಆದಾಯಕ್ಕೆ ತಕ್ಕಂತೆ ಖರ್ಚು ಮಾಡಬಹುದು. ಆದಾಯಕ್ಕಿಂತ ಹೆಚ್ಚಿನ ಖರ್ಚು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು. ಇದು ನಿಮ್ಮ ಎಲ್ಲಾ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಆದ್ದರಿಂದ ಖರ್ಚುಗಳನ್ನು ಕಡಿಮೆ ಮಾಡಲು ಮತ್ತು ಹಣವನ್ನು ಉಳಿಸಲು ಪ್ರಯತ್ನಿಸಿ.
4 / 5
ಯಶಸ್ಸಿನ ಮೂರನೇ ತತ್ತ್ವವೆಂದರೆ ಒಬ್ಬ ವ್ಯಕ್ತಿಯು ವಾಸಿಸಲು ಉತ್ತಮವಾದ ಸ್ಥಳ ಯಾವುದು ಎಂಬುದರ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ನಿವಾಸದ ಸ್ಥಳವು ವ್ಯಕ್ತಿಗೆ ಪೂರ್ಣಪ್ರಮಾಣದ ಉದ್ಯೋಗಾವಕಾಶಗಳು ಲಭ್ಯವಿರುವ ಸ್ಥಳವಾಗಿರಬೇಕು. ಅಲ್ಲಿನ ಜನ, ಅಲ್ಲಿನ ಸೌಲಭ್ಯಗಳ ಬಗ್ಗೆಯೂ ಅರಿವು ಇರಬೇಕು.