
ನೀವು ವಾಸಿಸುವ ಮನೆಯಲ್ಲಿ ವಾಸ್ತು ಸರಿಯಾಗಿದ್ದರೆ ಮಾತ್ರ ಸಂತೋಷವಾಗಿರಲು ಸಾಧ್ಯ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದು ನಿಮ್ಮ ಆರೋಗ್ಯ ಹಾಗೂ ಆರ್ಥಿಕ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದ ನಿರ್ಲಕ್ಷ್ಯಬೇಡಿ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ನೀವು ಸಾಕಷ್ಟು ದಿನಗಳಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ವಾಸ್ತುವಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಲು, ನೀವು ಮಲಗುವ ಮೊದಲು ನಿಮ್ಮ ಮನಸ್ಸನ್ನು ಶಾಂತಗೊಳಿಸಬೇಕು. ಒಳ್ಳೆಯ ಪುಸ್ತಕ ಓದುವುದು, ನೀತಿ ಕಥೆಗಳನ್ನು ಕೇಳುವುದು ಮತ್ತು ಒಳ್ಳೆಯ ಸಂಗೀತವನ್ನು ಕೇಳುವುದರಿಂದ ಮನಸ್ಸನ್ನು ಶಾಂತಗೊಳಿಸಬಹುದು.
ಉತ್ತರಕ್ಕೆ ತಲೆ ಮತ್ತು ದಕ್ಷಿಣಕ್ಕೆ ಪಾದಗಳನ್ನಿಟ್ಟು ಮಲಗಬಾರದು. ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದರೊಂದಿಗೆ, ಹಾಸಿಗೆ ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ಇರಬಾರದು. ಈಶಾನ್ಯ ದಿಕ್ಕಿನಲ್ಲಿ ಹಾಸಿಗೆಯ ಮೇಲೆ ಮಲಗಿದರೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಮುನ್ನ, ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ತಲೆಯ ಬಳಿ ಇಟ್ಟುಕೊಳ್ಳಬೇಕು. ಬೆಳಿಗ್ಗೆ ಎದ್ದ ನಂತರ, ಈ ನೀರನ್ನು ಒಂದು ಗಿಡದ ಮೇಲೆ ಸುರಿಯಿರಿ. ಹೀಗೆ ಮಾಡುವುದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ನೀವು ದಿಂಬಿನ ಕೆಳಗೆ ಹಸಿರು ಏಲಕ್ಕಿಯನ್ನು ಇಟ್ಟುಕೊಂಡು ಮಲಗಬಹುದು. ಹೀಗೆ ಮಾಡುವುದರಿಂದ ನಿದ್ರಾಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ.
ಮಲಗುವ ಮುನ್ನ, ನಿಮ್ಮ ನೆಚ್ಚಿನ ದೇವರನ್ನು ಧ್ಯಾನಿಸಿ. ಇದರೊಂದಿಗೆ, ಮಲಗುವಾಗ ನಿಮ್ಮ ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕ ಆಲೋಚನೆಗಳನ್ನು ತರಬೇಡಿ. ಬದಲಾಗಿ, ನೀವು ಯಾವಾಗಲೂ ಸಕಾರಾತ್ಮಕ ಆಲೋಚನೆಗಳೊಂದಿಗೆ ನಿದ್ರೆಗೆ ಜಾರಬೇಕು. ಇದರ ಜೊತೆಗೆ, ಮಲಗುವ ಮುನ್ನ ಕೈ ಕಾಲುಗಳನ್ನು ತೊಳೆಯುವುದರಿಂದ ಉತ್ತಮ ನಿದ್ರೆ ಬರುತ್ತದೆ.
ಇದನ್ನೂ ಓದಿ: ಇಂದಿನಿಂದ ಅಗ್ನಿ ಪಂಚಕ ಆರಂಭ; 5 ದಿನಗಳ ಕಾಲ ಈ ಕೆಲಸಗಳನ್ನು ಮಾಡಲೇಬೇಡಿ!
ನೀವು ಮಲಗುವ ಹಾಸಿಗೆಯ ಬಳಿ ಸೆಲ್ ಫೋನ್, ಟ್ಯಾಬ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ಮಲಗಬೇಡಿ. ಮಲಗುವ ಮುನ್ನ ಹೆಚ್ಚು ಹೊತ್ತು ಸೆಲ್ ಫೋನ್ ಅಥವಾ ಟ್ಯಾಬ್ ಬಳಸಬೇಡಿ. ಹೀಗೆ ಮಾಡುವುದರಿಂದ ನಿಮ್ಮ ನಿದ್ರೆಗೆ ಭಂಗ ಬರುತ್ತದೆ. ಇದರೊಂದಿಗೆ, ಮಲಗುವಾಗ ಚರ್ಮದ ವಸ್ತುಗಳನ್ನು ನಿಮ್ಮ ದಿಂಬಿನ ಬಳಿ ಎಂದಿಗೂ ಇಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Wed, 21 May 25