AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

God Shanishwara: ಶನೀಶ್ವರನ ಕೋಪ ತಪ್ಪಿಸಿಕೊಳ್ಳಬೇಕೆಂದರೆ ಮೊದಲು ಈ ನಡತೆ, ಅಭ್ಯಾಸಗಳನ್ನು ತಪ್ಪಿಸಿ

God Shaniswara: ಹಿರಿಯರನ್ನು ಅವಮಾನಿಸುವವರು: ಹಿರಿಯರನ್ನು ನಿಂದಿಸುವವರ ಮೇಲೆ ಶನೀಶ್ವರನಷ್ಟೇ ಅಲ್ಲ ಎಲ್ಲ ದೇವತೆಗಳೂ ಕೋಪಗೊಳ್ಳುತ್ತಾರೆ. ಹಿರಿಯರನ್ನು ಅವಮಾನಿಸುವ ಜನರ ಮೇಲೆ ಶನಿಯು ಕ್ರೂರ ದೃಷ್ಟಿಯನ್ನು ಹೊಂದಿರುತ್ತಾನೆ ಎಂಬುದು ನಂಬಿಕೆ. ಅಂತಹ ಜನರು ತಮ್ಮ ಜೀವನದುದ್ದಕ್ಕೂ ನೋವಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಅವರು ಯಾವಾಗಲೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ.

God Shanishwara: ಶನೀಶ್ವರನ ಕೋಪ ತಪ್ಪಿಸಿಕೊಳ್ಳಬೇಕೆಂದರೆ ಮೊದಲು ಈ ನಡತೆ, ಅಭ್ಯಾಸಗಳನ್ನು ತಪ್ಪಿಸಿ
ಶನೀಶ್ವರನ ಕೋಪ ತಪ್ಪಿಸಿಕೊಳ್ಳಬೇಕೆಂದರೆ ಮೊದಲು ಈ ನಡತೆ, ಅಭ್ಯಾಸ ತಪ್ಪಿಸಿ
ಸಾಧು ಶ್ರೀನಾಥ್​
|

Updated on:Jul 20, 2024 | 8:22 AM

Share

God Shanishwara: ಶನೀಶ್ವರನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಮನುಷ್ಯ ಮಾಡುವ ಕರ್ಮಗಳಿಗೆ ತಕ್ಕ ಫಲಿತಾಂಶವನ್ನು ಕೊಡುತ್ತಾನೆ. ಶನಿಯು ಯಾರೊಂದಿಗಾದರೂ ಕೋಪಗೊಂಡರೆ, ಅವರ ಜೀವನವು ತೊಂದರೆಗಳಿಂದ ತುಂಬಿರುತ್ತದೆ. ಅದಕ್ಕಾಗಿಯೇ ಜನರು ಆತನನ್ನು ಸಂತೋಷವಾಗಿರಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳು ಶನಿದೇವನನ್ನು ಕೆರಳಿಸುತ್ತದೆ. ಕೆಲವು ರೀತಿಯ ಅಭ್ಯಾಸಗಳು ಶನಿಗ್ರಹವನ್ನು ಕೋಪಗೊಳ್ಳುವಂತೆ ಮಾಡುತ್ತದೆ. ಇದಲ್ಲದೆ, ಅಂತಹ ವ್ಯಕ್ತಿಯ ಜೀವನದಲ್ಲಿ ದುಃಖ ಮತ್ತು ಬಡತನ ಹೆಚ್ಚಾಗುತ್ತದೆ.

ಉಗುರು ಕಚ್ಚುವುದು : ಕೊಳಕು ಉಗುರು ಹೊಂದಿರುವ ಅಥವಾ ಉಗುರುಗಳನ್ನು ಕಚ್ಚುವ ಅಭ್ಯಾಸ ಹೊಂದಿರುವ ಜನರೊಂದಿಗೆ ಶನಿಯು ಕೋಪಗೊಳ್ಳುತ್ತಾನೆ. ಅಂತಹವರಿಗೆ ಶನೀಶ್ವರ ಎಂದಿಗೂ ಆಶೀರ್ವದಿಸುವುದಿಲ್ಲ ಮತ್ತು ಮಂಗಳಕರ ದೃಷ್ಟಿಯಿಂದ ನೋಡುವುದಿಲ್ಲ.

ಹಿರಿಯರನ್ನು ಅವಮಾನಿಸುವವರು: ಹಿರಿಯರನ್ನು ನಿಂದಿಸುವವರ ಮೇಲೆ ಶನೀಶ್ವರನಷ್ಟೇ ಅಲ್ಲ ಎಲ್ಲ ದೇವತೆಗಳೂ ಕೋಪಗೊಳ್ಳುತ್ತಾರೆ. ಹಿರಿಯರನ್ನು ಅವಮಾನಿಸುವ ಜನರ ಮೇಲೆ ಶನಿಯು ಕ್ರೂರ ದೃಷ್ಟಿಯನ್ನು ಹೊಂದಿರುತ್ತಾನೆ ಎಂಬುದು ನಂಬಿಕೆ. ಅಂತಹ ಜನರು ತಮ್ಮ ಜೀವನದುದ್ದಕ್ಕೂ ನೋವಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಅವರು ಯಾವಾಗಲೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ.

Also Read: 64 ಕೊಠಡಿ-64 ಶಿವಲಿಂಗ-64 ಯೋಗಿನಿಯರು: ಆ ನಿಗೂಢ ಚೌಸಟ್ ಯೋಗಿನಿ ದೇವಾಲಯದಲ್ಲಿ ರಾತ್ರಿ ಯಾರೂ ತಂಗುವುದಿಲ್ಲ ಯಾಕೆ ಗೊತ್ತಾ!?

ಅಡುಗೆ ಮನೆಯನ್ನು ಕೊಳಕಾಗಿ ಇಡುವುದು: ನಿತ್ಯವೂ ಅಡುಗೆ ಮನೆಯನ್ನು ಶುಚಿಗೊಳಿಸದೆ ಕೊಳಕಾಗಿ ಇಡುವ ಅಭ್ಯಾಸ ನಿಮ್ಮದಾಗಿದ್ದರೆ.. ಅಂತಹವರು ಕೂಡಲೇ ಆ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು. ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲದೆ ಶನೀಶ್ವರನ ಕೃಪೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಕಾಲುಗಳನ್ನು ಎಳೆದುಕೊಂಡು ನಡೆಯುವುದು: ನಡೆಯುವಾಗ ಕೆಲವರು ಶೂ ಮತ್ತು ಚಪ್ಪಲಿಯನ್ನು ಎಳೆಯುತ್ತಾರೆ. ಈ ಅಭ್ಯಾಸ ಶನೀಶ್ವರನಿಗೆ ತುಂಬಾ ಕೋಪ ತರಿಸುತ್ತದೆ. ಇದರಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಡಲು ಪ್ರಾರಂಭಿಸುತ್ತದೆ. ಮಾಡುವ ಕೆಲಸವೂ ಹಾಳಾಗುತ್ತದೆ. ಇದಲ್ಲದೆ, ಈ ಅಭ್ಯಾಸವು ಸಾಲದ ಹೊರೆಯನ್ನೂ ಹೆಚ್ಚಿಸುತ್ತದೆ.

Also Read: ಹಿಂದಿನ ಕರ್ಮದಿಂದಾಗಿ ಶನಿಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಶ್ರಾವಣ ಮಾಸದಲ್ಲಿ ಶಿವನನ್ನು ಹೀಗೆ ಆರಾಧಿಸಿ

ಕುಳಿತು ಕಾಲುಗಳನ್ನು ಅಲ್ಲಾಡಿಸುವುದು, ತೂಗಿಸುವುದು: ಕೆಲವರು ಕುಳಿತುಕೊಂಡು ಕಾಲುಗಳನ್ನು ಬೀಸುತ್ತಾರೆ. ಅಥವಾ ಕೆಲವರು ತಮ್ಮ ಕಾಲುಗಳನ್ನು ಎಗರಿಸಿ ಎಗರಿಸಿ ಅಲ್ಲಾಡಿಸುತ್ತಿರುತ್ತಾರೆ . ಇಂತಹ ಅಭ್ಯಾಸಗಳನ್ನು ಹಿಂದೂ ಧರ್ಮದಲ್ಲಿ ಬಹಳ ಅಶುಭವೆಂದು ಪರಿಗಣಿಸಲಾಗಿದೆ. ಈ ಅಭ್ಯಾಸವು ಶನಿ ದೇವರನ್ನು ಕೋಪಗೊಳಿಸುತ್ತದೆ. ಇಂತಹ ಅಭ್ಯಾಸಗಳು ನಿಮ್ಮ ಕೌಟುಂಬಿಕ ಜೀವನದಲ್ಲಿ ಒತ್ತಡವನ್ನು ಹೆಚ್ಚಿಸುತ್ತವೆ.

ಸಾಲ ಹಿಂದಿರುಗಿಸಿ : ಅಗತ್ಯವಿದ್ದಾಗ ಯಾರೊಬ್ಬರಿಂದ ಸಹಾಯ ಪಡೆಯುವುದು ತಪ್ಪಲ್ಲ. ಆದರೆ ಆ ಸಾಲ ಮರುಪಾವತಿ ಮಾಡದೇ ಇರುವುದು ಕೆಟ್ಟ ಚಟ. ಹಣವನ್ನು ಎರವಲು ಪಡೆಯುವ ಮತ್ತು ಉದ್ದೇಶಪೂರ್ವಕವಾಗಿ ಹಣವನ್ನು ಹಿಂದಿರುಗಿಸದ ಜನರು ಶನಿಯ ಕೆಟ್ಟ ದೃಷ್ಟಿಯನ್ನು ಎದುರಿಸುತ್ತಾರೆ. ಆದ್ದರಿಂದ ಎರವಲು ಪಡೆದ ಹಣವನ್ನು ಸಾಧ್ಯವಾದಷ್ಟು ಬೇಗ ಹಿಂದಿರುಗಿಸಲು ಪ್ರಯತ್ನಿಸಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ

Published On - 8:21 am, Sat, 20 July 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!