
ಹಿಂದೂ ಧರ್ಮದಲ್ಲಿ ಯಾವುದೇ ಶುಭ ಸಮಾರಂಭ ಅಥವಾ ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಹವನ (ಅಗ್ನಿ ಯಜ್ಞ) ಮಾಡುವುದು ವಿಶೇಷ ಆಚರಣೆಯಾಗಿದೆ. ಹವನದ ಸಮಯದಲ್ಲಿ ಅಗ್ನಿ ದೇವನಿಗೆ ಧಾರ್ಮಿಕ ನೈವೇದ್ಯ ಅಥವಾ ಆಹುತಿಯನ್ನು ಅರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಹವನ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಆದರೆ ಹವನ ಮಾಡುವಾಗ ಕೆಲವೊಂದು ಶಾಸ್ತ್ರೋಕ್ತ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ನಿಯಮ ತಪ್ಪಿದರೆ ಹವನದ ಸಂಪೂರ್ಣ ಫಲ ದೊರೆಯುವುದಿಲ್ಲ.
ಹವನದಲ್ಲಿ ಆಹುತಿ ನೀಡುವಾಗ ಉಂಗುರದ ಬೆರಳನ್ನು (ಮಧ್ಯದ ಬೆರಳು ಮತ್ತು ಕಿರುಬೆರಳಿನ ನಡುವಿನ ಬೆರಳು) ಬಳಸುವುದು ಶುಭ. ಧರ್ಮಗ್ರಂಥಗಳಲ್ಲಿ ಈ ಬೆರಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಉಂಗುರದ ಬೆರಳಿನ ಕೆಳಗಿನ ಭಾಗವನ್ನು ‘ಸೂರ್ಯ ಪರ್ವತ’ ಎಂದು ಕರೆಯಲಾಗುತ್ತಿದ್ದು, ಇದು ಯಶಸ್ಸಿನ ಸಂಕೇತವಾಗಿದೆ. ಈ ಬೆರಳಿನ ಮೂಲಕ ಅರ್ಪಿಸುವ ಆಹುತಿಯು ದೇವತೆಗಳಿಗೆ ಶೀಘ್ರವಾಗಿ ತಲುಪುತ್ತದೆ. ಆದರೆ, ನೈವೇದ್ಯ ಅರ್ಪಿಸುವಾಗ ತೋರು ಬೆರಳನ್ನು ಎಂದಿಗೂ ಬಳಸಬಾರದು; ಏಕೆಂದರೆ ಇದು ಕೋಪ ಮತ್ತು ಅಹಂಕಾರದ ಸಂಕೇತವಾಗಿದೆ.
ಹವನ ನಡೆಯುವಾಗ ವಿವಿಧ ಮಂತ್ರಗಳನ್ನು ಪಠಿಸಲಾಗುತ್ತದೆ. ಮಂತ್ರದ ಕೊನೆಯಲ್ಲಿ “ಸ್ವಾಹಾ” ಎಂದು ಉಚ್ಚರಿಸಿದ ನಂತರವೇ ಆಹುತಿಯನ್ನು ಅಗ್ನಿಕುಂಡದಲ್ಲಿ ಇಡಬೇಕು. ಹವನ ಮಾಡುವ ಸಮಯದಲ್ಲಿ ಯಾರ ಬಗ್ಗೆಯೂ ನಕಾರಾತ್ಮಕ ಅಥವಾ ಕೆಟ್ಟ ಆಲೋಚನೆಗಳನ್ನು ಮಾಡಬಾರದು. ಸಂಪೂರ್ಣ ಭಕ್ತಿ, ಶುದ್ಧ ಮನಸ್ಸು ಮತ್ತು ಏಕಾಗ್ರತೆಯಿಂದ ಹವನ ನೆರವೇರಿಸುವುದು ಮುಖ್ಯ.
ಇದನ್ನೂ ಓದಿ: ಮನಿ ಪ್ಲಾಂಟ್ಗಿಂತಲೂ ಪವರ್ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಹವನ ಮಾಡುವಾಗ ನೇರವಾಗಿ ಬರಿ ನೆಲದ ಮೇಲೆ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು. ಪೂಜೆ ಅಥವಾ ಹವನದ ಸಮಯದಲ್ಲಿ ದರ್ಭೆ (ಕುಶ) ಅಥವಾ ಉಣ್ಣೆಯ ಆಸನದ ಮೇಲೆ ಕುಳಿತುಕೊಳ್ಳುವುದು ಯಾವಾಗಲೂ ಶುಭ ಹಾಗೂ ಫಲಪ್ರದವೆಂದು ಪರಿಗಣಿಸಲಾಗುತ್ತದೆ.
ನೈವೇದ್ಯ ಹಾಗೂ ಹವನಕ್ಕೆ ಬಳಸುವ ಪ್ರತಿಯೊಂದು ವಸ್ತುವೂ ಸಂಪೂರ್ಣವಾಗಿ ಶುದ್ಧವಾಗಿರಬೇಕು. ತುಪ್ಪ, ಬಾರ್ಲಿ, ಎಳ್ಳು ಮತ್ತು ಸಮಿಧೆ (ಕಟ್ಟಿಗೆ) ಕೀಟಮುಕ್ತವಾಗಿದ್ದು, ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಹವನದ ಪೂರ್ಣ ಫಲ ದೊರೆತು ಮನೆಯಲ್ಲಿ ಅಭಿವೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ