ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಸಂಪಾದಿಸಲು ಚಾಣಕ್ಯನ ಈ ನಾಲ್ಕು ವಿಷಯ ಅನುಸರಿಸಿ

ಆಚಾರ್ಯ ಚಾಣಕ್ಯರ ಪ್ರಕಾರ.. ಯಾರೇ ಆಗಲಿ ದುರಾಸೆ ಪಡಬಾರದು. ಮೋಸ ಮಾಡಿ ಹಣ ಮಾಡುವವರಿಗೆ ಗೌರವ ಇರುವುದಿಲ್ಲ. ಹಣವನ್ನು ಯಾವಾಗಲೂ ಕಷ್ಟಪಟ್ಟು ಸಂಪಾದಿಸಬೇಕು. ಇದರಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುತ್ತದೆ. ಆದ್ದರಿಂದ ದುರಾಸೆಯನ್ನು ತಪ್ಪಿಸಿ.

ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಸಂಪಾದಿಸಲು ಚಾಣಕ್ಯನ ಈ ನಾಲ್ಕು ವಿಷಯ ಅನುಸರಿಸಿ
ಈ ವಸ್ತು ಯಾವುದೇ ಸ್ಥಿತಿಯಲ್ಲಿ ದೊರೆತರೂ ಪಡೆದುಕೊಳ್ಳಿ, ಅದನ್ನು ತೆಗೆದುಕೊಳ್ಳುವಾಗ ಸಮಾಜದ ಬಗ್ಗೆ ಚಿಂತಿಸಬೇಡಿ
Edited By:

Updated on: Jul 26, 2022 | 6:06 AM

ಆಚಾರ್ಯ ಚಾಣಕ್ಯರು ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಇವುಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಲು ಕೆಲವು ವಿಷಯಗಳನ್ನು ಅನುಸರಿಸಬೇಕು.

  1. ಸುಳ್ಳು ಹೇಳಬೇಡಿ – ಆಚಾರ್ಯ ಚಾಣಕ್ಯ ಪ್ರಕಾರ ಯಾರೇ ಆಗಲಿ ಎಂದಿಗೂ ಸುಳ್ಳು ಹೇಳಬಾರದು. ಅನೇಕ ಜನರು ಸುಳ್ಳು ಹೇಳುವ ಮೂಲಕ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಹಾಗೆ ಮಾಡುವುದು ತಪ್ಪು. ಇದು ನಿಮ್ಮ ಖ್ಯಾತಿಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಎಂದಿಗೂ ಸುಳ್ಳು ಹೇಳಬೇಡಿ.
  2. ಕೆಟ್ಟದ್ದನ್ನು ಮಾಡಬೇಡಿ – ಕೆಲವರು ಇತರರಿಗೆ ಕೆಟ್ಟದ್ದನ್ನು ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಕೆಲವರು ಇತರರ ಸಂತೋಷವನ್ನು ಇಷ್ಟಪಡುವುದಿಲ್ಲ. ಇತರರು ಯಶಸ್ಸು ಕಂಡರೆ ಇವರು ಬಳಲತೊಡಗುತ್ತಾರೆ. ಅದಕ್ಕಾಗಿಯೇ ಇತರರಿಗೆ ಕೆಟ್ಟದ್ದು ಮಾಡುವುದನ್ನು ಅವರು ಆನಂದಿಸುತ್ತಾರೆ. ಅಂತಹವರನ್ನು ಯಾರೂ ಗೌರವಿಸುವುದಿಲ್ಲ.
  3. ವಿನಮ್ರರಾಗಿರಿ – ಚಾಣಕ್ಯ ನೀತಿಶಾಸ್ತ್ರದ ಪ್ರಕಾರ, ವ್ಯಕ್ತಿಯ ಸ್ವಭಾವವು ವಿನಮ್ರವಾಗಿರಬೇಕು. ಇದರಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುತ್ತದೆ. ಮನುಷ್ಯನ ಸ್ವಭಾವದಲ್ಲಿ ವಿನಯ ಇದ್ದರೆ ಸಮಾಜದಲ್ಲಿ ಗೌರವ, ಘನತೆ ಹೆಚ್ಚುತ್ತದೆ. ಅಂತಹ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗುತ್ತಾನೆ.
  4. ದುರಾಸೆ – ಆಚಾರ್ಯ ಚಾಣಕ್ಯರ ಪ್ರಕಾರ.. ಯಾರೇ ಆಗಲಿ ದುರಾಸೆ ಪಡಬಾರದು. ಮೋಸ ಮಾಡಿ ಹಣ ಮಾಡುವವರಿಗೆ ಗೌರವ ಇರುವುದಿಲ್ಲ. ಹಣವನ್ನು ಯಾವಾಗಲೂ ಕಷ್ಟಪಟ್ಟು ಸಂಪಾದಿಸಬೇಕು. ಇದರಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುತ್ತದೆ. ಆದ್ದರಿಂದ ದುರಾಸೆಯನ್ನು ತಪ್ಪಿಸಿ.