AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Palmistry: ಅಂಗೈಯಲ್ಲಿ ‘V’ ಆಕಾರದ ರೇಖೆ ಇದೆಯೇ? ಹಾಗಿದ್ದರೆ ನಿಮ್ಮ ಭವಿಷ್ಯದಲ್ಲಿ ಕಾದಿದೆ ಅನಿರೀಕ್ಷಿತ ಅದೃಷ್ಟ!

ಹಸ್ತಸಾಮುದ್ರಿಕೆಯಲ್ಲಿ 'V' ಆಕಾರದ ರೇಖೆ (ವಿಷ್ಣು ರೇಖೆ) ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಹೃದಯ ರೇಖೆಯ ಕೊನೆಯಲ್ಲಿ ಕಾಣುವ ಈ ರೇಖೆ ಇರುವವರ ಜೀವನದಲ್ಲಿ ಆರಂಭದಲ್ಲಿ ಕಷ್ಟಗಳಿದ್ದರೂ, 30-35 ವರ್ಷಗಳ ನಂತರ ಆರ್ಥಿಕ ಸ್ಥಿರತೆ, ಅಪಾರ ಸಂಪತ್ತು ಹಾಗೂ ನಾಯಕತ್ವದ ಗುಣಗಳು ವೃದ್ಧಿಸುತ್ತವೆ. ಇದು ನಿಮ್ಮ ಅದೃಷ್ಟದ ಬಾಗಿಲು ತೆರೆಯುವ ಶಕ್ತಿಶಾಲಿ ರೇಖೆ.

Palmistry: ಅಂಗೈಯಲ್ಲಿ 'V' ಆಕಾರದ ರೇಖೆ ಇದೆಯೇ? ಹಾಗಿದ್ದರೆ ನಿಮ್ಮ ಭವಿಷ್ಯದಲ್ಲಿ ಕಾದಿದೆ ಅನಿರೀಕ್ಷಿತ ಅದೃಷ್ಟ!
ಅಂಗೈಯಲ್ಲಿ 'V' ಆಕಾರದ ರೇಖೆImage Credit source: youtube
ಅಕ್ಷತಾ ವರ್ಕಾಡಿ
|

Updated on: Jul 30, 2026 | 10:28 AM

Share

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ (Palmistry) ಪ್ರತಿಯೊಂದು ರೇಖೆಗೂ ತನ್ನದೇ ಆದ ವಿಶೇಷ ಮಹತ್ವವಿದೆ. ಅನೇಕ ಜನರು ತಮ್ಮ ಕೈಯಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯದ ಒಳನೋಟಗಳನ್ನು ಪಡೆಯಲು ಬಯಸುತ್ತಾರೆ. ಹಸ್ತದಲ್ಲಿರುವ ನಾನಾ ರೀತಿಯ ರೇಖೆಗಳಲ್ಲಿ ‘V’ ಆಕಾರದ ರೇಖೆ ಅತ್ಯಂತ ಪವಿತ್ರ ಹಾಗೂ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. ಈ ರೇಖೆಯನ್ನು ಸಾಮುದ್ರಿಕ ಶಾಸ್ತ್ರದಲ್ಲಿ “ವಿಷ್ಣು ರೇಖೆ” (Vishnu Line) ಎಂದೂ ಕರೆಯಲಾಗುತ್ತದೆ. ನಿಮ್ಮ ಕೈಯಲ್ಲಿಯೂ ಈ ರೇಖೆ ಇದೆಯೇ? ಹಾಗಿದ್ದರೆ ಇದರ ಅರ್ಥ ಮತ್ತು ನಿಮ್ಮ ಜೀವನದ ಮೇಲಾಗುವ ಅದ್ಭುತ ಬದಲಾವಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

‘V’ ಆಕಾರದ ರೇಖೆ (ವಿಷ್ಣು ರೇಖೆ) ಎ ಎಲ್ಲಿದೆ?

ಸಾಮಾನ್ಯವಾಗಿ ಹೃದಯ ರೇಖೆಯು (Heart Line) ಗುರು ಪರ್ವತದ (ಆಂಗೂಷ್ಠದ ಪಕ್ಕದ ಬೆರಳು) ಕಡೆಗೆ ಸಾಗಿ, ಕೊನೆಯಲ್ಲಿ ಎರಡು ಭಾಗವಾಗಿ ಸೀಳಿದಾಗ ಇಂಗ್ಲಿಷ್‌ನ ‘V’ ಆಕಾರವನ್ನು ಪಡೆದುಕೊಳ್ಳುತ್ತದೆ. ಈ ರೀತಿ ಉಂಟಾಗುವ ಆಕಾರವನ್ನೇ ವಿಷ್ಣು ರೇಖೆ ಎಂದು ಕರೆಯಲಾಗುತ್ತದೆ. ಶ್ರೀಮಹಾ ವಿಷ್ಣುವಿನ ಕೃಪೆಗೆ ಪಾತ್ರರಾದವರ ಕೈಯಲ್ಲಿ ಮಾತ್ರ ಈ ವಿಶೇಷ ರೇಖೆ ಕಂಡುಬರುತ್ತದೆ ಎಂಬುದು ನಂಬಿಕೆ.

ವಿಷ್ಣು ರೇಖೆಯಿರುವವರ ಜೀವನದಲ್ಲಿ ನಡೆಯುವ ಪವಾಡಗಳು:

ಆರಂಭಿಕ ಹೋರಾಟ, ನಂತರ ಅನಿರೀಕ್ಷಿತ ತಿರುವು:

ಈ ರೇಖೆಯನ್ನು ಹೊಂದಿರುವವರ ಜೀವನವು ಆರಂಭದ ದಿನಗಳಲ್ಲಿ ಸುಲಭವಾಗಿರುವುದಿಲ್ಲ. ಇವರು ತಮ್ಮ ಬಾಲ್ಯ ಮತ್ತು ಯೌವನದಲ್ಲಿ ಅನೇಕ ಕಷ್ಟ, ನಷ್ಟ ಹಾಗೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ 30 ವರ್ಷಗಳ ನಂತರ ಇವರ ಜೀವನದಲ್ಲಿ ಅನಿರೀಕ್ಷಿತವಾದ ಧನಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಸ್ಥಗಿತಗೊಂಡಿದ್ದ ಕೆಲಸಗಳು ಇದ್ದಕ್ಕಿದ್ದಂತೆ ಸುಲಭವಾಗಿ ಪೂರ್ಣಗೊಳ್ಳತೊಡಗುತ್ತವೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

35ರ ನಂತರ ಆರ್ಥಿಕ ಸ್ಥಿರತೆ ಮತ್ತು ಅಪಾರ ಸಂಪತ್ತು:

ಸ್ವಲ್ಪ ಸಮಯದವರೆಗೆ ಆರ್ಥಿಕ ಮುಗ್ಗಟ್ಟು ಅಥವಾ ಬಡತನದಿಂದ ಬಳಲುತ್ತಿದ್ದರೂ, 35 ವರ್ಷ ವಯಸ್ಸಿನ ನಂತರ ಇವರ ಅದೃಷ್ಟವೇ ಬದಲಾಗುತ್ತದೆ. ಇವರು ದೊಡ್ಡ ಮಟ್ಟದ ಆರ್ಥಿಕ ಪ್ರಗತಿಯನ್ನು ಕಾಣುತ್ತಾರೆ. ಗಳಿಸಿದ ಹಣವು ಸ್ಥಿರವಾಗಿ ಉಳಿಯುತ್ತದೆ ಮತ್ತು ಕುಟುಂಬದೊಂದಿಗೆ ಅತ್ಯಂತ ಸಂತೋಷ, ನೆಮ್ಮದಿಯ ಜೀವನ ನಡೆಸುತ್ತಾರೆ.

ಅಚಲ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ:

ಇವರು ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಹೆದರದೆ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಾರೆ. ಇವರಲ್ಲಿ ಅಡಗಿರುವ ಶಿಸ್ತು ಮತ್ತು ಕಠಿಣ ಪರಿಶ್ರಮವೇ ಇವರನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ತಾವಿಟ್ಟ ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸು ಕಾಣುತ್ತಾ ಶ್ರೀಮಂತ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಗಮನಿಸಿ: ವಿಷ್ಣು ರೇಖೆ ಹೊಂದಿರುವವರು ಸದಾ ಸತ್ಯ, ಧರ್ಮ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗಬೇಕು. ಕೆಟ್ಟ ದಾರಿ ಅಥವಾ ಅಧರ್ಮದ ಕೆಲಸಗಳಲ್ಲಿ ತೊಡಗಿದರೆ ಈ ರೇಖೆಯ ಶುಭ ಫಲಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಚೆನ್ನಮ್ಮ ಸಮಾಧಿ ಮುಂದೆಯೇ ಕುಳಿತು ದೇವೇಗೌಡರ ಕಣ್ಣೀರು
ಚೆನ್ನಮ್ಮ ಸಮಾಧಿ ಮುಂದೆಯೇ ಕುಳಿತು ದೇವೇಗೌಡರ ಕಣ್ಣೀರು
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್
ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್