AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರಸಿಂಹ ಜಯಂತಿ ಯಾವಾಗ? ಮಹತ್ವ, ಪೂಜಾ ವಿಧಾನ, ಶುಭ ಮುಹೂರ್ತ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ

Narasimha Jayanti 2023: ಈ ಬಾರಿಯ ನರಸಿಂಹ ಜಯಂತಿಯ ಶುಭ ಮುಹೂರ್ತ, ಯಾವ ರೀತಿಯಲ್ಲಿ ಪೂಜೆ ಮಾಡಬೇಕು? ವಿಧಿ - ವಿಧಾನಗಳಾವುವು? ಯಾವ ನರಸಿಂಹ ಮಂತ್ರವನ್ನು ಪಠಿಸಬೇಕು..? ಈ ಬಗ್ಗೆ ಇಲ್ಲಿದೆ ಮಾಹಿತಿ.

ನರಸಿಂಹ ಜಯಂತಿ ಯಾವಾಗ? ಮಹತ್ವ, ಪೂಜಾ ವಿಧಾನ, ಶುಭ ಮುಹೂರ್ತ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ
Narasimha Swamy
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 02, 2023 | 2:25 PM

Share

ಹಿಂದೂ ಕ್ಯಾಲೆಂಡರ್ ಪ್ರಕಾರ, ನರಸಿಂಹ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ಮೇ 4ರಂದು ಗುರುವಾರ ಆಚರಿಸಲಾಗುತ್ತದೆ. ಈ ದಿನವನ್ನು ಭಗವಾನ್ ನರಸಿಂಹನ ಜನ್ಮದಿನವೆಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆ ಮತ್ತು ಪುರಾಣಗಳ ಪ್ರಕಾರ, ಈ ದಿನದಂದು ಭಗವಾನ್ ಶ್ರೀ ಹರಿ ವಿಷ್ಣುವು ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಉಗ್ರ ನರಸಿಂಹನ ರೂಪ ತಾಳಿ ತನ್ನ ಪರಮ ಭಕ್ತ ಪ್ರಹ್ಲಾದನನ್ನು ರಕ್ಷಿಸಿದನು. ಅದಕ್ಕಾಗಿಯೇ ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಅಲ್ಲದೆ ನರಸಿಂಹ ಭಗವಾನ್ ವಿಷ್ಣುವಿನ ದಶಾವತಾರದ 4 ನೇ ಅವತಾರವಾಗಿದ್ದು ಅರ್ಧ ಮನುಷ್ಯ ಮತ್ತು ಅರ್ಧ ಸಿಂಹದ ರೂಪದಲ್ಲಿದ್ದಾನೆ.

ನರಸಿಂಹ ಜಯಂತಿ ಇತಿಹಾಸ:

ನಂಬಿಕೆಗಳ ಪ್ರಕಾರ, ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ದೇವಾಲಯವಿದ್ದು, ಇಲ್ಲಿ ನರಸಿಂಹನ ಅವತಾರ ಪ್ರಕಟಗೊಂಡಿದೆ ಎಂದು ನಂಬಲಾಗಿದೆ. ಇಲ್ಲಿ ನರಸಿಂಹ ದೇವರ ದರ್ಶನವಾದ ಕಂಬ ಇಂದಿಗೂ ಇದೆ. ಭಗವಾನ್ ನರಸಿಂಹನು ಬನ್ಮಂಖಿಯ ಸಿಕ್ಲಿಗಢ ಧರಹರಾದಲ್ಲಿ ಹಿರಣ್ಯಕಶ್ಯಪುವನ್ನು ಕೊಂದನೆಂದು ನಂಬಲಾಗಿದೆ. ಪ್ರತಿ ವರ್ಷವೂ ಇಲ್ಲಿ ಹೋಲಿಕಾ ದಹನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ, ಭಗವಾನ್ ನರಸಿಂಹನ ಅವತಾರ ಸ್ಥಳವು ಉತ್ತರ ಪ್ರದೇಶದ ಪ್ರಸಿದ್ಧ ಹರದೋಯಿ ಜಿಲ್ಲೆಯಾಗಿದೆ. ಪೌರಾಣಿಕ ಕಾಲದಲ್ಲಿ, ಹಿರಣ್ಯಕಶಿಪು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನು ಅಲ್ಲದೆ ತನ್ನ ನಗರದಲ್ಲಿ ವಿಷ್ಣುವಿನ ನಾಮವನ್ನು ಪಠಿಸಲು ಯಾರಿಗೂ ಅವಕಾಶ ನೀಡಲಿಲ್ಲ. ಅದಕ್ಕಾಗಿಯೇ ಈ ಸ್ಥಳಕ್ಕೆ ಮೊದಲು ಹರಿದ್ರೋಹಿ ಎಂದು ಕರೆಯಲಾಗುತ್ತಿತ್ತು. ಇದು ನರಸಿಂಹ ದೇವರ ದರ್ಶನವಾದ ಬಳಿಕ ಈ ಸ್ಥಳವು ಪ್ರಹ್ಲಾದ ಕುಂಡ ಎಂದು ಜನಪ್ರಿಯವಾಗಿದೆ.

ನರಸಿಂಹ ಜಯಂತಿ 2023 ದಿನಾಂಕ ಮತ್ತು ತಿಥಿ

ವೈಶಾಖ ಚತುರ್ದಶಿ ಎಂದು ಕರೆಯಲ್ಪಡುವ ಶುಕ್ಲ ಪಕ್ಷದ 14 ನೇ ದಿನದಂದು ಅಂದರೆ ಹಬ್ಬವನ್ನು ಮೇ 4 ರಂದು ಆಚರಿಸಲಾಗುತ್ತದೆ. ನರಸಿಂಹ ಜಯಂತಿಯನ್ನು ಆಚರಿಸುವ ಸಮಯ ಈ ಕೆಳಗಿನಂತಿದೆ:

ನರಸಿಂಹ ಜಯಂತಿ ಸಂಕಲ್ಪ ಸಮಯ: 12:04 PM ರಿಂದ 03:03 PM

ಚತುರ್ದಶಿ ತಿಥಿ ಆರಂಭ: ಮೇ 3, 2023 ರಂದು ಮಧ್ಯಾಹ್ನ 12:19 ಚತುರ್ದಶಿ ತಿಥಿ ಕೊನೆಗೊಳ್ಳುವುದು: ಮೇ 4, 2023 ರಂದು ಮಧ್ಯಾಹ್ನ 12:14 (ಕೆಲವು ಕಡೆಗಳಲ್ಲಿ ತಿಥಿ ಆರಂಭವಾಗುವ ಸಮಯ ಇಟ್ಟುಕೊಂಡು ಮೇ 3ರಂದು ಹಬ್ಬವನ್ನು ಆಚರಿಸುತ್ತಾರೆ.)

ನರಸಿಂಹ ಜಯಂತಿ ಪೂಜೆ ವಿಧಾನ ಹೇಗೆ?

ನರಸಿಂಹ ಜಯಂತಿಯ ಉದ್ದೇಶ ಅಧರ್ಮವನ್ನು ತಿರಸ್ಕರಿಸಿ ಧರ್ಮವನ್ನು ಅನುಸರಿಸುವುದಾಗಿದೆ. ಈ ದಿನದಂದು, ಉಪವಾಸವನ್ನು ಅನುಸರಿಸುವ ಮತ್ತು ಭಗವಂತನಿಗೆ ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವವರಿಗೆ ಅವರ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಬೆಳಗ್ಗೆ ಬೇಗನೇ ಬ್ರಹ್ಮ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯಲ್ಲಿಯೇ ನರಸಿಂಹ ದೇವರ ಫೋಟೋ ಅಥವಾ ವಿಗ್ರಹಗಳಿಗೆ ಪೂಜೆ ಮಾಡಬಹುದು. ಇಲ್ಲವಾದಲ್ಲಿ ಹತ್ತಿರದ ನರಸಿಂಹ ದೇವಾಲಯಗಳಿಗೆ ಭೇಟಿ ನೀಡಬಹುದು. ನರಸಿಂಹ ಜಯಂತಿ ದಿನದಂದು ಉಪವಾಸ ವ್ರತವನ್ನು ಆಚರಿಸುವ ವ್ಯಕ್ತಿಯು ತನ್ನೆಲ್ಲಾ ಲೌಕಿಕ ದುಃಖಗಳಿಂದ ಮುಕ್ತನಾಗಿ ಆರ್ಥಿಕ ಸ್ಥಿತಿಯಲ್ಲಿ ಏರುಗತಿ ಹೊಂದುತ್ತಾನೆ ಎನ್ನುವ ನಂಬಿಕೆಯಿದೆ.

ನರಸಿಂಹನ ಕೃಪೆಗೆ ಯಾವ ಮಂತ್ರವನ್ನು ಪಠಿಸಬೇಕು?

ನಿಮಗೆ ತಿಳಿದಿರುವ ಯಾವುದಾದರೂ ವಿಷ್ಣುವಿನ ಮಂತ್ರವನ್ನು ಜಪಿಸಬಹುದು. ಇಲ್ಲವಾದಲ್ಲಿ ಕೆಳಗೆ ನೀಡಿರುವ ಮಂತ್ರವನ್ನು ಪಠಿಸಬಹುದು. – ‘ಓಂ ಶ್ರೀ ಲಕ್ಷ್ಮೀನರಸಿಂಹಾಯ ನಮಃ’ – ‘ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ| ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ||’

– ನರಸಿಂಹ ಬೀಜ ಮಂತ್ರ: ‘ಶ್ರೌಂ’ ಅಥವಾ ಕ್ಷ್ರೌಂ

– ‘ಧ್ಯಾಯೇ ನರಸಿಂಹಂ ತರುಣಾರ್ಕನೇತ್ರಂ ಸೀತಾಂಬುಜಾತಂ ಜ್ವಲಿತಾಗ್ರಿವಕ್ತ್ರಂ|’ ಅನಾದಿಮಧ್ಯಾಂತಮಜಂ ಪುರಾಣಂ ಪರಾತ್ಪರೇಶಂ ಜಗತಾಂ ನಿಧಾನಂ||’

– ‘ನೃಮ ನೃಮ ನೃಮ ನರ ಸಿಂಹಾಯ ನಮಃ|

ಮತ್ತಷ್ಟು ಅಧ್ಯಾತ್ಮ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ