
ದೈನಂದಿನ ಜೀವನದಲ್ಲಿ ನಾವೆಲ್ಲರೂ ಕೂದಲು ಬಾಚುವಾಗ ಒಂದಲ್ಲ ಒಂದು ಕೂದಲು ನೆಲದ ಮೇಲೆ ಬೀಳುವುದನ್ನು ನೋಡೇ ಇರುತ್ತೇವೆ. ಸಾಮಾನ್ಯವಾಗಿ ಹಿರಿಯರು “ನೆಲದ ಮೇಲೆ ಬಿದ್ದಿರುವ ಕೂದಲನ್ನು ತುಳಿಯಬೇಡ, ಅದು ಅಪಶಕುನ” ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದು ಕೇವಲ ಮೂಢನಂಬಿಕೆಯಲ್ಲ, ಇದರ ಹಿಂದೆ ಆಳವಾದ ಧಾರ್ಮಿಕ ಹಾಗೂ ಜ್ಯೋತಿಷ್ಯ ಶಾಸ್ತ್ರದ ಕಾರಣಗಳಿವೆ. ಉದುರಿದ ಕೂದಲಿನ ಮೇಲೆ ಅಪ್ಪಿತಪ್ಪಿ ಕಾಲಿಟ್ಟರೆ ಬದುಕಿನಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂದಲನ್ನು ಶುಕ್ರ ಗ್ರಹಕ್ಕೆ ಹೋಲಿಸಲಾಗುತ್ತದೆ. ಶುಕ್ರ ಗ್ರಹವು ಮನುಷ್ಯನ ಜೀವನದ ಸೌಂದರ್ಯ, ಐಶ್ವರ್ಯ ಮತ್ತು ಭೌತಿಕ ಸುಖಗಳನ್ನು ನಿಯಂತ್ರಿಸುವ ಶಕ್ತಿಯಾಗಿದೆ. ಯಾವಾಗ ಕೂದಲು ತಲೆಯಿಂದ ಉದುರಿ ನೆಲಕ್ಕೆ ಬೀಳುತ್ತದೆಯೋ, ಆಗಲೇ ಜ್ಯೋತಿಷ್ಯದ ಪ್ರಕಾರ ಶುಕ್ರ ಗ್ರಹ ದುರ್ಬಲಗೊಳ್ಳುತ್ತಿದ್ದಾನೆ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ ಆ ಕೂದಲನ್ನು ಕಾಲಿನಿಂದ ತುಳಿದರೆ ನಮ್ಮ ಜೀವನದ ಸುಖ-ಸಂತೋಷಗಳಿಗೆ ಧಕ್ಕೆಯಾಗುತ್ತದೆ ಎಂದು ನಂಬಲಾಗಿದೆ.
ಯಾವುದೇ ಒಬ್ಬ ಮಹಿಳೆಯ ತಲೆಯಿಂದ ಉದುರಿದ ಕೂದಲು ಯಾರದೇ ಕಾಲಿನ ಕೆಳಗೆ ಬಂದರೆ, ಅದು ಆ ಮಹಿಳೆಗೂ ಒಳ್ಳೆಯದಲ್ಲ ಮತ್ತು ಅದನ್ನು ತುಳಿದ ವ್ಯಕ್ತಿಗೂ ಶುಭವಲ್ಲ. ಶಾಸ್ತ್ರಗಳ ಪ್ರಕಾರ, ಮಹಿಳೆಯರ ಉದುರಿದ ಕೂದಲನ್ನು ತುಳಿಯುವುದರಿಂದ ಆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ, ಭೌತಿಕ ಸುಖಗಳು ದೂರವಾಗುತ್ತವೆ ಮತ್ತು ಅವರ ದೈಹಿಕ ಸೌಂದರ್ಯಕ್ಕೆ ಹಾನಿ ಉಂಟಾಗುತ್ತದೆ.
ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!
ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರು ಸಹ ತಾವೂ ಕೂದಲು ಬಾಚಿದಾಗ ಅಥವಾ ಶೇವ್ ಮಾಡಿದಾಗ ಉದುರುವ ಕೂದಲನ್ನು ತಕ್ಷಣವೇ ಕಸದ ಬುಟ್ಟಿಗೆ ಹಾಕಬೇಕು. ಪುರುಷರ ಕೂದಲು ತುಳಿದರೆ ಆ ವ್ಯಕ್ತಿಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಜಾತಕದಲ್ಲಿರುವ ಸೂರ್ಯ, ಮಂಗಳ ಮತ್ತು ಬೃಹಸ್ಪತಿ (ಗುರು) ಗ್ರಹಗಳು ದುರ್ಬಲಗೊಳ್ಳುತ್ತವೆ. ಇದರ ಪರಿಣಾಮವಾಗಿ ವ್ಯಕ್ತಿಯ ನಾಯಕತ್ವ ಗುಣ, ಶಕ್ತಿ, ಮತ್ತು ಧೈರ್ಯ ಕುಂದುತ್ತಾ ಹೋಗುತ್ತದೆ ಎಂದು ನಂಬಲಾಗಿದೆ.
ಮಕ್ಕಳು ಜನಿಸಿದಾಗ ಅವರ ತಲೆಯ ಮೇಲಿರುವ ಮೃದುವಾದ ಕೂದಲನ್ನು (ಹುಟ್ಟು ಕೂದಲು ಅಥವಾ ಹೊಟ್ಟೆ ಕೂದಲು) ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಈ ಕೂದಲು ಉದುರಿ ಯಾರಾದರೂ ಅದರ ಮೇಲೆ ಕಾಲಿಟ್ಟರೆ, ಮಗುವಿನ ಜಾತಕದಲ್ಲಿ ಚಂದ್ರ ಗ್ರಹ ದುರ್ಬಲನಾಗುತ್ತಾನೆ. ಚಂದ್ರನು ಮನಸ್ಸು ಮತ್ತು ಆರೋಗ್ಯಕ್ಕೆ ಕಾರಕನಾಗಿರುವುದರಿಂದ ಮಗುವಿನ ಆರೋಗ್ಯ ಪದೇ ಪದೇ ಕ್ಷೀಣಿಸಬಹುದು ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ